ನಿಮ್ಮನ್ನು ಯಾರು ಮೋಸಗೊಳಿಸಲು ಈ ದಿನ ಆಗಲ್ಲ -ನಿಮ್ಮ ರಾಶಿ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಪಾಲ್ಗುಣ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಉತ್ತರಾಭಾದ್ರ ನಕ್ಷತ್ರ. ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇದನ್ನೂ ಓದಿ: ಕಿಶನ್ ಶಿವತಾಂಡವ.. ಮನಸೋತ ಫ್ಯಾನ್ಸ್.. ವಾವ್ಹ್​ ಎನ್ನುವ ಫೋಟೋಗಳು..!

ಮೇಷ

  • ಆಸ್ತಿಯ ವಿಚಾರಕ್ಕೆ  ಚರ್ಚೆಯಾಗಬಹುದು
  • ನಿಮ್ಮನ್ನು ಯಾರು ಮೋಸಗೊಳಿಸಲು ಈ ದಿನ ಆಗುವುದಿಲ್ಲ
  • ಬಾಕಿ ಇರುವ ಕೆಲಸಗಳ ಬಗ್ಗೆ ಚಿಂತಿಸುವಿರಿ
  • ನಿಮಗೆ ಪ್ರಿಯವಾದ ಚಿಂತೆಗಳಲ್ಲಿ ಕಾಲಕಳೆಯಬಹುದು
  • ವ್ಯಾಪಾರ  ವ್ಯವಹಾರಗಳಲ್ಲಿ ಮಧ್ಯವರ್ತಿಗಳಿಂದ ಮೋಸಕ್ಕೆ ಸಂಚು
  • ದುಶ್ಚಟಗಳಿರುವವರು ದೂರವಿರಬೇಕು ತೊಂದರೆಯಾಗಬಹುದು
  • ನರಸಿಂಹನ ಪ್ರಾರ್ಥನೆ ಮಾಡಿ

ವೃಷಭ

  • ಇಂದು ಆತುರದ ತೀರ್ಮಾನ ಬೇಡ
  • ನಿಮ್ಮ ಕೋಪ ಶಿಸ್ತು ನಿಮ್ಮ ಪರವಾಗಿರುತ್ತದೆ
  • ಎಲ್ಲಾ ದೃಷ್ಟಿಯಿಂದ ನಿಮಗೆ ಅನುಕೂಲಕಂಡರೂ ಹಿನ್ನಡೆ ಇದೆ
  • ಆಹಾರಕ್ಕಾಗಿ ನಿರೀಕ್ಷೆಯಲ್ಲಿದ್ದ ನಿಮಗೆ ತೊಂದರೆಯ ಸೂಚನೆ
  • ಆರ್ಥಿಕವಾಗಿ ಸಮಸ್ಯೆಯಿಲ್ಲ ಇರುವುದಿಲ್ಲ
  • ಭರವಸೆಯ ನಿರೀಕ್ಷೆಯಿಂದ ನಿಮ್ಮ ಕೆಲಸದಲ್ಲಿ ಹಿನ್ನಡೆಯಾಗಬಹುದು
  • ಈಶ್ವರಾರಾಧನೆ ಮಾಡಿ ಬಿಲ್ವ ಪಾತ್ರೆ ಸಮರ್ಪಿಸಿ

ಮಿಥುನ

  • ಬೇರೆಯವರು ನಿಮ್ಮ ಕೆಲಸದಲ್ಲಿ ಸಹಾಯ ಮಾಡಬಹುದು.
  • ಪ್ರೀತಿ ಪ್ರೇಮ ವಿಷಯಗಳಲ್ಲಿ ಹುಷಾರಾಗಿರಿ
  • ನೀವು ಉಳಿಸಿದ ಹಣ ಸಕಾಲದಲ್ಲಿ ಉಪಯೋಗಕ್ಕೆ ಬಹಬಹುದು
  • ನಿಮ್ಮ ಜ್ಞಾನದ ಜೊತೆಗೆ ನಿರಂತರ ಪ್ರಯತ್ನ ಯಶಸ್ಸು ಕೊಡುತ್ತದೆ
  • ನಿಜವಾದ ಕಷ್ಟದ ಬಗ್ಗೆ ನಿಮಗೆ ಅರಿವಿರುವುದಿಲ್ಲ
  • ಗೋವಿಗೆ ಅಕ್ಕಿ ಬೆಲ್ಲ ನೀಡಿ

