newsfirstkannada.com

Bigg Boss: ಸಂಗೀತಾ ಮೇಲೆ ತನಿಷಾ ದ್ವೇಷದ ಮಾತು.. ಬಿಗ್‌ಬಾಸ್‌ ‘ಬೆಂಕಿ’ಗೂ ತಟ್ಟಿದ ಆಕ್ರೋಶದ ಬಿಸಿ!

Share :

Published January 19, 2024 at 2:19pm

Update January 19, 2024 at 2:20pm

    ನಿಮ್ಮ ಪಯಣ ಇಲ್ಲಿಗೆ ಮುಗಿಯಿತು ಎನ್ನುತ್ತಿದ್ದಂತೆ ತನಿಷಾ ಗರಂ

    ‘ಶೃಂಗೇರಿಗೆ ಹೋಗಿ ಹೇಗೆ ರೆಸ್ಪೆಕ್ಟ್ ಕೊಡಬೇಕು ಅನ್ನೋದನ್ನ ಕಲೀತಿನಿ’

    ಸಂಗೀತಾ ಮೇಲಿನ ಸಿಟ್ಟಿಗೆ ಶೃಂಗೇರಿ ಹೆಸರು ಯಾಕೆ ಬಳಸಬೇಕಿತ್ತು?

ಕನ್ನಡದ ಬಿಗ್‌ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಇರೋದು ಇನ್ನು ಕೇವಲ ಒಂದು ವಾರವಷ್ಟೇ. ಕಳೆದ ವಾರ ಯಾರನ್ನೂ ಎಲಿಮಿನೇಟ್ ಮಾಡದ ಕಾರಣ ಈ ವಾರ ಮಿಡ್ ವೀಕ್ ಎಲಿಮಿನೇಷನ್ ಮಾಡಲಾಗಿದೆ. ಅದರಲ್ಲಿ ಶಾಕಿಂಗ್​ ಎನ್ನುವಂತೆ ಬಿಗ್​ಬಾಸ್​ನಲ್ಲಿ ಬೆಂಕಿ ಅಂತಲೇ ಫೇಮಸ್ ಆಗಿದ್ದ ತನಿಷಾ ಕುಪ್ಪಂಡ ಎಲಿಮಿನೇಟ್ ಆಗಿದ್ದಾರೆ.

 

 

 

ಸಖತ್ ಸ್ಟ್ರಾಂಗ್ ಎನಿಸಿಕೊಂಡಿದ್ದ ತನಿಷಾ ಎಲಿಮಿನೇಟ್ ಆಗಿದ್ದು ಸಹಜವಾಗೇ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಆದ್ರೆ ಇಲ್ಲಿ ಗಮನಿಸಬೇಕಾದ ಒಂದು ವಿಚಾರ ಏನಪ್ಪಾ ಅಂದ್ರೆ ತನಿಷಾ ಆಗಿ ಮನೆ ಒಳಗೆ ಹೋಗಿದ್ದ ತನಿಷಾ ಬೆಂಕಿಯಾದ್ರು. ಮನೆಯಿಂದ ಹೊರ ಬರಬೇಕಾದ್ರೆ ಬೆಂಕಿಯಾಗೇ ಹೊರಬಂದಿದ್ದಾರೆ. ತಮ್ಮ ಮನಸ್ಸಲ್ಲಿದ್ದ ಆವೇಶ, ಆಕ್ರೋಶವನ್ನೆಲ್ಲ ಮನೆ ಮಂದಿ ಮುಂದೆ ಹೊರಹಾಕಿ ಭಾರವಾದ ಮನಸ್ಸಿಂದ ಮನೆಯಿಂದ ಹೊರಗೆ ಬಂದಿದ್ದಾರೆ.

ಫಿನಾಲೆಗೆ ಬಂದೇ ಬರ್ತೀನಿ ಅಂತ ಸಖತ್ ಕಾನ್ಫಿಡೆನ್ಸ್ ಇಟ್ಟುಕೊಂಡಿದ್ದ ತನಿಷಾಗೆ ಬಿಗ್​ಬಾಸ್​ ಕೊಟ್ಟ ಶಾಕ್​ ಬರ ಸಿಡಿಲಿನಂತೆ ಬಂದು ಅಪ್ಪಳಿಸದಂತಾಯಿತು. ತನಿಷಾ ನಿಮ್ಮ ಪಯಣ ಇಲ್ಲಿಗೆ ಮುಗಿಯಿತು ಎನ್ನುತ್ತಿದ್ದಂತೆ ತನಿಷಾ ಕಾರ್ತಿಕ್ ಕಡೆ ತಿರುಗಿ ನೀನೆ ಅಲ್ವಾ ನನ್ನನ್ನು ನಾಮಿನೇಟ್ ಮಾಡಿದ್ದು ಥ್ಯಾಂಕ್ಸ್ ಎಂದು ಹೇಳಿದ್ರು. ಬೆಸ್ಟ್ ಫ್ರೆಂಡ್ ಎನ್ನುತ್ತಿದ್ದ ಕಾರ್ತಿಕ್​ಗೆ ಹೀಗೆ ಕೇಳ್ತಿದ್ದ ಹಾಗೇ ಒಂದು ನಿಮಿಷ ಗಾಬರಿ ಆಗಿ ಆಯ್ತು. ಇದು ಇಷ್ಟಕ್ಕೆ ನಿಲ್ಲಲಿಲ್ಲ. ಮನೆ ಮಂದಿಗೆ ನಿಮಗೆ ಈಗ ಬಹಳ ಖುಷಿ ಆಗ್ತಿರ್ಬೇಕು ಅಲ್ವಾ ನಾನು ಹೊರಗೆ ಹೋಗ್ತಿರೋದು ಎಂದು ಕೇಳಿದ್ರು. ನಿಮ್ಮಗಳಿಂದ ನನಗೆ ಸಾಕಷ್ಟು ನೋವಾಗಿದೆ ಎಂದು ನೇರವಾಗಿಯೇ ತನಿಷಾ ಕಿಡಿಕಾರಿದ್ದಾರೆ.

