Advertisment

ಧರ್ಮಸ್ಥಳ ಬುರುಡೆ ಕೇಸ್​ಗೆ ಟ್ವಿಸ್ಟ್​.. SIT ತಂಡಕ್ಕೆ ಸವಾಲಾಯ್ತು 13ನೇ ಪಾಯಿಂಟ್..!

ಧರ್ಮಸ್ಥಳದಲ್ಲಿ ಅಸ್ಥಿಪಂಜರ ಹುಡುಕಾಟಕ್ಕೆ ಹರಸಾಹಸ ಪಡ್ತಿರೋ ಎಸ್​ಐಟಿ ತಂಡಕ್ಕೆ 13ನೇ ಪಾಯಿಂಟ್​ ಸವಾಲಾಗಿದೆ. ನಿನ್ನೆ 18 ಅಡಿ ಆಳಕ್ಕೆ ಇಳಿದಿದ್ದ ಎಸ್​ಐಟಿ ಟೀಂ ಇಂದು ಮತ್ತಷ್ಟು ಆಳ ಭೂಮಿಯ ಬಗೆಯಲು ಸಜ್ಜಾಗಿದೆ. 13ನೇ ಸ್ಪಾಟ್​ನ 18 ಅಡಿ ಆಳ, 22 ಅಡಿ ಅಗಲ ಅಗೆದ್ರೂ ಎಸ್​ಐಟಿಗೆ ಯಾವುದೇ ಕಳೇಬರ ಪತ್ತೆಯಾಗಿಲ್ಲ.

author-image
NewsFirst Digital
dharmasthala case(1)
Advertisment

ಮಂಗಳೂರು: ಧರ್ಮಸ್ಥಳದಲ್ಲಿ ಅಸ್ಥಿಪಂಜರ ಹುಡುಕಾಟಕ್ಕೆ ಎಸ್​ಐಟಿ ತಂಡ ಹರಸಾಹಸ ಪಡುತ್ತಿದೆ. ಈಗ ಎಸ್​ಐಟಿ ಅಧಿಕಾರಿಗಳಿಗೆ 13ನೇ ಪಾಯಿಂಟ್​ ಸವಾಲಾಗಿದೆ. ನಿನ್ನೆ ಅಗೆದು.. ಅಗೆದು 18 ಅಡಿ ಆಳಕ್ಕೆ ಇಳಿದಿದ್ದ ಎಸ್​ಐಟಿ ಟೀಂ ಇಂದು ಮತ್ತಷ್ಟು ಆಳ ಭೂಮಿಯ ಬಗೆಯಲು ಸಜ್ಜಾಗಿದೆ.

Advertisment

ಇದನ್ನೂ ಓದಿ:ಚಾಮರಾಜನಗರ: ಕಾವೇರಿ ವನ್ಯಜೀವಿಧಾಮದಲ್ಲಿ ಮತ್ತೆ ಎರಡು ಹುಲಿ ಮರಿಗಳು ದುರಂತ ಅಂತ್ಯ

dharmasthala case
ಅನಾಮಿಕ ದೂರುದಾರನ ಜೊತೆ ಎಸ್​ಐಟಿ ತಂಡ

13ನೇ ಸ್ಪಾಟ್​ನ 18 ಅಡಿ ಆಳ, 22 ಅಡಿ ಅಗಲ ಅಗೆದ್ರೂ ಎಸ್​ಐಟಿಗೆ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಕಾರ್ಯಾಚರಣೆ ವೇಳೆ ಭೂಮಿಯಿಂದ ಚಿಮ್ಮಿದ ಜಲರಾಶಿಯಿಂದ ಕಾರ್ಯಾಚರಣೆಗೆ ತೊಡಕಾಗಿತ್ತು. ನಿನ್ನೆ ಕತ್ತಲಾದ ಕಾರಣ ಕಾರ್ಯಾಚರಣೆಗೆ ಬ್ರೇಕ್ ಬಿದ್ದಿದ್ದು, ಅನಾಮಿಕ ದೂರುದಾರ ಉಳಿದ ಜಾಗವನ್ನು ಅಗೆಯಲು ಪಟ್ಟು ಹಿಡಿದಿದ್ದ. ಹೀಗಾಗಿ ಇಂದು 13ನೇ ಸ್ಪಾಟ್​ನಲ್ಲಿ ಮತ್ತಷ್ಟು ಅಡಿ ಆಳ ಮಣ್ಣು ಅಗೆಯುವ ಕಾರ್ಯ ನಡೆಯಲಿದೆ. 

dharmasthala case(18)

ಇನ್ನೂ, ಮತ್ತೊಂದು ಕಡೆ ತನಿಖೆಗೆ ದೆಹಲಿಯಿಂದ ರಾಷ್ಟ್ರೀಯ ಮಾನವಹಕ್ಜು ಆಯೋಗದ ಅಧಿಕಾರಿಗಳು ಬಂದಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಯುವರಾಜ್ ನೇತೃತ್ವದಲ್ಲಿ NHRC ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಈಗಾಗಲೇ NHRC ಅಧಿಕಾರಿಗಳು ಅನಾಮಿಕ ದೂರುದಾರನ ವಿಚಾರಣೆ ನಡೆಸಿದ್ದಾರೆ. ಅಲ್ಲದೇ NHRC ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪಂಚಾಯತ್​ನಿಂದ ದಾಖಲೆಗಳನ್ನು ಪಡೆಯುತ್ತಿದ್ದಾರೆ. ಹೀಗಾಗಿ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಯಿಂದ UDR ಪ್ರಕರಣದ ದಾಖಲೆ ಸಂಗ್ರಹಿಸಲಾಗಿದೆ. ಪಡೆದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲನೆ ನಟೆಸುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dharmasthala case
Advertisment
Advertisment
Advertisment