ಸುಧಾಕರ್ ವಿರುದ್ಧ ರಕ್ಷಾ ರಾಮಯ್ಯಗೆ ಮಣೆಹಾಕಿದ ಕಾಂಗ್ರೆಸ್ ಹೈಕಮಾಂಡ್
ಮುನಿಯಪ್ಪ- ರಮೇಶ್ಕುಮಾರ್ ಬಣದ ಮಧ್ಯೆ ಟಿಕೆಟ್ಗಾಗಿ ಭಾರೀ ಪೈಪೋಟಿ
ರಾಜ್ಯದಲ್ಲಿ 27 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿರುವ ಕಾಂಗ್ರೆಸ್ ಹೈಕಮಾಂಡ್
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ 3 ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಾಕಿ ಉಳಿದಿದ್ದ 4 ಕ್ಷೇತ್ರಗಳ ಪೈಕಿ ಚಾಮರಾಜನಗರ, ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ್ದು, ಬಣ ಬಂಡಾಯದ ಕಾರಣ ಕೋಲಾರ ಕ್ಷೇತ್ರವನ್ನ ಹೈಕಮಾಂಡ್ ವೇಟಿಂಗ್ ಲಿಸ್ಟ್ನಲ್ಲಿಟ್ಟಿದೆ.
ಈ ಬಾರಿಯ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಕರ್ನಾಟಕದ 3ನೇ ಪಟ್ಟಿ ಬಿಡುಗಡೆ ಮಾಡಿದೆ. ನಾಲ್ಕು ಕ್ಷೇತ್ರಗಳನ್ನ ಬಾಕಿ ಉಳಿಸಿಕೊಂಡಿದ್ದ ಕಾಂಗ್ರೆಸ್ ಸದ್ಯ 3 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಿದೆ. ಬಳ್ಳಾರಿ, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿದೆ. ಆದ್ರೆ ಕೋಲಾರದಲ್ಲಿ ಬಂಡಾಯ ಶಮನವಾಗದ ಕಾರಣ ಪೆಂಡಿಂಗ್ ಇರಿಸಲಾಗಿದೆ.
ಬಂಡಾಯ ಕಾರಣಕ್ಕೆ ಕೋಲಾರ ಕ್ಷೇತ್ರ ಪೆಂಡಿಂಗ್!
ನಿರೀಕ್ಷೆಯಂತೆ ಬಳ್ಳಾರಿ ಲೋಕಸಭಾ ಟಿಕೆಟ್ ಸಂಡೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ತುಕರಾಂ ಅವರಿಗೆ ನೀಡಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಸಿದ್ದರಾಮಯ್ಯನವರ ಆಪ್ತ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ಬೋಸ್ಗೆ ಮಣೆ ಹಾಕಲಾಗಿದೆ. ಇನ್ನೋರ್ವ ಸಿಎಂ ಆಪ್ತ ಮಾಜಿ ಸಚಿವ ಎಂ.ಆರ್.ಸೀತಾರಾಂ ಪುತ್ರ ರಕ್ಷಾರಾಮಯ್ಯಗೆ ಚಿಕ್ಕಬಳ್ಳಾಪುರ ಟಿಕೆಟ್ ನೀಡಲಾಗಿದೆ.
ಟಿಕೆಟ್ ಆಸೆಯಲ್ಲಿದ್ದ ಮಾಜಿ ಸಿಎಂ ಮೊಯ್ಲಿಗೆ ಮುಖಭಂಗ!
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಭಾರೀ ಕಗ್ಗಂಟಾಗಿತ್ತು.. ಮಾಜಿ ಸಿಎಂ ಮೊಯ್ಲಿ, ಮಾಜಿ ಸಚಿವ ಶಿವಶಂಕರರೆಡ್ಡಿ, ಯುವ ಕಾಂಗ್ರೆಸ್ನ ರಕ್ಷಾ ರಾಮಯ್ಯ ನಡುವೆ ತೀವ್ರ ಪೈಪೋಟಿ ಇತ್ತು. ಸ್ಥಳೀಯ ನಾಯಕರ ವಿರೋಧದ ನಡುವೆ ಸಿಎಂ ಆಶೀರ್ವಾದ, ಹೈಕಮಾಂಡ್ ಅಂತಿಮವಾಗಿ ರಕ್ಷಾ ರಾಮಯ್ಯಗೆ ಮಣೆಹಾಕಿದೆ. ಇದರಿಂದ ಮಾಜಿ ಸಿಎಂ ವೀರಪ್ಪ ಮೊಯ್ಲಿಗೆ ಮುಖಭಂಗವಾಗಿದೆ.
