ಸಮಯಕ್ಕೆ ಆದ್ಯತೆ ನೀಡಿ, ಫಲಿತಾಂಶ ಧನಾತ್ಮಕ -ನಿಮ್ಮ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಪಾಲ್ಗುಣ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ರೇವತಿ ನಕ್ಷತ್ರ. ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಮಯಕ್ಕೆ ಆದ್ಯತೆ ನೀಡಿ ಧನಾತ್ಮಕ ಫಲಿತಾಂಶ ನಿಮ್ಮದಾಗುತ್ತದೆ
  • ಕುಟುಂಬದಲ್ಲಿ ಶುಭಕಾರ್ಯದ ಚಿಂತನೆ ಇರಬಹುದು
  • ಕೋಪ ಆತಂಕಗಳು ಮನೆ ಮಾಡಿರುವ ದಿನ
  • ಮಿತ್ರರ ಭೇಟಿ ವಿರೋಧಿಗಳ ಬಗ್ಗೆ ಚರ್ಚೆಯಾಗಲಿದೆ
  • ಮಾನಸಿಕ ನೆಮ್ಮದಿ ಕಡಿಮೆಯಾಗಲಿದೆ
  • ಮೂಲ ಉದ್ದೇಶ ಮರೆತು ಕಾರ್ಯ ಪ್ರವೃತ್ತಿರಾಗಿ ತೊಂದರೆಯಾಗಬಹುದು
  • ರಾಜರಾಜೋಶ್ವರಿಯನ್ನು ಪೂಜಿಸಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳ ಪ್ರಗತಿ ವಿದ್ಯಾಭ್ಯಾಸದಿಂದ ಸಂತೋಷ ಸಿಗಲಿದೆ
  • ಬರಬೇಕಾದ ಬಾಕಿ ಹಣ ಬರುವುದು
  • ವ್ಯಾಪಾರ ವ್ಯವಹಾರದ ಪ್ರಗತಿ ಆರ್ಥಿಕ ಲಾಭ
  • ಸಂಬಂಧಿಕರ ಆಗಮನದಿಂದ ಖುಷಿ ಸಿಗಲಿದೆ
  • ಅನಾರೋಗ್ಯ ಮುಕ್ತ ಸ್ನೇಹಿತರಿಂದ ಸಿಹಿ ಸುದ್ದಿ ಸಿಗಲಿದೆ
  • ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ ಎಂಬ ದಿನ
  • ಮಹಾಲಕ್ಷ್ಮೀಯನ್ನು ಮಲ್ಲಿಗೆ ಹೂವಿನಿಂದ ಅರ್ಚಿಸಿ

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ತೋರಿಕೆಯ ಕೆಲಸದಲ್ಲಿ ಸಿಕ್ಕಿ ಬೀಳುವ ಸಾಧ್ಯತೆಗಳಿವೆ
  • ನಿಮ್ಮ ಪ್ರಗತಿಯ ಬಗ್ಗೆ  ಭಯವಿದೆ
  • ವೃತ್ತಿ ಉದ್ಯೋಗದ ಒತ್ತಡ ತೊಂದರೆಗೆ ಕಾರಣವಾಗಬಹುದು
  • ಒಳ್ಳೆಯ ಸ್ನೇಹಿತರ ಹಿತೈಷಿಗಳ ಮಾರ್ಗದರ್ಶನ ಪಡೆಯಿರಿ
  • ಸ್ವಯಂ ಪ್ರಜ್ಞೆಯಿಲ್ಲದೆ ಕೆಲವು ಅನಾಹುತಗಳಿಗೆ ಅವಕಾಶವಿದೆ
  • ನಿಮ್ಮ ನೈತಿಕತೆ ಚೆನ್ನಾಗಿರುತ್ತದೆ
  • ಶಿವನನ್ನು ಬಿಲ್ವ ಪತ್ರೆಯಿಂದ ಅರ್ಚಿಸಿ

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಆನಂದವಾಗಿರುತ್ತೀರಿ ಮನಸ್ಸಿನಲ್ಲಿ ಕಳವಳ ಉಂಟಾಗಲಿದೆ
  • ಆರೋಗ್ಯ ಅದರಲ್ಲು ಬೆನ್ನು ನೋವಿನ ಬಗ್ಗೆ ಕಾಳಜಿ ವಹಿಸಿ
  • ಮದುವೆ ವಿಚಾರದಲ್ಲಿ ತಲೆ ಕೆಡಸಿಕೊಳ್ಳಬಹುದು ಆದರೆ ಉಪಯೋಗವಿಲ್ಲ
  • ಏನೋ ಬದಲಾವಣೆಯ ಆಲೋಚನೆ ಬರುತ್ತದೆ ಆದರೆ ಸದ್ಯಕ್ಕಿಲ್ಲ
  • ಮನೆಯ ಜವಾಬ್ದಾರಿಯ ಬಗ್ಗೆ ಪೂರ್ಣ ಜವಾಬ್ದಾರಿ ವಹಿಸಿ
  • ಆಹಾರದ ವ್ಯತ್ಯಾಸ ಆಗಬಹುದು ಅದರ ಬಗ್ಗೆ ಗಮನಿಸಿ
  • ವೆಂಕಟರಮಣನನ್ನು ಆರಾಧಿಸಿ