ಕಟಕ

  • ಬಯಸದೇ ಬಂದ ಭಾಗ್ಯ ನಿಮ್ಮದಾಗುತ್ತದೆ.
  • ಅಸಮಾಧಾನ ಬೇಡ ನಿಮ್ಮ ಪಾಲಿಗಿರುವುನ್ನು ಅನುಭವಿಸಿ
  • ಜೀವನ ಪೂರ್ತಿ ಬಂಧನ ಎಂದು ಭಾಸವಾಗುವ ದಿನ
  • ತಾಳ್ಮೆಯಿರಲಿ ಕೋಪ ಮಾಡಿಕೊಳ್ಳುವುದರಲ್ಲಿ ಪ್ರಯೋಜನವಿಲ್ಲ
  • ನಿಮ್ಮ ನಂಬಿಕೆ ಶ್ರದ್ಧೆ ನಿಮ್ಮನ್ನು ಕಾಪಾಡುತ್ತವೆ
  • ಯಾವುದೇ ನೋವಿರಲಿ ಅದಕ್ಕೆ ಪರಿಹಾರ ಮಾರ್ಗ ಸಿಗಬಹುದು
  • ಶ್ರೀರಾಮ ಪರಿವಾರ ದೇವರನ್ನು ಪೂಜಿಸಿ

ಸಿಂಹ

  • ನಿಮ್ಮ ಎಲ್ಲಾ ಪ್ರಯತ್ನಗಳು ಇಂದು ವಿಫಲ ಆಗಬಹುದು
  • ಅನಾರೋಗ್ಯ ಪೀಡಿತ ಬಂಧುಗಳ ಭೇಟಿ ಖರ್ಚು ಹೆಚ್ಚು
  • ಹಣ ಉಳಿಸಲು ಪ್ರಯತ್ನಿಸಿ ತೊಂದರೆಗೆ ಸಿಲುಕುತ್ತೀರಿ
  • ಜೀವನದ ತೊಂದರೆಗಳನ್ನು ಹೇಳಿಕೊಂಡು ತಪ್ಪು ಮಾಡಬೇಡಿ
  • ಸಣ್ಣ ವ್ಯಾಪಾರಿಗಳಿಗೆ ಧನಲಾಭ
  • ನಿಮ್ಮ ಕೆಲಸ ಜವಾಬ್ದಾರಿಯ ಬಗ್ಗೆ ಬದ್ಧತೆ ಇರಲಿ
  • ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ

ಕನ್ಯಾ

  • ಲೆಕ್ಕ ಶಾಸ್ತ್ರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಯಶಸ್ಸು
  • ಆಸ್ಪತ್ರೆಗಾಗಿ ಹಣ ಖರ್ಚು ಮಾಡಬೇಕಾಗಬಹುದು
  • ಅಧಿಕ ಖರ್ಚು  ಹಣಸಂಗ್ರಹದ ಬಗ್ಗೆ  ಆಲೋಚನೆ
  • ಹೊಸ ಯೋಜನೆಗಳು ಸಾಕಾರವಾಗಬಹುದು
  • ನಿಮ್ಮ ಯೋಜನೆಗೆ ತಕ್ಕ ವ್ಯಕ್ತಿಗಳ ಪರಿಚಯ ಸಹಾಯ ಸಿಗುತ್ತದೆ
  • ಹಳೆಯ ಬಾಕಿ ಹಣ ನಿಮ್ಮ ಕೈ ಸೇರಬಹುದು
  • ಕಾಲ ಭೈರವ ಮಂತ್ರ ಪಠಿಸಿ

ತುಲಾ

  • ಮಕ್ಕಳ ಬಗ್ಗೆ ಚಿಂತೆ ಮಾಡಿ, ಅವರಿಗೆ ಸರಿಯಾಗಿ ತಿಳುವಳಿಕೆ ನೀಡಿ
  • ಹಳೆಯ ನೋವಿನಿಂದ ಬಳಲುತ್ತೀರಿ
  • ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಮಾಡುವ ಬಗ್ಗೆ ಚಿಂತಿಸಿ
  • ನಿಮ್ಮ ಸಂದೇಶ ಮನೆ ಮಕ್ಕಳಿಗೆ ದಾರಿದೀಪವಾಗಬೇಕು
  • ವಿಶ್ರಾಂತಿಯಿರುತ್ತದೆ ಮನಸ್ಸು ಮಾತ್ರ ಸಮಾಧಾನದಲ್ಲಿರುವುದಿಲ್ಲ
  • ಕೆಲಸ ಕಾರ್ಯಗಳು ನಿಮಗೆ ಯಾವುದೇ ರೀತಿಯ ಸಮಾಧಾನ ಕೊಡುವುದಿಲ್ಲ
  • ಮೃತ್ಯುಂಜಯನ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಅನಗತ್ಯ ವಿಚಾರಗಳೇ ಹೆಚ್ಚು ಪ್ರಸ್ತಾಪವಾಗುವ ದಿನ
  • ಮಧ್ಯಾಹ್ನದ ನಂತರ ಹಣಕಾಸಿನ ವಿಚಾರದಲ್ಲಿ ಅನುಕೂಲ
  • ಕಠಿಣ ನಿರ್ಧಾರಗಳು ಬೇಡ
  • ಬೇರೆಯವರ ವಿಶ್ವಾಸ ಬೆಂಬಲ ಸಿಗುತ್ತದೆ
  • ಪ್ರೇಮಿಗಳಿಗೆ ತಿರುವು ಪಡೆಯುವಂತಹ ದಿನ
  • ಸಾಯಂಕಾಲ ಬಂಧುಗಳ ಹಾಗೂ ಸ್ನೇಹಿತರ ಸಮಮಾಗಮವಾಗಬಹುದು
  • ಆಂಜನೇಯನ ಪ್ರಾರ್ಥನೆ ಮಾಡಿ

ಧನುಸ್ಸು

  • ಆರೋಗ್ಯದಲ್ಲಿ ಸಮಾಧಾನಕೊಡಬಹುದು
  • ದೀರ್ಘಕಾಲದ ಆಲೋಚನೆಗಳಿಂದ ಮನಸ್ಸಿಗೆ ಅನುಕೂಲ
  • ಸ್ನೇಹಿತರ ಮಿಲನದಿಂದ ನಿಮ್ಮ ಕೆಲಸಕ್ಕೆ ಅನುಕೂಲ
  • ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥಮಾಡಬೇಡಿ
  • ವೃತ್ತಿಯಲ್ಲಿ ಹಿನ್ನಡೆಯಾಗಬಹುದು ಲಾಭವಿಲ್ಲ
  • ಪ್ರಯಾಣ ಪ್ರವಾಸದ ಯೋಜನೆ ಹಾಕಬಹುದು
  • ಲಕ್ಷ್ಮೀಮಂತ್ರ ಪಠಿಸಿ

ಮಕರ

  • ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
  • ತಾಯಿ- ತಂದೆಯರ ದುಃಖ ಕಾರಣವಾಗಬಹುದು
  • ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿದೆ
  • ಹಣದ ಅಡಚಣೆಯೇ ಎಲ್ಲಾ ವಿಚಾರದಲ್ಲಿ ಕಾರಣವಾಗಬಹುದು
  • ಭೂ ಸಂಬಂಧಿ ವ್ಯವಹಾರಗಳಿಂದ ನಷ್ಟ ಕಾಣಬಹುದು
  • ಮನಸ್ಸಿನಲ್ಲಿರುವುದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಹುದು
  • ಭೂ ವರಾಹನನ್ನು ಅರ್ಚಿಸಿ

ಕುಂಭ

  • ಪ್ರವಾಸ ಕುರಿತು ಮಾನಸಿಕ ಉಲ್ಲಾಸ
  • ಉತ್ತಮ ವಾತಾವರಣ ಇರಲಿದೆ
  • ನೀವಂದುಕೊಂಡ ಕೆಲಸಗಳು ಪೂರ್ಣ ಆಗಲಿದೆ
  • ಜೀವನದ ಅನುಭವ ನಿಮ್ಮನ್ನು ಪರಿವರ್ತಿಸಬಹುದು
  • ನಿಮಗೆ ಹಳೆಯ ನೆನಪುಗಳು ಸಂತೋಷಕೊಡಬಹುದು
  • ದಾಂಪತ್ಯ ಜೀವನಲ್ಲಿ ಸುಖ ಸಂತೋಷ ಇರಲಿದೆ
  • ಗಣಪತಿಯ ಅನುಗ್ರಹ ಪಡೆಯಿರಿ

ಮೀನ

  • ಕಾರ್ಯಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತೀರಿ
  • ಪ್ರೇಮಿಗಳಿಗೆ ಗೊಂದಲದ ದಿನ
  • ಮಾನಸಿಕ ಶಾಂತಿಗಾಗಿ ದುಡಿದ ಹಣ ಸ್ವಲ್ಪ ಖರ್ಚು ಮಾಡಿ
  • ಆತ್ಮವಿಶ್ವಾಸದೊಂದಿಗೆ ಎಲ್ಲಾ ಕೆಲಸಗಳನ್ನು ಪ್ರಾರಂಭಿಸಿ ಶುಭವಿದೆ
  • ಬೇರೆಯವರ ಸಹಾಯದಿಂದ ನಿಮಗೆ ತೃಪ್ತಿ ಸಿಗಬಹುದು
  • ಹೊಸ ಸ್ನೇಹಿತರನ್ನು ಜನರನ್ನು ಆಕರ್ಷಿಸುತ್ತೀರಿ
  • ಕುಲದೇವತಾ ಆರಾಧಾನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment