Advertisment

ಹಣದ ವಿಚಾರದಲ್ಲಿ ಹುಷಾರು.. ವಿದ್ಯಾರ್ಥಿಗಳಿಗೆ ಶುಭದಿನ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಕಾರ್ತಿಕ ಮಾಸ, ಶುಕ್ಲಪಕ್ಷ, ತ್ರಯೋದಶಿ ತಿಥಿ, ಉತ್ತರಾಭಾದ್ರ ನಕ್ಷತ್ರ. ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಮೇಷ

RASHI_BHAVISHA_MESHA

  • ನಿಮ್ಮ ವೈಯ್ಯಕ್ತಿಕ ವರ್ಚಸ್ಸು ಹೆಚ್ಚಾಗುವ ಸಾಧ್ಯತೆ ಇದೆ
  • ಇದರಿಂದ ಹಲವಾರು ಜನ ನಿಮ್ಮನ್ನು ಅಭಿನಂದಿಸುತ್ತಾರೆ
  • ಇಂದು ನಿಮ್ಮ ಬುದ್ಧಿವಂತಿಕೆ ನಿಮ್ಮನ್ನು ಎತ್ತರದ ಸ್ಥಾನಕ್ಕೆ ಕರೆದೊಯ್ಯುತ್ತದೆ
  • ದೂರದ ಊರಿನಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ
  • ಇಂದು ವಿದ್ಯಾರ್ಥಿಗಳಿಗೆ ಶುಭದಿನ, ಆದಿತ್ಯನ ಪ್ರಾರ್ಥನೆ ಮಾಡಿ

ವೃಷಭ 

RASHI_BHAVISHA_VRSHABA

  • ಬುದ್ಧಿವಂತಿಕೆಯಿಂದ ಬಗೆಹರಿಸಿಕೊಳ್ಳಿ, ಜಗಳ ಮಾಡಿಕೊಳ್ಳಬೇಡಿ
  • ಅದರಿಂದ ನಿಮ್ಮ ಜೊತೆ ಗಲಾಟೆಯಾಗುವ ಸಾಧ್ಯತೆ ಇದೆ ಎಚ್ಚರ 
  • ಇಂದು ಹಣದ ವಿಚಾರದಲ್ಲಿ ತುಂಬಾ ಜಾಗ್ರತೆ ಇರಲಿ 
  • ನೀವು ಬೇರೆಯವರಿಗೆ ಕೊಡಿಸಿದ್ದ ಸಾಲದಿಂದ ನಿಮಗೆ ತೊಂದರೆ
  • ಇಂಜಿನಿಯರ್ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಸಿಗಲಿದೆ
  • ಈಶ್ವರನ ಆರಾಧನೆ ಮಾಡಿ, ಆಶೀರ್ವಾದ ಪಡೆಯಿರಿ

ಮಿಥುನ

RASHI_BHAVISHA_MITHUNA

  • ಮನೆ ಸದಸ್ಯರ ಸಂತೋಷಕ್ಕಾಗಿ ಕೆಲ ವಿಚಾರಗಳಲ್ಲಿ ರಾಜಿ ಒಳ್ಳೆಯದು
  • ಇಂದು ನಿಮಗೆ ಅಪಖ್ಯಾತಿ ಕೂಡ ಬರುವ ಸಾಧ್ಯತೆ ಇದೆ 
  • ಮನೆಯಲ್ಲಿ ನಿಮ್ಮನ್ನು ನಿರ್ಲಕ್ಷಿಸಬಹುದು
  • ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣುತ್ತೀರಿ
  • ನಿಮ್ಮ ಸ್ವಭಾವವೂ ವರ್ತನೆಯೂ ಹಾಗೆಯೇ ಇರುತ್ತದೆ
  • ಕುಲದೇವತೆ ಮತ್ತು ಆಂಜನೇಯನನ್ನು ಪ್ರಾರ್ಥನೆ ಮಾಡಿ 
Advertisment

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವೈದ್ಯರ ಸಲಹೆ ಪಡೆದು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಿ
  • ಈ ದಿನ ಆರೋಗ್ಯದ ಬಗ್ಗೆ ಗಮನಹರಿಸಿ
  • ವಯಸ್ಸಾದವರಿಗೆ ಹಳೆಯ ನೋವಿನಿಂದ ಶಸ್ತ್ರಚಿಕಿತ್ಸೆ ಆಗುವ ಸಾಧ್ಯತೆ ಇದೆ
  • ಸಂಧಿವಾತ ನಿಮಗೆ ಹೆಚ್ಚಾಗಿ ಕಾಡಬಹುದು
  • ತಂದೆಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಮೃತ್ಯುಂಜಯನನ್ನು ಪ್ರಾರ್ಥಿಸಿ

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಮಾತಿನಿಂದ ನಿಮ್ಮ ವೈಯ್ಯಕ್ತಿಕ ಜೀವನಕ್ಕೆ ಧಕ್ಕೆ ಬರದಂತೆ ಎಚ್ಚರಿಕೆ
  • ಅದನ್ನು ಮಾನಸಿಕವಾಗಿ ಕಡಿಮೆ ಮಾಡಿಕೊಳ್ಳಿ
  • ನಿಮಗಿರುವ ಅನುಕೂಲ ನೋಡಿ ನಿಮಗೆ ಅಹಂಕಾರ ಬರುವ ದಿನ
  • ಸಾಯಂಕಾಲದ ಹೊತ್ತಿಗೆ ಒಳ್ಳೆಯ ಸುದ್ದಿ ಕೇಳಿ ಮನಸ್ಸಿಗೆ ಸಮಾಧಾನ ಸಿಗುತ್ತದೆ
  • ಇಂದು ದೂರದೂರಿನ ಪ್ರಯಾಣ ಮಾಡಬೇಡಿ
  • ಬುಧಗ್ರಹವನ್ನು ಆರಾಧನೆ ಮಾಡಿ

ಕನ್ಯಾ

RASHI_BHAVISHA_KANYA

  • ಬೇರೆಯವರ ಸಹಾಯಕ್ಕಾಗಿ ಪ್ರಯಾಣ ಮಾಡುವಾಗ ಎಚ್ಚರಿಕೆ ಇರಲಿ
  •  ದಿಢೀರ್ ಪ್ರಯಾಣ ಮಾಡುವ ಸಾಧ್ಯತೆ ಇದೆ
  • ಬೇರೆಯವರ ಕೆಲಸದಲ್ಲಿ ತೊಡಗಿಸಿಕೊಂಡು ಅವಮಾನಕ್ಕೆ ಒಳಗಾಗುವ ಸಾಧ್ಯತೆ
  • ಷೇರು ಮಾರುಕಟ್ಟೆಯಲ್ಲಿ ಪ್ರಗತಿ ಕಾಣುತ್ತೀರಿ
  • ದುರ್ಗಾದೇವಿ ಆರಾಧನೆ ಮಾಡಿ 
Advertisment

ತುಲಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಈ ದಿನ ಹಣ ಖರ್ಚಾಗಿ ಮಾನಸಿಕ ನೆಮ್ಮದಿ ಹಾಳಾಗುವ ಸಾಧ್ಯತೆ
  • ಏನಾದರು ತೀರ್ಮಾನ ಮಾಡುವಾಗ ಸರಿಯಾದ ಆಲೋಚನೆ ಮಾಡಿ
  • ತಜ್ಞರಿಂದ ಉತ್ತಮವಾದ ಸಲಹೆ ಪಡೆಯಿರಿ
  • ತಮ್ಮ ಭವಿಷ್ಯದ ವಿದ್ಯೆಗೆ ಬೇಕಾಗಿರುವ ಮಾರ್ಗದರ್ಶನ ಸಿಗುವ ದಿನ
  • ವಿದ್ಯಾರ್ಥಿಗಳಿಗೆ ಅತಿಮುಖ್ಯವಾದ ದಿನ
  • ಸರಸ್ವತಿಯನ್ನು ಆರಾಧನೆ ಮಾಡಿ 

ವೃಶ್ಚಿಕ

RASHI_BHAVISHA_VRUSHCHIKA

  • ನಿಮ್ಮ ವ್ಯಕ್ತಿತ್ವವನ್ನು ಬೇರೆಯವರ ಜೊತೆಗೆ ಹೋಲಿಕೆ ಮಾಡಬೇಡಿ
  • ನಿಮ್ಮ ಕೋಪ ನಿಮಗೆ ತೊಂದರೆ ಮಾಡುವ ಸಾಧ್ಯತೆ ಇದೆ ಎಚ್ಚರಿಕೆ ಇರಲಿ
  • ನಿಮ್ಮ ವೃತ್ತಿ ನಿಮಗೆ ಸಮಾಧಾನ ಕೊಡುವ ದಿನ
  • ನಿಮ್ಮಿಂದ ಅವಮಾನಕ್ಕೆ ಒಳಗಾದವರು ನಿಮ್ಮನ್ನ ಅವಹೇಳನ ಮಾಡುವ ಸಾಧ್ಯತೆ
  • ವೈಯ್ಯಕ್ತಿಕ ಕಾರಣಗಳಿಂದ ನಿಮ್ಮ ಮನಸ್ಸು ಕಲುಷಿತಗೊಂಡು ಮಾನಸಿಕ ಅಸಮಾಧಾನ ಸಾಧ್ಯತೆ 
  • ಉಮಾಮಹೇಶ್ವರನನ್ನು ಪ್ರಾರ್ಥನೆ ಮಾಡಿ

