/newsfirstlive-kannada/media/media_files/2025/09/24/sl_bhyrappa_new-2025-09-24-15-44-52.jpg)
ಬೆಂಗಳೂರು: 94 ವರ್ಷದ ಎಸ್​ಎಲ್ ಭೈರಪ್ಪ (SL Bhyrappa) ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ. ಅವರು ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಭಾಜನರಾಗಿದ್ದರು.
ಕನ್ನಡದ ಹಿರಿಯ ಸಾಹಿತಿ ಎಸ್​ಎಲ್​ ಭೈರಪ್ಪ ಕಾದಂಬರಿಗಳು
ಭೀಮಕಾಯ
ಬೆಳಕು ಮೂಡಿತು
ಧರ್ಮಶ್ರೀ
ದೂರ ಸರಿದರು
ಮತದಾನ
ವಂಶವೃಕ್ಷ
ಜಲಪಾತ
ನಾಯಿ ನೆರಳು
ತಬ್ಬಲಿಯು ನೀನಾದೆ ಮಗನೆ
ಗೃಹಭಂಗ
ನಿರಾಕರಣ
ಗ್ರಹಣ
ದಾಟು
ಅನ್ವೇಷಣ
ಪರ್ವ
ನಲೆ
ಸಾಕ್ಷಿ
ಅಂಚು
ತಂತು
ಸಾರ್ಥ
ಮಂದ್ರ
ಆವರಣ
ಕವಲು
ಯಾನ
ಉತ್ತರಕಾಂಡ
ಸಿನಿಮಾಗಳಾದ ಕಾದಂಬರಿಗಳು
ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ, ನಾಯಿನೆರಳು.
ಭೈರಪ್ಪ ಅವರಿಗೆ ಒಲಿದು ಬಂದಿರುವ ಪ್ರಶಸ್ತಿಗಳು ಅಂದರೇ, 2010ರಲ್ಲಿ ಸರಸ್ವತಿ ಸಮ್ಮಾನ್​ ಪ್ರಶಸ್ತಿ ಮುಡಿಗೇರಿಸಿಕೊಂಡರು. ಮಾತ್ರವಲ್ಲದೇ, 2015ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್, 2016ರಲ್ಲಿ ಪದ್ಮಶ್ರೀ, ಮತ್ತು 2023ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ನಾಡಿನ ಹಿರಿಯ ಸಾಹಿತಿ ಇನ್ನಿಲ್ಲ.. ಸರಸ್ವತಿ ಸಮ್ಮಾನ್ ಪುರಸ್ಕೃತ SL ಭೈರಪ್ಪರ ಜೀವನ ಹೇಗಿತ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.