/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ:ಊರಿನ ಅಜ್ಜಿಯರ ಕಿತಾಪತಿ ಕತೆ ಹೇಳಿದ ಗಿಲ್ಲಿ -ಇಂಟ್ರೆಸ್ಟಿಂಗ್​ ಆಗಿದೆ VIDEO
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೈಗೆ ಪೆಟ್ಟು ಬೀಳುವ ಸಾಧ್ಯತೆಯಿದೆ ಎಚ್ಚರ ವಹಿಸಿ
- ಹಲವಾರು ಸಮಸ್ಯೆಗಳು ಸುತ್ತಿಕೊಳ್ಳುವ ದಿನ
- ವಿನಾಕಾರಣ ಮನೆಯಿಂದ ಹೊರಗೆ ಹೆಚ್ಚು ಸಮಯ ಕಳೆಯುತ್ತೀರಿ
- ಸಮಯ ಸಾಧಕರೆಂಬ ಹಣೆಪಟ್ಟಿಯನ್ನು ಕಟ್ಟುತ್ತಾರೆ
- ನಿಮ್ಮ ಸ್ವಭಾವ,ವರ್ತನೆ, ಕೋಪ ಎಲ್ಲವೂ ಬದಲಾದರೆ ಜನ ನಿಮ್ಮನ್ನು ತುಂಬಾ ಇಷ್ಟ ಪಡುತ್ತಾರೆ
- ಕುಟುಂಬದಲ್ಲಿ ಆರೋಗ್ಯಕರವಾದ ಚರ್ಚೆ ನಡೆಯಲಿದೆ
- ಮನೆಯಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಜಗಳ ಆಗಬಹುದು
- ಕುಲದೇವತೆಯನ್ನು ಆರಾಧಿಸಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಅಕ್ಕ ಅಥವಾ ತಂಗಿಯರಿಗೆ ಆಘಾತವಾಗಬಹುದು ಸಹಕರಿಸಿ
- ಸ್ನೇಹಿತರು ,ಬಂಧುಗಳು ಯಾರೂ ಕೂಡ ನಿಮಗೆ ಸಹಾಯ ಮಾಡುವುದಿಲ್ಲ
- ದೊಡ್ಡ ದೊಡ್ಡ ಆಲೋಚನೆಗಳು ಮನಸ್ಸಲ್ಲಿ ಬರಲಿದೆ ಆರ್ಥಿಕವಾಗಿ ಚಿಂತನೆ ಮಾಡುತ್ತೀರಿ
- ನಿಮ್ಮ ನಿರೀಕ್ಷೆಗಳೆಲ್ಲವು ಮಕ್ಕಳಿಂದ ಪೂರ್ಣವಾಗುತ್ತದೆ ಎಂಬ ನಂಬಿಕೆ ಮೂಡಲಿದೆ
- ಮಕ್ಕಳ ಅಭ್ಯುದಯದಿಂದ ಸಮಾಧಾನ,ತೃಪ್ತಿ ,ಸಂತೋಷವನ್ನು ನೀಡಲಿದೆ
- ಹೊಸತನ್ನು ಏನಾದರೂ ಮಾಡುವ ವಿಚಾರ ಮುನ್ನೆಲೆಗೆ ಬರಬಹುದು
- ಈಶ್ವರನನ್ನು ಪ್ರಾರ್ಥಿಸಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ನೇಹಿತರ ಬೆಳವಣಿಗೆ ನಿಮ್ಮ ಮನಸ್ಸಿಗೆ ಸಮಾಧಾನ ಕೊಡಲಿದೆ
- ಅನಗತ್ಯ ಖರ್ಚು ನಿಮ್ಮನ್ನು ಆವರಿಸುವ ದಿನ
- ಮಕ್ಕಳ ಅಭ್ಯುದ್ಯಯದಿಂದ ನಿಮಗೆ ಉತ್ತಮವಾದ ಫಲ ಸಿಗಲಿದೆ
- ನಿಮ್ಮ ದೊಡ್ಡ ಆಸ್ತಿಯೆಂದರೆ ಮಾತು ಅದು ಹಾಸ್ಯಾಸ್ಪದ ಆಗಬಾರದು ಅದರಿಂದ ಅವಮಾನವಾಗಬಹುದು
- ಯಾರಿಗೋ ಮಾತು ಕೊಟ್ಟು ಆ ಮಾತಿಗೆ ತಪ್ಪುತ್ತೀರಿ
- ವಿನಾ ಕಾರಣ ಪ್ರಯಾಣವನ್ನು ಮುಂದೂಡಬೇಕಾಗುತ್ತದೆ
- ಕೌಟುಂಬಿಕ ಕಲಹಕ್ಕೆ ಅವಕಾಶವಿದೆ
- ಮಕ್ಕಳಿಗೆ ತೊಂದರೆಯಾಗಬಹುದು ಎಚ್ಚರಿಕೆ ವಹಿಸಿ
- ಮಹಾಕಾಳಿಯನ್ನು ಆರಾಧನೆ ಮಾಡಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಡೀ ಜೀವನವನ್ನ ಭಾವನಾತ್ಮಕ ವಿಷಯದಲ್ಲೇ ಕಳೆಯುತ್ತೀರಿ ಅದು ಕೂಡ ಯೋಗ ತರುವಂತದಲ್ಲ
- ಯಾವುದೇ ವಿಚಾರವನ್ನು ಅರ್ಥಮಾಡಿಕೊಂಡು ಮಾತನಾಡಬೇಕು ಇಲ್ಲ ಅಂದ್ರೆ ಅವಮಾನವಾಗಲಿದೆ
- ನಿಮ್ಮಲ್ಲಿ ಕಲೆ ಇದೆ ಆದರೆ ಅದು ಪ್ರಯೋಜನಕ್ಕೆ ಬರುತ್ತಿಲ್ಲ
- ಮನೆಯಲ್ಲಿ ಸಂಗ್ರಹಿಸಿಟ್ಟ ಪದಾರ್ಥಗಳಿಂದ ಬೈಗುಳಕ್ಕೆ ಒಳಗಾಗುತ್ತೀರಿ
- ನೀವು ಜಗಳ ಮಾಡುವುದರಿಂದ ನಿಮ್ಮ ಹತ್ತಿರದವರೆಲ್ಲ ದೂರವಾಗುವ ಸಾಧ್ಯತೆ ಇದೆ
- ನಿಮ್ಮ ಹತ್ತಿರದವರ ಜೊತೆಯಲ್ಲಿಯೇ ನೀವು ದ್ವೇಷ ಸಾಧಿಸುತ್ತೀರಿ
- ಯಾವುದೇ ವಿಚಾರವಿದ್ದರೂ ತೆರೆದ ಮನಸ್ಸಿನಿಂದ ಮಾತನಾಡಿದರೆ ಒಳ್ಳೆಯದು
- ಕುಲದೇವತಾ ಆರಾಧನೆ ಮಾಡಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ನಿಮಗೆ ಸಂಯಮ, ತಾಳ್ಮೆ ಇರಬೇಕು
- ಕುಟುಂಬದವರ ಮೇಲೆ ವೃತ್ತಿಯಲ್ಲಿ ಅಧಿಕಾರಿಯ ಮೇಲೆ ಧೋರಣೆ ತೋರಿಸಬಾರದು
- ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ ಅದನ್ನ ಹಾಗೇ ಉಳಿಸಿಕೊಳ್ಳಿ
- ಆರೋಗ್ಯದ ವಿಚಾರದಲ್ಲಿ ಗಮನ ಕೊಡಿ ತಾತ್ಸಾರ ಬೇಡ
- ಉಪನ್ಯಾಸ, ಮಹಾತ್ಮರ ಚರಿತ್ರೆ, ಅವರ ಮಾತುಗಳು ಪರಿವರ್ತನೆಗೆ ಅವಕಾಶವಿದೆ
- ಗಂಡ ಹೆಂಡತಿಯರ ಮಧ್ಯೆ ಜಗಳ ಆಗಬಹುದು
- ಪ್ರೇಮಿಗಳಿಗೆ ಶುಭದಿನ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರೇಮಿಗಳಿಗೆ ಬೇಸರದ ದಿನ ಹಾಗೆ ಸಣ್ಣ-ಪುಟ್ಟ ಸಮಸ್ಯೆಗಳು ಸಾಧ್ಯತೆ
- ನಿಮ್ಮ ವ್ಯಕ್ತಿತ್ವದಿಂದ ಹೊಸಬರನ್ನು ಆಕರ್ಷಿಸುತ್ತೀರಿ
- ಷೇರು ಮಾರುಕಟ್ಟೆಯ ವ್ಯವಹಾರದಿಂದ ನಷ್ಟವಿದೆ
- ಆರ್ಥಿಕವಾಗಿ ತೊಂದರೆ ಇರುವುದಿಲ್ಲ
- ಭಯ, ದ್ವೇಷ, ಅಸೂಯೆ, ಕೋಪವನ್ನು ದೂರಮಾಡಿಕೊಳ್ಳಬೇಕು
- ನಿಮ್ಮನ್ನು ನೀವೇ ಉತ್ತೇಜಿಸಿಕೊಳ್ಳಬೇಕು
- ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿನಾಕಾರಣ ತಿರುಗಾಟದಿಂದ ಆಗಬೇಕಾದ ಕೆಲಸ ಕೈ ತಪ್ಪಬಹುದು
- ಆಶ್ಚರ್ಯಕರವಾದ ಘಟನೆಗಳಿಂದ ನಿಮಗೆ ನಂಬಿಕೆ ಬರಬಹುದು
- ಇಂದು ಯಾವುದೇ ರೀತಿಯ ಪ್ರಯಾಣ ಬೇಡ
- ರಾಶಿಚಕ್ರದ ದೃಷ್ಟಿಯಿಂದ ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗುವ ಸಾಧ್ಯತೆ
- ಸಧ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು
- ಚಿಕ್ಕಪ್ಪ ಅಥವಾ ದೊಡ್ಡಪ್ಪನಿಗೆ ಸ್ವಲ್ಪ ತೊಂದರೆಯಾಗುವ ಸೂಚನೆಯಿದೆ ಎಚ್ಚರ
- ಈಶ್ವರನ ಆರಾಧನೆ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನಗತ್ಯ ಕೆಲಸಗಳಿಂದ ಸಮಯ ವ್ಯರ್ಥವಾಗಬಹುದು
- ಬಯಸಿದ್ದು ಈಡೇರದೆ ಮನಸ್ಸಿಗೆ ಬೇಸರ ಸಾಧ್ಯತೆ
- ಭವಿಷ್ಯದ ಬಗ್ಗೆ ಹೆಚ್ಚು ಆಲೋಚಿಸುವ ವ್ಯಕ್ತಿಗಳನ್ನು ಭೇಟಿ ಮಾಡಿ
- ಸಾಯಂಕಾಲದ ವೇಳೆಗೆ ಪ್ರೀತಿ ಪಾತ್ರರಿಂದ ಅಥವಾ ಆತ್ಮೀಯರಿಂದ ಉತ್ತಮ ಸಲಹೆ ಸಿಗಬಹುದು
- ಇಂದು ಎಲ್ಲಾ ವಿಚಾರಗಳಲ್ಲೂ ಬಿಕ್ಕಟಿನ ಪರಿಸ್ಥಿತಿ ಅನುಭವಿಸುವ ಸಾಧ್ಯತೆಯಿದೆ
- ದಂತ ವೈದ್ಯರನ್ನು ಭೇಟಿಯಾಗುವ ಸಂದರ್ಭ ಬರಬಹುದು
- ಕುಲದೇವತೆಯನ್ನ ಆರಾಧನೆ ಮಾಡಿ
ಧನುಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಬಯಸಿದ್ದು ಸಿಗದೆ ಮನಸ್ಸಿಗೆ ಕಿರಿಕಿರಿ ಸಾಧ್ಯತೆ
- ತುಂಬಾ ಒತ್ತಡ ಇರುವ ದಿನ, ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಮರದ ವ್ಯಾಪಾರಿಗಳು ಅಥವಾ ಮರಗೆಲಸ ಮಾಡುವವರಿಗೆ ಶುಭದಿನ
- ಯಾವುದಾದ್ರೂ ಕೆಲಸ, ಉದ್ದೇಶಕ್ಕೆ ಹಣವನ್ನ ಮುಂಗಡ ಕೊಟ್ಟಿದ್ರೆ ಹೋಯ್ತು
- ಅನಗತ್ಯ ವಸ್ತುಗಳಿಗೆ ಹಣ ಖರ್ಚಾಗಬಹುದು
- ಹಣ, ಸಂಬಳದ ವಿಚಾರವಾಗಿ ಗಲಾಟೆ ಆಗುವ ಸಾಧ್ಯತೆಯಿದೆ
- ಛಿನ್ನಮಸ್ತಾ ದೇವಿಯನ್ನು ಪ್ರಾರ್ಥನೆ ಮಾಡಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಳೆಯ ಕೆಲಸ ಕಾರ್ಯಗಳಲ್ಲಿ ಮಗ್ನರಾಗುವ ಸಾಧ್ಯತೆಗಳಿವೆ
