ಮಾನಸಿಕ ಗೊಂದಲ ದೂರ ಆಗುತ್ತದೆ -ಹೇಗಿದೆ ನಿಮ್ಮ ರಾಶಿ ಭವಿಷ್ಯ..?

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಮಾಘ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಜ್ಯೇಷ್ಠಾ ನಕ್ಷತ್ರ. ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇದನ್ನೂ ಓದಿ: ಸೊಸೆಯ ಸೌಂದರ್ಯ ವರ್ಣನೆಯ ಜೊತೆಗೆ ಲೈಂಗಿಕ ಕಿರುಕುಳ ಕೊಟ್ಟ ಮಾವ! : ಲಿಫ್ಟ್ ನಲ್ಲಿ ಮಾವನಿಂದ ಸೊಸೆಯ ಅಲಿಂಗನ!

ಮೇಷ

ಸ್ಥಗಿತಗೊಂಡಿರುವ ಕಾರ್ಯ ಮುಂದುವರಿಸಬಹುದು
ವಿದ್ಯಾರ್ಥಿಗಳಿಗೆ ಸರ್ವಾಂಗೀಣ ಅಭಿವೃದ್ಧಿಯಿದೆ
ಮಾನಸಿಕ ಗೊಂದಲಗಳು ದೂರವಾಗುತ್ತದೆ
ತಂತ್ರಜ್ಞಾನದ ವಿಚಾರಕ್ಕೆ ಹಣ ಖರ್ಚು
ಈ ದಿನ ಮನೆ ಬದಲಾವಣೆ ಯೋಚನೆ ಬೇಡ
ಹೊಸ ಕೆಲಸ ಆರಂಭಿಸಲು ಸೂಕ್ತಕಾಲ
ಕುಲದೇವತಾ ಪ್ರಾರ್ಥನೆ ಮಾಡಿ

ವೃಷಭ

  • ಪ್ರೇಮಿಗಳಿಗೆ ದೊಡ್ಡ ಸಮಸ್ಯೆ ಕಾಡಬಹುದು
  • ಪ್ರಮುಖ ಕೆಲಸಗಳಿಗೆ ಅಡಚಣೆಯಾಗಬಹುದು
  • ಮನೆ ಖರ್ಚನ್ನು ನಿಯಂತ್ರಿಸಿ
  • ಷೇರು ಹೂಡಿಕೆಗಳನ್ನು ಪ್ರಾರಂಭಿಸಬಹುದು
  • ಮನೆಗೆ ಹೊಸ ಅತಿಥಿಯ ಆಗಮನದ ಸೂಚನೆ 
  • ಅಹಂಭಾವ, ಅತೀವ ಸಂತೋಷ ಬೇಡ ನಿರಾಸೆಯಾಗಬಹುದು
  • ಮೈಲಾರಲಿಂಗೇಶ್ವರನನ್ನು ಪ್ರಾರ್ಥನೆ ಮಾಡಿ

ಮಿಥುನ

  • ಯೋಜನೆಗಳನ್ನು ಬದಲಾಯಿಸಿ ಅನುಕೂಲವಿದೆ
  • ಪೋಷಕರ ಸಲಹೆಗೆ ಮಾನ್ಯತೆ ನೀಡಿ
  • ಹೊಸ ಕೆಲಸಕ್ಕೆ ಸರಿಯಾದ ಸಮಯವಲ್ಲ
  • ಆರ್ಥಿಕವಾಗಿ ಇರುವ ಸಮಸ್ಯೆಗಳಿಗೆ ಪರಿಹಾರವಿಲ್ಲ
  • ತಂದೆಯವರ ಬೇಸರಕ್ಕೆ ಕಾರಣವಾಗದಿರಿ
  • ಬೇರೆಯವರನ್ನು ವ್ಯಂಗ್ಯ ಮಾಡದಿರಿ ಅವಮಾನ ಆಗಬಹುದು
  • ಶನೈಶ್ಚರ ದೇವಾಲಯಕ್ಕೆ ಹೋಗಿ ದರ್ಶನ ಮಾಡಿ

ಕಟಕ

  • ನಿಮ್ಮ ಅದೃಷ್ಟ ನಿಮ್ಮ ಕೈ ಹಿಡಿಯುವ ದಿನ
  • ಸಹೋದ್ಯೋಗಿಗಳೊಂದಿಗೆ ಸಂತೋಷದ ಸಮಯವಿದೆ
  • ವೃತ್ತಿ ಜೀವನದಲ್ಲಿ ಉತ್ತಮ ಅವಕಾಶವಿದೆ
  • ವ್ಯವಹಾರದ ಚತುರತೆ ನಿಮ್ಮ ಲಾಭಕ್ಕೆ ಕಾರಣ
  • ಕುಟುಂಬದಲ್ಲಿ ಶಾಂತಿ ವಾತಾವರಣ
  • ನಿಮ್ಮ ಶಿಸ್ತು ಕಾರ್ಯವೈಖರಿಯನ್ನು ಹಾಗೇ ಉಳಿಸಿಕೊಳ್ಳಿ
  • ಸುಬ್ರಹ್ಮಣ್ಯನಿಗೆ ಪ್ರಾರ್ಥನೆ ಮಾಡಿ