ಇಬ್ಬರ ನಡುವೆ ಮೂರನೇ ವ್ಯಕ್ತಿಗೆ ಟಿಕೆಟ್ ಜಾಕ್ಪಾಟ್!
ಇನ್ನು, ಕೋಲಾರ ಟಿಕೆಟ್ ಕಾಂಗ್ರೆಸ್ನಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಸಚಿವ ಮುನಿಯಪ್ಪ ಮತ್ತು ರಮೇಶ್ಕುಮಾರ್ ಬಣದ ಮಧ್ಯೆ ಟಿಕೆಟ್ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಇದರ ಮಧ್ಯೆ ಮುನಿಯಪ್ಪನವರ ಅಳಿಯ ಚಿಕ್ಕಪೆದ್ದಣ್ಣಗೆ ಕೋಲಾರ ಟಿಕೆಟ್ ಅಂತಿಮವಾಗಿದೆ ಎನ್ನುವ ಸುದ್ದಿ ಬಳಿಕ ರಾಜೀನಾಮೆ ಪ್ರಹಸನಕ್ಕೂ ರಾಜ್ಯ ರಾಜಕೀಯ ಸಾಕ್ಷಿ ಆಯ್ತು. ಈ ಎಲ್ಲ ಕಾರಣಕ್ಕೆ ಕೋಲಾರ ಕ್ಷೇತ್ರ ಪೆಂಡಿಂಗ್ ಇರಿಸಲಾಗಿದೆ.
ಇದನ್ನೂ ಓದಿ: ಹಮಾಸ್ ಉಗ್ರರು ಯುವತಿ ನಗ್ನ ಮೆರವಣಿಗೆ ಮಾಡಿದ್ದ ಫೋಟೋಗೆ ಪ್ರಶಸ್ತಿ; ಇಸ್ರೇಲಿಗರ ಭಾರೀ ಆಕ್ರೋಶ
ಒಂದ್ವೇಳೆ ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡಿದ್ರೆ ರಮೇಶ್ಕುಮಾರ್ ಬಣ ಎಲೆಕ್ಷನ್ನಿಂದ ದೂರ ಉಳಿಯುವ ಆತಂಕ ಕಾಂಗ್ರೆಸ್ಗೆ ಕಾಡ್ತಿದೆ. ರಮೇಶ್ಕುಮಾರ್ ಬಣಕ್ಕೆ ಟಿಕೆಟ್ ಕೊಟ್ರೆ, ಮುನಿಯಪ್ಪ ಬಣ ಮುನಿಸಿಕೊಳ್ಳಲಿದೆ. ಹೀಗಾಗಿ ಇಬ್ಬರ ನಡುವೆ 3ನೇ ಅಭ್ಯರ್ಥಿಯ ಹುಡುಕಾಟ ನಡೆಯುತ್ತಿದೆ. ಹೀಗಾಗಿ ಕೋಲಾರ ಟಿಕೆಟ್ ಯಾರಿಗೆ ಅನ್ನೋದು ನಾಮಪತ್ರ ಸಲ್ಲಿಕೆ ಕೊನೆ ದಿನ ಪ್ರಕಟ ಮಾಡುವ ಸಾಧ್ಯತೆಯೂ ಇದೆ.
ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಎಂಬ ಕುತೂಹಲ ಮುಂದುವರೆದಿದೆ.. ಕ್ಷೇತ್ರದಲ್ಲಿ ಬಂಡಾಯ ಹೆಚ್ಚದಾದ ಹಿನ್ನೆಲೆ ಎಡಗೈ ಅಥವಾ ಬಲಗೈ ಸಮುದಾಯದಲ್ಲಿ ಯಾರಿಗೆ ಮಣೆ ಹಾಕೋದು ಅನ್ನೋದೆ ಹೈಮಾಂಡ್ಗೆ ಚಿಂತೆ ಆಗಿದೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ 9ನೇ ಪಟ್ಟಿ ಪ್ರಕಟಿಸಿದೆ.. ಕರ್ನಾಟಕದ ಮೂರು ಕ್ಷೇತ್ರ ಘೋಷಿಸಿದ್ದು, 28 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸುಧಾಕರ್ ವಿರುದ್ಧ ರಕ್ಷಾ ರಾಮಯ್ಯಗೆ ಮಣೆಹಾಕಿದ ಕಾಂಗ್ರೆಸ್ ಹೈಕಮಾಂಡ್
ಮುನಿಯಪ್ಪ- ರಮೇಶ್ಕುಮಾರ್ ಬಣದ ಮಧ್ಯೆ ಟಿಕೆಟ್ಗಾಗಿ ಭಾರೀ ಪೈಪೋಟಿ
ರಾಜ್ಯದಲ್ಲಿ 27 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿರುವ ಕಾಂಗ್ರೆಸ್ ಹೈಕಮಾಂಡ್
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ 3 ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಾಕಿ ಉಳಿದಿದ್ದ 4 ಕ್ಷೇತ್ರಗಳ ಪೈಕಿ ಚಾಮರಾಜನಗರ, ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ್ದು, ಬಣ ಬಂಡಾಯದ ಕಾರಣ ಕೋಲಾರ ಕ್ಷೇತ್ರವನ್ನ ಹೈಕಮಾಂಡ್ ವೇಟಿಂಗ್ ಲಿಸ್ಟ್ನಲ್ಲಿಟ್ಟಿದೆ.
ಈ ಬಾರಿಯ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಕರ್ನಾಟಕದ 3ನೇ ಪಟ್ಟಿ ಬಿಡುಗಡೆ ಮಾಡಿದೆ. ನಾಲ್ಕು ಕ್ಷೇತ್ರಗಳನ್ನ ಬಾಕಿ ಉಳಿಸಿಕೊಂಡಿದ್ದ ಕಾಂಗ್ರೆಸ್ ಸದ್ಯ 3 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಿದೆ. ಬಳ್ಳಾರಿ, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿದೆ. ಆದ್ರೆ ಕೋಲಾರದಲ್ಲಿ ಬಂಡಾಯ ಶಮನವಾಗದ ಕಾರಣ ಪೆಂಡಿಂಗ್ ಇರಿಸಲಾಗಿದೆ.
ಬಂಡಾಯ ಕಾರಣಕ್ಕೆ ಕೋಲಾರ ಕ್ಷೇತ್ರ ಪೆಂಡಿಂಗ್!
ನಿರೀಕ್ಷೆಯಂತೆ ಬಳ್ಳಾರಿ ಲೋಕಸಭಾ ಟಿಕೆಟ್ ಸಂಡೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ತುಕರಾಂ ಅವರಿಗೆ ನೀಡಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಸಿದ್ದರಾಮಯ್ಯನವರ ಆಪ್ತ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ಬೋಸ್ಗೆ ಮಣೆ ಹಾಕಲಾಗಿದೆ. ಇನ್ನೋರ್ವ ಸಿಎಂ ಆಪ್ತ ಮಾಜಿ ಸಚಿವ ಎಂ.ಆರ್.ಸೀತಾರಾಂ ಪುತ್ರ ರಕ್ಷಾರಾಮಯ್ಯಗೆ ಚಿಕ್ಕಬಳ್ಳಾಪುರ ಟಿಕೆಟ್ ನೀಡಲಾಗಿದೆ.
ಟಿಕೆಟ್ ಆಸೆಯಲ್ಲಿದ್ದ ಮಾಜಿ ಸಿಎಂ ಮೊಯ್ಲಿಗೆ ಮುಖಭಂಗ!
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಭಾರೀ ಕಗ್ಗಂಟಾಗಿತ್ತು.. ಮಾಜಿ ಸಿಎಂ ಮೊಯ್ಲಿ, ಮಾಜಿ ಸಚಿವ ಶಿವಶಂಕರರೆಡ್ಡಿ, ಯುವ ಕಾಂಗ್ರೆಸ್ನ ರಕ್ಷಾ ರಾಮಯ್ಯ ನಡುವೆ ತೀವ್ರ ಪೈಪೋಟಿ ಇತ್ತು. ಸ್ಥಳೀಯ ನಾಯಕರ ವಿರೋಧದ ನಡುವೆ ಸಿಎಂ ಆಶೀರ್ವಾದ, ಹೈಕಮಾಂಡ್ ಅಂತಿಮವಾಗಿ ರಕ್ಷಾ ರಾಮಯ್ಯಗೆ ಮಣೆಹಾಕಿದೆ. ಇದರಿಂದ ಮಾಜಿ ಸಿಎಂ ವೀರಪ್ಪ ಮೊಯ್ಲಿಗೆ ಮುಖಭಂಗವಾಗಿದೆ.
