ಎಸ್ಸಿ ಎಸ್ಟಿ ಒಳಮೀಸಲಾತಿ ಕುರಿತು ಸುಪ್ರೀಂಕೋರ್ಟ್ನಿಂದ ಮಹತ್ವದ ತೀರ್ಪು
ಎಸ್ಸಿ, ಎಸ್ಟಿ ಒಳಮೀಸಲಾತಿ ಸಮಾನತೆ ಉಲ್ಲಂಘಿಸುವುದಿಲ್ಲವೆಂದ ಕೋರ್ಟ್
6-1 ಬಹುಮತದ ಮಹತ್ವದ ತೀರ್ಪುನ ನೀಡಿದ ಘನವೆತ್ತ ಸರ್ವೋಚ್ಛ ನ್ಯಾಯಾಲಯ
ನವದೆಹಲಿ: ಎಸ್ಸಿ ಎಸ್ಟಿ ಒಳಮೀಸಲಾತಿ ಕುರಿತು ಘನವೆತ್ತ ಸರ್ವೋಚ್ಛ ನ್ಯಾಯಾಲಯ ಬಹುಮತದ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ. ಎಸ್ಸಿ ಎಸ್ಟಿ ಒಳಮೀಸಲಾತಿ, ಉಪವರ್ಗೀಕರಣ ಕಾನೂನುಬದ್ಧ ಎಂದು ಸುಪ್ರೀಂಕೋರ್ಟ್ ತೀರ್ಪು ಹೊರಡಿಸಿದೆ.
ಸುಪ್ರೀಂಕೋರ್ಟ್ನಿಂದ 6-1ರ ಮಹತ್ವದ ತೀರ್ಪು ನೀಡಿದೆ. ಸಿಜೆಐ ಚಂದ್ರಚೂಢ ನೇತೃತ್ವದ ಪೀಠದಿಂದ ಮಹತ್ವದ ತೀರ್ಪು ಬಂದಿದ್ದು. ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿಯವರು ಮಾತ್ರ ಭಿನ್ನ ತೀರ್ಪು ನೀಡಿದ್ದು, ಉಳಿದ ಆರು ನ್ಯಾಯಮೂರ್ತಿಗಳು ಒಳಮೀಸಲಾತಿ ಸಮಾನತೆ ಉಲ್ಲಂಘಿಸುವುದಿಲ್ಲ ಎಂದು ತೀರ್ಪು ನೀಡಿದೆ.
ಇದನ್ನೂ ಓದಿ: ಬಿಜೆಪಿ ಪಾದಯಾತ್ರೆಯಲ್ಲಿ ಭಾಗಿಯಾಗಲು ರೆಡಿ.. ಆದ್ರೆ ಒಂದು ಕಂಡೀಷನ್; ಕುಮಾರಸ್ವಾಮಿ ಷರತ್ತು ಏನು?
ಕರ್ನಾಟಕದಲ್ಲಿಯೂ ಈ ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರವಿದ್ದಾಗ ಎಸ್ಸಿ ಎಸ್ಟಿಗೆ ಒಳಮೀಸಲಾತಿ ಘೋಷಿಸಲಾಗಿತ್ತು. ಎಸ್ಸಿ ಎಸ್ಟಿ ಒಳಮೀಸಲಾತಿ ವಿಚಾರವನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕ್ರಿಮೀಲೇಯರ್ ವರ್ಗವನ್ನು ಎಸ್ಸಿ ಎಸ್ಟಿ ಮೀಸಲಾತಿಯಿಂದ ಹೊರಗಿಡಬೇಕು. ರಾಜ್ಯ ಸರ್ಕಾರಗಳು ಕ್ರಿಮೀಲೇಯರ್ ವರ್ಗಗಳನ್ನು ಗುರುತಿಸಲು ನೀತಿ ರೂಪಿಸಬೇಕು, ಸಮಾನತೆ ಸಾಧಿಸಲು ಇರುವುದು ಇದೊಂದೇ ಮಾರ್ಗ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠ, ಕ್ರಿಮೀಲೇಯರ್ ಓಬಿಸಿಗೆ ಅನ್ವಯವಾಗುತ್ತೆ ಎಸ್ಸಿ ಎಸ್ಟಿಗೂ ಅನ್ವಯವಾಗುತ್ತೆ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ. ಸಾಂವಿಧಾನಿಕ ಪೀಠದಲ್ಲಿ ಇದ್ದ ಮತ್ತೊಬ್ಬ ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಅವರು, ಮೀಸಲಾತಿಯು ಮೊದಲ ತಲೆಮಾರಿಗೆ ಮಾತ್ರ ಮೀಸಲಾಗಬೇಕು. ಮೊದಲ ತಲೆಮಾರು ಮೀಸಲಾತಿ ಪಡೆದು ಉನ್ನತ ಹಂತಕ್ಕೆ ಹೋದರೆ, ಎರಡನೇ ತಲೆಮಾರಿಗೆ ಮೀಸಲಾತಿ ಪಡೆಯುವ ಹಕ್ಕಿಲ್ಲ ಎಂದು ಎಂದು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ಎಸ್ಸಿ ಎಸ್ಟಿ ಸಮುದಾಯದ ಕ್ರಿಮೀಲೇಯರ್ ಗುರುತಿಸುವುದು ಸರ್ಕಾರಗಳ ಸಂವಿಧಾನಬದ್ಧ ಕರ್ತವ್ಯ ಎಂದು ಸುಪ್ರೀಂಕೋರ್ಟ್ನ 6 ನ್ಯಾಯಮೂರ್ತಿಗಳು ಎಸ್ಸಿ ಎಸ್ಟಿ ಒಳಮೀಸಲಾತಿಯನ್ನು ಎತ್ತಿಹಿಡಿದಿದ್ದಾರೆ.
ಇದನ್ನೂ ಓದಿ: ‘ಮನೆ ನೋಡಿಕೊಳ್ಳೋ ಹೆಂಡತಿಗೆ ಅಕೌಂಟ್ ಮಾಡಿಸಿ ATM ಕೊಡಬೇಕು’- ಗಂಡಂದಿರಿಗೆ ಸುಪ್ರೀಂಕೋರ್ಟ್ ಶಾಕ್!
ಉಪ ವರ್ಗೀಕರಣಕ್ಕೆ ಅಸ್ತು ಎಂದ ನ್ಯಾಯಾಲಯ
ತನ್ನ ಮಹತ್ವದ ತೀರ್ಪಿನಲ್ಲಿ ಸರ್ವೋಚ್ಛ ನ್ಯಾಯಾಲಯ ಎಸ್ಸಿ, ಎಸ್ಟಿ ಉಪ ವರ್ಗೀಕರಣಕ್ಕೆ ಅಸ್ತು ಎಂದಿದೆ. ರಾಜ್ಯಗಳಿಗೆ ಉಪವರ್ಗೀಕರಣ ಮಾಡಲು ಅಧಿಕಾರವಿದೆಯೆಂದು ಸಿಜೆಐ ಚಂದ್ರಚೂಢ ನೇತೃತ್ವದ ನ್ಯಾಯಪೀಠ ಹೇಳಿದೆ. ಇದರ ಜೊತೆಗೆ ಕೆನೆಪದರ ಗುರುತಿಸುವುದು ಬಹಳ ಮುಖ್ಯ ಎಂದು ಕೂಡ ಸುಪ್ರೀಂಕೋರ್ಟ್ ಹೇಳಿದೆ. ಸದ್ಯ ವಾರ್ಷಿಕವಾಗಿ 8 ಲಕ್ಷ ಆದಾಯ ಗಳಿಸುವ ಕುಟುಂಬ ಕೆನೆಪದರ ಕುಟುಂಬ ಎಂದು ಕೇಂದ್ರ ಸರ್ಕಾರದಿಂದ ಪರಿಗಣನೆ ಮಾಡಲಾಗುತ್ತದೆ. ಈ ಮಿತಿಯನ್ನು ಹೆಚ್ಚಿಸಬೇಕು ಎಂದು ಒಬಿಸಿ ವರ್ಗವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದೆ. ದೇಶದಲ್ಲಿ ಹಣದುಬ್ಬರ ಹಾಗೂ ಸರ್ಕಾರಿ ಉದ್ಯೋಗಿಗಳ ಸಂಬಳ ಹೆಚ್ಚಳದ ಕಾರಣದಿಂದಾಗಿ ಕೆನೆಪದರದ ಆದಾಯ ಹೆಚ್ಚಿಸಬೇಕು ಎಂದು ಆಗ್ರಹ ಕೇಳಿಬರುತ್ತಿದೆ. ಆದ್ರೆ ಸರ್ಕಾರ ಈ ಬಗ್ಗೆ ಇಲ್ಲಿಯವರೆಗೂ ಯಾವ ತೀರ್ಮಾನವನ್ನು ತೆಗೆದುಕೊಂಡಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಎಸ್ಸಿ ಎಸ್ಟಿ ಒಳಮೀಸಲಾತಿ ಕುರಿತು ಸುಪ್ರೀಂಕೋರ್ಟ್ನಿಂದ ಮಹತ್ವದ ತೀರ್ಪು
ಎಸ್ಸಿ, ಎಸ್ಟಿ ಒಳಮೀಸಲಾತಿ ಸಮಾನತೆ ಉಲ್ಲಂಘಿಸುವುದಿಲ್ಲವೆಂದ ಕೋರ್ಟ್
6-1 ಬಹುಮತದ ಮಹತ್ವದ ತೀರ್ಪುನ ನೀಡಿದ ಘನವೆತ್ತ ಸರ್ವೋಚ್ಛ ನ್ಯಾಯಾಲಯ
ನವದೆಹಲಿ: ಎಸ್ಸಿ ಎಸ್ಟಿ ಒಳಮೀಸಲಾತಿ ಕುರಿತು ಘನವೆತ್ತ ಸರ್ವೋಚ್ಛ ನ್ಯಾಯಾಲಯ ಬಹುಮತದ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ. ಎಸ್ಸಿ ಎಸ್ಟಿ ಒಳಮೀಸಲಾತಿ, ಉಪವರ್ಗೀಕರಣ ಕಾನೂನುಬದ್ಧ ಎಂದು ಸುಪ್ರೀಂಕೋರ್ಟ್ ತೀರ್ಪು ಹೊರಡಿಸಿದೆ.
