/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ನಂದಿನಿ ತುಪ್ಪದ ರೇಟ್ ಪ್ರತಿ ಕೆ.ಜಿ.ಗೆ 90 ರೂಪಾಯಿ ಏರಿಕೆ : ಬೆಲೆ ಏರಿಕೆ ಶಾಕ್ ನೀಡಿದ ಕೆಎಂಎಫ್
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಿಟ್ಟಿನಿಂದಲೇ ಇಂದು ತೊಂದರೆಯಾಗುವ ಸಾಧ್ಯತೆ ಇದೆ
- ನಿಮ್ಮ ಮನೆಯ ಸದಸ್ಯರನ್ನು ಅವಮಾನಿಸಬೇಡಿ
- ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ
- ಇಂದು ಎಲ್ಲಾ ಮುಗಿದ ಮೇಲೆ ಪಶ್ಚಾತ್ತಾಪ ಪಡುತ್ತೀರಿ
- ನಿಮ್ಮ ಕೋಪ ನಿಮ್ಮ ನಿಯಂತ್ರಣದಲ್ಲಿರಲಿ
- ತಾಪಸಮನ್ಯುವನ್ನು ಸ್ಮರಣೆ ಮಾಡಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಬೆಂಕಿಯಿಂದ ಸ್ವಲ್ಪ ಅನಾಹುತ ಸಾಧ್ಯತೆ, ಜಾಗ್ರತೆ ಇರಲಿ ಭಯಬೇಡ
- ನಿಮ್ಮ ಕೋಪ ನಿಮ್ಮನ್ನು ಏಕಾಂಗಿಯನ್ನಾಗಿ ಮಾಡಬಹುದು
- ಮನೆಯಲ್ಲಿ ಅಥವಾ ಕೆಲಸಕ್ಕೆ ಹೋದಾಗ ಬೆಂಕಿ ಮತ್ತು ನೀರಿನ ಬಗ್ಗೆ ಜಾಗ್ರತೆ ವಹಿಸಿ
- ಇಂದು ಯಾವುದೇ ಆತಂಕಗಳಿಲ್ಲದೆ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುತ್ತವೆ
- ಬಿಲ್ವಪತ್ರೆಯಿಂದ ಈಶ್ವರನಿಗೆ ಅರ್ಚನೆ ಮಾಡಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಸಂಜೆ ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳನ್ನು ಭೇಟಿ ಮಾಡಿ
- ಯಾವುದೇ ರೀತಿಯ ವಾದ-ವಿವಾದ ಮಾಡಬೇಡಿ
- ಇಂದು ಉದ್ಯೋಗದಲ್ಲಿ ಅಸ್ಥಿರತೆ ಕಾಡುತ್ತದೆ
- ಉದ್ಯೋಗ ಸಂಬಂಧಿ ವಿಚಾರದಲ್ಲಿ ಸಮಾಧಾನವಿರುವುದಿಲ್ಲ
- ಕೆಲಸವನ್ನು ಕಳೆದುಕೊಳ್ಳುವ ಭಯ ಕೂಡ ಕಾಡುತ್ತದೆ
- ಕಾಲಭೈರವಾಯ ನಮಃ ಎಂದು 108 ಬಾರಿ ಪ್ರಾರ್ಥನೆ ಮಾಡಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಉತ್ತಮವಾದ ಭೋಜನ ಮಾಡುತ್ತೀರಿ
- ಖಾಸಗಿ ಕ್ಷೇತ್ರದಲ್ಲಿರುವ ನೌಕರರಿಗೆ ಇಂದು ಸಿಹಿ ಸುದ್ದಿ ಸಾಧ್ಯತೆ
- ನಿಮ್ಮೆಲ್ಲಾ ಹಳೆಯ ಕೆಲಸಗಳು ಇಂದು ಪೂರ್ಣವಾಗುತ್ತವೆ
- ಇಂದು ಸಹೋದ್ಯೋಗಿಗಳ ಜೊತೆಗಿನ ಭಿನ್ನಾಭಿಪ್ರಾಯ ದೂರವಾಗುತ್ತದೆ
- ವ್ಯಾಪಾರದಾರರು ತಮ್ಮ ವ್ಯಾಪಾರ ಕ್ಷೇತ್ರವನ್ನು ವಿಸ್ತರಿಸಬಹುದು
- ಇಂದು ಉತ್ತಮವಾದ ದಿನ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಧುಮೇಹ ಖಾಯಿಲೆ ಇರುವವರು ಹೆಚ್ಚಿನ ಜಾಗ್ರತೆವಹಿಸಿ
