ಪೋಲಿಸರ ನೋಟಿಸ್ನಿಂದ ಅಭಿಷೇಕ್ಗೆ ಎದುರಾಗಿತ್ತು ಜೈಲಿನ ಭೀತಿ
ಸಿಕ್ಸರ್ ಕಿಂಗ್ ತಯಾರಿಸಿದ ಯಂಗ್ ಮಿಷನ್ ಗನ್ ಅಭಿಷೇಕ್ ಶರ್ಮಾ!
ಕುಸಿದಿದ್ದ ಯುವ ಆಟಗಾರನಲ್ಲಿ ಹೋರಾಟದ ಕಿಚ್ಚು ಹಚ್ಚಿದ್ದು ಯುವಿ
ಪ್ರತಿ ಐಪಿಎಲ್ ಸೀಸನ್ನಲ್ಲಿ ಓರ್ವ ಸ್ಟಾರ್ ಉದಯಿಸ್ತಾನೆ. ಭವಿಷ್ಯದ ಭರವಸೆ ಮೂಡಿಸ್ತಾನೆ. ಅಂಥಹ ಆಟಗಾರ 2024ರಲ್ಲೂ ಹುಟ್ಟಿಕೊಂಡಿದ್ದಾನೆ. ಆತನೇ ಸಿಕ್ಸರ್ಗಳ ಸೂಪರ್ ಸ್ಟ್ರೈಕರ್ ಅಭಿಷೇಕ್ ಶರ್ಮಾ. ಈ ಸೀಸನ್ನಲ್ಲಿ ಈ ಯಂಗ್ ಬ್ಯಾಟರ್ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ದಾರೆ. ಆ ಪರ್ಫಾಮೆನ್ಸ್ನಷ್ಟೇ ರೋಚಕ ಈತನ ಸಕ್ಸಸ್ ಸ್ಟೋರಿ.
ಅಭಿಷೇಕ್ ಶರ್ಮಾ ಪಕ್ಕಾ ಮಾಸ್.. ದಡಂ ದಶಗುಣಂ ಈತನ ಮೂಲ ಮಂತ್ರ. ಕ್ರೀಸ್ನಲ್ಲಿ ಇರುವಷ್ಟು ಹೊತ್ತು ಸಿಕ್ಸರ್ಗಳ ಅಭಿಷೇಕ ಫಿಕ್ಸ್. ಪಕ್ಕಾ ಎಂಟಟೈನರ್. ವಿಶ್ವ ದರ್ಜೆಯ ಬೌಲರ್ಗಳನ್ನೇ ಚಿಂದಿ ಉಡಾಯಿಸಿರುವ ಯಂಗ್ ಮಿಸೈಲ್.. ಪ್ರಸಕ್ತ ಐಪಿಎಲ್ನ ಸೆನ್ಸೇಷನ್. ನಿನ್ನೆ ಫೈನಲ್ ಪಂದ್ಯದಲ್ಲಿ ಸದ್ದು ಮಾಡಲಿಲ್ಲ. ಅದನ್ನ ಹೊರತುಪಡಿಸಿದ್ರೆ ಟೂರ್ನಿಯುದ್ಧಕ್ಕೂ ಅಬ್ಬರಿಸಿ ಬೊಬ್ಬಿರಿದ್ರು. ಆದರೆ ಐಪಿಎಲ್ ಆರಂಭಕ್ಕೂ ಮುನ್ನ ಈತನೇ ಜೀವನವೇ ದಿಕ್ಕು ತಪ್ಪಿತ್ತು.
ಸೂರತ್ ಮಾಡೆಲ್ ಆತ್ಮಹತ್ಯೆ ಕೇಸ್ನಲ್ಲಿ ಹೆಸರು ತಳಕು!