ಇಬ್ಬರ ನಡುವೆ ಮೂರನೇ ವ್ಯಕ್ತಿಗೆ ಟಿಕೆಟ್ ಜಾಕ್ಪಾಟ್!
ಇನ್ನು, ಕೋಲಾರ ಟಿಕೆಟ್ ಕಾಂಗ್ರೆಸ್ನಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಸಚಿವ ಮುನಿಯಪ್ಪ ಮತ್ತು ರಮೇಶ್ಕುಮಾರ್ ಬಣದ ಮಧ್ಯೆ ಟಿಕೆಟ್ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಇದರ ಮಧ್ಯೆ ಮುನಿಯಪ್ಪನವರ ಅಳಿಯ ಚಿಕ್ಕಪೆದ್ದಣ್ಣಗೆ ಕೋಲಾರ ಟಿಕೆಟ್ ಅಂತಿಮವಾಗಿದೆ ಎನ್ನುವ ಸುದ್ದಿ ಬಳಿಕ ರಾಜೀನಾಮೆ ಪ್ರಹಸನಕ್ಕೂ ರಾಜ್ಯ ರಾಜಕೀಯ ಸಾಕ್ಷಿ ಆಯ್ತು. ಈ ಎಲ್ಲ ಕಾರಣಕ್ಕೆ ಕೋಲಾರ ಕ್ಷೇತ್ರ ಪೆಂಡಿಂಗ್ ಇರಿಸಲಾಗಿದೆ.
ಇದನ್ನೂ ಓದಿ: ಹಮಾಸ್ ಉಗ್ರರು ಯುವತಿ ನಗ್ನ ಮೆರವಣಿಗೆ ಮಾಡಿದ್ದ ಫೋಟೋಗೆ ಪ್ರಶಸ್ತಿ; ಇಸ್ರೇಲಿಗರ ಭಾರೀ ಆಕ್ರೋಶ
ಒಂದ್ವೇಳೆ ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡಿದ್ರೆ ರಮೇಶ್ಕುಮಾರ್ ಬಣ ಎಲೆಕ್ಷನ್ನಿಂದ ದೂರ ಉಳಿಯುವ ಆತಂಕ ಕಾಂಗ್ರೆಸ್ಗೆ ಕಾಡ್ತಿದೆ. ರಮೇಶ್ಕುಮಾರ್ ಬಣಕ್ಕೆ ಟಿಕೆಟ್ ಕೊಟ್ರೆ, ಮುನಿಯಪ್ಪ ಬಣ ಮುನಿಸಿಕೊಳ್ಳಲಿದೆ. ಹೀಗಾಗಿ ಇಬ್ಬರ ನಡುವೆ 3ನೇ ಅಭ್ಯರ್ಥಿಯ ಹುಡುಕಾಟ ನಡೆಯುತ್ತಿದೆ. ಹೀಗಾಗಿ ಕೋಲಾರ ಟಿಕೆಟ್ ಯಾರಿಗೆ ಅನ್ನೋದು ನಾಮಪತ್ರ ಸಲ್ಲಿಕೆ ಕೊನೆ ದಿನ ಪ್ರಕಟ ಮಾಡುವ ಸಾಧ್ಯತೆಯೂ ಇದೆ.
ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಎಂಬ ಕುತೂಹಲ ಮುಂದುವರೆದಿದೆ.. ಕ್ಷೇತ್ರದಲ್ಲಿ ಬಂಡಾಯ ಹೆಚ್ಚದಾದ ಹಿನ್ನೆಲೆ ಎಡಗೈ ಅಥವಾ ಬಲಗೈ ಸಮುದಾಯದಲ್ಲಿ ಯಾರಿಗೆ ಮಣೆ ಹಾಕೋದು ಅನ್ನೋದೆ ಹೈಮಾಂಡ್ಗೆ ಚಿಂತೆ ಆಗಿದೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ 9ನೇ ಪಟ್ಟಿ ಪ್ರಕಟಿಸಿದೆ.. ಕರ್ನಾಟಕದ ಮೂರು ಕ್ಷೇತ್ರ ಘೋಷಿಸಿದ್ದು, 28 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