- ಕುಟುಂಬದವರೊಂದಿಗೆ ಸಂತೋಷದ ವಾತಾವರಣ ಇರುತ್ತದೆ
- ಆತ್ಮವಿಶ್ವಾಸವು ನಿಮ್ಮೆಲ್ಲಾ ಕೆಲಸಗಳನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುತ್ತದೆ
- ವಿದೇಶದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಿಹಿ ಸುದ್ದಿ ಸಿಗುತ್ತದೆ
- ಹಿರಿಯರ ಆಶೀರ್ವಾದ ಪಡೆಯಿರಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಾತಿನಿಂದಲೇ ನಿಮಗೆ ನೆಮ್ಮದಿ ಸಿಗುತ್ತದೆ
- ನೀವು ಎಲ್ಲಾ ಕೆಲಸ ಕಾರ್ಯ ನಿರ್ವಹಿಸಲು ಸಮರ್ಥರಾಗಿರುತ್ತೀರಿ
- ಮನೆಯಲ್ಲಿ ಮಂಗಳ ಕಾರ್ಯ ನಡೆಯುವುದರಿಂದ ಸಂತೋಷದಿಂದ ಇರುತ್ತೀರಿ
- ನಯವಾದ ಮಾತಿನಿಂದಲೇ ಕೆಟ್ಟವರನ್ನು ದೂರಮಾಡಿ
- ವಿರೋಧಿಗಳ ಜೊತೆ ವಾದ-ವಿವಾದಗಳು ಬೇಡ
- ನಿಮ್ಮ ಹಳೆಯ ವಿರೋಧಗಳಿಂದ ಮಂಗಳ ಕಾರ್ಯಗಳಿಗೆ ತೊಂದರೆ ಸಾಧ್ಯತೆ
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಮನೆಯಲ್ಲಿ ಅಶಾಂತಿಯ ವಾತಾವರಣ ಸಾಧ್ಯತೆ
- ಪಿತ್ರಾರ್ಜಿತ ಆಸ್ತಿ ಸಿಗುವ ಸೂಚನೆ ಇದೆ
- ಕಾನೂನಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಹೆಚ್ಚಿನ ಜಾಗ್ರತೆ ಇರಲಿ
- ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಣಬಹುದು ಸ್ವಲ್ಪ ಎಚ್ಚರವಹಿಸಿ
- ವಿದ್ಯಾರ್ಥಿಗಳಿಗೆ ತಮ್ಮ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಸಿಗುವುದಿಲ್ಲ
- ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ವ್ಯಾಪಾರಿ ಬುದ್ಧಿಯಿಂದ ಹಲವರಿಗೆ ಬೇಸರವಾಗುವ ಸಾಧ್ಯತೆ ಇದೆ
- ಪ್ರೇಮ ವಿಚಾರವನ್ನು ಮುಚ್ಚಿಡುವುದರಿಂದ ತೊಂದರೆಯಾಗಬಹುದು ಎಚ್ಚರಿಕೆ ಇರಲಿ
- ಉದ್ಯೋಗದಲ್ಲಿ ನಿಮ್ಮ ಕಾರ್ಯ ವೈಖರಿ ಚೆನ್ನಾಗಿರುತ್ತದೆ
- ಹಿರಿಯರಿಗೆ ಗೌರವವನ್ನು ನೀಡಿ
- ದೇವಿಯನ್ನು ಪ್ರಾರ್ಥನೆ ಮಾಡಿ
ಧನುಸ್
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಕಾಣೆಯಾಗಿರುವ ವಸ್ತು ಇಂದು ಸಿಗುವ ಸಾಧ್ಯತೆ ಇದೆ
- ಹೊರಗಿನ ವ್ಯಕ್ತಿಗಳಿಂದ ಉದ್ಯೋಗ, ವ್ಯವಹಾರದಲ್ಲಿ ಸಹಾಯ ಸಿಗುತ್ತದೆ
- ಕೆಲ ದಿನಗಳಿಂದ ಇದ್ದ ಸಮಸ್ಯೆ ಇಂದು ಬಗೆಹರಿಯುತ್ತದೆ
