ಹುಡುಗ-ಹುಡುಗಿ ಓಡಿ ಹೋದರು.. ಪ್ರೇಮಿಗಳ ಬೆಂಬಲಿಸಿದ್ದಕ್ಕೆ ಇಬ್ಬರ ಹ*ತ್ಯೆ

ಪ್ರೇಮಿಗಳನ್ನು ಬೆಂಬಲಿಸಿದ್ದಕ್ಕೆ ಇಬ್ಬರನ್ನು ಭೀಕರವಾಗಿ ಹ*ತ್ಯೆ ಮಾಡಿದ ಘಟನೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜೈ ಭೀಮ್ ನಗರದಲ್ಲಿ ನಡೆದಿದೆ. ಕಿರಣ (25) ಮತ್ತು ಮಂಜುನಾಥ(65) ಕೊ*ಲೆಯಾದ ದುರ್ದೈವಿಗಳು.

author-image
Ganesh Kerekuli
Shimogga story
Advertisment

ಶಿವಮೊಗ್ಗ: ಪ್ರೇಮಿಗಳನ್ನು ಬೆಂಬಲಿಸಿದ್ದಕ್ಕೆ ಇಬ್ಬರನ್ನು ಭೀಕರವಾಗಿ ಹ*ತ್ಯೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜೈ ಭೀಮ್ ನಗರದಲ್ಲಿ ನಡೆದಿದೆ.

ಕಿರಣ (25) ಮತ್ತು ಮಂಜುನಾಥ(65) ಕೊಲೆಯಾದ ದುರ್ದೈವಿಗಳು. 2 ದಿನದ ಹಿಂದಷ್ಟೇ ಪ್ರೀತಿಸುತ್ತಿದ್ದ ಶೃತಿ ಹಾಗೂ ನಂದೀಶ್ ಮನೆಯಿಂದ ಪರಾರಿಯಾಗಿದ್ದರು. ರಕ್ಷಣೆ ಕೋರಿ ನಿನ್ನೆ ಸಂಜೆ ಶೃತಿ ಹಾಗೂ ನಂದೀಶ್ ಜೋಡಿ ಪೊಲೀಸ್ ಠಾಣೆಗೆ ಆಗಮಿಸಿತ್ತು. ಈ ವೇಳೆ ನಂದೀಶ್​ ಜೊತೆ ತೆರಳುವುದಾಗಿ ಶೃತಿ ಹೇಳಿದ್ದಾಳೆ. 

Shimogga story (1)

ಇದರಿಂದ ಕೋಪಗೊಂಡ ಯುವತಿಯ ಸಹೋದರ ಹಾಗೂ ಆತನ ಕಡೆಯವರು, ಪ್ರೇಮಿಗಳಿಗೆ ಬೆಂಬಲಿಸುತ್ತಿದ್ದಾರೆ ಎಂದು ತಿಳಿದು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಕಿರಣ್​, ಮಂಜುನಾಥ್​ ಸಾ*ನ್ನಪ್ಪಿದ್ದಾರೆ, ಪ್ರಕರಣ ಸಂಬಂಧ ಪೊಲೀಸರು ಐವರನ್ನ ಬಂಧಿಸಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ 35 ವರ್ಷ ಕಳೆದ ಮೇಲೆ.. ಇಂಟ್ರೆಸ್ಟಿಂಗ್ ಸ್ಟೋರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shimogga news
Advertisment