ಜಡ್ಜ್​ ಮನೆಯಲ್ಲೇ 29 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣಗಳು ಸೇರಿ 50 ಸಾವಿರ ನಗದು ಕಳ್ಳತನ

ಮನೆಗೆ ಬೀಗ ಹಾಕಿಕೊಂಡು ನ್ಯಾಯಾಧೀಶರು ಕುಟುಂಬ ಸಮೇತರಾಗಿ ತಮ್ಮ ಊರಿಗೆ ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ ಕಳ್ಳರು ಒಳಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ. ಬಟ್ಟೆ, ಮನೆ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.

author-image
Bhimappa
VIJ_POLICE
Advertisment

ವಿಜಯಪುರ: ಜಿಲ್ಲಾ ನ್ಯಾಯಾಲಯದ 5ನೇ ಹೆಚ್ಚುವರಿ ಮತ್ತು ಸೆಷನ್ಸ್​ ನ್ಯಾಯಾಧೀಶ ಸಚಿನ್ ಕೌಶಿಕ್ ಅವರ ಬಾಡಿಗೆ ಮನೆಯಲ್ಲಿ 29 ಲಕ್ಷ ಮೌಲ್ಯದ ಚಿನ್ನಾಭರಣ, ಡೈಮಂಡ್ ಆಭರಣ ಹಾಗೂ 50 ಸಾವಿರ ನಗದನ್ನು ಕಳ್ಳತನ ಮಾಡಲಾಗಿದೆ. ಮುದ್ದೇಬಿಹಾಳದ 14ನೇ ಕ್ರಾಸ್​ನಲ್ಲಿರುವ ಕೆ.ಹೆಚ್​.ಬಿ ಕಾಲೋನಿಯ  ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದೆ.  

ನ್ಯಾಯಾಧೀಶ ಸಚಿನ್ ಕೌಶಿಕ್ ಅವರು ಕುಟುಂಬ ಸಮೇತರಾಗಿ ಮನೆಗೆ ಬೀಗ ಹಾಕಿಕೊಂಡು ಶಿರಸಿಗೆ ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ ಪುಂಡರು ಒಳಗೆ ನುಗ್ಗಿ 29 ಲಕ್ಷ 60 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣಗಳು, ಡೈಮಂಡ್ ಆಭರಣ ಹಾಗೂ 50 ಸಾವಿರ ನಗದು ತೆಗೆದುಕೊಂಡು ಹೋಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. 

ಇದನ್ನೂ ಓದಿ: ಯಾವ ವಿಷ್ಯದಲ್ಲಿ ರಾಜಕಾರಣ ಮಾಡಬೇಕು ಎನ್ನುವ ಪ್ರಜ್ಞೆ ಇರಬೇಕು; ಲೇಖಕಿ ಬಾನು ಮುಷ್ತಾಕ್

VIJ_POLICE_1

ಕಳ್ಳರು ಮುಂದಿನ ಬಾಗಿಲಿನಿಂದಲೇ ಮನೆ ಪ್ರವೇಶ ಮಾಡಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ದೇವರ ಕೋಣೆ, ಬಟ್ಟೆ, ಟ್ರೇಜರಿ, ಬ್ಯೂರೋ ಸೇರಿ ಎಲ್ಲವನ್ನು ಜಾಲಾಡಿದ್ದಾರೆ. ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹೀಗಾಗಿ ಬೆರಳಚ್ಚು ಹಾಗೂ ಶ್ವಾನದಳ ಟೀಮ್​ನವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. 

ಈ ವೇಳೆ ಶ್ವಾನ 12 ಹಾಗೂ 13ನೇ ಕ್ರಾಸ್​ ಕಡೆಗೆ ತೆರಳಿ ವಾಪಸ್ ನ್ಯಾಯಾಧೀಶರ ಮನೆಗೆ ತೆರಳಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಗೊತ್ತಾಗಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ  ನ್ಯಾಯಾಧೀಶರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Vijayapura
Advertisment