7 ತಿಂಗಳಿಂದ ಕೆಲಸ ಇಲ್ಲ.. ಸಂಬಳವೂ ಇಲ್ಲ..!
ಬದುಕು ರೂಪಿಸಿದ ಕೋಚ್ ನೆರವಿಗೆ ಸೂರ್ಯ
ಗುರುವಿನ ಸಂದೇಶಕ್ಕೆ ಸೂರ್ಯ ಹೇಳಿದ್ದೇನು..?
ಸೂರ್ಯಕುಮಾರ್ ಯಾದವ್ ಬಾಳಲ್ಲಿ ಶುಕ್ರದೆಸೆ ಶುರುವಾಗಿದೆ. ಸರ್ಪ್ರೈಸ್ ರೀತಿಯಲ್ಲಿ ಟೀಮ್ ಇಂಡಿಯಾದ ನಾಯಕನ ಪಟ್ಟ ಅರಸಿ ಬಂದಿದೆ. ಇದರ ಬೆನ್ನಲ್ಲೇ ಸಖತ್ ಡಿಮ್ಯಾಂಡ್ ಬಂದಿದ್ದು, ಐಪಿಎಲ್ ಫ್ರಾಂಚೈಸಿಗಳು ಸೂರ್ಯನ ಮೇಲೆ ಕೋಟಿ ಕೋಟಿ ಸುರಿಯಲು ಸಜ್ಜಾಗಿ ನಿಂತಿವೆ. ಸೂರ್ಯಕುಮಾರ್ನ ತಿದ್ದಿ-ತೀಡಿ ಬೆಳೆಸಿದ ಗುರುವಿನ ಬಾಳು ಸಂಕಷ್ಟಕ್ಕೆ ಸಿಲುಕಿದೆ.
ಇವತ್ತು ಸೂರ್ಯಕುಮಾರ್ ಯಾದವ್ ಕ್ರಿಕೆಟ್ ಲೋಕದ ಸೂಪರ್ ಸ್ಟಾರ್ ಆಗಿರಬಹುದು. ಸೂರ್ಯನ ಈ ಸಕ್ಸಸ್ ಹಿಂದೆ ಇವ್ರ ಅಪಾರ ಶ್ರಮವಿದೆ. ಅಂದ್ಹಾಗೆ ಇವರ ಹೆಸರು ಅಶೋಕ್ ಅಸ್ವಾಲ್ಕರ್. ಸೂರ್ಯನ ಗುರು. ವಿಶ್ವದ ಸೂಪರ್ ಸ್ಟಾರ್ ಕ್ರಿಕೆಟಿಗನ ಕೋಚ್ ಎಂದು ಇಡೀ ಜಗತ್ತಿಗೆ ಪರಿಚಯವಾದಾಗ ಎಂತವರಿಗಾದ್ರೂ ಹೆಮ್ಮೆಯ ಭಾವ ಮೂಡುತ್ತೆ. ಈ ಜಾಹೀರಾತಿನಿಂದ ಸೂರ್ಯನ ಗುರುವಿನ ಖ್ಯಾತಿ ಕೂಡ ವಿಶ್ವದೆಲ್ಲೆಡೆ ಹರಡಿತ್ತು. ಗುರುವಿಗೆ ಖುಷಿ ಇರಲಿಲ್ಲ. ಆ್ಯಡ್ ಶೂಟ್ ಮಾಡಿದಾಗ ಸೂರ್ಯನ ಗುರು ಚಾಕಲೇಟ್ನ ತಿಂದು ಸಂಭ್ರಮಿಸೋ ಪರಿಸ್ಥಿತಿಯಲ್ಲೇ ಇರಲಿಲ್ಲ.
ಇದನ್ನೂ ಓದಿ:ನೆಹ್ರಾಗೆ ಗೇಟ್ಪಾಸ್..! ಗುಜರಾತ್ ಟೈಟನ್ಸ್ಗೆ ಯುವರಾಜ್ ಸಿಂಗ್ ಎಂಟ್ರಿ..!
