newsfirstkannada.com

ಸೋಲನ್ನು ಅರಗಿಸಿಕೊಳ್ಳದ SRH ಬ್ಯೂಟಿ.. ಕ್ಯಾಮೆರಾಗೆ ಬೆನ್ನು ತೋರಿಸಿ ಕಣ್ಣೀರು ಹಾಕಿದ ಕಾವ್ಯ ಮಾರನ್

Share :

Published May 27, 2024 at 8:30am

    ಶಾರುಖ್​ಗೆ ಖುಷಿಯೋ ಖುಷಿ, ಕಾವ್ಯ ಮಾರನ್​ಗೆ ಕಣ್ಣೀರೋ ಕಣ್ಣೀರು

    IPL ಫೈನಲ್​ ಪಂದ್ಯದಲ್ಲಿ ಸೋಲು ಕಂಡ ಸನ್​ರೈಸರ್ಸ್​ ಹೈದ್ರಾಬಾದ್

    ಕಾವ್ಯ ಮಾರನ್​ರ ನಗು, ಖುಷಿ, ಸಂತಸ ಕಸಿದುಕೊಂಡ ಫೈನಲ್ ಪಂದ್ಯ

ಕೊಲ್ಕತ್ತಾ ನೈಟ್​ ರೈಡರ್ಸ್​​ ತಂಡದ ಬೌಲರ್​​ಗಳು ಪರಾಕ್ರಮದ ಮುಂದೆ ಸನ್​ರೈಸರ್ಸ್ ಹೈದ್ರಾಬಾದ್ ಹೀನಾಯವಾಗಿ ಸೋತು ಹೋಗಿದೆ. ಬಿಗ್​ಸ್ಕೋರ್​ ಕಲೆ ಹಾಕುವಲ್ಲಿ ಎಡವಿದ ಪ್ಯಾಟ್​ ಕಮಿನ್ಸ್​ ಪಡೆ ಐಪಿಎಲ್​ ಟ್ರೋಫಿಯನ್ನು ಬಿಟ್ಟು ಕೊಟ್ಟಿದೆ. ಮೈದಾನದಲ್ಲಿ ಕೆಕೆಆರ್​ ಆಟಗಾರರು ಟ್ರೋಫಿ ಗೆದ್ದು ಸಂಭ್ರಮದಲ್ಲಿ ತೇಲಾಡುತ್ತಿದ್ರೆ, ಇತ್ತ ಸ್ಟೇಡಿಯಂ ಗ್ಯಾಲರಿಯಲ್ಲಿ ಎಸ್​​ಆರ್​ಹೆಚ್​ ಓನರ್​, ಬ್ಯೂಟಿ ಕಾವ್ಯ ಮಾರನ್ ಕ್ಯಾಮೆರಾಗೆ ಬೆನ್ನು ತೋರಿಸಿ ಗಳ, ಗಳನೇ ಅತ್ತಿದ್ದಾರೆ.

ಇದನ್ನೂ ಓದಿ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣಾರ್ಭಟ.. ಬಾಲಕಿ ಸಾವು, ಸಿಡಿಲು ಬಡಿದು ಮಳೆಯಲ್ಲೂ ಹೊತ್ತಿ ಉರಿದ ತೆಂಗಿನ ಮರ

ಹೈದ್ರಾಬಾದ್​ ಆಟಗಾರರು ಸಿಕ್ಸರ್, ಬೌಂಡರಿ ಬಾರಿಸಿದಾಗ, ವಿಕೆಟ್​ ತೆಗೆದಾಗ ಎಲ್ಲರ ಮಧ್ಯೆಯು ಕುಣಿದು ಕುಪ್ಪಳಿಸುತ್ತಿದ್ದ ಕಾವ್ಯ ಮಾರನ್ ನಿನ್ನೆ ಅಕ್ಷರಶಃ ದುಃಖದಲ್ಲಿದ್ದರು. ಕಾವ್ಯ ಮಾರನ್​ರಿಂದ ಆ ನಗು, ಖುಷಿ ಎಲ್ಲ ಮಾಯವಾಗಿ ಹೋಗಿತ್ತು. ಹೈದ್ರಾಬಾದ್ ತಂಡದ ಒಂದೊಂದು ವಿಕೆಟ್​ ಬೀಳುವಾಗಲೂ ಕಾವ್ಯ ಭಾರೀ ಬೇಸರ ವ್ಯಕ್ತಪಡಿಸಿದ್ದಾರೆ. ಆದ್ರೂ ನಿರಂತರವಾಗಿ ಚಪ್ಪಾಳೆ ತಟ್ಟುವ ಮೂಲಕ ತಮ್ಮ ತಂಡಕ್ಕೆ ಪ್ರೋತ್ಸಾಹ ತುಂಬಿದ್ದಾರೆ. ಮುಖದಲ್ಲಿ ಮಾತ್ರ ಕಣ್ಣೀರ ಹನಿಗಳು ಜಿನುಗುತ್ತಲೇ ಇದ್ದವು ಎಂದು ಹೇಳಬಹುದು.