ಜಸ್ಟ್ ಎರಡೇ 2 ತಿಂಗಳ ಹಿಂದೆ ಅಭಿಷೇಕ್, ಜೀವನ ಅಂದುಕೊಂಡಂತೆ ಇರಲಿಲ್ಲ. ಆಗಷ್ಟೇ ಐಪಿಎಲ್ ಪ್ರಿಪರೇಷನ್ನಲ್ಲಿ ಆರಂಭಿಸಿದ್ದ ಅಭಿಷೇಕ್ ಮೇಲೆ ದೊಡ್ಡ ವಿವಾದವೇ ಕೇಳಿ ಬಂದಿತ್ತು. ಸೂರತ್ ಮೂಲದ ಮಾಡೆಲ್ ತನಿಯಾ ಸಿಂಗ್, ಆತ್ಮಹತ್ಯೆಯಲ್ಲಿ ಅಭಿಷೇಕ್ ಹೆಸರು ತಳಕು ಹಾಕಿಕೊಂಡಿತ್ತು. ಇದಕ್ಕೆಲ್ಲ ಕಾರಣವಾಗಿದ್ದು ಆ ಒಂದು ಲಾಸ್ಟ್ ಕಾಲ್. ಆ ಮಾಡೆಲ್ ಆತ್ಮಹತ್ಯೆಗೂ ಮುನ್ನ ಅಭಿಷೇಕ್ ಶರ್ಮಾಗೆ ಕಾಲ್ ಮಾಡಿದ್ರು. ಈ ಒಂದು ಕಾಲ್ ಇದು ಅಭಿಷೇಕ್ ಪಾಲಿಗೆ ಮುಗ್ಗಲ ಮುಳ್ಳಾಗಿತ್ತು. ಇದಕ್ಕೆ ಪೋಲಿಸರು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೂಡ ನೀಡಿದ್ರು. ಇದ್ರಿಂದಾಗಿ ಸೆರವಾಸದ ಭೀತಿ ಎದುರಾಗಿತ್ತು.
ಕುಗ್ಗಿದ್ದ ಅಭಿಷೇಕ್ ಐಪಿಎಲ್ನಲ್ಲಿ ಪುಟಿದೆದ್ದಿದ್ದೇ ರೋಚಕ
ಫ್ಲಾಶ್ಬ್ಯಾಕ್ ಕಥೆ ಏನಪ್ಪಾ ಅಂದ್ರೆ, ತನಿಯಾ ಸಿಂಗ್ ಹಾಗೂ ಅಭಿಷೇಕ್ ಶರ್ಮಾ 1 ವರ್ಷಗಳ ಕಾಲ ರಿಲೇಷನ್ಶಿಪ್ನಲ್ಲಿದ್ರು. ಆದ್ರೆ, 2024ರ ಜನವರಿಯಲ್ಲಿ ಇಬ್ಬರ ನಡುವಿನ ವೈಮನಸ್ಸು, ಬ್ರೇಕ್ ಆಪ್ಗೆ ದಾರಿ ಮಾಡಿಕೊಟ್ಟಿತ್ತು. ಆದ್ರೆ, ತನಿಯಾ ಮಾತ್ರ, ಅಭಿಷೇಕ್ ಶರ್ಮಾಗೆ ಪದೇ ಪದೇ ಕಾಲ್ ಹಾಗೂ ಮಸೇಜ್ ಮಾಡುತ್ತಲೇ ಇದ್ದರು. ಅಂತರ ಕಾಯ್ದುಕೊಂಡಿದ್ದ ಅಭಿಷೇಕ್, ಐಪಿಎಲ್ ಪ್ರಿಪರೇಷನ್ನಲ್ಲಿ ತಲ್ಲೀನರಾದ್ರು. ಮನನೊಂದಿದ್ದ ತನಿಯಾ, ಫೆಬ್ರವರಿ 19ರಂದು ಆತ್ಮಹತ್ಯಗೆ ಶರಣಾಗಿದ್ರು. ಆ ನಿರ್ಧಾರ ತೆಗೆದುಕೊಳ್ಳೋಕೂ ಮುನ್ನ ಮತ್ತೆ ಅಭಿಷೇಕ್ಗೆ ಕರೆ ಮಾಡಿದ್ರು.
ಇದನ್ನೂ ಓದಿ: ಪುಣೆ ಪೋರ್ಶೆ ಕಾರು ಆಕ್ಸಿಡೆಂಟ್ ಕೇಸ್ಗೆ ಬಿಗ್ ಟ್ವಿಸ್ಟ್.. ಇಬ್ಬರು ವೈದ್ಯರು ಅರೆಸ್ಟ್; ಯಾಕೆ?
ಪರಿಣಾಮ ಪ್ರೇಯಸಿಯ ಸೂಸೈಡ್ ಕೇಸ್ನಲ್ಲಿ ಸಿಲುಕಿಕೊಂಡ ಅಭಿಷೇಕ್, ಆಂತರಿಕವಾಗಿ ಕುಗ್ಗಿ ಹೋಗಿದ್ರು. ಈತನ ಕರಿಯರ್ಗೆ ಫುಲ್ ಸ್ಟಾಪ್ ಬಿತ್ತು ಅಂತಾನೇ ಹಲವರು ವ್ಯಾಖ್ಯಾನಿಸಿದ್ರು. ಆದ್ರೆ, ಅಂತಿಮವಾಗಿ ತನಿಖೆಯಲ್ಲಿ ನಿರಪರಾಧಿ ಎಂದು ಸಾಬೀತಾಯ್ತು. ಬಿಗ್ ರಿಲೀಫ್ ಸಿಕ್ಕ ಮೇಲೆ ಅಭಿಶೇಕ್ ಕಂಪ್ಲೀಟ್ ಬದಲಾದ್ರು.
ಟ್ರಾವಿಸ್ ಅಲ್ಲ.. ಅಭಿಷೇಕ್ ಸಕ್ಸಸ್ ಗುಟ್ಟು ಯುವರಾಜ್..!
ಐಪಿಎಲ್ ಆರಂಭಕ್ಕೂ ಮುನ್ನ ವೈಯಕ್ತಿಕ ಜೀವನದಲ್ಲಿ ಬಿರುಗಾಳಿಯೇ ಎದ್ದಿತ್ತು. ದುರಾದೃಷ್ಟ ಬೆನ್ನುಬಿದ್ದಿತ್ತು. ಆತ್ಮಹತ್ಯೆಯ ಕೇಸ್, ಅಭಿಷೇಕ್ ಕರಿಯರ್ ಮೇಲೆಯೇ ಕಾರ್ಮೋಡ ಕವಿಯುವಂತೆ ಮಾಡಿತ್ತು. ಯುವ ಆಟಗಾರ ಕುಸಿದು ಹೋಗಿದ್ದ. ಆದ್ರೆ, ಐಪಿಎಲ್ನಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ. ಸನ್ ರೈಸರ್ಸ್ ತಂಡದ ಮ್ಯಾಚ್ ವಿನ್ನರ್ ಎನಿಸಿಕೊಂಡ ಅಭಿಷೇಕ್, ನಯಾ ಸೆನ್ಸೇಷನ್ ಆಗಿ ಮಾರ್ಪಟ್ಟರು. ಇದಕ್ಕೆಲ್ಲ ಜೊತೆಗಾರ ಕಾರಣ ಟ್ರಾವಿಸ್ ಹೆಡ್ ಎನ್ನಲಾಗ್ತಿದೆ. ಆದ್ರೆ, ಈತನ ಸಿಕ್ಸರ್ಗಳ ಹಿಂದಿನ ಸಿಕ್ರೇಟ್ ಮಾಜಿ ಆಟಗಾರ ಯುವರಾಜ್ ಸಿಂಗ್.
ಇದನ್ನೂ ಓದಿ: IPL ಫೈನಲ್ ಮ್ಯಾಚ್ನಲ್ಲಿ ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡಿದ್ರಾ ನಟ ಸೋನ್ ಸೂದ್..?
ಬ್ಯಾಟಿಂಗ್ನಲ್ಲಿ ಕೆಲ ಟೆಕ್ನಿಕಲ್ ಚೇಂಜ್
ಐಪಿಎಲ್ನಲ್ಲಿ ಅಭಿಶೇಕ್ ಶರ್ಮಾ ಧೂಳ್ ಎಬ್ಬಿಸಲು ಕಾರಣ ಮೆಂಟರ್, ಗುರು ಯುವರಾಜ್ ಸಿಂಗ್ ನೀಡಿದ ಸಲಹೆಗಳೇ ಆಗಿವೆ. ಅಭಿಷೇಕ್ ಬ್ಯಾಟಿಂಗ್ ಅನ್ನ ಹತ್ತಿರದಿಂದ ಗಮನಿಸಿದ್ದ ಯುವರಾಜ್, ಬ್ಯಾಟಿಂಗ್ನಲ್ಲಿ ಕೆಲ ಟೆಕ್ನಿಕಲ್ ಚೇಂಜ್ ಮಾಡಿದ್ರು. ಜೊತೆಗೆ ಕುಸಿದು ಹೋಗಿದ್ದ ಯುವ ಆಟಗಾರನಲ್ಲಿ ಹೋರಾಟದ ಕಿಚ್ಚು ತುಂಬಿದ್ರು. ಇದು ಮುಷ್ತಾಕ್ ಆಲಿ ಹಾಗೂ ವಿಜಯ್ ಹಜಾರೆಯಲ್ಲಿ ವರ್ಕೌಟ್ ಆಗಿತ್ತು. ಎಮರ್ಜಿಂಗ್ ಏಷ್ಯಾಕಪ್ನಲ್ಲೂ ಅಬ್ಬರಿಸಿದ್ರು. ಇದೀಗ ಪ್ರಸಕ್ತ ಐಪಿಎಲ್ನಲ್ಲಿ ಯುವಿ ಪಾಠದ ನೆರವಿನಿಂದ ಘರ್ಜಿಸಿದ್ರು.
