ಹೆಂಡತಿಗೆ ನಿತ್ಯ ಹೊಡೆಯುತ್ತಿದ್ದ ಶಿಕ್ಷಕ.. ತನ್ನ ಕಾಲೇಜಿನ ವಿದ್ಯಾರ್ಥಿನಿ ಜೊತೆಗೆ ಎಸ್ಕೇಪ್​

ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕ, ವಿದ್ಯಾರ್ಥಿನಿಗೆ ಪ್ರೀತಿಯ ಪಾಠ ಮಾಡಿ ಆಕೆಯನ್ನೇ ಓಡಿಸಿಕೊಂಡು ಹೋಗಿದ್ದಾನೆ. ಯುವತಿಯ ಮನೆಯವರಿಗೆ ಈ ವಿಷ್ಯ ಗೊತ್ತಿತ್ತಾ?. ಹೆಂಡತಿಗೆ ಹೊಡೆಯುತ್ತಿದ್ದು ಏಕೆ?.

author-image
Bhimappa
CBL_TEACHER_1
Advertisment

ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕ, ವಿದ್ಯಾರ್ಥಿನಿಗೆ ಪ್ರೀತಿಯ ಪಾಠ ಮಾಡಿ ಆಕೆಯ ಜೊತೆ ಸಲುಗೆ ಬೆಳೆಸಿ ಕರೆದುಕೊಂಡು ಪರಾರಿ ಆಗಿದ್ದಾನೆ. ಕಹಾನಿ ಮೇ ಟ್ವಿಸ್ಟ್ ಏನಂದ್ರೆ ಆ ಶಿಕ್ಷಕನಿ​ಗೆ ಮದುವೆಯಾಗಿದೆ. ಆ ಪತ್ನಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಈ ಶಿಕ್ಷಕ ಹೆಸರು ಪ್ರವೀಣ್. ಹೆಸರಿಗೆ ತಕ್ಕಂತೆ ಎಲ್ಲದರಲ್ಲೂ ಪ್ರವೀಣನೇ. ಈತನ ಕೆಲಸ ಪಾಠ ಮಾಡೋದು. ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಕನ್ನಡ ಶಿಕ್ಷಕ. ಆದ್ರೆ ಈತ ಮಾಡಿದ್ದು ಮಾತ್ರ ಪಕ್ಕಾ ಐನಾತಿ ಕೆಲಸ. 

CBL_TEACHER_2

ವಿದ್ಯಾರ್ಥಿನಿ ಜೊತೆಗೆ ಶಿಕ್ಷಕ ಪ್ರವೀಣನ ಓಟ

ಕಳೆದ 15 ವರ್ಷಗಳಿಂದ ಶಿಕ್ಷಕ ವೃತ್ತಿ ಮಾಡುತ್ತಿರುವ ಶಿಕ್ಷಕ ಪ್ರವೀಣ್, ಇದೀಗ ವಿದ್ಯಾರ್ಥಿನಿಯೊಂದಿಗೆ ಪರಾರಿಯಾಗಿರೋ ಆರೋಪ ಕೇಳಿ ಬಂದಿದೆ.

‘ಪರಾರಿ’ ಪ್ರವೀಣ!

  • ಯುವತಿಗೆ ಇದೇ ತಿಂಗಳ 11 ರಂದು ನಿಶ್ಚಯವಾಗಿದ್ದ ಮದುವೆ 
  • ಮದುವೆ ಇಷ್ಟ ಇಲ್ಲದೆ ಶಿಕ್ಷಕನ ಜೊತೆ ಪರಾರಿಯಾದ ಆರೋಪ
  • ಆಗಸ್ಟ್ 2ರಂದು ಮನೆ ಬಿಟ್ಟಿದ್ದ ಯುವತಿ‌, ಪೋಷಕರ ಹುಡುಕಾಟ
  • ಮಿಸ್ಸಿಂಗ್ ಕಂಪ್ಲೆಂಟ್ ಕೂಡ ದಾಖಲು ಮಾಡಿದ್ದ ಪೋಷಕರು
  • ದೆಹಲಿಗೆ ಹೋಗಿ ವಾಪಸ್ ನಂಜನಗೂಡಿನ ಲಾಡ್ಜ್​ನಲ್ಲಿ ವಾಸ

ಇಷ್ಟಕ್ಕೆ ಈ ಕಥೆ ಮುಗಿದಿಲ್ಲ, ಅಸಲಿ ಟ್ವಿಸ್ಟ್ ಇರೋದೇ ಇಲ್ಲಿ. ಯಾಕಂದ್ರೆ ವಿದ್ಯಾರ್ಥಿನಿಯೊಂದಿಗೆ ಪರಾರಿಯಾಗಿದ್ದ ಶಿಕ್ಷಕನಿಗೆ ಈಗಾಗಲೇ ಮದುವೆಯಾಗಿದೆ. ಸದ್ಯ ಈ ಸಂಬಂಧ ದೊಡ್ಡಬಳ್ಳಾಪುರ ಮಹಿಳಾ ಪೋಲೀಸ್ ಠಾಣೆಗೆ ಪತಿ ಪ್ರವೀಣ್ ವಿರುದ್ಧ ಪತ್ನಿಯೇ ದೂರು ನೀಡಿದ್ದಾಳೆ. ವರದಕ್ಷಿಣೆ ಕಿರುಕುಳ, ದೈಹಿಕ ಹಲ್ಲೆಯ ಆರೋಪ ಮಾಡಲಾಗಿದೆ. 

