Advertisment

ಸಿನಿಮಾ ನೋಡ್ತಾರಾ ಯದುವೀರ್​.. ಇಷ್ಟವಾದ ಕನ್ನಡದ ಆ ಹೀರೋ ಯಾರು?

ಐತಿಹಾಸಿಕ 2025ರ ನಾಡಹಬ್ಬ ಮೈಸೂರು ದಸರಾಗೆ ಸಾಂಸ್ಕೃತಿಕ ನಗರ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ನಿನ್ನೆಯಿಂದ ಯದುವಂಶದಿಂದ ಪೂಜಾ ಕೈಂಕರ್ಯ ನೆರವೇರುತ್ತಿದ್ದು, ಯದುವೀರ್​ ಒಡೆಯರ್​ ಈ ಕುರಿತು ನ್ಯೂಸ್​ಫಸ್ಟ್​ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

author-image
Ganesh Kerekuli
yaduveer
Advertisment

ಅಂಬಾ ವಿಲಾಸ ಅರಮನೆಯಲ್ಲಿ ಯದುವಂಶದ ಖಾಸಗಿ ದರ್ಬಾರ್ ನಿನ್ನೆಯಿಂದ ಆರಂಭವಾಗಿದೆ. ರಾಜವಂಶಸ್ಥ ಯದುವೀರ್ ಒಡೆಯರ್​ ಸಿಂಹಾಸನವೇರಿ ಧಾರ್ಮಿಕ ವಿಧಿ ವಿಧಾನ ನಡೆಸುತ್ತಿದ್ದಾರೆ.

Advertisment

ಈ ಮಧ್ಯೆ ಮೈಸೂರು ದಸರಾ ಸಂದರ್ಭದಲ್ಲಿ ಯದುವೀರ್​ ಒಡೆಯರ್​ ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ್ದು, ದಸರಾ ಸೇರಿದಂತೆ ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ನಿಮಗೆ ಇಷ್ಟವಾದ ಹೀರೋ ಯಾರು ಎಂಬ ಪ್ರಶ್ನೆಗೆ ಯದುವೀರ್​ ಒಡೆಯರ್​ ಡಾ.ರಾಜ್​ ಕುಮಾರ್​ ಎಂದು ಹೇಳಿದ್ದಾರೆ.

ಹಳೆ ಮೈಸೂರು ಭಾಗವನ್ನ ಡಾ.ರಾಜ್​ ಕುಮಾರ್​ ಅವರ ಚಿತ್ರದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ಬೆಟ್ಟದ ಬಾಗಿಲು ಸಿನಿಮಾದಲ್ಲಿ ಬೆಟ್ಟದ ಜಾತ್ರೆಯಲ್ಲಿ ಸಾರ್ವಜನಿಕರು ಎಷ್ಟು ಶಿಸ್ತಿನಿಂದ ಭಾಗಿಯಾಗುತ್ತಿದ್ದರು ಅನ್ನೋದನ್ನ ಡಾ.ರಾಜ್​ ಕುಮಾರ್​ ಅವರ ಸಿನಿಮಾದಲ್ಲಿ ನೋಡಬಹುದು. ಹಳೆ ಬೆಟ್ಟದ ಅರಮನೆ ಕೂಡ ಬೆಟ್ಟದ ಬಾಗಿಲು ಸಿನಿಮಾದಲ್ಲಿ ಕಾಣಿಸುತ್ತದೆ ಎಂದು ಯದುವೀರ್​ ಒಡೆಯರ್​ ಹೇಳಿದ್ದಾರೆ.

ಇತ್ತೀಚಿಗೆ ಕಾಂತಾರ ಸಿನಿಮಾ ನೋಡಿದ್ದೇನೆ ತುಂಬಾ ಚೆನ್ನಾಗಿದೆ. ಮತ್ತೆ ಮಂಡ್ಯದಲ್ಲಿ ತೆಗೆದ ‘ತಿಥಿ’ ಸಿನಿಮಾ ಕೂಡ ನೋಡಿದ್ದೇನೆ ಎಂದು ಯದುವೀರ್​ ಒಡೆಯರ್​ ಹಂಚಿಕೊಂಡಿದ್ದಾರೆ.

Advertisment

ಇದನ್ನೂ ಓದಿ: ದಸರಾದಲ್ಲಿ ಅತ್ಯಂತ ದೊಡ್ಡ ಸೆಲೆಬ್ರೇಟಿ ಯಾರು.. ಯದುವೀರ್‌ ಒಡೆಯರ್‌ ಹೇಳಿದ ಹೆಸರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dr. rajkumar mysore dasara darbar Mysore Dasara Yaduveer Krishnadatta Chamaraja Wadiyar
Advertisment
Advertisment
Advertisment