/newsfirstlive-kannada/media/media_files/2026/01/03/pavan-nejjuru-2026-01-03-14-12-56.jpg)
ತುಮಕೂರು: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಗಲಾಟೆ ಸಂಬಂಧ ಅಮಾನತು ಆಗಿರುವ ಬಳ್ಳಾರಿ ಎಸ್​ಪಿ (ಪೊಲೀಸ್ ವರಿಷ್ಠಾಧಿಕಾರಿ) ಪವನ್​ ನೆಜ್ಜೂರ್ (pawan nejjur) ಆತ್ಮ*ತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.
ಕೆಲವು ಮಾಹಿತಿಗಳ ಪ್ರಕಾರ ಪೊಲೀಸ್ ಅಧಿಕಾರಿ ಪವನ್​ ನೆಜ್ಜೂರ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ತುಮಕೂರಿನ ಶಿರಾದ ಬರಗೂರಿನಲ್ಲಿರೋ ಸ್ನೇಹಿತನ ಫಾರ್ಮ್​ಹೌಸ್​ನಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ನಿನ್ನೆ SP ಪವನ್ ನೆಜ್ಜೂರ್ ಅವರನ್ನು ಕರ್ನಾಟ ಸರ್ಕಾರ ಅಮಾನತು ಮಾಡಿತ್ತು. ಬಳ್ಳಾರಿ ಘಟನೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂಬ ಕಾರಣವನ್ನು ನೀಡಿ ಸಸ್ಪೆಂಡ್ ಮಾಡಲಾಗಿತ್ತು. ಇನ್ನೊಂದು ವಿಚಾರ ಅಂದ್ರೆ ಅವರು ಬಳ್ಳಾರಿಗೆ ಕೆಲವೇ ಕೆಲವು ದಿನಗಳ ಹಿಂದಷ್ಟೇ ಬಳ್ಳಾರಿ ಎಸ್​ಪಿಯಾಗಿ ನಿಯೋಜನೆಗೊಂಡಿದ್ದರು.
ಮಂಡ್ಯ ಎಸ್​ಪಿ ಸ್ಪಷ್ಟಣೆ..
ವದಂತಿ ಬಗ್ಗೆ ಪ್ರತಿಕ್ರಿಯಿಸಿರುವ ಮಂಡ್ಯ ಎಸ್​ಪಿ ಶೋಭಾ ರಾಣಿ, ಪವನ್ ನೆಜ್ಜೂರ್ ಜೊತೆ ಮಾತನ್ನಾಡಿದೆ. ಅವರು, ನಮ್ಮ ಬ್ಯಾಚ್​​ಮೇಟ್​ನ ಫಾರ್ಮ್​​ಹೌಸ್​ನಲ್ಲಿದ್ದಾರೆ. ಆತ್ಮ*ತ್ಯೆ ಯತ್ನ ಅನ್ನೋದು ಸುಳ್ಳು, ವದಂತಿ ಹರಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us