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಜೀವನ ಶೈಲಿಯಲ್ಲಿ ಸುಧಾರಣೆ ಕಾಣುವ ದಿನವಾಗಿದೆ
  • ವಿದ್ಯಾರ್ಥಿಗಳಿಗೆ ಮಿತ್ರರಿಂದಲೇ ತೊಂದರೆ
  • ಏಕಾಗ್ರತೆಯು ಉತ್ತಮ ಫಲಿತಾಂಶ ನೀಡಬಹುದು
  • ಮನೆಯ ಅಗತ್ಯತೆಗೆ ಆದ್ಯತೆ ಕೊಡಿ
  • ವ್ಯವಹಾರದಲ್ಲಿ ಉತ್ತಮ ಲಾಭ ಶುಭವೂ ಇದೆ
  • ಯಾರನ್ನಾದರು ಕ್ಷಮಿಸುವ ಪ್ರಸಂಗವಿದ್ದರೆ ಕ್ಷಮಿಸಿ
  • ವಿದ್ಯಾ ಗೋಪಾಲಕೃಷ್ಣನನ್ನು ಪ್ರಾರ್ಥಿಸಿ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ರಾಜಕೀಯ ಪ್ರಭಾವ ಕೆಲಸ ಮಾಡಬಹುದು
  • ಕಾಲಿಗೆ ಪೆಟ್ಟು ಬೀಳಬಹುದು ಜಾಗ್ರತೆ ವಹಿಸಿ
  • ಮಾತಿಗೆ ಬೆಲೆ  ಕೆಲಸ ಸಾಧ್ಯ
  • ಪ್ರೇಮಿಗಳಿಗೆ ಶುಭ ಉತ್ತಮ ನಿರ್ಧಾರ
  • ಆರೋಗ್ಯದ ಬಗ್ಗೆ ಸುಧಾರಣೆ ಇದೆ
  • ವೃತ್ತಿಯಲ್ಲಿ ಅನುಕೂಲ ಆದರೆ ತುಂಬಾ ಶ್ರಮ ಪಡಬೇಕಾಗಲಿದೆ
  • ವಿಕಲ ಚೇತನರಿಗೆ ಸಹಾಯ ಮಾಡಿ

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಾಸ್ಯಾಸ್ಪದ ವಿರೋಧಕ್ಕೆ ಅವಕಾಶವಾಗುವ ಪರಿಸ್ಥಿತಿ ಎದುರಿಸ ಬೇಕಾಗಬಹುದು
  • ತಾಳ್ಮೆಯಿಂದ ಇದ್ದರೆ ಇಡೀ ದಿನ ಯಶಸ್ಸು ಸಿಗಲಿದೆ
  • ಮಕ್ಕಳ ವರ್ತನೆ ಹಿರಿಯರಿಗೆ ಬೇಸರ ತರುತ್ತದೆ
  • ಜನ ಸಂದಣಿಯಲ್ಲಿ ನಿಮಗೆ ತೊಂದರೆ ಕಾಣಬಹುದು
  • ಜವಾಬ್ದಾರಿಗಳಿಂದ ಹೊರಬನ್ನಿ ಈ ದಿನ ನಿಮ್ಮದಾಗಲಿದೆ
  • ನಿಮ್ಮ ವೈಯಕ್ತಿಕ ವಿಚಾರಕ್ಕೆ ಬೇರೆಯವರ ಸಲಹೆ ಬೇಡ
  • ಆಂಜನೇಯನ ಉಪಾಸನೆ ಮಾಡಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಭೆ ಸಮಾರಂಭಗಳಿಗೆ ಹಾಜರಾಗಬಹುದು
  • ಮಕ್ಕಳಿಗೆ ನೀತಿ ಪಾಠ ಹೇಳಿ ಗೌರವ ಸಿಗಬಹುದು
  • ಹೊಸ ಉದ್ಯಮಕ್ಕೆ ಬೇರೆಯವರ ಪರಿಚಯವಾಗಲಿದೆ
  • ಧಾರ್ಮಿಕ ಆಧ್ಯಾತ್ಮಿಕ ವಿಚಾರಗಳಿಂದ ಮಾನಸಿಕ ನೆಮ್ಮದಿ ಸಿಗಲಿದೆ
  • ನಿಮ್ಮ ಕೆಲಸಕ್ಕೆ  ಸಾಧನೆಗೆ ಪ್ರಶಂಸೆಯಿದೆ
  • ಆರ್ಥಿಕ ಬಿಕ್ಕಟ್ಟು ಕಾಡಬಹುದು
  • ಕುಬೇರ ಲಕ್ಷ್ಮೀಯನ್ನು ಪ್ರಾರ್ಥಿಸಿ

ಧನುಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಯಾವುದೇ ಬದಲಾವಣೆಯ ಬಗ್ಗೆ ಚಿಂತೆ ಬೇಡ
  • ಜನರಿಗೆ ಸ್ಫೂರ್ತಿ ಸಿಗುವ ದಿನ
  • ಹೊಸ ಹೂಡಿಕೆಗೆ  ಇಂದು ಅನುಕೂಲವಿದೆ
  • ಅನುಕೂಲದ ಸಮಯವನ್ನು ವಿನಿಯೋಗಿಸಿಕೊಳ್ಳಿ
  • ಸ್ವೇಚ್ಛೆ ಇರುವವರು ಗುರಿಮುಟ್ಟಲು ಕಷ್ಟದ ದಿನ 
  • ಹಳೆಯ ವಿಚಾರಗಳನ್ನು ದೂರಮಾಡಿ ಬೇಸರ ಕಡಿಮೆ ಮಾಡಿಕೊಳ್ಳಿ
  • ಸುಬ್ರಹ್ಮಣ್ಯನಿಗೆ ಕ್ಷೀರಾಭಿಷೇಕ ಮಾಡಿಸಿ

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಜನರು ನಿಮ್ಮ ಸಲಹೆಯನ್ನು ಸ್ವೀಕರಿಸಬಹುದು 
  • ಸ್ನೇಹಿತರ ಜೊತೆ ಕಾಲ ಕಳೆಯುವುದರಿಂದ ಸಂತೋಷವಾಗಿರುತ್ತೀರಿ
  • ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಬೇಡ
  • ಕುಟುಂಬದಲ್ಲಿ ನಿಮ್ಮದಿಯ ಶಾಂತಿಯ ವಾತಾವರಣ ಕಾಪಾಡಿ
  • ಕಠಿಣ ಶ್ರಮಕ್ಕೆ ತಕ್ಕ ಫಲವಿದೆ
  • ತುಳಸಿಯಿಂದ ವಿಷ್ಣುವಿನ ಅರ್ಚನೆ ಮಾಡಿ

ಕುಂಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅನಗತ್ಯ ಅಥವಾ ಅನುಪಯುಕ್ತ ಕೆಲಸಗಳಲ್ಲಿ ಸಮಯ ವ್ಯರ್ಥ ಸಾಧ್ಯತೆ
  • ನಿಮ್ಮ ಸಹಕಾರಕ್ಕೆ ಅನುಗುಣವಾಗಿ ಬೆಲೆ ದೊರೆಯತ್ತದೆ
  • ಇಂದು ತಾಳ್ಮೆಯಿಂದ ಆತ್ಮಾವಲೋಕನ ಮಾಡಿಕೊಳ್ಳಿ
  • ಆತಂಕ ಬೇಡ ಸಮಾಧಾನದಿಂದ ಎಲ್ಲ ಕೆಲಸಗಳನ್ನು ನಿಭಾಯಿಸಿ
  • ವಾದ-ವಿವಾದಗಳಲ್ಲಿ ತಲೆ ಹಾಕದೆ ಇದ್ದರೆ ಒಳ್ಳೆಯದು 
  • ಹಣದ ವಿಚಾರದಲ್ಲಿ ನಿರಾಸೆ ಸಾಧ್ಯತೆಯಿದೆ
  • ಈಶ್ವರಾಧನೆ ಮಾಡಿ

ಮೀನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಯಶಸ್ಸಿನ್ನ ಬಗ್ಗೆ ನಿರ್ದಿಷ್ಟವಾದ ಗುರಿಯಿರಲಿ
  • ಪ್ರೀತಿ-ಪ್ರೇಮ ವಿಚಾರದಲ್ಲಿ ಗೊಂದಲ ಬೇಸರ ಸಾಧ್ಯತೆ
  • ಬೆಲೆ ಬಾಳುವ ವಸ್ತು ಖರೀದಿ ಮಾಡುವ ವಿಚಾರದಲ್ಲಿ ಚರ್ಚೆ ಸಾಧ್ಯತೆ
  • ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಆಸಕ್ತಿ, ಅವಕಾಶ ಇರಬಹುದು
  • ನಿಮ್ಮ ಸೇವೆ ಸಾಮಾಜಿಕ ಸಹಾಯಕ್ಕಾಗಿ ಜನ ಮನ್ನಣೆ ಸಿಗುವ ದಿನ
  • ಅದೃಷ್ಟ ಚೆನ್ನಾಗಿದೆ ಅನ್ನುವಷ್ಟರಲ್ಲಿ ದಿನ ಕಳೆದು ಹೋಗಬಹುದು
  • ನಿಮ್ಮ ಬಗ್ಗೆಯೇ ಹೆಚ್ಚು ಗಮನ ಕೊಡಬೇಕಾದ ದಿನ  
  • ಕುಲದೇವತಾರಾಧನೆ ಮಾಡಿ

ಇದನ್ನೂ ಓದಿ:ಬೆಂಗಳೂರಿನ ಯುಬಿ ಸಿಟಿಯಿಂದ ಏರ್ ಪೋರ್ಟ್‌ಗೆ 8 ನಿಮಿಷದಲ್ಲಿ ಪ್ರಯಾಣ, ಬರೀ 1,700 ರೂ. ದರ- ಹೇಗೆ ಗೊತ್ತಾ? ಇದು ಎಐ ನಿಂದ ಸಾಧ್ಯ!!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment