/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ರೈತರನ್ನು ಉದ್ಯಮಿಗಳನ್ನಾಗಿ ರೂಪಿಸುವುದು ಸರ್ಕಾರದ ಗುರಿ: ಕೃಷಿ ಸಚಿವ N.ಚಲುವರಾಯಸ್ವಾಮಿ
ಮೇಷ
- ಅನೇಕ ರೀತಿಯಲ್ಲಿ ಮನಸ್ಸು ವಿಚಲಿತವಾಗಬಹುದು
- ಮನೆಯಲ್ಲಿ ಅಶಾಂತಿ ವಾತಾವರಣ
- ಮಕ್ಕಳಿಂದ ಸಂತೋಷ ಸಿಗಲಿದೆ
- ಸ್ವಂತ ಭೂಮಿಯ ವಿಚಾರದ ಮಾತು - ರಕ್ಷಣೆಯ ವಿಚಾರ
- ಹಣವಿರುತ್ತದೆ ಅನುಭವಿಸುವ ಯೋಗ ಕಡಿಮೆ
- ಇಂದು ಆಶ್ಚರ್ಯ ಹುಟ್ಟಿಸುವಂತೆ ಸೌಮ್ಯವಾಗಿರುತ್ತೀರಿ
- ವಿಘ್ನೇಶ್ವರನನ್ನು ಪ್ರಾರ್ಥಿಸಿ
ವೃಷಭ
- ಅನುಕೂಲವಿದ್ದಾಗ ಖುಷಿಪಡಿ ಯೋಚಿಸಬೇಡಿ
- ಆದಾಯಕ್ಕಿಂತ ಖರ್ಚು ಹೆಚ್ಚು
- ವೃತ್ತಿಯಲ್ಲಿ ಅಧಿಕಾರಿಗಳಿಂದ ಸಲಹೆ ಸೂಚನೆ ಬೇಸರ
- ಮನೆಯವರ ಸಲಹೆ ಇಷ್ಟವಾಗುವುದಿಲ್ಲ
- ದೈವಭಕ್ತಿಯಿರಲಿ ಶುಭವಿದೆ ಸಂಕಟದಿಂದ ಪಾರಾಗುವಿರಿ
- ಅನುಚಿತ ಕೆಲಸಗಳ ವಿಚಾರ ಮಾಡಬೇಡಿ
- ಗಾಯತ್ರೀ ಮಂತ್ರ ಶ್ರವಣ ಮಾಡಿ
ಮಿಥುನ
- ವಿದ್ಯಾರ್ಥಿಗಳಿಗೆ ಅಡಚಣೆ ಬೇಸರ ಉಂಟಾಗಬಹುದು
- ದಾಂಪತ್ಯ ವಿಚಾರ ಏರಿಳಿತಗಳಿಂದ ಕೂಡಿರುತ್ತದೆ
- ವೃತ್ತಿಪರರಿಗೆ ಅನುಕೂಲ
- ಹೆಂಗಸರಿಗೆ ಹೊಟ್ಟೆಗೆ ಸಂಬಂಧಿಸಿದ ತೊಂದರೆ ಆಗಬಹುದು
- ಬಂಧುಗಳ ನೆರವು ಉತ್ತಮ ಸಹಕಾರ
- ಎದುರಾಳಿಗಳಿಗೆ ಹೆದರಿಕೆ
- ಧನ್ವಂತರಿಯನ್ನು ಆರಾಧಿಸಿ
ಕಟಕ
- ವಿವಾಹ ವಿಚಾರ ಸಂತೋಷ
- ಉದ್ಯೋಗದಲ್ಲಿ ಬಡ್ತಿ ಅವಕಾಶ ಹೊಸಬರಿಗೆ ಆದ್ಯತೆ
- ಮನಸ್ಸಿನ ಅನುಮಾನಗಳು ಕೆಲವು ನಿಜವಾಗಬಹುದು
- ಕೆಲಸಗಳನ್ನು ಏಕಾಗ್ರಚಿತ್ತದಿಂದ ಮಾಡಿ
- ಸಭ್ಯ ನಡವಳಿಕೆ ಬೇರೆಯವರಿಗೆ ಇಷ್ಟ ಮನೆಯವರಿಗೆ ಕಷ್ಟ
- ಖಾಸಗಿ ಕ್ಷೇತ್ರದವರಿಗೆ ಸಿಹಿ ಸುದ್ದಿ
- ಸಾಲಿಗ್ರಾಮ ಮಹಾವಿಷ್ಣುವನ್ನು ಪ್ರಾರ್ಥಿಸಿ
ಸಿಂಹ
- ಜನರು ನಿಮ್ಮಿಂದ ನಿರೀಕ್ಷೆ ಇಟ್ಟುಕೊಂಡು ನಿರಾಶೆ ಹೊಂದಬಹುದು
- ಕೆಲಸದಲ್ಲಿ ಬಡ್ತಿ ಸಿಗಲಿದೆ
- ವೃತ್ತಿ ಜೀವನದಲ್ಲಿ ಎಡವಟ್ಟು ಅಪಮಾನದ ಭಯ
- ವೈವಾಹಿಕ ಜೀವನ ಉತ್ತಮ ಹೊಂದಾಣಿಕೆ ಇರಲಿ
- ನ್ಯಾಯಾಲಯದ ವಿಚಾರಗಳಿಗೆ ತಿರುವು ಸಂತೋಷ
- ನಿಮ್ಮ ಸ್ವಭಾವದಿಂದ ಸಂಬಂಧಿಕರಿಗೆ ಸಂತೋಷ
- ಶ್ರೀರಾಮನನ್ನು ಪ್ರಾರ್ಥಿಸಿ
ಕನ್ಯಾ
- ನಿಮ್ಮ ಮನಸ್ಸನ್ನು ಸ್ಥಿರವಾಗಿರಿಸಿ ನೆಮ್ಮದಿಯಿದೆ
- ಬಂಧುಗಳಿಂದ ಉತ್ತಮ ಸುದ್ದಿ
- ಷೇರು ಪೇಟೆಯಲ್ಲಿ ಗಣನೀಯ ಲಾಭ
- ಹಳೆಯ ಸಮಸ್ಯೆಗಳಿಂದ ಅಶಾಂತಿ ವಾತಾವರಣ
- ಯಂತ್ರಗಳಿಂದ ತೊಂದರೆಯಾಗಬಹುದು
- ಕುಟುಂಬದವರ ಸಹಕಾರವಿರುವುದಿಲ್ಲ
- ಯೋಗಾನರಸಿಂಹನನ್ನು ಪ್ರಾರ್ಥಿಸಿ
ತುಲಾ
- ಯಾವ ಕಾರ್ಯಕ್ಕೂ ಉತ್ಸಾಹವಿಲ್ಲ
- ಕುಟುಂಬದ ನೆಮ್ಮದಿಯನ್ನು ಹಾಳುಮಾಡುತ್ತೀರಿ
- ಗಂಡ ಹೆಂಡತಿಯ ಜಗಳ ಮಕ್ಕಳಿಗೆ ಆಘಾತವಾಗಬಹುದು
- ದುಶ್ಚಟಗಳಿರುವವರು ದೈಹಿಕ ತೊಂದರೆಗೆ ಈಡಾಗಬಹುದು
- ದಾಂಪತ್ಯ ಕಲಹ ಅನುಮಾನದ ಮಾತು
- ಅನುಭವಿಗಳ ಮಾತು ನಿಮಗೆ ಪಥ್ಯ
- ಕುಲದೇವತೆಯನ್ನು ಸರಿಯಾಗಿ ಆರಾಧಿಸಿ
ವೃಶ್ಚಿಕ
- ನಿಮ್ಮ ವೃತ್ತಿಯಲ್ಲಿ ತಂತ್ರಗಾರಿಕೆ ಬಳಸಿ ಯಶಸ್ವಿಗಳಾಗುತ್ತೀರಿ
- ಕಾರ್ಯಚಟುವಟಿಕೆಗಳಲ್ಲಿ ಅರ್ಥಪೂರ್ಣ ಬದಲಾವಣೆ
- ತಾಯಿಯನ್ನು ಗೌರವಿಸಿ ಬೆಲೆ ಕೊಡಿ
- ವ್ಯವಹಾರದಲ್ಲಿ ಹಿಂದಿನ ಶ್ರಮ ಇಂದಿನ ಲಾಭ
- ಹಣದ ಸಮಸ್ಯೆಗಳು ಬಗೆಹರಿಯುತ್ತದೆ
- ಸ್ನೇಹಿತರ ಬಂಧುಗಳ ಮಾತಿನಿಂದ ಪ್ರಭಾವಿತರಾಗುತ್ತೀರಿ
- ಲಲಿತಾ ಪರಮೇಶ್ವರಿಯ ಪ್ರಾರ್ಥನೆ ಮಾಡಿ
ಧನಸ್ಸು
- ಪತಿ ಪತ್ನಿಯರ ಕಲಹಕ್ಕೆ ಈ ದಿನ ಔಷಧಿಯಿಲ್ಲ
- ಮಕ್ಕಳನ್ನು ನಿರ್ಲಕ್ಷಿಸಬಾರದು
- ಕುಟುಂಬ ಸಮಸ್ಯೆಗಳು ಹೆಚ್ಚಾಗಬಹುದು
- ರಾಜಕೀಯ ಸಂಪರ್ಕದಿಂದ ಲಾಭ
- ದೇಹಾಲಸ್ಯ ಮನಸ್ಸಿಗೆ ನೆಮ್ಮದಿಯಿರುವುದಿಲ್ಲ
- ವ್ಯವಹಾರದಲ್ಲಿ ಸಹಭಾಗಿತ್ವದಿಂದ ಲಾಭವಿದೆ
- ಗಣಪತಿಯನ್ನು 21 ಗರಿಕೆಯಿಂದ ಪೂಜಿಸಿ
ಮಕರ
- ಮಧುಮೇಹಿಗಳಿಗೆ ತೊಂದರೆಯಾಗಬಹುದು ಎಚ್ಚರವಹಿಸಿ
- ವಿದೇಶ ಪ್ರಯಾಣ ಪ್ರವಾಸಕ್ಕೆ ಅನುಕೂಲವಿದೆ
- ಬೇರೆಯವರನ್ನು ಗೌರವಿಸಿ ಲಾಭವಿದೆ
- ಆತ್ಮೀಯರೊಂದಿಗೆ ವೈಮನಸ್ಯ ಉಂಟಾಗುತ್ತದೆ
- ಸರಿಯಾದ ದಿನಚರಿಯನ್ನು ಆಯೋಜಿಸಿಕೊಳ್ಳಿ
- ಬಹುನಿರೀಕ್ಷಿತ ಕೆಲಸದ ವಿಳಂಬ ಅಗಬಹುದು
- ವಿಷ್ಣುತ್ರಯೀ ಮಂತ್ರ ಜಪ ಮಾಡಿ
ಕುಂಭ
- ಕುಟುಂಬದ ಶಾಂತಿ ಕಾಪಾಡಿ
- ಅಂದು ಕೊಂಡ ಕಾರ್ಯ ಕೈಗೂಡುವುದರಿಂದ ಉತ್ಸಾಹ
- ಸಮಾಜದ ಜನಪ್ರಿಯತೆಯ ಹಿಂದೆ ಹೋಗಬೇಡಿ
- ಹೊಸ ಹೊಸ ಅವಕಾಶಗಳು ಹೊರೆಯಲಿವೆ
- ಪ್ರತಿಷ್ಠೆ ಗೌರವ ಹೆಚ್ಚಾಗಲಿದೆ
- ಮರಗೆಲಸ ಮಾಡುವವರಿಗೆ ಅನುಕೂಲ
- ಇಷ್ಟದೇವತಾ ಪೂಜೆ ಮಾಡಿ
ಮೀನ
- ವಿದ್ಯಾರ್ಥಿಗಳಿಗೆ ಸಾಧನೆಗೆ ಉತ್ತಮ ವಾತಾವರಣ
- ಮಕ್ಕಳ ಶಿಕ್ಷಣದ ಕುರಿತು ಚಿಂತೆ ಬೇಡ ಶುಭವಿದೆ
- ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ಗೌರವ
- ಅಲ್ಪ ಪ್ರಯತ್ನದಿಂದ ದೊಡ್ಡ ಕೆಲಸಗಳಾಗಬಹುದು
- ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಕಾಲ ಪ್ರಯತ್ನಿಸಿ
- ಹೊಸ ಆಸ್ತಿ ಆದಾಯ ನಿಮ್ಮದಾಗಬಹುದು
- ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ
ಇದನ್ನೂ ಓದಿ: ಮೆಗಾ ಕುಟುಂಬಕ್ಕೆ ಸಂಭ್ರಮದ ಹಬ್ಬ: ರಾಮ್ ಚರಣ್-ಉಪಾಸನ ದಂಪತಿಗೆ ಅವಳಿ ಮಕ್ಕಳ ಜನನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us