ಮಡಿಕೇರಿ.. ರಸ್ತೆಯಿಂದ 20 ಅಡಿ ಆಳದಲ್ಲಿರುವ ಗದ್ದೆಗೆ ಉರುಳಿದ ಕಾರು..!

ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಬರೋಬ್ಬರಿ 20 ಅಡಿ ಆಳದ ಗದ್ದೆಗೆ ಉರುಳಿಬಿದ್ದ ಭೀಕರ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದರೂ, ಕಾರಿನಲ್ಲಿದ್ದ ತಾಯಿ ಮತ್ತು ಮಗ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

author-image
Ganesh Kerekuli
car accident (4)
Advertisment

ಕೊಡಗು: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಬರೋಬ್ಬರಿ 20 ಅಡಿ ಆಳದ ಗದ್ದೆಗೆ ಉರುಳಿಬಿದ್ದ ಭೀಕರ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದರೂ, ಕಾರಿನಲ್ಲಿದ್ದ ತಾಯಿ ಮತ್ತು ಮಗ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಮಡಿಕೇರಿ ಸಮೀಪದ ಅಪ್ಪಂಗಳದಲ್ಲಿ ಘಟನೆ

ಮಡಿಕೇರಿ ತಾಲೂಕಿನ ಬೆಟ್ಟಗೇರಿ ಸಮೀಪದ ಅಪ್ಪಂಗಳ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಅಪ್ಪಂಗಳ ನಿವಾಸಿ ಸಾಗರ್ ಎಂಬುವವರಿಗೆ ಸೇರಿದ ಮಾರುತಿ ಕಾರು ಇದಾಗಿದ್ದು, ರಸ್ತೆಯಲ್ಲಿ ಚಲಿಸುತ್ತಿದ್ದಾಗ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದೆ. ರಸ್ತೆ ಬದಿಯಲ್ಲೇ ಇದ್ದ ಸುಮಾರು 20 ಅಡಿ ಆಳದ ಗದ್ದೆಗೆ ಕಾರು ಪಲ್ಟಿಯಾಗಿ ಬಿದ್ದಿದೆ.

ಇದನ್ನೂ ಓದಿ:  ಶಿಕಾರಿಪುರದಲ್ಲಿ BSY ಹುಟ್ಟುಹಬ್ಬದ ಸಂಭ್ರಮಕ್ಕೆ ಸಿದ್ಧತೆ.. ಶಕ್ತಿ ಪ್ರದರ್ಶನಕ್ಕೆ ಬಿವೈವಿ ಭರ್ಜರಿ ಪ್ಲಾನ್..!

ಗದ್ದೆಗೆ ಬಿದ್ದ ರಭಸಕ್ಕೆ ಮಾರುತಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರು ಉರುಳಿಬಿದ್ದಿದ್ದನ್ನು ಗಮನಿಸಿದ ತಕ್ಷಣವೇ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಕಾರಿನೊಳಗೆ ಸಿಲುಕಿಕೊಂಡು ಒದ್ದಾಡುತ್ತಿದ್ದ ತಾಯಿ ಹಾಗೂ ಮಗನನ್ನು ಸ್ಥಳೀಯರು ಹರಸಾಹಸ ಪಟ್ಟು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಿದ್ದಾರೆ. ಕಾರಿನ ಸ್ಥಿತಿ ನೋಡಿದರೆ ಒಳಗಿದ್ದವರು ಬದುಕುಳಿಯುವುದು ಕಷ್ಟ ಎಂಬಂತಿತ್ತು, ಆದರೆ ತಾಯಿ-ಮಗ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಈ ಅಪಘಾತದ ಘಟನೆಯು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಟ್ಟಗುಡ್ಡಗಳ ಹಾಗೂ ಕಿರಿದಾದ ರಸ್ತೆಗಳಿರುವ ಕೊಡಗಿನಲ್ಲಿ ವಾಹನ ಚಾಲನೆ ಮಾಡುವಾಗ ಚಾಲಕರು ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪ್ರತಿದಿನ ಬೆಳಗ್ಗೆ 'ಖಾಲಿ ಹೊಟ್ಟೆಯಲ್ಲಿ' ಎಳನೀರು ಕುಡೀರಿ.. ಆರೋಗ್ಯದಲ್ಲಿ ಆಗುವ ಚಮತ್ಕಾರ ಆನಂದಿಸಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Accident NEWS accident
Advertisment