ಇದನ್ನೂ ಓದಿ: ಸಿಲಿಕಾನ್​ ಸಿಟಿಯ ಮಾಲ್, ಗೇಮಿಂಗ್ ಝೋನ್ಸ್​ ಮೇಲೆ ಹದ್ದಿನ ಕಣ್ಣು.. ಖಡಕ್ ಸೂಚನೆ ಕೊಟ್ಟ DCM

 

ಇನ್ನು ಕೊನೆಗೆ ಹೈದ್ರಾಬಾದ್​ ವಿರುದ್ಧ ಕೆಕೆಆರ್​ ಐಪಿಎಲ್​ ಟ್ರೋಫಿ ಗೆದ್ದು ಆಟಗಾರರೆಲ್ಲ ಸೇರಿ ಫುಲ್ ಸೆಲೆಬ್ರೆಷನ್​ ಮಾಡುತ್ತಿದ್ದರು. ಆದ್ರೆ ಗ್ಯಾಲರಿಯಲ್ಲಿ ಎಸ್​​ಆರ್​ಹೆಚ್​ ಓನರ್​ ಕಾವ್ಯ ಮಾರನ್ ಕ್ಯಾಮೆರಾಗೆ ಬೆನ್ನು ತೋರಿಸಿ ಗಳ, ಗಳನೇ ಅತ್ತಿದ್ದಾರೆ. ಎರಡು ಕೈಗಳಿಂದ ಕಣ್ಣೀರನ್ನು ಒರೆಸಿಕೊಂಡಿದ್ದಾರೆ. ಇದು ಮೈದಾನದಲ್ಲಿರುವ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಖತ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ, ಕ್ರಿಕೆಟ್​ ಫ್ಯಾನ್ಸ್​ ಕೂಡ ವಿವಿಧ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ. ​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸೋಲನ್ನು ಅರಗಿಸಿಕೊಳ್ಳದ SRH ಬ್ಯೂಟಿ.. ಕ್ಯಾಮೆರಾಗೆ ಬೆನ್ನು ತೋರಿಸಿ ಕಣ್ಣೀರು ಹಾಕಿದ ಕಾವ್ಯ ಮಾರನ್

https://newsfirstlive.com/wp-content/uploads/2024/05/SRH_KAVYA.jpg

    ಶಾರುಖ್​ಗೆ ಖುಷಿಯೋ ಖುಷಿ, ಕಾವ್ಯ ಮಾರನ್​ಗೆ ಕಣ್ಣೀರೋ ಕಣ್ಣೀರು

    IPL ಫೈನಲ್​ ಪಂದ್ಯದಲ್ಲಿ ಸೋಲು ಕಂಡ ಸನ್​ರೈಸರ್ಸ್​ ಹೈದ್ರಾಬಾದ್

    ಕಾವ್ಯ ಮಾರನ್​ರ ನಗು, ಖುಷಿ, ಸಂತಸ ಕಸಿದುಕೊಂಡ ಫೈನಲ್ ಪಂದ್ಯ

ಕೊಲ್ಕತ್ತಾ ನೈಟ್​ ರೈಡರ್ಸ್​​ ತಂಡದ ಬೌಲರ್​​ಗಳು ಪರಾಕ್ರಮದ ಮುಂದೆ ಸನ್​ರೈಸರ್ಸ್ ಹೈದ್ರಾಬಾದ್ ಹೀನಾಯವಾಗಿ ಸೋತು ಹೋಗಿದೆ. ಬಿಗ್​ಸ್ಕೋರ್​ ಕಲೆ ಹಾಕುವಲ್ಲಿ ಎಡವಿದ ಪ್ಯಾಟ್​ ಕಮಿನ್ಸ್​ ಪಡೆ ಐಪಿಎಲ್​ ಟ್ರೋಫಿಯನ್ನು ಬಿಟ್ಟು ಕೊಟ್ಟಿದೆ. ಮೈದಾನದಲ್ಲಿ ಕೆಕೆಆರ್​ ಆಟಗಾರರು ಟ್ರೋಫಿ ಗೆದ್ದು ಸಂಭ್ರಮದಲ್ಲಿ ತೇಲಾಡುತ್ತಿದ್ರೆ, ಇತ್ತ ಸ್ಟೇಡಿಯಂ ಗ್ಯಾಲರಿಯಲ್ಲಿ ಎಸ್​​ಆರ್​ಹೆಚ್​ ಓನರ್​, ಬ್ಯೂಟಿ ಕಾವ್ಯ ಮಾರನ್ ಕ್ಯಾಮೆರಾಗೆ ಬೆನ್ನು ತೋರಿಸಿ ಗಳ, ಗಳನೇ ಅತ್ತಿದ್ದಾರೆ.