ಇದನ್ನೂ ಓದಿ: KKRTC ಬಸ್- ಬೈಕ್ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಉಸಿರು ಚೆಲ್ಲಿದ ಮೂವರು ಯುವಕರು
ಅಭಿಷೇಕ್ ಶರ್ಮಾಗೀಗ 23 ವರ್ಷ. ಈ ಚಿಕ್ಕ ವಯಸ್ಸಿನಲ್ಲಿ, ಜೀವನದಲ್ಲಿ ಎದುರಾದ ದೊಡ್ಡ ಯುದ್ಧವನ್ನ, ಗೆದ್ದು ಬಂದ ಅಭಿಷೇಕ್ ಶರ್ಮಾ, ಆನ್ಫೀಲ್ಡ್ನಲ್ಲೂ ತನ್ನ ಟ್ಯಾಲೆಂಟ್ ನಿರೂಪಿಸಿದ್ದಾರೆ. ಬಿದ್ದಾಗ ಕುಗ್ಗದೆ ಮುನ್ನುಗ್ಗಿ ಯಶಸ್ಸು ಕಂಡಿರೋ ಈ ಯಂಗ್ ಬ್ಯಾಟರ್ ಕಥೆ ಯುವ ಆಟಗಾರರಿಗೆ ನಿಜಕ್ಕೂ ಸ್ಪೂರ್ತಿಯ ಪಾಠ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಪೋಲಿಸರ ನೋಟಿಸ್ನಿಂದ ಅಭಿಷೇಕ್ಗೆ ಎದುರಾಗಿತ್ತು ಜೈಲಿನ ಭೀತಿ
ಸಿಕ್ಸರ್ ಕಿಂಗ್ ತಯಾರಿಸಿದ ಯಂಗ್ ಮಿಷನ್ ಗನ್ ಅಭಿಷೇಕ್ ಶರ್ಮಾ!
ಕುಸಿದಿದ್ದ ಯುವ ಆಟಗಾರನಲ್ಲಿ ಹೋರಾಟದ ಕಿಚ್ಚು ಹಚ್ಚಿದ್ದು ಯುವಿ
ಪ್ರತಿ ಐಪಿಎಲ್ ಸೀಸನ್ನಲ್ಲಿ ಓರ್ವ ಸ್ಟಾರ್ ಉದಯಿಸ್ತಾನೆ. ಭವಿಷ್ಯದ ಭರವಸೆ ಮೂಡಿಸ್ತಾನೆ. ಅಂಥಹ ಆಟಗಾರ 2024ರಲ್ಲೂ ಹುಟ್ಟಿಕೊಂಡಿದ್ದಾನೆ. ಆತನೇ ಸಿಕ್ಸರ್ಗಳ ಸೂಪರ್ ಸ್ಟ್ರೈಕರ್ ಅಭಿಷೇಕ್ ಶರ್ಮಾ. ಈ ಸೀಸನ್ನಲ್ಲಿ ಈ ಯಂಗ್ ಬ್ಯಾಟರ್ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ದಾರೆ. ಆ ಪರ್ಫಾಮೆನ್ಸ್ನಷ್ಟೇ ರೋಚಕ ಈತನ ಸಕ್ಸಸ್ ಸ್ಟೋರಿ.