- ಕೆಲಸದಲ್ಲಿ ನಿಮ್ಮ ಬದ್ಧತೆ ಹೆಚ್ಚಾದ್ರೆ ಲಾಭ ಸಾಧ್ಯತೆ
- ಗರ್ಭಣಿ ಸ್ತ್ರೀಯರು ಬಹಳ ಎಚ್ಚರಿಕೆಯಿಂದ ಇರಬೇಕಾದ ದಿನ
- ನಿಮ್ಮ ವರ್ತನೆಯಿಂದ ಕುಟುಂಬದಲ್ಲಿ ಅಶಾಂತಿ ಸಾಧ್ಯತೆ
- ನಿಮ್ಮ ಜೀವನದಲ್ಲಿ ಸುಖದ ಆಸೆ ಹೊತ್ತು ಸಂಭ್ರಮಿಸುವಿರಿ
- ಅನಿರೀಕ್ಷಿತವಾಗಿ ಗಣ್ಯ ವ್ಯಕ್ತಿ ನಿಮ್ಮ ಮನೆಗೆ ಭೇಟಿ ನೀಡಬಹುದು
- ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಂಘ - ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಸಂಪೂರ್ಣ ಸಹಕಾರ ಸಿಗುತ್ತದೆ
- ಮಹಿಳೆಯರಿಗೆ ತುಂಬಾ ಯಶಸ್ಸು ಸಿಗುವ ದಿನ
- ಬೆಳಗ್ಗೆ ನಿಮ್ಮ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಯಿದೆ
- ಸಾಯಂಕಾಲದಲ್ಲಿ ಸಿಗುವ ಸುಖ, ಸಂತೋಷ ಎಲ್ಲವನ್ನೂ ಮರೆಸುತ್ತದೆ
- ಬೇರೆಯವರೊಂದಿಗಿನ ಮಾತು ನಿಮ್ಮ ಸಮಸ್ಯೆಗೆ ಪರಿಹಾರವಾಗಬಹುದು
- ನಿಮ್ಮ ಆತ್ಮೀಯರೇ ನಿಮಗೆ ಪ್ರತ್ಯಕ್ಷ ದೇವರ ರೂಪದಲ್ಲಿ ಕಾಣುವ ಸಾಧ್ಯತೆ
- ಪದ್ಮಾವತಿ - ವೆಂಕಟರಮಣರನ್ನು ಪ್ರಾರ್ಥನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಾಲಗಾರರಿಂದ ಅವಮಾನ, ತುಂಬಾ ಬೇಸರ ಸಾಧ್ಯತೆ
- ಇಂದು ಪ್ರಗತಿದಾಯಕ ದಿನ ಸಾಧ್ಯತೆ
- ಆಹಾರ ಸೇವನೆ ಬಗ್ಗೆ ಕಾಳಜಿ ವಹಿಸಿ,
- ಅಜೀರ್ಣ ಅಥವಾ ಶಾರೀರಿಕ ಬಾಧೆಗೆ ಒಳಗಾಗುವ ಸಾಧ್ಯತೆಯಿದೆ
- ಎಲ್ಲರ ಮೇಲು ಕೂಡ ಪ್ರೀತಿ, ವಿಶ್ವಾಸ ಇಟ್ಟುಕೊಳ್ಳಬೇಕು
- ಮನೆಯವರ ಸಂದೇಶ, ಮಾತು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಬಹುದು
- ಮನೆಯಿಂದ ಹೊರ ಹೋಗುವಾಗ ಕೋಪಿಸಿ ಕೊಂಡರೆ ಅನಾಹುತವಾಗುವ ಸಾಧ್ಯತೆಯಿದೆ
- ಋಣಮೋಚನ ಮಂಗಳ ಸ್ತೋತ್ರ ಪಠಿಸಿ
ಇದನ್ನೂ ಓದಿ: ಊರಿನ ಅಜ್ಜಿಯರ ಕಿತಾಪತಿ ಕತೆ ಹೇಳಿದ ಗಿಲ್ಲಿ -ಇಂಟ್ರೆಸ್ಟಿಂಗ್​ ಆಗಿದೆ VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us