ಇದನ್ನೂ ಓದಿ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣಾರ್ಭಟ.. ಬಾಲಕಿ ಸಾವು, ಸಿಡಿಲು ಬಡಿದು ಮಳೆಯಲ್ಲೂ ಹೊತ್ತಿ ಉರಿದ ತೆಂಗಿನ ಮರ

ಹೈದ್ರಾಬಾದ್​ ಆಟಗಾರರು ಸಿಕ್ಸರ್, ಬೌಂಡರಿ ಬಾರಿಸಿದಾಗ, ವಿಕೆಟ್​ ತೆಗೆದಾಗ ಎಲ್ಲರ ಮಧ್ಯೆಯು ಕುಣಿದು ಕುಪ್ಪಳಿಸುತ್ತಿದ್ದ ಕಾವ್ಯ ಮಾರನ್ ನಿನ್ನೆ ಅಕ್ಷರಶಃ ದುಃಖದಲ್ಲಿದ್ದರು. ಕಾವ್ಯ ಮಾರನ್​ರಿಂದ ಆ ನಗು, ಖುಷಿ ಎಲ್ಲ ಮಾಯವಾಗಿ ಹೋಗಿತ್ತು. ಹೈದ್ರಾಬಾದ್ ತಂಡದ ಒಂದೊಂದು ವಿಕೆಟ್​ ಬೀಳುವಾಗಲೂ ಕಾವ್ಯ ಭಾರೀ ಬೇಸರ ವ್ಯಕ್ತಪಡಿಸಿದ್ದಾರೆ. ಆದ್ರೂ ನಿರಂತರವಾಗಿ ಚಪ್ಪಾಳೆ ತಟ್ಟುವ ಮೂಲಕ ತಮ್ಮ ತಂಡಕ್ಕೆ ಪ್ರೋತ್ಸಾಹ ತುಂಬಿದ್ದಾರೆ. ಮುಖದಲ್ಲಿ ಮಾತ್ರ ಕಣ್ಣೀರ ಹನಿಗಳು ಜಿನುಗುತ್ತಲೇ ಇದ್ದವು ಎಂದು ಹೇಳಬಹುದು.

ಇದನ್ನೂ ಓದಿ: ಸಿಲಿಕಾನ್​ ಸಿಟಿಯ ಮಾಲ್, ಗೇಮಿಂಗ್ ಝೋನ್ಸ್​ ಮೇಲೆ ಹದ್ದಿನ ಕಣ್ಣು.. ಖಡಕ್ ಸೂಚನೆ ಕೊಟ್ಟ DCM

 

ಇನ್ನು ಕೊನೆಗೆ ಹೈದ್ರಾಬಾದ್​ ವಿರುದ್ಧ ಕೆಕೆಆರ್​ ಐಪಿಎಲ್​ ಟ್ರೋಫಿ ಗೆದ್ದು ಆಟಗಾರರೆಲ್ಲ ಸೇರಿ ಫುಲ್ ಸೆಲೆಬ್ರೆಷನ್​ ಮಾಡುತ್ತಿದ್ದರು. ಆದ್ರೆ ಗ್ಯಾಲರಿಯಲ್ಲಿ ಎಸ್​​ಆರ್​ಹೆಚ್​ ಓನರ್​ ಕಾವ್ಯ ಮಾರನ್ ಕ್ಯಾಮೆರಾಗೆ ಬೆನ್ನು ತೋರಿಸಿ ಗಳ, ಗಳನೇ ಅತ್ತಿದ್ದಾರೆ. ಎರಡು ಕೈಗಳಿಂದ ಕಣ್ಣೀರನ್ನು ಒರೆಸಿಕೊಂಡಿದ್ದಾರೆ. ಇದು ಮೈದಾನದಲ್ಲಿರುವ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಖತ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ, ಕ್ರಿಕೆಟ್​ ಫ್ಯಾನ್ಸ್​ ಕೂಡ ವಿವಿಧ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ. ​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More