/newsfirstlive-kannada/media/media_files/2026/03/09/rayachuru-couple-death-2026-03-09-16-48-06.png)
ರಾಯಚೂರು: ಜೋಡಿಯೊಂದು ತಮ್ಮ ಭವಿಷ್ಯದ ಮನೆಯ ನಿರ್ಮಾಣದ ಕನಸು ಕಂಡಿದ್ದು, ಆಸರೆ ನೀಡಬೇಕಾಗಿದ್ದ ಮನೆಯೇ ಸಾವಿನ ಮನೆಗೆ ಕಳುಹಿಸಿದ ಶಾಕಿಂಗ್​ ಘಟನೆ ರಾಯಚೂರಿನಲ್ಲಿ ನಡೆದಿದೆ. ಮನೆ ನಿರ್ಮಿಸಲು ಹಗಲಿರುಳು ಪರಿಶ್ರಮಿಸುತ್ತಿದ್ದ ಈ ಜೋಡಿ ಮೇಲೆ ಮೆಟ್ಟಿಲುಗಳು ಕುಸಿದು ಬಿದ್ದು ಸಾವಿನ ಮನೆ ಸೇರಿದ್ದಾರೆ. ಈ ದಾರುಣ ಸಾವು ಅವರ ಜೀವನದಲ್ಲಿ ಬರ ಸಿಡಿಲಿನಂತೆ ಅಪ್ಪಳಿಸಿದೆ.
ಇದನ್ನೂ ಓದಿ: ವ್ಯಕ್ತಿಯ ಜೀವ ತೆಗೆದ ಷೇರು ಮಾರುಕಟ್ಟೆ ವ್ಯವಹಾರ.. ಅಷ್ಟಕ್ಕೂ ಆಗಿದ್ದೇನು..?
/filters:format(webp)/newsfirstlive-kannada/media/media_files/2026/03/09/rayachuru-couple-death-2026-03-09-16-35-09.jpg)
ಘಟನೆಯ ವಿವರ
38 ವರ್ಷದ ದ್ಯಾವಪ್ಪ ಸೂಗುರು, ಆತನ ಪತ್ನಿ ಶಿವಮ್ಮ ಮೃತ ದುರ್ದೈವಿಗಳು. ಇವರಿಬ್ಬರು ರಾಯಚೂರಿನ ಲಿಂಗಸುಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ತಮ್ಮದೇ ಮನೆಯ ಗೌಂಡಿ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಮೆಟ್ಟಿಲುಗಳು ಕುಸಿದು ಬಿದ್ದಿದ್ದು, ಪಿಲ್ಲರ್ ಇಲ್ಲದೆ ಅವೈಜ್ಞಾನಿಕವಾಗಿ ಮನೆ ನಿರ್ಮಿಸಿದ್ದರಿಂದ ಮೆಟ್ಟಿಲು ಕುಸಿತಗೊಂಡಿವೆ ಎನ್ನಲಾಗಿದೆ. ಮನೆಯ ಜೊತೆಗೆ ಕನಸುಗಳೂ ಕಮರಿಹೋಗಿದ್ದು ಈ ದಂಪತಿಯ ಬಾಳಲ್ಲಿ ದುರಾದೃಷ್ಟಕರ...
ಮೃತ ದೇಹಗಳನ್ನ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us