Advertisment

ಗೌರಿ ಗಣೇಶ ಹಬ್ಬ; ಊರಿಗೆ ಹೋಗುವವರಿಗೆ ಬಿಗ್ ಶಾಕ್.. ಬಸ್ ಪ್ರಯಾಣ ದರ ಭಾರೀ ಏರಿಕೆ, ಎಷ್ಟು?

ಹಬ್ಬದಂದು ಸಿಲಿಕಾನ್ ಸಿಟಿಯ ಬೀದಿ ಬೀದಿಯಲ್ಲೂ ವಿನಾಯಕನನ್ನು ಕಾಣಬಹುದು. ಇದರ ಜೊತೆಗೆ ಎಷ್ಟೋ ಜನರು ಗಣೇಶೋತ್ಸವಕ್ಕೆ ಬೆಂಗಳೂರಿನಿಂದ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸುತ್ತಾರೆ. ಆದರೆ ಊರಿಗೆ ಹೋಗುವವರ ಜೇಬಿಗೆ ಕನ್ನ ಹಾಕಲಾಗುತ್ತಿದೆ.

author-image
Bhimappa
GANESH_FESTIVAL
Advertisment

ಗಣೇಶ ಚತುರ್ಥಿ ಹಬ್ಬ ಬಂದೇ ಬಿಟ್ಟಿತು, ನಗರದ ಕೆಲ ಬೀದಿ ಬೀದಿಗಳಲ್ಲಿ ಗಣೇಶನ ವಿಗ್ರಹಗಳು ಸಾಲು ಸಾಲಾಗಿ ಇಡಲಾಗಿದೆ. ಎಲ್ಲರೂ ಸಂಭ್ರಮ, ಸಡಗರದಿಂದ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ನೆರವೇರಿಸುತ್ತಾರೆ. ಸಿಲಿಕಾನ್ ಸಿಟಿಯ ಬೀದಿ ಬೀದಿಯಲ್ಲೂ ವಿನಾಯಕನನ್ನು ಕಾಣಬಹುದು. ಇದರ ಜೊತೆಗೆ ಎಷ್ಟೋ ಜನರು ಗಣೇಶೋತ್ಸವಕ್ಕೆ ಬೆಂಗಳೂರಿನಿಂದ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸುತ್ತಾರೆ. ಅಂಥವರಿಗೆ ಇಲ್ಲೊಂದು ಬಿಗ್ ಶಾಕ್ ಇದೆ. 

Advertisment

ವಿನಾಯಕ ಚೌತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇರುವ ಸಾಕಷ್ಟು ಜನರು ತಮ್ಮ ಹಳ್ಳಿಗಳಿಗೆ ಹೋಗಿ ಆಚರಣೆ ಮಾಡುತ್ತಾರೆ. ಆದರೆ ಊರಿಗೆ ಹೊರಟವರ ಜೇಬಿನಿಂದ ದೊಡ್ಡ ಮೊತ್ತದಲ್ಲಿ ಹಣ ಪಡೆಯಲು  ಖಾಸಗಿ ಬಸ್​ಗಳು ಶುರು ಮಾಡಿವೆ. ಆಗಸ್ಟ್​ 27 ರಂದು ಗಣೇಶ ಹಬ್ಬಕ್ಕೂ ಒಂದು ದಿನ ಮೊದಲೇ ಅಂದರೆ ಆಗಸ್ಟ್ 26ಕ್ಕೆ ಗೌರಿ ಹಬ್ಬದ ದಿನವೇ ಬಸ್​ ಪ್ರಯಾಣ ಏರಿಕೆ ಮಾಡಲಾಗಿದೆ.

ಗಣೇಶನ ಹಬ್ಬಕ್ಕೆ ಜನ ಸಾಮಾನ್ಯರಿಗೆ ದರ ಏರಿಕೆಯ ಬರೆ ಎಳೆಯಲಾಗುತ್ತಿದೆ. ಕೆಲ ಖಾಸಗಿ ಬಸ್ ಮಾಲೀಕರಿಂದ ಜನ ಸಾಮಾನ್ಯರ ಸುಲಿಗೆ ನಡೆಯುತ್ತಿದೆ ಎನ್ನಬಹುದು. ಬಸ್ ಪ್ರಯಾಣ ದರ, ಒನ್ ಟು ತ್ರಿಬಲ್​ಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಪ್ರಯಾಣಿಕರು ದುಬಾರಿ ಹಣ ಕೊಟ್ಟು ತಮ್ಮ ಊರಿಗೆ ಹೋಗಬೇಕಿದೆ. ಗೌರಿ, ಗಣೇಶ ಹಬ್ಬವೆಂದು ಊರಿಗೆ ಹೋಗುತ್ತಿದ್ದವರಿಂದ ದರೋಡೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಫುಲ್​​ ಗ್ಲಾಮರ್​ ಲುಕ್​ನಲ್ಲಿ ದರ್ಶನ್.. ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಸಾಂಗ್ ರಿಲೀಸ್

Advertisment

GANESH

ಹೇಗಿದೆ ಖಾಸಗಿ ಬಸ್​ ದರಗಳು

ಬೆಂಗಳೂರು ಇಂದ ಮಡಿಕೇರಿ
ಇಂದಿನ ದರ ₹500- ₹600
ಅ.26ರ ದರ₹1500- ₹5000
ಬೆಂಗಳೂರು ಇಂದಉಡುಪಿ
ಇಂದಿನ ದರ     ₹600-  950
ಅ.26ರ ದರ  ₹2500- ₹3000
ಬೆಂಗಳೂರು ಇಂದಧಾರವಾಡ
ಇಂದಿನ ದರ         ₹800- ₹1200
ಅ.26ರ ದರ             ₹1700- ₹4000
ಬೆಂಗಳೂರು ಇಂದಬೆಳಗಾವಿ
ಇಂದಿನ ದರ         ₹800- ₹1000
ಅ. 26ರ ದರ              ₹2000- ₹3000 
ಬೆಂಗಳೂರು ಇಂದದಾವಣಗೆರೆ
ಇಂದಿನ ದರ         ₹600- ₹800
ಅ. 26ರ ದರ₹1300-₹2000    

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ganesh festival, ganesh chaturthi, ಗಣೇಶ್​ ಹಬ್ಬ Ganesha Chaturthi
Advertisment
Advertisment
Advertisment