ಸುಳ್ಳು ಹೇಳೋರಿಗೆ ಹಿನ್ನಡೆ, ಪ್ರೇಮಿಗಳಿಗೆ ಶುಭ -ಹೇಗಿದೆ ನಿಮ್ಮ ರಾಶಿ ಭವಿಷ್ಯ..?

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಪುಷ್ಯ ಮಾಸ, ಕೃಷ್ಣ ಪಕ್ಷ, ತದಿಗೆ ತಿಥಿ, ಆಶ್ಲೇಷಾ ನಕ್ಷತ್ರ. ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇದನ್ನೂ ಓದಿ: ಅಚ್ಚರಿ ಹೆಸರು.. ಸ್ಪಂದನಾಗೆ ಯಾರು ಬಿಗ್​ ಬಾಸ್ ಗೆಲ್ಲಬೇಕಂತೆ ಗೊತ್ತಾ..? Video

ಮೇಷ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮೊಂಡುತನ ಹಟ ಸ್ವಭಾವವನ್ನು ದೂರ ಮಾಡಿಕೊಂಡರೆ ಒಳ್ಳೆಯದು
  • ಇಂಜಿನಿಯರ್ಸ್​ ಮತ್ತು ಇಂಜಿನಿಯರ್​ ವಿದ್ಯಾರ್ಥಿಗಳಿಗೆ ಸೂಕ್ತವಾದ ಸಲಹೆಗಳು ದೊರೆಯುತ್ತವೆ
  • ನಿಮ್ಮ  ಭವಿಷ್ಯ ಉಜ್ವಲವಾಗುವಂತದ್ದು
  • ಕುಟುಂಬದ ಸದಸ್ಯರು ನಿಮ್ಮ ಯೋಜನೆಗಳಲ್ಲಿ ಮಾರ್ಗದರ್ಶನ ಮಾಡಬಹುದು
  • ನಿಮ್ಮ ಮನಸ್ಸಿನ ಸ್ಥಿರ ನಿರ್ಧಾರಗಳನ್ನು ಬದಲಿಸಿ ಅನುಕೂಲವಿದೆ
  • ಇಲ್ಲದಿದ್ದರೆ ನಿಮಗೆ ಹಿನ್ನಡೆ ಉಂಟಾಗಬಹುದು
  • ಬೇರೆಯವರ ಮಾತನ್ನ ಗೌರವಿಸಿ 

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳಲ್ಲಿ ಸಿಟ್ಟು ವೈರತ್ವ ಮೂಡಿ ಮನೆಗೆ ಕಂಟಕವಾಗಬಹುದು
  • ವೈಯಕ್ತಿಕ ಪ್ರತಿಷ್ಠೆಯಿಂದ ಹಣ,ಸ್ಥಾನ,ಗೌರವ ಕಳೆದುಕೊಳ್ಳಬಹುದು
  • ನಿಮ್ಮ ಮಕ್ಕಳನ್ನು ಸ್ವತಂತ್ರವಾಗಿರಲು ಬಿಡಿ
  • ಹೆಂಗಸರ ದ್ರವ್ಯ,ಹಣ,ಆಭರಣಗಳಿಗೆ ಕುತ್ತು ಬರಬಹುದಾದ ಸಾಧ್ಯತೆ ಇದೆ
  • ಲೇಖಕರಿಗೆ ಸಂಶೋಧಕರಿಗೆ ಹಿನ್ನಡೆಯಾಗುವ ದಿನವಾಗಿರುತ್ತದೆ
  • ಈ ದಿನ ಗೊಂದಲ ಸೃಷ್ಠಿಯಾಗುವ ಸಾಧ್ಯತೆ ಹೆಚ್ಚಾಗಿವೆ
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಗತಿಗಾಗಿ ಕೆಲವು ಮಾರ್ಗಗಳನ್ನು ಅನುಸರಿಸುತ್ತಿರುತ್ತೀರಿ
  • ಹೆಚ್ಚು ನಿಯಮ ಹಾಕಬೇಡಿ ಆಗ ದಾರಿ ತಪ್ಪಬಹುದು
  • ಸತ್ಯ ಶೋಧನೆ ಮಾಡಿ 

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನೀವು ನಿರೀಕ್ಷೆ ಮಾಡದ ಲಾಭ ಅಥವಾ ಹಣ ನಿಮ್ಮ ಕೈ ಸೇರುವುದಿಲ್ಲ
  • ಮಾನಸಿಕವಾಗಿ ಬೇಸರ ಆಗುತ್ತದೆ 
  • ಅದೃಷ್ಟ ನಿಮ್ಮದಾಗಿರಬೇಕಿದ್ದರೆ ಅನಗತ್ಯ ವಿಚಾರದಲ್ಲಿ ತಲೆ ಹಾಕಿ ಪ್ರಭುತ್ವ ಸಾಧಿಸಲು ಪ್ರಯತ್ನಿಸುತ್ತೀರಿ
  • ಉತ್ತಮ ಭೋಜನ,ಲೌಕಿಕವಾದ ಆನಂದ ನಿಮ್ಮದಾಗುತ್ತದೆ
  • ಈ ದಿನ ಸಂಗೀತ ಮನೋರಂಜನೆಯಲ್ಲಿ ಕಾಲ ಕಳೆಯುತ್ತೀರಿ
  • ಬೇರೆಯವರಿಗೆ ಸಲಹೆ ಸೂಚನೆ ಕೊಡುವಂತಹ ಸಮಯ ಇದಾಗಿದೆ
  • ಇಡೀ ದಿನ ಸಂತೋಷದಿಂದ ಇರುತ್ತೀರಿ 
  • ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮನೆಯಲ್ಲಿ ಚಿನ್ನಾಭರಣಗಳ ಬಗ್ಗೆ ಎಚ್ಚರವಿರಲಿ
  • ಮನೆಯಲ್ಲಿ ಅಶುಭ, ಗೊಂದಲದ ವಾತಾವರಣ ಉಂಟಾಗಬಹುದು ಜಾಗ್ರತೆ
  • ಸಮಾಧಾನವಾಗಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು
  • ಆತುರದ ನಿರ್ಧಾರಗಳು ಒಳ್ಳೆಯದಲ್ಲ
  • ನಿಮ್ಮ ಸಮಸ್ಯೆ ದೌರ್ಬಲ್ಯಗಳ ಅರಿವು ಇರಬೇಕು
  • ತೀರ್ಮಾನಿಸಿದ ಕೆಲಸಗಳಲ್ಲಿ ತಕ್ಷಣ ಬದಲಾವಣೆಯಾಗುವ ಸಾಧ್ಯತೆ
  • ನಿಮಗಿಂತ ಬಲವಾಗಿರುವವರೊಂದಿಗೆ ಸ್ಪರ್ಧಿಸಲು ಮುಂದಾಗುತ್ತೀರಿ 
  • ದೂರದ ಸಂಬಂಧಿಕರ ಜೊತೆಯಲ್ಲಿ ಕಲಹ ಉಂಟಾಗಬಹುದು
  • ಯಾವುದೇ ಕೆಲಸಕ್ಕೂ ಕೈ ಹಾಕಿದರು ನಿಮಗೆ ಸೋಲಾಗಬಹುದು
  • ಗಣಪತಿಯನ್ನು ಪ್ರಾರ್ಥಿಸಿ