ಅಭಿಷೇಕ್ ಶರ್ಮಾ ಪಕ್ಕಾ ಮಾಸ್.. ದಡಂ ದಶಗುಣಂ ಈತನ ಮೂಲ ಮಂತ್ರ. ಕ್ರೀಸ್ನಲ್ಲಿ ಇರುವಷ್ಟು ಹೊತ್ತು ಸಿಕ್ಸರ್ಗಳ ಅಭಿಷೇಕ ಫಿಕ್ಸ್. ಪಕ್ಕಾ ಎಂಟಟೈನರ್. ವಿಶ್ವ ದರ್ಜೆಯ ಬೌಲರ್ಗಳನ್ನೇ ಚಿಂದಿ ಉಡಾಯಿಸಿರುವ ಯಂಗ್ ಮಿಸೈಲ್.. ಪ್ರಸಕ್ತ ಐಪಿಎಲ್ನ ಸೆನ್ಸೇಷನ್. ನಿನ್ನೆ ಫೈನಲ್ ಪಂದ್ಯದಲ್ಲಿ ಸದ್ದು ಮಾಡಲಿಲ್ಲ. ಅದನ್ನ ಹೊರತುಪಡಿಸಿದ್ರೆ ಟೂರ್ನಿಯುದ್ಧಕ್ಕೂ ಅಬ್ಬರಿಸಿ ಬೊಬ್ಬಿರಿದ್ರು. ಆದರೆ ಐಪಿಎಲ್ ಆರಂಭಕ್ಕೂ ಮುನ್ನ ಈತನೇ ಜೀವನವೇ ದಿಕ್ಕು ತಪ್ಪಿತ್ತು.
ಸೂರತ್ ಮಾಡೆಲ್ ಆತ್ಮಹತ್ಯೆ ಕೇಸ್ನಲ್ಲಿ ಹೆಸರು ತಳಕು!
ಜಸ್ಟ್ ಎರಡೇ 2 ತಿಂಗಳ ಹಿಂದೆ ಅಭಿಷೇಕ್, ಜೀವನ ಅಂದುಕೊಂಡಂತೆ ಇರಲಿಲ್ಲ. ಆಗಷ್ಟೇ ಐಪಿಎಲ್ ಪ್ರಿಪರೇಷನ್ನಲ್ಲಿ ಆರಂಭಿಸಿದ್ದ ಅಭಿಷೇಕ್ ಮೇಲೆ ದೊಡ್ಡ ವಿವಾದವೇ ಕೇಳಿ ಬಂದಿತ್ತು. ಸೂರತ್ ಮೂಲದ ಮಾಡೆಲ್ ತನಿಯಾ ಸಿಂಗ್, ಆತ್ಮಹತ್ಯೆಯಲ್ಲಿ ಅಭಿಷೇಕ್ ಹೆಸರು ತಳಕು ಹಾಕಿಕೊಂಡಿತ್ತು. ಇದಕ್ಕೆಲ್ಲ ಕಾರಣವಾಗಿದ್ದು ಆ ಒಂದು ಲಾಸ್ಟ್ ಕಾಲ್. ಆ ಮಾಡೆಲ್ ಆತ್ಮಹತ್ಯೆಗೂ ಮುನ್ನ ಅಭಿಷೇಕ್ ಶರ್ಮಾಗೆ ಕಾಲ್ ಮಾಡಿದ್ರು. ಈ ಒಂದು ಕಾಲ್ ಇದು ಅಭಿಷೇಕ್ ಪಾಲಿಗೆ ಮುಗ್ಗಲ ಮುಳ್ಳಾಗಿತ್ತು. ಇದಕ್ಕೆ ಪೋಲಿಸರು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೂಡ ನೀಡಿದ್ರು. ಇದ್ರಿಂದಾಗಿ ಸೆರವಾಸದ ಭೀತಿ ಎದುರಾಗಿತ್ತು.
ಕುಗ್ಗಿದ್ದ ಅಭಿಷೇಕ್ ಐಪಿಎಲ್ನಲ್ಲಿ ಪುಟಿದೆದ್ದಿದ್ದೇ ರೋಚಕ
ಫ್ಲಾಶ್ಬ್ಯಾಕ್ ಕಥೆ ಏನಪ್ಪಾ ಅಂದ್ರೆ, ತನಿಯಾ ಸಿಂಗ್ ಹಾಗೂ ಅಭಿಷೇಕ್ ಶರ್ಮಾ 1 ವರ್ಷಗಳ ಕಾಲ ರಿಲೇಷನ್ಶಿಪ್ನಲ್ಲಿದ್ರು. ಆದ್ರೆ, 2024ರ ಜನವರಿಯಲ್ಲಿ ಇಬ್ಬರ ನಡುವಿನ ವೈಮನಸ್ಸು, ಬ್ರೇಕ್ ಆಪ್ಗೆ ದಾರಿ ಮಾಡಿಕೊಟ್ಟಿತ್ತು. ಆದ್ರೆ, ತನಿಯಾ ಮಾತ್ರ, ಅಭಿಷೇಕ್ ಶರ್ಮಾಗೆ ಪದೇ ಪದೇ ಕಾಲ್ ಹಾಗೂ ಮಸೇಜ್ ಮಾಡುತ್ತಲೇ ಇದ್ದರು. ಅಂತರ ಕಾಯ್ದುಕೊಂಡಿದ್ದ ಅಭಿಷೇಕ್, ಐಪಿಎಲ್ ಪ್ರಿಪರೇಷನ್ನಲ್ಲಿ ತಲ್ಲೀನರಾದ್ರು. ಮನನೊಂದಿದ್ದ ತನಿಯಾ, ಫೆಬ್ರವರಿ 19ರಂದು ಆತ್ಮಹತ್ಯಗೆ ಶರಣಾಗಿದ್ರು. ಆ ನಿರ್ಧಾರ ತೆಗೆದುಕೊಳ್ಳೋಕೂ ಮುನ್ನ ಮತ್ತೆ ಅಭಿಷೇಕ್ಗೆ ಕರೆ ಮಾಡಿದ್ರು.
ಇದನ್ನೂ ಓದಿ: ಪುಣೆ ಪೋರ್ಶೆ ಕಾರು ಆಕ್ಸಿಡೆಂಟ್ ಕೇಸ್ಗೆ ಬಿಗ್ ಟ್ವಿಸ್ಟ್.. ಇಬ್ಬರು ವೈದ್ಯರು ಅರೆಸ್ಟ್; ಯಾಕೆ?
ಪರಿಣಾಮ ಪ್ರೇಯಸಿಯ ಸೂಸೈಡ್ ಕೇಸ್ನಲ್ಲಿ ಸಿಲುಕಿಕೊಂಡ ಅಭಿಷೇಕ್, ಆಂತರಿಕವಾಗಿ ಕುಗ್ಗಿ ಹೋಗಿದ್ರು. ಈತನ ಕರಿಯರ್ಗೆ ಫುಲ್ ಸ್ಟಾಪ್ ಬಿತ್ತು ಅಂತಾನೇ ಹಲವರು ವ್ಯಾಖ್ಯಾನಿಸಿದ್ರು. ಆದ್ರೆ, ಅಂತಿಮವಾಗಿ ತನಿಖೆಯಲ್ಲಿ ನಿರಪರಾಧಿ ಎಂದು ಸಾಬೀತಾಯ್ತು. ಬಿಗ್ ರಿಲೀಫ್ ಸಿಕ್ಕ ಮೇಲೆ ಅಭಿಶೇಕ್ ಕಂಪ್ಲೀಟ್ ಬದಲಾದ್ರು.
ಟ್ರಾವಿಸ್ ಅಲ್ಲ.. ಅಭಿಷೇಕ್ ಸಕ್ಸಸ್ ಗುಟ್ಟು ಯುವರಾಜ್..!
ಐಪಿಎಲ್ ಆರಂಭಕ್ಕೂ ಮುನ್ನ ವೈಯಕ್ತಿಕ ಜೀವನದಲ್ಲಿ ಬಿರುಗಾಳಿಯೇ ಎದ್ದಿತ್ತು. ದುರಾದೃಷ್ಟ ಬೆನ್ನುಬಿದ್ದಿತ್ತು. ಆತ್ಮಹತ್ಯೆಯ ಕೇಸ್, ಅಭಿಷೇಕ್ ಕರಿಯರ್ ಮೇಲೆಯೇ ಕಾರ್ಮೋಡ ಕವಿಯುವಂತೆ ಮಾಡಿತ್ತು. ಯುವ ಆಟಗಾರ ಕುಸಿದು ಹೋಗಿದ್ದ. ಆದ್ರೆ, ಐಪಿಎಲ್ನಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ. ಸನ್ ರೈಸರ್ಸ್ ತಂಡದ ಮ್ಯಾಚ್ ವಿನ್ನರ್ ಎನಿಸಿಕೊಂಡ ಅಭಿಷೇಕ್, ನಯಾ ಸೆನ್ಸೇಷನ್ ಆಗಿ ಮಾರ್ಪಟ್ಟರು. ಇದಕ್ಕೆಲ್ಲ ಜೊತೆಗಾರ ಕಾರಣ ಟ್ರಾವಿಸ್ ಹೆಡ್ ಎನ್ನಲಾಗ್ತಿದೆ. ಆದ್ರೆ, ಈತನ ಸಿಕ್ಸರ್ಗಳ ಹಿಂದಿನ ಸಿಕ್ರೇಟ್ ಮಾಜಿ ಆಟಗಾರ ಯುವರಾಜ್ ಸಿಂಗ್.