ಸುಪ್ರೀಂಕೋರ್ಟ್ನಿಂದ 6-1ರ ಮಹತ್ವದ ತೀರ್ಪು ನೀಡಿದೆ. ಸಿಜೆಐ ಚಂದ್ರಚೂಢ ನೇತೃತ್ವದ ಪೀಠದಿಂದ ಮಹತ್ವದ ತೀರ್ಪು ಬಂದಿದ್ದು. ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿಯವರು ಮಾತ್ರ ಭಿನ್ನ ತೀರ್ಪು ನೀಡಿದ್ದು, ಉಳಿದ ಆರು ನ್ಯಾಯಮೂರ್ತಿಗಳು ಒಳಮೀಸಲಾತಿ ಸಮಾನತೆ ಉಲ್ಲಂಘಿಸುವುದಿಲ್ಲ ಎಂದು ತೀರ್ಪು ನೀಡಿದೆ.
ಇದನ್ನೂ ಓದಿ: ಬಿಜೆಪಿ ಪಾದಯಾತ್ರೆಯಲ್ಲಿ ಭಾಗಿಯಾಗಲು ರೆಡಿ.. ಆದ್ರೆ ಒಂದು ಕಂಡೀಷನ್; ಕುಮಾರಸ್ವಾಮಿ ಷರತ್ತು ಏನು?
ಕರ್ನಾಟಕದಲ್ಲಿಯೂ ಈ ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರವಿದ್ದಾಗ ಎಸ್ಸಿ ಎಸ್ಟಿಗೆ ಒಳಮೀಸಲಾತಿ ಘೋಷಿಸಲಾಗಿತ್ತು. ಎಸ್ಸಿ ಎಸ್ಟಿ ಒಳಮೀಸಲಾತಿ ವಿಚಾರವನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕ್ರಿಮೀಲೇಯರ್ ವರ್ಗವನ್ನು ಎಸ್ಸಿ ಎಸ್ಟಿ ಮೀಸಲಾತಿಯಿಂದ ಹೊರಗಿಡಬೇಕು. ರಾಜ್ಯ ಸರ್ಕಾರಗಳು ಕ್ರಿಮೀಲೇಯರ್ ವರ್ಗಗಳನ್ನು ಗುರುತಿಸಲು ನೀತಿ ರೂಪಿಸಬೇಕು, ಸಮಾನತೆ ಸಾಧಿಸಲು ಇರುವುದು ಇದೊಂದೇ ಮಾರ್ಗ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠ, ಕ್ರಿಮೀಲೇಯರ್ ಓಬಿಸಿಗೆ ಅನ್ವಯವಾಗುತ್ತೆ ಎಸ್ಸಿ ಎಸ್ಟಿಗೂ ಅನ್ವಯವಾಗುತ್ತೆ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ. ಸಾಂವಿಧಾನಿಕ ಪೀಠದಲ್ಲಿ ಇದ್ದ ಮತ್ತೊಬ್ಬ ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಅವರು, ಮೀಸಲಾತಿಯು ಮೊದಲ ತಲೆಮಾರಿಗೆ ಮಾತ್ರ ಮೀಸಲಾಗಬೇಕು. ಮೊದಲ ತಲೆಮಾರು ಮೀಸಲಾತಿ ಪಡೆದು ಉನ್ನತ ಹಂತಕ್ಕೆ ಹೋದರೆ, ಎರಡನೇ ತಲೆಮಾರಿಗೆ ಮೀಸಲಾತಿ ಪಡೆಯುವ ಹಕ್ಕಿಲ್ಲ ಎಂದು ಎಂದು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ಎಸ್ಸಿ ಎಸ್ಟಿ ಸಮುದಾಯದ ಕ್ರಿಮೀಲೇಯರ್ ಗುರುತಿಸುವುದು ಸರ್ಕಾರಗಳ ಸಂವಿಧಾನಬದ್ಧ ಕರ್ತವ್ಯ ಎಂದು ಸುಪ್ರೀಂಕೋರ್ಟ್ನ 6 ನ್ಯಾಯಮೂರ್ತಿಗಳು ಎಸ್ಸಿ ಎಸ್ಟಿ ಒಳಮೀಸಲಾತಿಯನ್ನು ಎತ್ತಿಹಿಡಿದಿದ್ದಾರೆ.
ಇದನ್ನೂ ಓದಿ: ‘ಮನೆ ನೋಡಿಕೊಳ್ಳೋ ಹೆಂಡತಿಗೆ ಅಕೌಂಟ್ ಮಾಡಿಸಿ ATM ಕೊಡಬೇಕು’- ಗಂಡಂದಿರಿಗೆ ಸುಪ್ರೀಂಕೋರ್ಟ್ ಶಾಕ್!
ಉಪ ವರ್ಗೀಕರಣಕ್ಕೆ ಅಸ್ತು ಎಂದ ನ್ಯಾಯಾಲಯ
ತನ್ನ ಮಹತ್ವದ ತೀರ್ಪಿನಲ್ಲಿ ಸರ್ವೋಚ್ಛ ನ್ಯಾಯಾಲಯ ಎಸ್ಸಿ, ಎಸ್ಟಿ ಉಪ ವರ್ಗೀಕರಣಕ್ಕೆ ಅಸ್ತು ಎಂದಿದೆ. ರಾಜ್ಯಗಳಿಗೆ ಉಪವರ್ಗೀಕರಣ ಮಾಡಲು ಅಧಿಕಾರವಿದೆಯೆಂದು ಸಿಜೆಐ ಚಂದ್ರಚೂಢ ನೇತೃತ್ವದ ನ್ಯಾಯಪೀಠ ಹೇಳಿದೆ. ಇದರ ಜೊತೆಗೆ ಕೆನೆಪದರ ಗುರುತಿಸುವುದು ಬಹಳ ಮುಖ್ಯ ಎಂದು ಕೂಡ ಸುಪ್ರೀಂಕೋರ್ಟ್ ಹೇಳಿದೆ. ಸದ್ಯ ವಾರ್ಷಿಕವಾಗಿ 8 ಲಕ್ಷ ಆದಾಯ ಗಳಿಸುವ ಕುಟುಂಬ ಕೆನೆಪದರ ಕುಟುಂಬ ಎಂದು ಕೇಂದ್ರ ಸರ್ಕಾರದಿಂದ ಪರಿಗಣನೆ ಮಾಡಲಾಗುತ್ತದೆ. ಈ ಮಿತಿಯನ್ನು ಹೆಚ್ಚಿಸಬೇಕು ಎಂದು ಒಬಿಸಿ ವರ್ಗವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದೆ. ದೇಶದಲ್ಲಿ ಹಣದುಬ್ಬರ ಹಾಗೂ ಸರ್ಕಾರಿ ಉದ್ಯೋಗಿಗಳ ಸಂಬಳ ಹೆಚ್ಚಳದ ಕಾರಣದಿಂದಾಗಿ ಕೆನೆಪದರದ ಆದಾಯ ಹೆಚ್ಚಿಸಬೇಕು ಎಂದು ಆಗ್ರಹ ಕೇಳಿಬರುತ್ತಿದೆ. ಆದ್ರೆ ಸರ್ಕಾರ ಈ ಬಗ್ಗೆ ಇಲ್ಲಿಯವರೆಗೂ ಯಾವ ತೀರ್ಮಾನವನ್ನು ತೆಗೆದುಕೊಂಡಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