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸುಳ್ಳು ಹೇಳುವವರಿಗೆ, ವಿದ್ಯಾರ್ಥಿಗಳಿಗೆ ಈ ದಿನ ತುಂಬಾ ಹಿನ್ನಡೆಯಾಗುತ್ತದೆ
  • ಬಟ್ಟೆ ವ್ಯಾಪಾರಿಗಳಿಗೆ ಬೆಂಕಿ ಅವಘಡದಿಂದ ತೊಂದರೆಯಾಗುವ ಸಂಭವವಿದೆ ಜಾಗ್ರತೆ
  • ಬುದ್ಧಿವಂತಿಕೆಯಿರಲಿ ಅತಿಯಾದ ಬುದ್ಧಿವಂತಿಕೆ ತೋರಿಸಿದರೆ ಹಿನ್ನಡೆಯಾಗುವ ಸಾಧ್ಯತೆ
  • ತಂದೆ ಮಕ್ಕಳ ಮಧ್ಯೆ ವಿದ್ಯಾರ್ಥಿಗಳು ಮತ್ತು  ಶಿಕ್ಷಕರ ಮಧ್ಯೆ ಮುನಿಸು ಬರಬಹುದು
  • ಮಕ್ಕಳು ಅಗತ್ಯವಾಗಿ ಪೋಷಕರ ಮಾತನ್ನು ಕೇಳಬೇಕಾಗುತ್ತದೆ
  • ಭವಿಷ್ಯವನ್ನು ರೂಪಿಸಿಕೊಳ್ಳಲು ಹಿರಿಯರ ಮಾರ್ಗದರ್ಶನ ಅತ್ಯಗತ್ಯ
  • ವಿಷ್ಣು ಸಹಸ್ರನಾಮ ಪಠಿಸಿ ಅಥವಾ ಶ್ರವಣ ಮಾಡಿ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ರಿಯಲ್​ ಎಸ್ಟೇಟ್​ ಮಾಡುವವರ ಸ್ಥಿತಿ ತುಂಬಾ ಗಂಭೀರವಾಗಿರುತ್ತದೆ
  • ನಿಮ್ಮ ನಿರೀಕ್ಷೆಗಳು ತುಂಬಾ ಇರುತ್ತವೆ, ಆದರೆ ಯಾವುದು ಕೈಗೂಡುವುದಿಲ್ಲ
  • ಅನೇಕರು ತಮ್ಮ ನೌಕರಿಯನ್ನು ದೂಷಿಸುತ್ತ ರಾಜೀನಾಮೆ ಕೊಡುವ ಸಾಧ್ಯತೆಗಳಿವೆ
  • ಅವಿವಾಹಿತರ ಕಷ್ಟಗಳನ್ನು ಕೇಳುವವರಿಲ್ಲದೆ ಬೇರೆ ಬೇರೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ
  • ಟೀಮ್​ ವರ್ಕ್​ ಮಾಡುವವರಿಗೆ ಶುಭಫಲವಿದೆ
  • ಸರ್ಕಾರಿ ನೌಕರರಿಗೆ ಬಡ್ತಿ ಸಿಗುವ ಸಾಧ್ಯತೆ
  • ಮಹಾವಿಷ್ಣುವಿನ ಸ್ಮರಣೆ ಮಾಡಿ

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಆಲೋಚನೆ, ನೀವಿರುವ ವಾತಾವರಣ ಆತ್ಮವಿಶ್ವಾಸ ಹೆಚ್ಚಿಸಬಹುದು 
  • ಪ್ರಜ್ಞಾವಂತರು ನಿಮ್ಮ ಸುತ್ತ ಮುತ್ತ ಇದ್ದರು ಅವರನ್ನು ಉಪಯೋಗಿಸಿಕೊಳ್ಳದೆ ಕೆಲಸದಲ್ಲಿ ಹಿನ್ನಡೆ ಸಾಧ್ಯತೆ
  • ಸಮಯಕ್ಕೆ ಮಹತ್ವ ನೀಡಿ, ನಿಮ್ಮ ದೃಢ ನಿರ್ಧಾರಗಳು ಸ್ವಲ್ಪ ಸಡಿಲವಾಗಬೇಕು
  • ಆರ್ಥಿಕ ಲಾಭವಿದ್ದರು ಲೆಕ್ಕ ಸಿಗದ ಖರ್ಚಿನಿಂದ ನಷ್ಟ ಸಾಧ್ಯತೆ
  • ಹೂಡಿಕೆದಾರರಿಗೆ ಲಾಭದ ದಿನ
  • ಮದುವೆ ಸಮಾರಂಭಗಳಲ್ಲಿ ಭಾಗಿಯಾಗುತ್ತೀರಿ
  • ಪ್ರೇಮಿಗಳಿಗೆ ಉತ್ತಮವಾದ ದಿನ
  • ಗುರು ಪ್ರಾರ್ಥನೆ ಮಾಡಿ 

