Advertisment

4 ತಿಂಗಳ ಹಿಂದೆ ಮದ್ವೆ.. ಪತ್ನಿಯ ಜೀವ ತೆಗೆದು ಬೆಡ್​ ಕೆಳಗೆ ಶವ ಅಡಗಿಸಿಟ್ಟು ಪರಾರಿ..

ಅದೇನೊ ಗೊತ್ತಿಲ್ಲ ಇತ್ತೀಚಿಗೆ ಬೆಳಗಾದ್ರೆ ಸಾಕು ಕೊ*, ಅಕ್ರಮ ಸಂಬಂಧ, ಅತ್ಯಾ*ರ ಪ್ರಕರಣಗಳೇ ಹೆಚ್ಚು ಸುದ್ದಿಯಾಗ್ತಿವೆ. ಚಿಕ್ಕಚಿಕ್ಕ ವಿಷಯಗಳಿಗೂ ಕೊ* ನಡೆಯುತ್ತಿರುವುದು ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿದೆ.

author-image
Ganesh Kerekuli
bgm murder 2
Advertisment

ಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಪತ್ನಿಯ ಜೀವ ತೆಗೆದ ಪಾಪಿ ಪತಿ, ಶವವನ್ನು ಬೆಡ್​ ಕೆಳಗಡೆ ಅಡಗಿಸಿಟ್ಟು ಪರಾರಿ​ ಆಗಿದ್ದಾನೆ. ಮೂರು ದಿನಗಳ ಹಿಂದೆಯೇ ಕೃತ್ಯ ನಡೆಸಿದ್ದು, ಊರಿಗೆ ಹೋಗಿದ್ದ ಅತ್ತೆ ಮರಳಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. 

Advertisment

ಏನಿದು ಪ್ರಕರಣ..? 

ಕಳೆದ ನಾಲ್ಕು ತಿಂಗಳ ಹಿಂದೆ ಆಕಾಶ್ ಕಂಬಾರ ಹಾಗು ಕೊಲೆಯಾದ ಸಾಕ್ಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೂರು ದಿನಗಳ ಹಿಂದೆಯೇ ಪಾಪಿ ಪತಿ ಆಕಾಶ್ ಕಂಬಾರ ಪತ್ನಿ ಸಾಕ್ಷಿಯನ್ನು ಕೃತ್ಯ ನಡೆಸಿ ಪರಾರಿ ಆಗಿದ್ದಾನೆ. ಊರಿಗೆ ಹೋಗಿದ್ದ ಅತ್ತೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಗೋಕಾಕ್ ಡಿವೈಎಸ್​ಪಿ ಹಾಗು ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿದ್ದಾರೆ. ಪ್ರಕರಣಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಮೃತ  ಸಾಕ್ಷಿ ಕುಟುಂಬಸ್ಥರು ವರದಕ್ಷಿಣೆ ಅರೋಪ ಮಾಡಿದ್ದಾರೆ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಇದನ್ನೂ ಓದಿ:ಸ್ನೇಹಿತ ಸೆಹ್ವಾಗ್​ ಪತ್ನಿ ಜೊತೆ ಬಿಸಿಸಿಐ ಅಧ್ಯಕ್ಷ ಮಿಥುನ್ ಅಫೇರ್..? ಏನಿದು ಕತೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Belagavi news Kannada News belagavi, murder, khanapura, police investigation.
Advertisment
Advertisment
Advertisment