ಸೂರ್ಯ ಕುಮಾರ್ ಗುರುವಿನ ಬಾಳಲ್ಲಿ ಸಂಕಷ್ಟ..!
ಸೂರ್ಯಕುಮಾರ್ ಯಾದವ್ರ ಭವಿಷ್ಯವನ್ನ ರೂಪಿಸಿದ ಮೊದಲು ಗುರು ಅಶೋಕ್ ಅಸ್ವಾಲ್ಕರ್ ಭವಿಷ್ಯವೇ ಬಿಗ್ ಪ್ರಶ್ನಾರ್ಹವಾಗಿದೆ. ರಾಜಕೀಯದಾಟದಲ್ಲಿ ಇದ್ದ ಕೆಲಸವೇ ಕಳೆದು ಹೋಗಿದೆ. ಬದುಕಿನ ದೋಣಿಯ ದಿಕ್ಕು ತಪ್ಪಿದೆ. ಮುಂಬೈನ ಅನುಶಕ್ತಿ ನಗರ್ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಕಮಿಟಿಯಲ್ಲಿ ಕಳೆದ 24 ವರ್ಷಗಳಿಂದ ಕೆಲಸ ಮಾಡ್ತಿದ್ದ ಇವ್ರನ್ನ ಹೇಳದೆ ಕೇಳದೆ ಕಿತ್ತು ಹಾಕಲಾಗಿದೆ. ಕಳೆದ ಡಿಸೆಂಬರ್ನಿಂದ ಜೀವನದ ಬಂಡಿ ತಳ್ಳಲು ಸೂರ್ಯನ ಗುರು ಕಷ್ಟ ಪಡ್ತಿದ್ದಾರೆ.
ಡಿಸೆಂಬರ್ನಲ್ಲಿ ಕೊನೆಯ ಸಂಬಳ ಪಡೆದಿದ್ದು
‘ನಾನು ಕ್ಲಬ್ಗೆ ತಿಳಿಸಿಯೇ ನನ್ನ ಪಕ್ಕದ ಮನೆಯವರ ವಿವಾಹ ಸಮಾರಂಭಕ್ಕೆ ಹೋಗಿದ್ದೆ. ನಾನು ಡಿಸೆಂಬರ್ 31ರಂದು ವಾಪಾಸ್ಸಾದಾಗ ಕೆಲಸದಿಂದ ತೆಗೆಯಲಾಗಿತ್ತು. ಅಲ್ಲಿನ ಕಮಿಟಿಯವರು ನನ್ನನ್ನ ಭೇಟಿಯಾಗುವಂತೆ ಕೇಳಿದ್ರು. 3 ಗಂಟೆಗಳ ಭೇಟಿಯಲ್ಲಿ ಯಾರೂ ನನ್ನನ್ನ ಮಾತನಾಡಿಸಲಿಲ್ಲ. ಬಳಿಕ ಮನೆಗೆ ಬಂದೆ. ವಾರದ ಬಳಿಕ ಮತ್ತೆ ಭೇಟಿಗೆ ಕರೆದ್ರು. ಆಗಲೂ ಯಾರೂ ಮಾತನಾಡಿಸಲಿಲ್ಲ. 1 ತಿಂಗಳ ಕಮಿಟಿಯ ಮೆಂಬರ್ಸ್ ನನ್ನನ್ನ ಮೈದಾನದಲ್ಲಿ ಭೇಟಿಯಾಗಿ ನಿಮ್ಮನ್ನ ಆದಷ್ಟು ಬೇಗ ಸಂಪರ್ಕಿಸುತ್ತೇನೆ ಎಂದಿದ್ರು. ಈವರೆಗೆ ಯಾರೂ ಸಂಪರ್ಕಿಸಿಲ್ಲ. ಡಿಸೆಂಬರ್ನಲ್ಲಿ ನಾನು ಕೊನೆಯ ಸಂಬಳ ಪಡೆದಿದ್ದು’ ಅಶೋಕ್ ಅಸ್ವಾಲ್ಕರ್, ಸೂರ್ಯಕುಮಾರ್ ಕೋಚ್