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅನಗತ್ಯ ವಿಚಾರದಲ್ಲಿ ಚರ್ಚೆ ಮಾಡಿ ಕಾಲಹರಣ ಸಾಧ್ಯತೆ
  • ಮಧ್ಯಾಹ್ನದ ಹೊತ್ತಿಗೆ ಪ್ರಯಾಣ ಮಾಡಬಹುದು
  • ಇಂದು ನಿಮ್ಮ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ
  • ಕೆಟ್ಟ ವಾರ್ತೆ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಬಹುದು
  • ಹಿಂದೆ ಮಾಡಿದ ತಪ್ಪುಗಳಿಗೆ ಇಂದು ವಿಷಾದ ವ್ಯಕ್ತಪಡಿಸುತ್ತೀರಿ
  • ವೈದ್ಯಕೀಯ ರಂಗದವರಿಗೆ ಗೊಂದಲದ ಸವಾಲುಗಳು ಕಾಡಬಹುದು 
  • ಮರಗೆಲಸ ಮಾಡುವವರಿಗೆ ಲಾಭದ ದಿನ
  • ಈ ದಿನ ಋಣಾತ್ಮಕ ಚಿಂತನೆಗಳು ನಿಮ್ಮನ್ನು ಹೆಚ್ಚಾಗಿ ಕಾಡಬಹುದು
  • ಗಣಪತಿಯನ್ನು ಆರಾಧನೆ ಮಾಡಿ

ಧನಸ್ಸು 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆ ಸಾಧ್ಯತೆ
  • ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಮನೆಯಲ್ಲಿ ಹೇಳಿಕೊಳ್ಳಬೇಕು
  • ಇಂದು ಪ್ರೇಮಿಗಳಿಗೆ ಶುಭ ದಿನ
  • ಔಷಧಿ ವ್ಯಾಪಾರಿಗಳು ಸಮಸ್ಯೆಗೆ ಸಿಲುಕಬಹುದಾದ ದಿವಸ
  • ನಿಮ್ಮ ಮೇಲಿನವರ ಸಹಕಾರವಿದ್ದರು ತೊಂದರೆಯಾಗಬಹುದು
  • ನಿಮ್ಮ ತಪ್ಪು ಮಾಹಿತಿಗಳಿಂದ ಅನರ್ಥವಾಗಿ ತೊಂದರೆಯಾಗುವ ಸಾಧ್ಯತೆ
  • ಅಶ್ವಿನಿ ದೇವತೆಗಳನ್ನು ಪ್ರಾರ್ಥಿಸಿ

