/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ:ಅಣ್ಣ-ತಂಗಿ ನಡುವೆ ಪ್ರೀತಿ, ಪ್ರೇಮ -ಹಠಾತ್ ಜೀವ ಕಳೆದುಕೊಂಡ ಯುವತಿ
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದ ಹಿರಿಯರ ಪ್ರೀತಿ ವಿಶ್ವಾಸಗಳಿಸಿ
- ಪ್ರೇಮಿಗಳಿಗೆ ಹಿನ್ನಡೆ.ಉದ್ವಿಗ್ನತೆ ಕಾಡಬಹುದು
- ಅಧಿಕಾರದ ಭಯ ಸ್ಥಾನಕ್ಕೆ ಚ್ಯುತಿ ಬರಬಹುದು
- ಧಾರ್ಮಿಕ ಮುಖಂಡರಿಗೆ ಹಿನ್ನಡೆ ಅವಮಾನ ಇರುತ್ತದೆ
- ಅತಿಯಾದ ಆತ್ಮ ವಿಶ್ವಾಸ ನಿಮಗೆ ತೊಂದರೆ ಮಾಡುತ್ತದೆ
- ನಿರುದ್ಯೋಗಿಗಳಿಗೆ ತುಂಬಾ ಬೇಸರವಾಗುವ ದಿನ
- ಇಷ್ಟದೇವತಾ ಆರಾಧನೆ ಮಾಡಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಉನ್ನತ ಹುದ್ದೆಯಲ್ಲಿರುವವರಿಗೂ ನಿರಾಶೆ ಆಗಬಹುದು
- ಜವಾಬ್ದಾರಿಯ ಬಗ್ಗೆ ನಿಗಾವಹಿಸಬೇಕಾದ್ದು ನಿಮಗೆ ಅನಿವಾರ್ಯವಾಗುತ್ತದೆ
- ಅತೀ ಮುಖ್ಯವಾದ ವಿಚಾರಗಳಲ್ಲಿ ಗೊಂದಲ ಉಂಟಾಗಬಹುದು
- ಬೇರೆಯವರ ನಿರ್ಲಕ್ಷದಿಂದ ನಿಮ್ಮ ಕೆಲಸಕ್ಕೆ ಹಿನ್ನಡೆ
- ಆರ್ಥಿಕ ಸಮಸ್ಯೆ ಕಾಡಬಹುದು
- ಸಾಯಂಕಾಲ ಸ್ವಲ್ಪ ಮಾನಸಿಕ ಒತ್ತಡ ಕಡಿಮೆಯಾಗಿ ನೆಮ್ಮದಿ ಸಿಗಲಿದೆ
- ನೌಕರರಿಗೆ ವಿದ್ಯಾರ್ಥಿಗಳಿಗೆ ಇಂದು ತಾಳ್ಮೆ ಪರೀಕ್ಷಿಸುವ ದಿನವಿದು
- ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ನಿಮ್ಮನ್ನು ಪ್ರಶಂಸಿಸುತ್ತಾರೆ
- ಆರೋಗ್ಯವೂ ಕೈ ಕೊಡಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರೇಮಿಗಳಿಗೆ ಆಶುಭ ಭವಿಷ್ಯಕ್ಕೆ ತೊಂದರೆಯಾಗಬಹುದು
- ಕೈಯಲ್ಲಿ ಹಣದ ಸಮಸ್ಯೆ ಉದ್ಯೋಗ ಸಮಸ್ಯೆ ಕಾಡಬಹುದು
- ಹಿತಶತ್ರುಗಳ ಕಾಟದಿಂದ ನಿಮ್ಮ ಗೌರವಕ್ಕೆ ಧಕ್ಕೆ ಉಂಟಾಗಬಹುದು
- ಕುಟುಂಬದ ವಾತಾವರಣ ವ್ಯಾಪಾರ - ವ್ಯವಹಾರ ಚೆನ್ನಾಗಿರಲಿದೆ
- ನಿಮ್ಮ ವಿರೋಧಿಗಳು ನಿಮ್ಮೆಲ್ಲಾ ಸಂತೋಷವನ್ನು ಹಾಳು ಮಾಡಬಹುದು
- ಸುದರ್ಶನನನ್ನು ಪ್ರಾರ್ಥಿಸಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಆದಾಯದ ಮೂಲ ನೋಡಿ ಖರ್ಚಿಗೆ ಮುಂದಾಗಬೇಕು
- ಈ ದಿನ ದುಂದುವೆಚ್ಚ ಬೇಡ
- ಬೇರೆಯವರಿಗೆ ಸಾಲದ ರೂಪದಲ್ಲಿ ಹಣ ಪದಾರ್ಥ ನೀಡಬಾರದು
- ಸಹೋದರ ವೈಮನಸ್ಸು ಇರಬಹುದು. ತಾಳ್ಮೆಯಿರಲಿ
- ಪುಸಕ್ತ ಪ್ರೇಮಿಗಳಿಗೆ ವ್ಯಾಪಾರಸ್ಥರಿಗೆ ಶುಭವಿದೆ
- ದುಬಾರಿ ವಸ್ತುಗಳ ಖರೀದಿ ಬೇಡ
- ವ್ಯಾಪಾರ ವಿಸ್ತರಿಸಲು ಕೈ ಹಾಕಿ ನಷ್ಟವಾಗಬಹುದು
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹವಾಮಾನ ವೈಪರೀತ್ಯದಿಂದ ಶೀತಸಂಬಂಧಿ ತೊಂದರೆ ಕುಟುಂಬಕ್ಕೆಲ್ಲ ಬರಬಹುದು
- ನಯ ವಂಚಕರಿಂದ ದೂರವಿರಬೇಕಾಗುತ್ತದೆ
- ಮೇಲಾಧಿಕಾರಿಗಳ ಜೊತೆ ಕುಟುಂಬದ ಹಿರಿಯರ ಜೊತೆ ವಾದಿಸಬಾರದು
- ನಿಮ್ಮ ಸ್ಥಾನ ಸಂಬಂಧಗಳ ತಿಳುವಳಿಕೆ ನಿಮಗಿರಬೇಕಾಗುತ್ತದೆ
- ಆಹಾರ ಸೇವನೆಯ ಬಗ್ಗೆ ಹೆಚ್ಚು ಗಮನಹರಿಸಿ
- ಕೋಪಬೇಡ ಕೆಲ ಹೊತ್ತು ವಾತಾವರಣ ಚೆನ್ನಾಗಿರುವುದಿಲ್ಲ
- ದುರ್ಗಾದೇವಿಯನ್ನು ಆರಾಧನೆ ಮಾಡಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ತತ್ತ್ವಗಳಲ್ಲಿ ಯಾವುದೇ ಕಾರಣಕ್ಕೂ ರಾಜಿ ಬೇಡ
- ಅವಿವಾಹಿತರಿಗೆ ಸಿಹಿ ಸುದ್ದಿ ಸಿಗಲಿದೆ
- ಹಳೆಯ ನಷ್ಟಕ್ಕೆ ಅವಮಾನಕ್ಕೆ ಇಂದು ಪ್ರತೀಕಾರದ ಸಮಯವಾಗಿರುತ್ತದೆ
- ನಿಮಗಿರುವ ಬುದ್ಧಿವಂತಿಕೆಯಿಂದ ನಿಮ್ಮ ವಿರೋಧಿಗಳನ್ನು ಸೋಲಿಸುತ್ತೀರಿ
- ಮದುವೆಗೆ ನಿಶ್ಚಯದ ಸೂಚನೆಗಳಿವೆ
- ಸ್ವಲ್ಪ ಆಸಕ್ತಿಯನ್ನು ಗಟ್ಟಿಮಾಡಿಕೊಳ್ಳಬೇಕು
- ಜಗಳ ಬೇಡ. ಕೇವಲ ಮಾತಿನಿಂದ ನೀವು ಹೇಳಬೇಕಾದ್ದನ್ನು ಹೇಳಿ
- ಸಾಲಿಗ್ರಾಮ ಮಹಾವಿಷ್ಣುವನ್ನು ಆರಾಧನೆ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಬದಲಾವಣೆಯ ಪರ್ವ ನಿಮ್ಮ ಯಶಸ್ಸಿನ ಗುಟ್ಟಾಗಿರುತ್ತದೆ
- ಕೆಲಸದಲ್ಲಿ ಬಡ್ತಿ ಅಥವಾ ಹಣ ಕೈ ಸೇರುತ್ತದೆ
- ಸಾಂಸಾರಿಕ ಮಕ್ಕಳ ವಿಚಾರವಾಗಿ ಇದ್ದ ಚಿಂತೆ ದೂರವಾಗಬಹುದು
- ಸ್ನೇಹಿತರೊಂದಿಗೆ ಸೇರಿ ಹೊಸ ಯೋಜನೆ ರೂಪಿಸಲು ಅವಕಾಶವಿದೆ
- ಕೌಶಲ್ಯದ ಕೆಲಸ ನಿಮಗೆ ಸಹಾಯಕವಾಗುವಂತೆ ಮಾಡಬಹುದು
- ನಿಮ್ಮ ಜವಾಬ್ದಾರಿಯುತ ಕೆಲಸಗಳು ಸಕಾಲದಲ್ಲಿ ಮುಗಿಯಬಹುದು
- ಕುಲದೇವತಾ ಆರಾಧನೆ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಾಧನೆ ಪ್ರಗತಿಯ ಬಗ್ಗೆ ಅಹಂಭಾವ ಬೇಡ
- ಅಪರಿಚಿತ ಭಯ ಕಾಡಬಹುದು ಮಾಟ-ಮಂತ್ರ ಇತ್ಯಾದಿಗಳ ಬಗ್ಗೆ ವಿಚಾರ ಮಾಡುತ್ತೀರಿ
- ನಿಮ್ಮ ಧೈರ್ಯ ಹಾಗೂ ಭಾವನೆಗಳಿಗೆ ಭಂಗ ಬರಬಹುದು ಎಚ್ಚರಿಕೆಯಿರಲಿ
- ವಿನಾಕಾರಣ ವಾದ ವಿವಾದಗಳು ಬೇಡ
- ಹಣ ಮತ್ತು ದ್ರವ್ಯ ಕಳೆದುಕೊಳ್ಳುವ ಸಾಧ್ಯತೆಗಳಿವೆ
- ಮಾಟ ಮಂತ್ರ ಇತ್ಯಾದಿಗಳ ಬಗ್ಗೆ ವಿಚಾರ ಮಾಡುತ್ತೀರಿ
- ಪ್ರತ್ಯಂಗಿರಾ ಹೋಮ ಮಾಡಿಸಿ
ಧನುಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಚಿಕ್ಕಮಕ್ಕಳ ಬಗ್ಗೆ ಗಮನವಿರಲಿ. ಮಕ್ಕಳಿಗೆ ಸಮಸ್ಯೆಯಿದೆ
- ಮನೋರಂಜನೆಯನ್ನು ಅನುಭವಿಸುವ ಮೂಲಕ ಸಂತೋಷಿತರಾಗುತ್ತೀರಿ
- ಸಂಬಂಧಿಕರಲ್ಲಿ ಬಹು ಜನಪ್ರಿಯರಾಗುತ್ತೀರಿ
- ವಿದೇಶಿ ಪ್ರಯಣಕ್ಕಾಗಿ ಪ್ರಯತ್ನಿಸುತ್ತಿದ್ದವರಿಗೆ ಈ ದಿನ ಶುಭವಿದೆ
- ಸಮಾಜ ಕಾರ್ಯ ಜನಸೇವೆಯಲ್ಲಿ ಉತ್ಸುಕರಾಗಿರುತ್ತೀರಿ
- ಕೈ ಹಾಕಿದ ಕೆಲಸಗಳು ಪೂರ್ಣವಾಗುವ ಸೂಚನೆಯಿರುತ್ತದೆ
- 2 ಬಾರಿ ಅಶ್ವತ್ಥ ಪ್ರದಕ್ಷಿಣೆ ಮಾಡಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಮಾಜದಲ್ಲಿ ನಿಮ್ಮನ್ನು ಗುರುತಿಸಿಕೊಳ್ಳಲು ತುಂಬಾ ಪ್ರಯತ್ನ ಮಾಡಬೇಕಾಗುತ್ತದೆ
- ವೈದ್ಯಕೀಯ ವಿದ್ಯಾರ್ಥಿಗಳಿಗೆ- ವೈದ್ಯರಿಗೆ ಶುಭಫಲವಿದೆ
- ಹಣಕಾಸಿನ ಸಮಸ್ಯೆಯಿಂದ ಕೆಲವು ಕೆಲಸಗಳು ಸ್ಥಗಿತವಾಗಬಹುದು
- ಪೂರ್ವಿಕರ ಆಸ್ತಿ ವಿಚಾರಗಳಲ್ಲಿ ಒಂದು ತಿರುವು ಬರಬಹುದು.
- ಕುಟುಂಬದ ಸದಸ್ಯರ ಸ್ವಭಾವದಿಂದ ನಿಮಗೆ ಬೇಸರವಾಗಬಹುದು
- ಕಾರ್ಯಕ್ಷೇತ್ರದಲ್ಲಿ ಕೆಲವು ಅರಿವಿಲ್ಲದ ಸಮಸ್ಯೆಗಳುಂಟಾಗಬಹುದು
- ಕಾಮಧೇನು ಮಂತ್ರವನ್ನು ಜಪಿಸಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೆಯಲ್ಲಿ ಕೆಲಸಗಾರರಿದ್ದರೆ ಸ್ವಲ್ಪ ಜಾಗ್ರತೆ ವಹಿಸಿ.
- ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ವಿನಾಕಾರಣ ಮಾತು ಬೇಡ
- ವಿದ್ಯಾರ್ಥಿಗಳಿಗೆ ಗಂಭೀರ ವಿಷಯಗಳನ್ನು ಅಧ್ಯಯನ ಮಾಡಲು ಆಸಕ್ತಿ ಬರಬಹುದು
- ಕಾರ್ಯ ನಿಮಿತ್ತ ಪ್ರಯಾಣ ಮಾಡಬಹುದು
- ನಿಮ್ಮ ಸಾಮರ್ಥ್ಯ ನೋಡಿ ಜವಾಬ್ದಾರಿಯುತ ಕೆಲಸ ನಿಮ್ಮ ಹೆಗಲೇರಲಿದೆ
- ಒಂದೇ ಸಮಯದಲ್ಲಿ 2-3 ಕೆಲಸಗಳಾಗುವ ಸಾಧ್ಯತೆಗಳಿವೆ. ಶುಭ
- ಶಿಂಶುಮಾರ ಮಂತ್ರವನ್ನು ಜಪ ಮಾಡಿಸಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಯಾವುದೇ ಕಾರಣಕ್ಕೂ ಸಾಲ ಮಾಡುವುದು ಬೇಡ
- ಕೆಂಪುವಸ್ತ್ರ ಧರಿಸಿ ಶುಭವಾಗಲಿದೆ
- ತಾಯಿಯ ಆಶೀರ್ವಾದದ ಮೂಲಕ ಈ ದಿನದ ಕೆಲಸವನ್ನು ಆರಂಭಿಸಿ
- ಮನೆಯಲ್ಲಿ ಪರಸ್ಪರ ವಿವಾದಗಳು ಉಂಟಾಗಬಹುದು
- ಖರ್ಚನ್ನು ಸರಿಯಾಗಿ ಹಮನಿಸಿ-ಆದಾಯ್ಕಕೆ ಹೊಂದಿಕೆಯಾಗುವಂತೆ ಮಾಡಿ
- ಮನಸ್ಸಿನಲ್ಲಿ ಹೊಸ ಹೊಸ ಆಲೋಚನೆಗಳು ಬರಬಹುದು
- ಸ್ರಷ್ಟಾ ಮಂತ್ರಜಪದಿಂದ ಶುಭವಿದೆ
ಇದನ್ನೂ ಓದಿ: ಅಣ್ಣ-ತಂಗಿ ನಡುವೆ ಪ್ರೀತಿ, ಪ್ರೇಮ -ಹಠಾತ್ ಜೀವ ಕಳೆದುಕೊಂಡ ಯುವತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us