ಇದನ್ನೂ ಓದಿ: IPL ಫೈನಲ್ ಮ್ಯಾಚ್ನಲ್ಲಿ ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡಿದ್ರಾ ನಟ ಸೋನ್ ಸೂದ್..?
ಬ್ಯಾಟಿಂಗ್ನಲ್ಲಿ ಕೆಲ ಟೆಕ್ನಿಕಲ್ ಚೇಂಜ್
ಐಪಿಎಲ್ನಲ್ಲಿ ಅಭಿಶೇಕ್ ಶರ್ಮಾ ಧೂಳ್ ಎಬ್ಬಿಸಲು ಕಾರಣ ಮೆಂಟರ್, ಗುರು ಯುವರಾಜ್ ಸಿಂಗ್ ನೀಡಿದ ಸಲಹೆಗಳೇ ಆಗಿವೆ. ಅಭಿಷೇಕ್ ಬ್ಯಾಟಿಂಗ್ ಅನ್ನ ಹತ್ತಿರದಿಂದ ಗಮನಿಸಿದ್ದ ಯುವರಾಜ್, ಬ್ಯಾಟಿಂಗ್ನಲ್ಲಿ ಕೆಲ ಟೆಕ್ನಿಕಲ್ ಚೇಂಜ್ ಮಾಡಿದ್ರು. ಜೊತೆಗೆ ಕುಸಿದು ಹೋಗಿದ್ದ ಯುವ ಆಟಗಾರನಲ್ಲಿ ಹೋರಾಟದ ಕಿಚ್ಚು ತುಂಬಿದ್ರು. ಇದು ಮುಷ್ತಾಕ್ ಆಲಿ ಹಾಗೂ ವಿಜಯ್ ಹಜಾರೆಯಲ್ಲಿ ವರ್ಕೌಟ್ ಆಗಿತ್ತು. ಎಮರ್ಜಿಂಗ್ ಏಷ್ಯಾಕಪ್ನಲ್ಲೂ ಅಬ್ಬರಿಸಿದ್ರು. ಇದೀಗ ಪ್ರಸಕ್ತ ಐಪಿಎಲ್ನಲ್ಲಿ ಯುವಿ ಪಾಠದ ನೆರವಿನಿಂದ ಘರ್ಜಿಸಿದ್ರು.
ಇದನ್ನೂ ಓದಿ: KKRTC ಬಸ್- ಬೈಕ್ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಉಸಿರು ಚೆಲ್ಲಿದ ಮೂವರು ಯುವಕರು
ಅಭಿಷೇಕ್ ಶರ್ಮಾಗೀಗ 23 ವರ್ಷ. ಈ ಚಿಕ್ಕ ವಯಸ್ಸಿನಲ್ಲಿ, ಜೀವನದಲ್ಲಿ ಎದುರಾದ ದೊಡ್ಡ ಯುದ್ಧವನ್ನ, ಗೆದ್ದು ಬಂದ ಅಭಿಷೇಕ್ ಶರ್ಮಾ, ಆನ್ಫೀಲ್ಡ್ನಲ್ಲೂ ತನ್ನ ಟ್ಯಾಲೆಂಟ್ ನಿರೂಪಿಸಿದ್ದಾರೆ. ಬಿದ್ದಾಗ ಕುಗ್ಗದೆ ಮುನ್ನುಗ್ಗಿ ಯಶಸ್ಸು ಕಂಡಿರೋ ಈ ಯಂಗ್ ಬ್ಯಾಟರ್ ಕಥೆ ಯುವ ಆಟಗಾರರಿಗೆ ನಿಜಕ್ಕೂ ಸ್ಪೂರ್ತಿಯ ಪಾಠ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