/newsfirstlive-kannada/media/media_files/2025/09/13/hassan-tragedy-2025-09-13-10-20-24.jpg)
ಹಾಸನ ದುರ್ಘಟನೆಯಲ್ಲಿ ಹುಟ್ಟುಹಬ್ಬದಂದೇ ಮಿಥುನ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಮಿಥುನ್ ಫೈನಲ್ ಇಯರ್ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದ. ನಿನ್ನೆ ಕಾಲೇಜಿಗೂ ಹೋಗಿ ಬಂದಿದ್ದ.
ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಹಾಸ್ಟೆಲ್ನಲ್ಲಿ ಸ್ನೇಹಿತರೆಲ್ಲ ಸೇರಿ ಬರ್ತಡೇ ಸೆಲೆಬ್ರೇಸಷನ್ ಕೂಡ ಮಾಡಿದ್ರು. ಆನಂತರ ಹಾಸ್ಟೆಲ್ಗೆ ಬಂದು ಗಣಪತಿ ವಿಸರ್ಜನೆಗೆ ಹೋದಾಗ ದುರಂತ ಅಂತ್ಯಕಂಡಿದ್ದಾನೆ. ಮೃತ ಮಿಥನ್ ಮೂಲತಃ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಗವಿರಂಗನಾಥಪುರ ನಿವಾಸಿ. ಹಾಸನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ. ಗವಿರಂಗಾಪುರ ಗ್ರಾಮದ ನಾಗರಾಜ್ಗೆ ಒಬ್ಬನೇ ಮಗ ಮಿಥುನ್.
ಮತ್ತೊಂದು ಕಡೆ ಮೃತ ಬಳ್ಳಾರಿಯ ಪ್ರವೀಣಕುಮಾರ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಯುವಕ ಪ್ರವೀಣ್ ಕುಮಾರ್ ಅಪಘಾತಕ್ಕೂ ಮುನ್ನ ನಿನ್ನೆ ರಾತ್ರಿ ಫೋನ್ ಮಾಡಿ ಕುಟುಂಬಸ್ಥರ ಜೊತೆಗೆ ಮಾತಾಡಿದ್ದ. ಕಡುಬಡತನದ ಕುಟುಂಬದಲ್ಲಿ ಬೆಳೆಯುತ್ತಿದ್ದ ಆತ ಓದಿನಲ್ಲಿ ಚುರುಕಾಗಿದ್ದ ಅಂತ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ನಿನ್ನೆ ರಾತ್ರಿ ಪ್ರವೀಣ ಸಾ*ವಾಗಿದೆ ಅಂತ ಆತನ ಸ್ನೇಹಿತರು ಫೋನ್ ಮೂಲಕ ತಿಳಿಸಿದ್ದಾರೆ. ಈಗಲೂ ನಮಗೆ ನಂಬೋಕೆ ಆಗ್ತಿಲ್ಲ. ನಮಗೆ ಸರ್ಕಾರ ಪರಿಹಾರ ಬೇಡ. ನಮಗೆ ಪ್ರವೀಣಕುಮಾರ್ ಬೇಕು ಅಂತ ಕುಟುಂಬಸ್ಥರು ಕಣ್ಣೀರು ಇಟ್ಟಿದ್ದಾರೆ.
ಇದನ್ನೂ ಓದಿ:ಹಾಸನ ದುರಂತಕ್ಕೆ ಮೋದಿ ಕಂಬನಿ.. ಪರಿಹಾರ ಘೋಷಣೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