ಜೀವನ ಸಂಕಷ್ಟದಲ್ಲಿದ್ರೂ ಕುಟುಂಬಕ್ಕಿರಲಿಲ್ಲ ಮಾಹಿತಿ
ಕೆಲಸ ಹೋಗಿ 7 ತಿಂಗಳಾದರೂ ಅಶೋಕ್ ಅಸ್ವಾಲ್ಕರ್ ತಮ್ಮ ಕುಟುಂಬಕ್ಕೆ ತಿಳಿಸಿಯೇ ಇರಲಿಲ್ಲ. ಸಂಬಳ ಬರದ ಸಂಕಷ್ಟದ ನಡುವೆಯೂ ಬೇರೆಯವರ ಬಳಿ ಕೈ ಚಾಚದೇ ಜೀವನವನ್ನ ಇಷ್ಟು ದಿನ ದೂಡಿದ್ರು. ಇದೀಗ ಪರಿಸ್ಥಿತಿ ಕೈ ಮೀರಿದಾಗ ಶಿಷ್ಯ ಸೂರ್ಯನಿಗೆ ಹೇಳಿದ್ದಾರೆ. ಈ ಬೆನ್ನಲ್ಲೇ ತನ್ನ ಬದುಕು ರೂಪಿಸಿದ ಗುರುವಿನ ಬೆಂಬಲಕ್ಕೆ ಸೂರ್ಯಕುಮಾರ್ ನಿಂತಿದ್ದಾರೆ.
ಇದನ್ನೂ ಓದಿ:ಲಂಕನ್ನರಿಗೆ ಕಾಡ್ತಿವೆ ಹಳೇ ಏಟುಗಳು..! ಈ ಆಟಗಾರನ ಹೆಸರು ಕೇಳಿದ್ರೆ ಬೆಚ್ಚಿ ಬೀಳೋದ್ಯಾಕೆ..?
‘ಸೂರ್ಯಕುಮಾರ್ಗೆ ಮೆಸೇಜ್ ಮಾಡಿದ್ದೆ’
ನಾನು ಕೆಲಸ ಕಳೆದುಕೊಂಡಿದ್ರ ಬಗ್ಗೆ ನನ್ನ ಕಟುಂಬದ ಸದಸ್ಯರಿಗೆ ತಿಳಿಸಿರಲಿಲ್ಲ. ಸೂರ್ಯಕುಮಾರ್ಗೆ ಮೆಸೇಜ್ ಮಾಡಿ ನಾನು ಕೆಲಸ ಕಳೆದುಕೊಂಡಿದ್ದೇನೆ ಎಂದು ತಿಳಿಸಿದೆ. ಜೊತೆಗೆ ಇದಕ್ಕೆ ಯಾರು ಕಾರಣ ಅನ್ನೋದನ್ನೂ ತಿಳಿಸಿದೆ. ಆ ಬಳಿಕ ಸೂರ್ಯ ಕೂಡ ಆ ವ್ಯಕ್ತಿಯನ್ನ ದೂರವಿಟ್ರು. ಒಂದು ಕ್ರಿಕೆಟ್ ಅಕಾಡೆಮಿಯನ್ನ ಆರಂಭಿಸುವ ಬಗ್ಗೆ ಸೂರ್ಯನ ಬಳಿ ಮಾತನಾಡಿದ್ದೇನೆ. ಅದಕ್ಕೆ ಒಪ್ಪಿಗೆ ಸೂಚಿಸಿದ್ದಾನೆ. ನಾವಿಬ್ಬರು ಯುವ ಆಟಗಾರರಿಗೆ ಕೋಚಿಂಗ್ ನೀಡಲು ನಿರ್ಧರಿಸಿದ್ದೇವೆ. ನಮಗೆ ದುಡ್ಡು ಮುಖ್ಯವಲ್ಲ-ಅಶೋಕ್ ಅಸ್ವಾಲ್ಕರ್, ಸೂರ್ಯಕುಮಾರ್ ಕೋಚ್
ಸಂಕಷ್ಟದಲ್ಲಿದ್ದ ಗುರುವಿಗೆ ಸಹಾಯ ಹಸ್ತ ಚಾಚಿರೋ ಸೂರ್ಯ ಮಾನವೀಯತೆ ಮರೆದಿದ್ದಾರೆ. ಇದನ್ನ ಸಹಾಯ ಅನ್ನೋದಕ್ಕಿಂತ ಇದು ಸೂರ್ಯ ಮಾಡಲೇಬೇಕಾಗಿದ್ದ ಕರ್ತವ್ಯ ಅಂದ್ರೆ ತಪ್ಪಾಗಲ್ಲ. ಸದ್ಯ ಸೂರ್ಯಕುಮಾರ್ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ. ಭಾರತ ತಂಡಕ್ಕೆ ಕಾಲಿಟ್ಟ ಮೂರೇ ವರ್ಷಕ್ಕೆ ಟೀಮ್ ಇಂಡಿಯಾದ ಕ್ಯಾಪ್ಟನ್ಸಿ ಪಟ್ಟ ಸಿಕ್ಕಿದೆ. ವಿಶ್ವ ಕ್ರಿಕೆಟ್ ಸೂಪರ್ ಸ್ಟಾರ್ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲಾ ಸಕ್ಸಸ್ ಹಿಂದೆ ಅಶೋಕ್ ಅಸ್ವಾಲ್ಕರ್ ಅಪಾರ ಶ್ರಮವಿದೆ. ಬದುಕು ರೂಪಿಸಿದ ಗುರುವಿನ ಜೀವನವೇ ಸಂಕಷ್ಟದಲ್ಲಿದ್ದಾಗ ಶಿಷ್ಯ ನೆರವಿಗೆ ನಿಲ್ಲೋದು ಕರ್ತವ್ಯ ಅಲ್ವಾ?
ಇದನ್ನೂ ಓದಿ:ಮಾಜಿ ಪತ್ನಿ ಫೋಟೋಗೆ ಕಾಮೆಂಟ್ ಮಾಡಿದ ಹಾರ್ದಿಕ್ ಪಾಂಡ್ಯ.. ಮತ್ತೆ ಒಂದಾಗ್ತಾರಾ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
7 ತಿಂಗಳಿಂದ ಕೆಲಸ ಇಲ್ಲ.. ಸಂಬಳವೂ ಇಲ್ಲ..!
ಬದುಕು ರೂಪಿಸಿದ ಕೋಚ್ ನೆರವಿಗೆ ಸೂರ್ಯ
ಗುರುವಿನ ಸಂದೇಶಕ್ಕೆ ಸೂರ್ಯ ಹೇಳಿದ್ದೇನು..?
ಸೂರ್ಯಕುಮಾರ್ ಯಾದವ್ ಬಾಳಲ್ಲಿ ಶುಕ್ರದೆಸೆ ಶುರುವಾಗಿದೆ. ಸರ್ಪ್ರೈಸ್ ರೀತಿಯಲ್ಲಿ ಟೀಮ್ ಇಂಡಿಯಾದ ನಾಯಕನ ಪಟ್ಟ ಅರಸಿ ಬಂದಿದೆ. ಇದರ ಬೆನ್ನಲ್ಲೇ ಸಖತ್ ಡಿಮ್ಯಾಂಡ್ ಬಂದಿದ್ದು, ಐಪಿಎಲ್ ಫ್ರಾಂಚೈಸಿಗಳು ಸೂರ್ಯನ ಮೇಲೆ ಕೋಟಿ ಕೋಟಿ ಸುರಿಯಲು ಸಜ್ಜಾಗಿ ನಿಂತಿವೆ. ಸೂರ್ಯಕುಮಾರ್ನ ತಿದ್ದಿ-ತೀಡಿ ಬೆಳೆಸಿದ ಗುರುವಿನ ಬಾಳು ಸಂಕಷ್ಟಕ್ಕೆ ಸಿಲುಕಿದೆ.
ಇವತ್ತು ಸೂರ್ಯಕುಮಾರ್ ಯಾದವ್ ಕ್ರಿಕೆಟ್ ಲೋಕದ ಸೂಪರ್ ಸ್ಟಾರ್ ಆಗಿರಬಹುದು. ಸೂರ್ಯನ ಈ ಸಕ್ಸಸ್ ಹಿಂದೆ ಇವ್ರ ಅಪಾರ ಶ್ರಮವಿದೆ. ಅಂದ್ಹಾಗೆ ಇವರ ಹೆಸರು ಅಶೋಕ್ ಅಸ್ವಾಲ್ಕರ್. ಸೂರ್ಯನ ಗುರು. ವಿಶ್ವದ ಸೂಪರ್ ಸ್ಟಾರ್ ಕ್ರಿಕೆಟಿಗನ ಕೋಚ್ ಎಂದು ಇಡೀ ಜಗತ್ತಿಗೆ ಪರಿಚಯವಾದಾಗ ಎಂತವರಿಗಾದ್ರೂ ಹೆಮ್ಮೆಯ ಭಾವ ಮೂಡುತ್ತೆ. ಈ ಜಾಹೀರಾತಿನಿಂದ ಸೂರ್ಯನ ಗುರುವಿನ ಖ್ಯಾತಿ ಕೂಡ ವಿಶ್ವದೆಲ್ಲೆಡೆ ಹರಡಿತ್ತು. ಗುರುವಿಗೆ ಖುಷಿ ಇರಲಿಲ್ಲ. ಆ್ಯಡ್ ಶೂಟ್ ಮಾಡಿದಾಗ ಸೂರ್ಯನ ಗುರು ಚಾಕಲೇಟ್ನ ತಿಂದು ಸಂಭ್ರಮಿಸೋ ಪರಿಸ್ಥಿತಿಯಲ್ಲೇ ಇರಲಿಲ್ಲ.
ಇದನ್ನೂ ಓದಿ:ನೆಹ್ರಾಗೆ ಗೇಟ್ಪಾಸ್..! ಗುಜರಾತ್ ಟೈಟನ್ಸ್ಗೆ ಯುವರಾಜ್ ಸಿಂಗ್ ಎಂಟ್ರಿ..!
ಸೂರ್ಯ ಕುಮಾರ್ ಗುರುವಿನ ಬಾಳಲ್ಲಿ ಸಂಕಷ್ಟ..!
ಸೂರ್ಯಕುಮಾರ್ ಯಾದವ್ರ ಭವಿಷ್ಯವನ್ನ ರೂಪಿಸಿದ ಮೊದಲು ಗುರು ಅಶೋಕ್ ಅಸ್ವಾಲ್ಕರ್ ಭವಿಷ್ಯವೇ ಬಿಗ್ ಪ್ರಶ್ನಾರ್ಹವಾಗಿದೆ. ರಾಜಕೀಯದಾಟದಲ್ಲಿ ಇದ್ದ ಕೆಲಸವೇ ಕಳೆದು ಹೋಗಿದೆ. ಬದುಕಿನ ದೋಣಿಯ ದಿಕ್ಕು ತಪ್ಪಿದೆ. ಮುಂಬೈನ ಅನುಶಕ್ತಿ ನಗರ್ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಕಮಿಟಿಯಲ್ಲಿ ಕಳೆದ 24 ವರ್ಷಗಳಿಂದ ಕೆಲಸ ಮಾಡ್ತಿದ್ದ ಇವ್ರನ್ನ ಹೇಳದೆ ಕೇಳದೆ ಕಿತ್ತು ಹಾಕಲಾಗಿದೆ. ಕಳೆದ ಡಿಸೆಂಬರ್ನಿಂದ ಜೀವನದ ಬಂಡಿ ತಳ್ಳಲು ಸೂರ್ಯನ ಗುರು ಕಷ್ಟ ಪಡ್ತಿದ್ದಾರೆ.
ಡಿಸೆಂಬರ್ನಲ್ಲಿ ಕೊನೆಯ ಸಂಬಳ ಪಡೆದಿದ್ದು
‘ನಾನು ಕ್ಲಬ್ಗೆ ತಿಳಿಸಿಯೇ ನನ್ನ ಪಕ್ಕದ ಮನೆಯವರ ವಿವಾಹ ಸಮಾರಂಭಕ್ಕೆ ಹೋಗಿದ್ದೆ. ನಾನು ಡಿಸೆಂಬರ್ 31ರಂದು ವಾಪಾಸ್ಸಾದಾಗ ಕೆಲಸದಿಂದ ತೆಗೆಯಲಾಗಿತ್ತು. ಅಲ್ಲಿನ ಕಮಿಟಿಯವರು ನನ್ನನ್ನ ಭೇಟಿಯಾಗುವಂತೆ ಕೇಳಿದ್ರು. 3 ಗಂಟೆಗಳ ಭೇಟಿಯಲ್ಲಿ ಯಾರೂ ನನ್ನನ್ನ ಮಾತನಾಡಿಸಲಿಲ್ಲ. ಬಳಿಕ ಮನೆಗೆ ಬಂದೆ. ವಾರದ ಬಳಿಕ ಮತ್ತೆ ಭೇಟಿಗೆ ಕರೆದ್ರು. ಆಗಲೂ ಯಾರೂ ಮಾತನಾಡಿಸಲಿಲ್ಲ. 1 ತಿಂಗಳ ಕಮಿಟಿಯ ಮೆಂಬರ್ಸ್ ನನ್ನನ್ನ ಮೈದಾನದಲ್ಲಿ ಭೇಟಿಯಾಗಿ ನಿಮ್ಮನ್ನ ಆದಷ್ಟು ಬೇಗ ಸಂಪರ್ಕಿಸುತ್ತೇನೆ ಎಂದಿದ್ರು. ಈವರೆಗೆ ಯಾರೂ ಸಂಪರ್ಕಿಸಿಲ್ಲ. ಡಿಸೆಂಬರ್ನಲ್ಲಿ ನಾನು ಕೊನೆಯ ಸಂಬಳ ಪಡೆದಿದ್ದು’ ಅಶೋಕ್ ಅಸ್ವಾಲ್ಕರ್, ಸೂರ್ಯಕುಮಾರ್ ಕೋಚ್
ಜೀವನ ಸಂಕಷ್ಟದಲ್ಲಿದ್ರೂ ಕುಟುಂಬಕ್ಕಿರಲಿಲ್ಲ ಮಾಹಿತಿ
ಕೆಲಸ ಹೋಗಿ 7 ತಿಂಗಳಾದರೂ ಅಶೋಕ್ ಅಸ್ವಾಲ್ಕರ್ ತಮ್ಮ ಕುಟುಂಬಕ್ಕೆ ತಿಳಿಸಿಯೇ ಇರಲಿಲ್ಲ. ಸಂಬಳ ಬರದ ಸಂಕಷ್ಟದ ನಡುವೆಯೂ ಬೇರೆಯವರ ಬಳಿ ಕೈ ಚಾಚದೇ ಜೀವನವನ್ನ ಇಷ್ಟು ದಿನ ದೂಡಿದ್ರು. ಇದೀಗ ಪರಿಸ್ಥಿತಿ ಕೈ ಮೀರಿದಾಗ ಶಿಷ್ಯ ಸೂರ್ಯನಿಗೆ ಹೇಳಿದ್ದಾರೆ. ಈ ಬೆನ್ನಲ್ಲೇ ತನ್ನ ಬದುಕು ರೂಪಿಸಿದ ಗುರುವಿನ ಬೆಂಬಲಕ್ಕೆ ಸೂರ್ಯಕುಮಾರ್ ನಿಂತಿದ್ದಾರೆ.
ಇದನ್ನೂ ಓದಿ:ಲಂಕನ್ನರಿಗೆ ಕಾಡ್ತಿವೆ ಹಳೇ ಏಟುಗಳು..! ಈ ಆಟಗಾರನ ಹೆಸರು ಕೇಳಿದ್ರೆ ಬೆಚ್ಚಿ ಬೀಳೋದ್ಯಾಕೆ..?
