newsfirstkannada.com

ಮುಂಬೈ ಟೀಮ್​​ಗೆ ಸ್ಟಾರ್​​ ಬ್ಯಾಟರ್​​ ಎಂಟ್ರಿ; ಕ್ಯಾಪ್ಟನ್​​ ಹಾರ್ದಿಕ್​ ಪಾಂಡ್ಯಗೆ ಬಂತು ಆನೆಬಲ!

Share :

Published April 1, 2024 at 6:27pm

    ಇಂದು ಮುಂಬೈ ಇಂಡಿಯನ್ಸ್​​​, ರಾಜಸ್ತಾನ್​ ಮಧ್ಯೆ ಹೈವೋಲ್ಟೇಜ್​​ ಪಂದ್ಯ

    ಕೊನೆಗೂ ಮುಂಬೈ ತಂಡಕ್ಕೆ ಸ್ಟಾರ್​ ಬ್ಯಾಟರ್​ ಸೂರ್ಯ​ಕುಮಾರ್​​ ಆಗಮನ

    ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ನೇತೃತ್ವದ ಮುಂಬೈ ಟೀಮ್​ಗೆ ಬಂತು ಆನೆಬಲ

ಇಂದು ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಇಂಡಿಯನ್​ ಪ್ರೀಮಿಯರ್​​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​​​, ರಾಜಸ್ಥಾನ್​ ರಾಯಲ್ಸ್​​​ ತಂಡಗಳು ಮುಖಾಮುಖಿ ಆಗುತ್ತಿವೆ. ಸತತ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್​​​ ಇಂದು ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ.

ಇನ್ನು, ಈ ಮಧ್ಯೆ ಮುಂಬೈ ಇಂಡಿಯನ್ಸ್​​ಗೆ ಸ್ಟಾರ್​ ಬ್ಯಾಟರ್​ ಸೂರ್ಯಕುಮಾರ್ ಯಾದವ್ ಎಂಟ್ರಿ ನೀಡಿದ್ದಾರೆ ಎಂದು ಸುದ್ದಿಯಾಗಿದೆ. ಹೀಗಾಗಿ ಸೂರ್ಯ ಆಗಮನದಿಂದ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ನಾಯಕತ್ವದ ಮುಂಬೈ ತಂಡಕ್ಕೆ ಆನೆಬಲ ಬಂದಿದೆ.

ಕಳೆದ 2 ಪಂದ್ಯಗಳಲ್ಲೂ ಸೂರ್ಯಕುಮಾರ್​ ಯಾದವ್ ಆಡಿರಲಿಲ್ಲ. ಈಗ ಇಂದು ರಾಜಸ್ಥಾನ್​​ ವಿರುದ್ಧ ಪಂದ್ಯದಿಂದ ಸೂರ್ಯ ಕಮ್​ಬ್ಯಾಕ್​ ಮಾಡಲಿದ್ದು, ಮುಂಬೈ ಇಂಡಿಯನ್ಸ್​​ ​​ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ಬಲ ಹೆಚ್ಚಾಗಿದೆ. ಸರ್ಜರಿ ಬಳಿಕ ಇನ್ನೂ ಚೇತರಿಸಿಕೊಳ್ಳದ ಕಾರಣ ಸೂರ್ಯ ಇತ್ತೀಚೆಗೆ ಹಾರ್ಟ್​​ ಇಮೋಜಿಯನ್ನು ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: ಫ್ಯಾನ್ಸ್​ಗೆ ಗುಡ್​ನ್ಯೂಸ್; ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆ.ರಾಹುಲ್​​​​​, ಅಥಿಯಾ ಶೆಟ್ಟಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಬೈ ಟೀಮ್​​ಗೆ ಸ್ಟಾರ್​​ ಬ್ಯಾಟರ್​​ ಎಂಟ್ರಿ; ಕ್ಯಾಪ್ಟನ್​​ ಹಾರ್ದಿಕ್​ ಪಾಂಡ್ಯಗೆ ಬಂತು ಆನೆಬಲ!

https://newsfirstlive.com/wp-content/uploads/2024/04/Surya_Rohit.jpg

    ಇಂದು ಮುಂಬೈ ಇಂಡಿಯನ್ಸ್​​​, ರಾಜಸ್ತಾನ್​ ಮಧ್ಯೆ ಹೈವೋಲ್ಟೇಜ್​​ ಪಂದ್ಯ

    ಕೊನೆಗೂ ಮುಂಬೈ ತಂಡಕ್ಕೆ ಸ್ಟಾರ್​ ಬ್ಯಾಟರ್​ ಸೂರ್ಯ​ಕುಮಾರ್​​ ಆಗಮನ

    ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ನೇತೃತ್ವದ ಮುಂಬೈ ಟೀಮ್​ಗೆ ಬಂತು ಆನೆಬಲ

ಇಂದು ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಇಂಡಿಯನ್​ ಪ್ರೀಮಿಯರ್​​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​​​, ರಾಜಸ್ಥಾನ್​ ರಾಯಲ್ಸ್​​​ ತಂಡಗಳು ಮುಖಾಮುಖಿ ಆಗುತ್ತಿವೆ. ಸತತ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್​​​ ಇಂದು ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ.

ಇನ್ನು, ಈ ಮಧ್ಯೆ ಮುಂಬೈ ಇಂಡಿಯನ್ಸ್​​ಗೆ ಸ್ಟಾರ್​ ಬ್ಯಾಟರ್​ ಸೂರ್ಯಕುಮಾರ್ ಯಾದವ್ ಎಂಟ್ರಿ ನೀಡಿದ್ದಾರೆ ಎಂದು ಸುದ್ದಿಯಾಗಿದೆ. ಹೀಗಾಗಿ ಸೂರ್ಯ ಆಗಮನದಿಂದ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ನಾಯಕತ್ವದ ಮುಂಬೈ ತಂಡಕ್ಕೆ ಆನೆಬಲ ಬಂದಿದೆ.

ಕಳೆದ 2 ಪಂದ್ಯಗಳಲ್ಲೂ ಸೂರ್ಯಕುಮಾರ್​ ಯಾದವ್ ಆಡಿರಲಿಲ್ಲ. ಈಗ ಇಂದು ರಾಜಸ್ಥಾನ್​​ ವಿರುದ್ಧ ಪಂದ್ಯದಿಂದ ಸೂರ್ಯ ಕಮ್​ಬ್ಯಾಕ್​ ಮಾಡಲಿದ್ದು, ಮುಂಬೈ ಇಂಡಿಯನ್ಸ್​​ ​​ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ಬಲ ಹೆಚ್ಚಾಗಿದೆ. ಸರ್ಜರಿ ಬಳಿಕ ಇನ್ನೂ ಚೇತರಿಸಿಕೊಳ್ಳದ ಕಾರಣ ಸೂರ್ಯ ಇತ್ತೀಚೆಗೆ ಹಾರ್ಟ್​​ ಇಮೋಜಿಯನ್ನು ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: ಫ್ಯಾನ್ಸ್​ಗೆ ಗುಡ್​ನ್ಯೂಸ್; ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆ.ರಾಹುಲ್​​​​​, ಅಥಿಯಾ ಶೆಟ್ಟಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More