/newsfirstlive-kannada/media/media_files/2025/09/02/ydr_brother-2025-09-02-14-22-00.jpg)
ಯಾದಗಿರಿ: ಸಹೋದರ ಹೃದಯಾಘಾತದಿಂದ ಕಣ್ಮುಚ್ಚಿರುವ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ನಡೆದಿದೆ.
ಕೆಂಭಾವಿ ನಿವಾಸಿಗಳಾದ ಶಮಶುದ್ದೀನ್ ಪೇಶಮಾಮ್ (42) ಹಾಗೂ ಇರ್ಫಾನ್ ಪೇಶಮಾಮ್ (38) ಕೊನೆಯುಸಿರೆಳೆದವರು. ಬೆಳಗ್ಗೆ ಸಹೋದರ ಇರ್ಫಾನ್ ಪೇಶಮಾಮ್​ಗೆ ಹೃದಯಾಘಾತ ಸಂಭವಿಸಿದ್ದು ಸ್ಥಳದಲ್ಲೇ ಉಸಿರು ಚೆಲ್ಲಿದ್ದನು. ತಮ್ಮ ನಿಧನ ಹೊಂದಿರುವ ಸುದ್ದಿಯನ್ನು ಕೇಳಿದ ಅಣ್ಣ ಶಮಶುದ್ದೀನ್ ಪೇಶಮಾಮ್​ಗೆ ಹಾರ್ಟ್ ಅಟ್ಯಾಕ್ ಆಗಿದೆ.
ಇದನ್ನೂ ಓದಿ: ನಿರಂತರ ಮಳೆ, ಕುಸಿದ ಬೃಹತ್ ಬೆಟ್ಟ.. 1000ಕ್ಕೂ ಹೆಚ್ಚು ಜನ ಭೂ ಸಮಾಧಿ, ಒಬ್ಬನು ಮಾತ್ರ..
ತಕ್ಷಣ ಶಮಶುದ್ದೀನ್ ಪೇಶಮಾಮ್​ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಇಬ್ಬರನ್ನು ಕಳೆದುಕೊಂಡಿರುವ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us