ಇದನ್ನೂ ಓದಿ: ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಮೇಲೆ ಕೋಟಿ ಕೋಟಿ ಹಣ ವಂಚನೆ ಕೇಸ್​.. ಅಸಲಿಗೆ ಆಗಿದ್ದೇನು?

CBL_TEACHER

ಪ್ರವೀಣ್ ಪತ್ನಿ ದೂರಿನಲ್ಲೇನಿದೆ?

  • 2015ರಲ್ಲಿ ಪ್ರವೀಣ್ ಜೊತೆ ವಿವಾಹವಾಗಿದ್ದ ಪತ್ನಿ ಇಬ್ಬರು ಮಕ್ಕಳಿದ್ದಾರೆ
  • ಪ್ರವೀಣ್​ ಮಾನಸಿಕ, ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಅಂತಾ ಪತ್ನಿ ದೂರು
  • ಗಂಡನಿಗೆ ಇನ್ನೊಂದು ಹುಡುಗಿ ಜೊತೆಯ ಅನೈತಿಕ ಸಂಬಂಧ ಗೊತ್ತಾಯ್ತು
  • ಪ್ರಶ್ನೆ ಮಾಡಿದಾಗ ಹಲ್ಲೆ ಮಾಡಿದ್ರು ಅಂತಾ ಪ್ರವೀಣ್ ವಿರುದ್ಧ ಪತ್ನಿ ಆರೋಪ
  • ನಾನು ಗರ್ಭಣಿಯಾಗಿದ್ದ ವೇಳೆ, ಅನೈತಿಕ ಸಂಬಂಧದ ಬಗ್ಗೆ ಕೇಳಿದ್ದಕ್ಕೆ ಹಲ್ಲೆ
  • ನನ್ನ ಜುಟ್ಟನ್ನು ಹಿಡಿದು ಎಳೆದಾಡಿ, ಕಾಲಿನಲ್ಲಿ ಒದ್ದು ಪ್ರವೀಣ್​ನಿಂದ ಹಲ್ಲೆ 
  • ತವರು ಮನೆಗೆ ಹೋಗು. ಇಲ್ಲವಾದರೆ ಸಾಯಿಸುತ್ತೇನೆಂದು ಜೀವ ಬೆದರಿಕೆ
  • ತಂದೆ ಬಳಿ ವರದಕ್ಷಿಣೆಯಾಗಿ ಸೈಟ್ ಕೊಡಲು ಕೇಳು ಅಂತಾ ದೈಹಿಕ ಹಿಂಸೆ
  • ವಿಚ್ಛೇದನ ನೀಡು ಇಲ್ಲವಾದರೆ ಮನೆ ನಿರ್ಮಿಸಿಕೊಡು ಅಂತಾ ಒತ್ತಾಯ
  • ದೈಹಿಕ, ಮಾನಸಿಕ ಹಿಂಸೆ, ಜೀವ ಬೆದರಿಕೆ ಹಾಕಿ, ವರದಕ್ಷಿಣೆ ಕಿರುಕುಳ
  • ಪ್ರವೀಣ್ ಹಾಗೂ ಆತನ ಕುಟುಂಬದ ವಿರುದ್ಧ ಕ್ರಮಕ್ಕೆ ಪತ್ನಿಯ ಆಗ್ರಹ

ಪತ್ನಿ ನೀಡಿದ ದೂರಿನ ಅನ್ವಯ ತನಿಖೆ ನಡೆಸಲಾಯಿತು. ಈ ವೇಳೆ ವಿದ್ಯಾರ್ಥಿನಿಯೊಂದಿಗೆ ಎಸ್ಕೇಪ್ ಆಗಿದ್ದ ಶಿಕ್ಷಕ ಪವೀಣ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನ ಬಂಧಿಸಿರೋ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಈ ಘಟನೆ ವಿದ್ಯಾರ್ಥಿನಿ ಕುಟುಂಬವನ್ನ ತಬ್ಬಿಬ್ಬಾಗುವಂತೆ ಮಾಡಿದೆ. ಪೊಲೀಸರು ಇಬ್ಬರನ್ನೂ ಹುಡುಕಿ ಕರೆತಂದಾಗಲೇ ತಮ್ಮ ಮಗಳು ಶಿಕ್ಷಕನ ಜೊತೆಯೇ ಓಡಿ ಹೋಗಿದ್ದಳು ಅನ್ನೋದು ಪೋಷಕರಿಗೆ ಗೊತ್ತಾಗಿದೆ. ಈ ಮಾಹಿತಿ ತಿಳಿದು ಶಾಕ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Doddaballapur
Advertisment