ಸಿಂಹ

  • ನೌಕರಿಗೆ ಸಂಬಂಧಿಸಿದಂತೆ ವಿದೇಶ ವಾರ್ತೆಯಿಂದ ಸಂತೋಷ
  • ಅನಗತ್ಯ ಮಾತುಬೇಡ ಹಗುರ ಅಗುತ್ತೀರಿ
  • ಸ್ನೇಹಿತರು ಮಧ್ಯೆ ಅಧಿಕಾರ ಬೇಡ  ಸ್ವಾಭಾವಿಕರಾಗಿರಿ
  • ಪೂರ್ಣಮಾಡಬೇಕಾದ ಕೆಲಸಗಳು ಹಾಗೆ ಉಳಿಯಬಹುದು
  • ಸ್ನೇಹಿತರಿಗೆ ಸಹಾಯ ಮಾಡಬಹುದು  ನಿರೀಕ್ಷಿಸಬೇಡಿ
  • ಅಜೀರ್ಣ ಸಮಸ್ಯೆ ಕಾಡಬಹುದು
  • ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ

ಕನ್ಯಾ

  • ಕುಟುಂಬ ನಿರ್ವಹಣೆಯ ಬಗ್ಗೆ ಚರ್ಚೆ ಕಲಹ
  • ಮಕ್ಕಳಿಂದ ಅವಮಾನ ಆಗಬಹುದು
  • ಗೌರವಕ್ಕೆ ತಕ್ಕ ಕೆಲಸ ಮಾಡಿ ಶುಭವಿದೆ
  • ಬೇರೆಯವರನ್ನು ಅವಲಂಬಿಸಿ ಕಾರ್ಯಪ್ರವೃತ್ತರಾಗಬಾರದು
  • ನಿಮ್ಮ ಕೆಲಸದಲ್ಲಿ ಪ್ರಮುಖ ಸ್ಥಾನವಿರುತ್ತದೆ
  • ನಿಮ್ಮ ಲೋಪ ದೋಷಗಳ ಅನಾವರಣ ಅವಮಾನ
  • ಗಣಪತಿಗೆ ಚಂದನ ಲೇಪನ ಮಾಡಿಸಿ

ತುಲಾ

  • ವ್ಯಾಪಾರ ವೃತ್ತಿಯಲ್ಲಿ ಅನಿರೀಕ್ಷಿತ  ಲಾಭ
  • ಹಣಕ್ಕೆ ಕೊರತೆಯಿಲ್ಲ ಕೀರ್ತಿಯೂ ಇದೆ
  • ವಿದ್ಯಾರ್ಥಿಗಳಿಗೆ ಅನುಕೂಲವಿದೆ  ಅಲಸ್ಯಬೇಡ
  • ಸಾಧುಗಳ ಧಾರ್ಮಿಕ ಮುಖಂಡರ ಭೇಟಿಯಾಗಬಹುದು
  • ನಿಮ್ಮ ವರ್ತನೆ ಎಂದಿನಂತೆಯಿರಲಿ ರಾಜಿಬೇಡ 
  • ಶತ್ರುಗಳಿಂದ ವಿರೋಧಿಗಳಿಂದ ಕೆಲಸ ಹಾಳಾಗಬಹುದು
  • ನಾಗನಿಗೆ ಅಡಿಕೆ ಹೂ ಅರ್ಪಿಸಿ

ವೃಶ್ಚಿಕ

  • ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಅವಕಾಶವಿದೆ
  • ಹಣಕಾಸಿನ  ಲಾಭದ ಆಸೆಯಿಂದ ಮೋಸ ಹೋಗಬಹುದು
  • ಬೇರೆಯವರ ಸಂಪರ್ಕದಿಂದ ಮನೆಯಲ್ಲಿ ಬೇಸರ
  • ಕುಟುಂಬದಲ್ಲಿ ಅಶಾಂತಿ ತಲೆದೋರಬಹುದು
  • ಅನಗತ್ಯ ವಿಚಾರಗಳಿಂದ ಗೊಂದಲ  ನಿರಾಸೆ
  • ರಾಜಕೀಯದಲ್ಲಿ ವಿಷಯದಿಂದ ದೂರವಿದ್ದರೆ ಒಳಿತು
  • ದತ್ತಾತ್ರೇಯರ ಆರಾಧನೆ ಮಾಡಿ

ಧನುಸ್ಸು 

  • ಸಾಲದ ವಿಚಾರಕ್ಕೆ ಸಿಕ್ಕಿಕೊಳ್ಳಬಹುದು
  • ಹಳೆಯ ಚಿಂತೆ ಮರೆತರೆ ಅನುಕೂಲವಿದೆ
  • ಮನೆಯವರ ಯೋಗಕ್ಷೇಮ ಗಮನಿಸಿ
  • ಬೇರೆಯವರಿಗೆ ಸಹಾಯದ ಹಸ್ತ ಬೇಡ ತೊಂದರೆಯಾಗಬಹುದು
  • ಹಳೆಯ ನೆನಪುಗಳಿಂದ ಕಣ್ಣೀರು ಕಹಿ ಅನುಭವ
  • ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ
  • ನದೀ ತೀರದ ದೇವಾಲಯಕ್ಕೆ ಸೇವೆ ಮಾಡಿಸಿ

ಮಕರ

  • ವೃತ್ತಿಯಲ್ಲಿ ತೊಂದರೆಯಾಗಬಹುದು
  • ಬೇರೆಯವರಿಗೆ ಸಹಾಯ ಮಾಡಿದ್ರೆ ಅವರಿಂದ  ಏನನ್ನು ನಿರೀಕ್ಷಿಸಬೇಡಿ
  • ಸ್ವನಿರ್ಧಾರ ಒಳಿತು ಕುತಂತ್ರ ಬೇಡ
  • ಕುಟುಂಬ ರಾಜಕಾರಣ ಕಲಹ ಮನಸ್ತಾಪಗಳಿರುತ್ತವೆ
  • ನಿಮ್ಮದಲ್ಲದ ವಿಚಾರ ನಿಮಗೆ ತೊಂದರೆ ಮಾಡುತ್ತದೆ
  • ಪಿತ್ರಾರ್ಜಿತದ ವಿಚಾರದಲ್ಲಿ ದೊಡ್ಡ ಗಲಾಟೆಯಾಗಬಹುದು
  • ಮಹಾಕಾಳಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಧಾರ್ಮಿಕ ಕಾರ್ಯಗಳ ಯೋಚನೆ ಹಾಕುತ್ತೀರಿ ಕಾರ್ಯರೂಪಕ್ಕೆ ಬರುವುದಿಲ್ಲ
  • ತಪ್ಪು ನಿರ್ಧಾರಗಳು ಬೇಡ
  • ಬೇರೆಯವರ ಬಗ್ಗೆ ಅನುಮಾನ
  • ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು
  • ಮಕ್ಕಳ ಭವಿಷ್ಯದ ಚಿಂತೆ ಕಾಡಲಿದೆ
  • ಬಂಧುಗಳಲ್ಲಿ ಅಲ್ಪ ಪ್ರೀತಿ ಬೇಸರ ಆಗಬಹುದು
  • ಅಮೃತ ಮೃತ್ಯುಂಜನನ್ನು ಪ್ರಾರ್ಥನೆ ಮಾಡಿ

ಮೀನ

  • ಯಶಸ್ಸಿನ ಆಸೆಯಿಂದ ದುರಾಸೆ ಬೇಡ
  • ಲಾಭಗಳಿಸುವ ಹಂಬಲದಲ್ಲಿ ನೈತಿಕತೆ ದೂರಮಾಡಬಾರದು
  • ವ್ಯಾವಹಾರಿಕವಾಗಿ ಬೇರೆಯವರ ಸಹಾಯ ದೊರೆಯುತ್ತದೆ
  • ಕೋಪ ಕಡಿಮೆಯಿರಲಿ ನಿಮ್ಮ ಕೆಲಸಗಳಾಗುತ್ತವೆ
  • ಮಕ್ಕಳು ಮೊಮ್ಮಕ್ಕಳಿಂದ ಉತ್ತಮ ಸಾಧನೆ ಸಮಾಧಾನ
  • ದಿನಚರಿಯಲ್ಲಿ ಬದಲಾವಣೆ  ಕಾಯುವಿಕೆಯಿಂದ ಬೇಸರ
  • ಶ್ರೀರಾಮ ಪರಿವಾರ ದೇವತೆಗಳನ್ನು ಪ್ರಾರ್ಥನೆ ಮಾಡಿ

ಇದನ್ನೂ ಓದಿ: ಸೊಸೆಯ ಸೌಂದರ್ಯ ವರ್ಣನೆಯ ಜೊತೆಗೆ ಲೈಂಗಿಕ ಕಿರುಕುಳ ಕೊಟ್ಟ ಮಾವ! : ಲಿಫ್ಟ್ ನಲ್ಲಿ ಮಾವನಿಂದ ಸೊಸೆಯ ಅಲಿಂಗನ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Horoscope Rashi Bhavishya
Advertisment