- ಉತ್ತಮ ಸ್ಪಂದನೆ ಸಿಗುವುದರಿಂದ ಮನೋಬಲ ಹೆಚ್ಚಾಗುತ್ತದೆ
- ಗಂಡ-ಹೆಂಡತಿಯ ಮಧ್ಯೆ ವಾಗ್ವಾದ ಆಗಬಹುದು
- ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಾರ್ಯಕ್ಷೇತ್ರಗಳಲ್ಲಿ ಕಾರ್ಯ ಪೂರ್ತಿ ಮಾಡಬೇಕೆಂಬ ಒತ್ತಡ ಇರಬಹುದು
- ಇಂದು ನಿಮ್ಮ ವೃತ್ತಿ ಜೀವನದಲ್ಲಿ ಸ್ವಲ್ಪ ಗಮನವಿರಲಿ
- ಬೇರೆಯವರಿಗೆ ದಾನ-ಧರ್ಮ ಮಾಡುವ ಯೋಗವಿದೆ
- ಮಕ್ಕಳ ವಿದ್ಯಾಭ್ಯಾಸಕ್ಕೆ ಏನಾದರೂ ಅಡೆತಡೆಗಳಿದ್ದರೆ ಅದು ನಿವಾರಣೆಯಾಗಲಿದೆ
- ನೀವು ಮಾಡಿದ ತಪ್ಪಿನಿಂದ ಸ್ಥಳ ಬದಲಾವಣೆ ಸಾಧ್ಯತೆ ಇದೆ
- ಚಿಂತಾಮಣಿ ಗಣಪತಿಯನ್ನು ಪ್ರಾರ್ಥನೆ ಮಾಡಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಕ್ಕಳ ಅವಶ್ಯಕ ಪೂರೈಕೆ ನಿಮ್ಮನ್ನು ಕಾಡುತ್ತದೆ
- ಒಟ್ಟಾರೆ ಇಂದು ನಿಮಗೆ ಅಶುಭ ದಿನ
- ಮನೆಯ ಹೊರಗಡೆಯೂ ನಿಮಗೆ ಉತ್ತಮ ವಾತಾವರಣ ಇದೆ ಅನ್ನಿಸುವುದಿಲ್ಲ
- ಮನೆಯಲ್ಲಿ ಭಯದ ವಾತಾವರಣ ಇರುತ್ತದೆ
- ವಿನಾಕಾರಣ ಕೆಲಸಕ್ಕೆ ಗೈರಾಗುವ ಸಾಧ್ಯತೆಗಳಿವೆ
- ಮಕ್ಕಳು ಮಾಮೂಲಿಯಂತೆ ಇರುವುದಿಲ್ಲ
- ಪುಣ್ಯಕ್ಷೇತ್ರದಲ್ಲಿ ಹರಕೆ ಬಾಕಿ ಇದ್ದರೆ ಆದಷ್ಟು ಬೇಗ ತೀರಿಸಿ
- ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ವಯಸ್ಸಾದವರು ಬೀಳುವುದಾಗಲಿ ಅಥವಾ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ ಇದೆ
- ವಾಹನ ಖರೀದಿ ಬಗ್ಗೆ ಯೋಚನೆ ಇದ್ದರೆ ಕೆಲ ದಿನ ಮುಂದಕ್ಕೆ ಹಾಕಿ
- ಇಂದು ನಿಮಗೆ ಸಂಪೂರ್ಣ ಒತ್ತಡದ ದಿನ
- ಸಾಲ ನಿಮಗೆ ಅನಿವಾರ್ಯವಾಗುವ ಸಾಧ್ಯತೆ ಇದೆ
- ಕುಟುಂಬದಲ್ಲಿ ಅನೇಕ ಕಾರ್ಯಗಳ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬರುತ್ತವೆ
- ದೊಡ್ಡ ಒಪ್ಪಂದ ಮಾಡಿಕೊಳ್ಳವ ಸಂದರ್ಭ ಬರಬಹುದು
- ನಿಮ್ಮ ಕೆಲಸದ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತೀರಿ
- ಶರಭೇಶ್ವರನನ್ನು ಪ್ರಾರ್ಥಿಸಿ
ಇದನ್ನೂ ಓದಿ: ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬುಗೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಹೋರಾಟ : ಸಚಿವ ಎಂ.ಬಿ.ಪಾಟೀಲ್ ಕೊಟ್ಟ ಭರವಸೆ ಏನು?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us