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಿದ್ಯೆ- ವಿವಾಹ ವಿಚಾರಕ್ಕೆ ಇದ್ದ ಸಮಸ್ಯೆ ದೂರಾಗಬಹುದು
  • ತಂದೆ-ಮಕ್ಕಳ ಸಂಬಂಧ ಚೆನ್ನಾಗಿರುವಂತೆ ಸಮಯವನ್ನ ಪ್ರಯತ್ನ ಪೂರಕವಾಗಿ ತಮ್ಮದಾಗಿಸಿಕೊಳ್ಳಿ
  • ಮನೆಯಲ್ಲಿ ಹೊಸ ವ್ಯವಹಾರ ಕುರಿತು ಚರ್ಚೆಯಾಗುತ್ತದೆ, ಆದರೆ ನೀವು ಸಹಕರಿಸುವುದಿಲ್ಲ
  • ಮಕ್ಕಳ ಸಲಹೆ ಮನೆಯವರಿಗೂ, ಹಿರಿಯರ ಸಲಹೆ ಮಕ್ಕಳಿಗೂ ಅನುಕೂಲವಾಗಲಿದೆ
  • ಮನೆಯಲ್ಲಿ ಆಕಸ್ಮಿಕ ಅವಘಡಗಳು ಸಂಭವಿಸುವ ಸಾಧ್ಯತೆ
  • ಮನಸ್ಸನ್ನು ಶುದ್ಧ ಮಾಡಿಕೊಳ್ಳಿ, ಗೊಂದಲ ಮುಕ್ತರಾಗುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹೊಸ ಸಾಧನೆ ಮಾಡಲು ಪ್ಲಾನ್​ ಮಾಡುತ್ತೀರ, ಆದರೆ ಕೈಗೂಡುವ ಸಾಧ್ಯತೆ ಕಡಿಮೆ 
  • ಮಕ್ಕಳ ಯಶಸ್ಸಿನ ಬಗ್ಗೆ ಯೋಚಿಸುವಿರಿ
  • ಕೆಂಪು ವಸ್ತ್ರ ಧರಿಸಿ ವಾಹನ ಚಾಲನೆ ಮಾಡುವವರಿಗೆ ತೊಂದರೆ ಸಾಧ್ಯತೆ
  • ದೈಹಿಕ, ಮಾನಸಿಕ ಒತ್ತಡಗಳಿಂದ ಶಾರೀರಿಕ ಆರಾಮವಿರುವುದಿಲ್ಲ
  • ಆದಾಯದ ಹಿಂದೆ ಹೋಗಿ ಮರ್ಯಾದೆ ಕಳೆದುಕೊಳ್ಳುವ ಸಾಧ್ಯತೆಯಿದೆ ಜಾಗ್ರತೆವಹಿಸಿ
  • ಮೃತ್ಯುಂಜಯನನ್ನು ಬಿಲ್ವ ಪತ್ರೆ, ತುಂಬೆ ಹೂವಿನಿಂದ ಅರ್ಚಿಸಿ 

ಮೀನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಆಹಾರದ ಬಗ್ಗೆ ಎಚ್ಚರ ವಹಿಸಿ, ಹೊಸ ರುಚಿಯಿಂದ ತೊಂದರೆ ಸಾಧ್ಯತೆ
  • ಇಂದು ಪ್ರಯಾಣ ಬೇಡ
  • ಬೇಜವಾಬ್ದಾರಿ ಕೆಲಸಗಳು ಹಿನ್ನಡೆಯಾಗುವ ಸಾಧ್ಯತೆ
  • ಮಾನಸಿಕವಾದ ಸಮಾಧಾನ ಕಡಿಮೆ ಪ್ರಮಾಣದಲ್ಲಿರುತ್ತದೆ
  • ಪ್ರೇಮಿಗಳಲ್ಲಿ ಪರಸ್ಪರ ಕಾದಾಟ ಸಾಧ್ಯತೆ
  • ಮಾನಸಿಕವಾಗಿ ಸ್ಥೈರ್ಯ ಹೊಂದಿ ಕೆಲಸಗಳಲ್ಲಿ ಪ್ರವೃತ್ತರಾಗಬೇಕು
  • ತಾವು ಮಾಡಿದ ಕೆಲಸಗಳೆಲ್ಲವೂ ಹಾಳಾಗುವಂತಹುದು
  • ಅಪಶಕುನದಿಂದ ತೊಂದರೆ ಆಗುವ ಸಾಧ್ಯತೆಯಿದೆ
  • ಕುಲದೇವರಿಗೆ ತುಪ್ಪದ ದೀಪ ಹಚ್ಚಿ 

ಇದನ್ನೂ ಓದಿ: ಅಚ್ಚರಿ ಹೆಸರು.. ಸ್ಪಂದನಾಗೆ ಯಾರು ಬಿಗ್​ ಬಾಸ್ ಗೆಲ್ಲಬೇಕಂತೆ ಗೊತ್ತಾ..? Video

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment