ಧರ್ಮಸ್ಥಳ ಕೇಸ್​; ಸಮೀರ್​ MD, ಚಿನ್ನಯ್ಯ ವಿಚಾರಣೆ.. ಮಾಸ್ಕ್​ಮ್ಯಾನ್​ ಮೇಲೆ ಹದ್ದಿನ ಕಣ್ಣು, ಯಾಕೆ ಗೊತ್ತಾ?

ಧರ್ಮಸ್ಥಳ ಕೇಸ್​ನಲ್ಲಿ ರಾಜ್ಯ ಸರ್ಕಾರ ರಚಿಸಿರುವ ಪ್ರಣವ್‌ ಮೊಹಾಂತಿ ಸಾರಥ್ಯದ ವಿಶೇಷ ತನಿಖಾ ತಂಡ (ಎಸ್​​ಐಟಿ) ಶಿಸ್ತುಬದ್ಧವಾಗಿ ನಡೆಸಿದ ತನಿಖೆಯಿಂದ ಒಂದೊಂದೇ ಸತ್ಯಗಳು ಹೊರಬರುತ್ತಿವೆ. ಆದರೆ ಇದರ ಅಂತ್ಯ ಎಲ್ಲಿಗೆ ಹೋಗಿ ಮುಟ್ಟುತ್ತೋ ಎಂದು ಕಾದು ನೋಡಬೇಕಿದೆ.

author-image
Bhimappa
SAMEER_CHINNAYYA
Advertisment

ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಎಸಗಲಾಗಿದೆ ಎನ್ನಲಾದ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಬುರುಡೆ ಚಿನ್ನಯ್ಯನನ್ನು ವಶಕ್ಕೆ ಪಡೆದಿರುವ ಎಸ್​ಐಟಿ ಎಲ್ಲ ಒಂದೊಂದು ವಿಷ್ಯವನ್ನು ಬಾಯ್ಬಿಡಿಸುತ್ತಿದೆ. ಸದ್ಯ ಚಿನ್ನಯ್ಯನ ಎಸ್​ಐಟಿಯ ಬಿಗಿ ಭದ್ರತೆಯಲ್ಲಿದ್ದು 24 ಗಂಟೆಯೂ ಆತನ ಮೇಲೆ ಕಣ್ಣಿಟ್ಟಿದೆ.

24 ಗಂಟೆ ದೂರುದಾರನ ವಾಚ್ ಮಾಡುತ್ತಿರುವ  SIT ಅಧಿಕಾರಿಗಳು

ಒಂದೂವರೆ ತಿಂಗಳಿನಿಂದ ಧರ್ಮಸ್ಥಳದ ಮೇಲೆ ಆವರಿಸಿಕೊಂಡಿದ್ದ ಆರೋಪದ ಕಾರ್ಮೋಡ ತಾನಾಗೇ ಕರಗ್ತಿದೆ. ಜುಲೈ 19ರಂದು ರಾಜ್ಯ ಸರ್ಕಾರ ರಚಿಸಿದ ಪ್ರಣವ್‌ ಮೊಹಾಂತಿ ಸಾರಥ್ಯದ ವಿಶೇಷ ತನಿಖಾ ತಂಡ ಶಿಸ್ತುಬದ್ಧವಾಗಿ ನಡೆಸಿದ ತನಿಖೆಯಿಂದ ಒಂದೊಂದೇ ಸತ್ಯಗಳು ಹೊರಬರ್ತಿವೆ. ಇಡೀ ಪ್ರಕರಣದ ಹಿಂದಿನ ಷಡ್ಯಂತ್ರಗಳು, ಪಿತೂರಿಗಳು ಬೆಳಕಿಗೆ ಬಂದು ಗ್ರಹಣ ಮುಕ್ತಿ ಆಗ್ತಿದೆ.

ಧರ್ಮಸ್ಥಳ ಬುರುಡೆ ಕೇಸ್​ಗೆ ಟ್ವಿಸ್ಟ್​; ಪಾಯಿಂಟ್-1ರಲ್ಲಿ ಕೆಂಪು ಬ್ಲೌಸ್​, ಪ್ಯಾನ್​, ಡೆಬಿಟ್ ಕಾರ್ಡ್ ಪತ್ತೆ

10 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿರುವ ಎಸ್​ಐಟಿ, ಆರೋಪಿ ಚಿನ್ನಯ್ಯ ಹೇಳಿದ ಎಲ್ಲರಿಗೂ ಆರಂಭಿಕ ಹಂತದಲ್ಲಿ ನೋಟಿಸ್ ನೀಡಲು ಪ್ಲಾನ್​​​ ಮಾಡಿದೆ. ಈ ಹಿನ್ನಲೆ ಇವತ್ತು ಚೆನ್ನನಿಂದ ಬಿಎನ್ಎಸ್ 183 ಹೇಳಿಕೆ ದಾಖಲಿಸಲು ಸಜ್ಜಾಗಿದ್ದು, ಆರೋಪಿ ಚೆನ್ನಯ್ಯನ ಮೇಲೆ 24 ಗಂಟೆಗಳ ಕಾಲ ಹದ್ದಿನ ಕಣ್ಣಿಟ್ಟಿದ್ದಾರೆ.

