/newsfirstlive-kannada/media/post_attachments/wp-content/uploads/2024/06/PRAJWAL.jpg)
ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಈಗಾಗಲೇ ಜನಪ್ರತಿನಿಧಿಗಳ ನ್ಯಾಯಾಲಯ ರೇಪ್ ಕೇಸ್ ನಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ಬೆನ್ನಲ್ಲೇ ನ್ಯಾಯಾಲಯ ನೀಡಿರುವ ತೀರ್ಪು ಅನ್ನು ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಪರ ವಕೀಲರು, ಇದೇ ವಾರದಲ್ಲಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಕೆ ಮಾಡಲಿದ್ದಾರೆ.
ನಗರದ ಜನಪ್ರತಿನಿಧಿಗಳ ಕೋರ್ಟ್ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಜೊತೆಗೆ 11.50 ಲಕ್ಷ ರೂಪಾಯಿಗಳ ದಂಡ ವಿಧಿಸಿದೆ. ಈ ಸಂಬಂಧ ಈ ತೀರ್ಪು ಪ್ರಶ್ನಿಸಿ ಪ್ರಜ್ವಲ್ ಪರ ವಕೀಲರು ಹೈಕೋರ್ಟ್ಗೆ ಮನವಿ ಸಲ್ಲಿಕೆ ಮಾಡಲಿದ್ದಾರೆ. ಈ ಬಗ್ಗೆ ಸಿದ್ಧತೆ ನಡೆದಿದ್ದು ಪ್ರಜ್ವಲ್ ರೇವಣ್ಣ ಜೊತೆ ಅವರ ವಕೀಲರು ಮಾತನಾಡಿದ್ದಾರೆ. ಇನ್ನು ತೀರ್ಪು ನೀಡಿದ 90 ದಿನಗಳು ಅಂದರೆ 3 ತಿಂಗಳ ಒಳಗಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿದೆ.
ಇದನ್ನೂ ಓದಿ:ಹೆಂಡತಿಗೆ ನಿತ್ಯ ಹೊಡೆಯುತ್ತಿದ್ದ ಶಿಕ್ಷಕ.. ತನ್ನ ಕಾಲೇಜಿನ ವಿದ್ಯಾರ್ಥಿನಿ ಜೊತೆಗೆ ಎಸ್ಕೇಪ್
ತಡವಾಗಿ ಮೇಲ್ಮನವಿ ಸಲ್ಲಿಕೆ ಮಾಡುವುದಕ್ಕಿಂತ ಶೀಘ್ರವೇ ಸಲ್ಲಿಕೆ ಮಾಡುವುದು ಉತ್ತಮವೆಂದು ಕಾನೂನು ತಜ್ಞರ ಸಲಹೆ ನೀಡಿದ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಆದೇಶದ ಪ್ರತಿ ಅಂಶಗಳನ್ನ ಲೀಗಲ್ ಟೀಂ ಪರಿಶೀಲನೆ ಮಾಡಿದೆ. ಖ್ಯಾತ ಹಿರಿಯ ವಕೀಲರ ಮೂಲಕ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ.
ಇನ್ನು ಪ್ರಜ್ವಲ್ ಅವರು ತಾಯಿ ಭವಾನಿ, ತಂದೆ ರೇವಣ್ಣ ಜೊತೆ ಫೋನ್ ಮೂಲಕ ಮಾತನಾಡಿದ್ದಾರೆ. ಜೈಲು ಅಧಿಕಾರಿಗಳು, ಸಜಾ ಬಂಧಿಯಾಗಿ ವಾರದ ಮೇಲಾದರೂ ಪ್ರಜ್ವಲ್ರನ್ನ ಕೆಲಸಕ್ಕೆ ನಿಯೋಜಿಸಿಲ್ಲ. ಈ ವಾರದಲ್ಲಿ ಕೆಲಸ ಆಯ್ಕೆ ಬಗ್ಗೆ ಪ್ರಜ್ವಲ್ಗೆ ತಿಳಿಸಲಿದ್ದಾರೆ. ವಾರದಲ್ಲಿ 3 ಬಾರಿ 10 ನಿಮಿಷ ಮಾತಾಡಲು ಜೈಲಿನ ಮ್ಯಾನ್ಯುಯಲ್ ನಲ್ಲಿ ಅವಕಾಶ ಇದೆ. ಈ ನಡುವೆ ಹೈಕೋರ್ಟ್ ವಿಚಾರದ ಬಗ್ಗೆ ವಕೀಲರ ಜೊತೆ ಚರ್ಚೆ ಮಾಡಿದ್ದಾರೆ. ಇನ್ನು ಕೆ.ಆರ್ ನಗರದ ಸಂತ್ರಸ್ಥೆ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