ಧನಸ್ಸು

RASHI_BHAVISHA_DHANASU

  • ಇಂದು ಶಸ್ತ್ರ ಚಿಕಿತ್ಸೆಯನ್ನು ನಾಳೆ ಬೆಳಗ್ಗೆಗೆ ಮುಂದೂಡುವುದು ಒಳ್ಳೆಯದು
  • ನಿಮಗೆ ಬೆನ್ನು ಮೂಳೆಯ ಸಮಸ್ಯೆ ಕಾಡಬಹುದು
  • ಇಂದು ಪ್ರಯಾಣಕ್ಕೆ ಯೋಗ್ಯವಲ್ಲದ ದಿನ, ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು 
  • ಆರೋಗ್ಯದ ಬಗ್ಗೆ ತಾತ್ಸಾರ ಮಾಡಬೇಡಿ, ಅಗತ್ಯ ಬಿದ್ದರೆ ವೈದ್ಯರನ್ನು ಭೇಟಿ ಮಾಡಿ
  • ಚಂಡಿಕಾ ದುರ್ಗಾಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
Advertisment

ಮಕರ

RASHI_BHAVISHA_MAKARA

  • ಸಮಾಜದ ಕೆಲವರಿಂದ ಕಿರಿಕಿರಿ ತೊಂದರೆಯ ಉಂಟಾಗುವ ಸಾಧ್ಯತೆ
  • ಇಂದು ಬೇರೆಯವರಿಂದ ಅನುಕೂಲ ಪಡೆಯಬೇಕಾದ ಸಮಯ 
  • ನಿಮ್ಮ ಪ್ರತಿಭೆ ವಿಧ್ಯೆ ಬುದ್ಧಿಯನ್ನ ಸಮಾಜಕ್ಕೆ ತೋರಿಸಬೇಕಾದ ದಿನ 
  • ನಿಮಗಿರುವ ಆಳವಾದ ಜ್ಞಾನ ಹಾಗೇ ಉಳಿದು ಬಿಡುವ ಸಾಧ್ಯತೆ
  • ದೇವಿಯನ್ನು ಆರಾಧನೆ ಮಾಡಿ

ಕುಂಭ

RASHI_BHAVISHA_KUMBHA

  • ಹೊಸ ಕೆಲಸಗಳನ್ನು ಆರಂಭ ಮಾಡುವುದಕ್ಕೆ ಉತ್ತಮ ದಿನ
  • ನಿಮ್ಮ ವ್ಯವಹಾರ, ಉದ್ಯೋಗಗಳಲ್ಲಿ ಉತ್ತಮ ಫಲ ಸಿಗುವ ದಿನ
  • ಸಂಘ-ಸಂಸ್ಥೆ ಅಥವಾ ಟ್ರಸ್ಟ್​ ಪ್ರಾರಂಭಿಸಲು ಇಂದು ಉತ್ತಮ ಸಮಯ 
  • ನಿಮಗೆ ಸ್ನೇಹಿತರು ಹಿತೈಷಿಗಳಿಂದ ಉತ್ತಮವಾದ ಸ್ಪಂದನೆ ಸಿಗುತ್ತದೆ
  • ನಿಮ್ಮ ಕುಲದೇವತೆ ಆರಾಧನೆ ಮಾಡಿ

ಮೀನ

RASHI_BHAVISHA_MEENA

  • ಸಾಮಾಜಿಕವಾಗಿ ಮತ್ತು ಮಾಧ್ಯಮಗಳಲ್ಲಿ ಹೆಚ್ಚು ಗೌರವ ಸಿಗುತ್ತದೆ
  • ಕೆಲಸದಲ್ಲಿನ ನಿಮ್ಮ ಗುಣಗಳನ್ನು ಜನರು ಒಪ್ಪಿ ಹೆಚ್ಚು ಗೌರವಿಸುವ ಸಾಧ್ಯತೆ
  • ಇಂದು ಸಾಲಕ್ಕೆ ಹಣ ಬೇಕೆಂದರೆ ತಕ್ಷಣ ಸಿಗುವ ಸಾಧ್ಯತೆ ಇದೆ
  • ಇಂದು ಕುಟುಂಬದ ಸದಸ್ಯರು ನಿಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ
  • ನಿಮಗೆ ಇಂದು ಹಿರಿಯರ ಆಶೀರ್ವಾದ ಸಿಗಲಿದೆ
  • ಈ ದಿನ ನಿಮಗೆ ಎಲ್ಲ ರೀತಿಯಲ್ಲಿ ಶುಭವಾಗಿದೆ
Advertisment

ಇದನ್ನೂ ಓದಿ: ಸುಂದರ್ ಸುಂದರ ಆಟ.. ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Rashi Bhavishya
Advertisment
Advertisment
Advertisment