  • ಆರೋಪಿ ಚಿನ್ನಯ್ಯನನ್ನು ಬಿಗಿ ಭದ್ರತೆಯಲ್ಲಿ ಇರಿಸಿರುವ ಎಸ್​ಐಟಿ
  • ಕೇವಲ ಪ್ಯಾಂಟ್​ ಮತ್ತು ಶರ್ಟ್ ಧರಿಸಲು ಮಾತ್ರ SIT ಅವಕಾಶ 
  • ಈ ಹಿಂದಿನಿಂದಲೂ ಪಂಚೆ ಮತ್ತು ಅಂಗಿ ಧರಿಸುತ್ತಿದ್ದ ದೂರುದಾರ
  • ಆತ ದೇಹದಲ್ಲಿ ಕಟ್ಟಿಕೊಂಡಿದ್ದ ನೂಲುಗಳನ್ನು ತೆಗೆಸಿರುವ ಎಸ್​ಐಟಿ
  • ದೂರುದಾರ ಅತ್ಮಹತ್ಯೆಗೆ ಶರಾಣಾಗುವ ಶಂಕೆ ಹಿನ್ನೆಲೆ ಮುನ್ನೆಚ್ಚರಿಕೆ

ಇದನ್ನೂ ಓದಿ: ಹೆಂಡತಿಗೆ ಬೆಂಕಿ ಹಚ್ಚಿ ಜೀವ ತೆಗೆದ ಕೇಸ್​; ವರದಕ್ಷಿಣೆಯಾಗಿ ಏನೇನು ಕೊಟ್ಟಿದ್ದರು ಗೊತ್ತಾ?

DHARMASTALA_CASE

ಸಮೀರ್​ನನ್ನು ಮತ್ತೆ ವಿಚಾರಣೆಗೆ ಕರೆದಿರುವ ತನಿಖಾಧಿಕಾರಿಗಳು

ಒಂದೆಡೆ ಬುರುಡೆ ದಾಸಯ್ಯನಿಗೆ ಎಸ್​ಐಟಿ ಬೆಂಡೆತ್ತುತ್ತಿದ್ದರೆ, ಮತ್ತೊಂದೆಡೆ ಬೆಳ್ತಂಗಡಿ ಪೊಲೀಸರು ಧೂತ ಅಲ್ಲ ಅಲ್ಲ ದೂರ್ತ ಸಮೀರನಿಗೆ ಭೂತ ಬಿಡಿಸಿದ್ದಾರೆ. ಮೊದಲ ದಿನ ಯೂಟ್ಯೂಬ್ ಚಾನೆಲ್, AI ವಿಡಿಯೋಗಳ ಬಗ್ಗೆ ತನಿಖಾಧಿಕಾರಿ ನಾಗೇಶ್ ಕದ್ರಿ ಪ್ರಶ್ನೆ ಮಾಡಿದ್ರು. ಇವತ್ತು ಕೂಡ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. 

ವಿಡಿಯೋ ಎಡಿಟಿಂಗ್​​ ಸಾಫ್ಟ್​​ವೇರ್​​​​​ ಬಳಸಿದ ಕಂಪ್ಯೂಟರ್​​ ಮತ್ತು ಮೊಬೈಲ್​​​ ವಶಕ್ಕೆ ನೀಡುವಂತೆ ಸೂಚಿಸಿದ್ದಾರೆ. ಇವತ್ತು ಕೂಡ ಸಮೀರ್​ನನ್ನು ಮತ್ತೆ ವಿಚಾರಣೆಗೆ ಒಳಪಡಿಸಲಿದ್ದಾರೆ. ಬುರುಡೆ ಮಾತುಗಳ ಮೂಲಕ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲು ಕುತಂತ್ರ ಎಣೆದವರಿಗೆ ಇದೀಗ ಎಸ್​ಐಟಿ ತನಿಖೆ ಮೂಲಕ ನಡುಕ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala dharmasthala case, sameer md Sameer MD
Advertisment