‘ಸೂರ್ಯಕುಮಾರ್ಗೆ ಮೆಸೇಜ್ ಮಾಡಿದ್ದೆ’
ನಾನು ಕೆಲಸ ಕಳೆದುಕೊಂಡಿದ್ರ ಬಗ್ಗೆ ನನ್ನ ಕಟುಂಬದ ಸದಸ್ಯರಿಗೆ ತಿಳಿಸಿರಲಿಲ್ಲ. ಸೂರ್ಯಕುಮಾರ್ಗೆ ಮೆಸೇಜ್ ಮಾಡಿ ನಾನು ಕೆಲಸ ಕಳೆದುಕೊಂಡಿದ್ದೇನೆ ಎಂದು ತಿಳಿಸಿದೆ. ಜೊತೆಗೆ ಇದಕ್ಕೆ ಯಾರು ಕಾರಣ ಅನ್ನೋದನ್ನೂ ತಿಳಿಸಿದೆ. ಆ ಬಳಿಕ ಸೂರ್ಯ ಕೂಡ ಆ ವ್ಯಕ್ತಿಯನ್ನ ದೂರವಿಟ್ರು. ಒಂದು ಕ್ರಿಕೆಟ್ ಅಕಾಡೆಮಿಯನ್ನ ಆರಂಭಿಸುವ ಬಗ್ಗೆ ಸೂರ್ಯನ ಬಳಿ ಮಾತನಾಡಿದ್ದೇನೆ. ಅದಕ್ಕೆ ಒಪ್ಪಿಗೆ ಸೂಚಿಸಿದ್ದಾನೆ. ನಾವಿಬ್ಬರು ಯುವ ಆಟಗಾರರಿಗೆ ಕೋಚಿಂಗ್ ನೀಡಲು ನಿರ್ಧರಿಸಿದ್ದೇವೆ. ನಮಗೆ ದುಡ್ಡು ಮುಖ್ಯವಲ್ಲ-ಅಶೋಕ್ ಅಸ್ವಾಲ್ಕರ್, ಸೂರ್ಯಕುಮಾರ್ ಕೋಚ್
ಸಂಕಷ್ಟದಲ್ಲಿದ್ದ ಗುರುವಿಗೆ ಸಹಾಯ ಹಸ್ತ ಚಾಚಿರೋ ಸೂರ್ಯ ಮಾನವೀಯತೆ ಮರೆದಿದ್ದಾರೆ. ಇದನ್ನ ಸಹಾಯ ಅನ್ನೋದಕ್ಕಿಂತ ಇದು ಸೂರ್ಯ ಮಾಡಲೇಬೇಕಾಗಿದ್ದ ಕರ್ತವ್ಯ ಅಂದ್ರೆ ತಪ್ಪಾಗಲ್ಲ. ಸದ್ಯ ಸೂರ್ಯಕುಮಾರ್ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ. ಭಾರತ ತಂಡಕ್ಕೆ ಕಾಲಿಟ್ಟ ಮೂರೇ ವರ್ಷಕ್ಕೆ ಟೀಮ್ ಇಂಡಿಯಾದ ಕ್ಯಾಪ್ಟನ್ಸಿ ಪಟ್ಟ ಸಿಕ್ಕಿದೆ. ವಿಶ್ವ ಕ್ರಿಕೆಟ್ ಸೂಪರ್ ಸ್ಟಾರ್ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲಾ ಸಕ್ಸಸ್ ಹಿಂದೆ ಅಶೋಕ್ ಅಸ್ವಾಲ್ಕರ್ ಅಪಾರ ಶ್ರಮವಿದೆ. ಬದುಕು ರೂಪಿಸಿದ ಗುರುವಿನ ಜೀವನವೇ ಸಂಕಷ್ಟದಲ್ಲಿದ್ದಾಗ ಶಿಷ್ಯ ನೆರವಿಗೆ ನಿಲ್ಲೋದು ಕರ್ತವ್ಯ ಅಲ್ವಾ?
ಇದನ್ನೂ ಓದಿ:ಮಾಜಿ ಪತ್ನಿ ಫೋಟೋಗೆ ಕಾಮೆಂಟ್ ಮಾಡಿದ ಹಾರ್ದಿಕ್ ಪಾಂಡ್ಯ.. ಮತ್ತೆ ಒಂದಾಗ್ತಾರಾ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್