ನನ್ನನ್ನು ಮನೆ ಒಳಗೆ ಕೆಟ್ಟದಾಗಿ ಕರೆದುಕೊಂಡ್ರಿ ಕಳುಹಿಸುವಾಗಲೂ ಹಾಗೇ ಕೆಟ್ಟದಾಗಿ ಕಳಿಸುತ್ತಿದ್ದೀರಿ ಯಾಕೆ ಎಂದು ತನಿಷಾ ಬಿಗ್​ಬಾಸ್​ಗೂ ಪ್ರಶ್ನೆ ಮಾಡಿ ಗಳಗಳನೆ ಅತ್ತರು. ಮನೆಯ ಬಹುತೇಕ ಸದಸ್ಯರಿಗೆ ಒಂದೊಂದು ರೀತಿಯಲ್ಲಿ ತನಿಷಾ ಕಡೆಯಿಂದ ಟಾಂಟ್ ಬಂತು. ಆದ್ರೆ ಜೀವದ ಸ್ನೇಹಿತೆಯಂತಿದ್ದ ಸಂಗೀತಾ ಮೇಲೆ ತನಿಷಾ ತುಸು ಹೆಚ್ಚೇ ಸಿಟ್ಟಿದ್ದಂತೆ ಕಂಡಿದೆ. ಯಾಕಂದ್ರೆ ಸಂಗೀತಾ ಮುಖ ನೋಡ್ತಾ ತನಿಷಾ ಇನ್ಮೇಲೆ ಖುಷಿಯಾಗಿರಿ, ಶೃಂಗೇರಿಗೆ ಹೋಗಿ ಹೇಗೆ ರೆಸ್ಪೆಕ್ಟ್ ಕೊಡಬೇಕು ಅನ್ನೋದನ್ನ ಕಲೀತಿನಿ ಅನ್ನೋ ಮಾತನಾಡಿದ್ದಾರೆ. ಹೋಗುವ ಮುನ್ನ ಎಲ್ಲರಿಗೂ ಹಗ್ ಕೊಟ್ಟ ತನಿಷಾ ಸಂಗೀತಾ ಕಡೆ ತಿರುಗಿಯೂ ತನಿಷಾ ನೋಡಲಿಲ್ಲ.

ಇದನ್ನೂ ಓದಿ: BBK10: ಬಿಗ್‌ಬಾಸ್ ಮನೆಯಿಂದ ‘ಬೆಂಕಿ’ ಹೊರಗೆ ಬಂತೋ.. ಎಲಿಮಿನೇಟ್ ಮಾಡಿದ್ದಕ್ಕೆ ತನಿಷಾ ಹೇಳಿದ್ದೇನು?

ಬಿಗ್‌ಬಾಸ್ ಸೀಸನ್ 10ರ ಆರಂಭದಲ್ಲಿ ಕ್ಲೋಸ್ ಫ್ರೆಂಡ್ಸ್ ಆಗಿದ್ದ ತನಿಷಾ ಹಾಗೂ ಸಂಗೀತಾ ಸ್ನೇಹದಲ್ಲಿ ನಡುವೆ ಬಿರುಕಾಗಿದ್ದು ನಿಜ. ಆದ್ರೆ ಸಾಮಾನ್ಯವಾಗಿ ಎಷ್ಟೇ ದ್ವೇಷ ಇದ್ದರೂ ಮನೆಯಿಂದ ಹೊರ ಬರುವ ಸ್ಪರ್ಧಿಗಳು ಅದನ್ನೆಲ್ಲ ಮರೆತು ಮನೆಯಿಂದ ಬರ್ತಾರೆ. ಒಳಗಿರುವವರು ಕೂಡ ಅಷ್ಟೇ ಬೇಸರದಿಂದ ಅವರನ್ನು ಕಳುಹಿಸಿಕೊಡ್ತಾರೆ. ಆದ್ರೆ ಸಂಗೀತಾ ಹಾಗೂ ತನಿಷಾ ನಡುವೆ ನಡೆದಿದ್ದು ಮಾತ್ರ ಎಲ್ಲರಿಗೂ ಒಂದು ರೀತಿಯ ಗೊಂದಲ ಹಾಗೂ ಶಾಕ್​ ತಂದಿದೆ. ಇದೆಲ್ಲದರ ನಡುವೆ ಸಂಗೀತಾ ಮೇಲಿನ ಸಿಟ್ಟಿಗೆ ಶೃಂಗೇರಿ ಹೆಸರು ಯಾಕೆ ಬಳಸಬೇಕಿತ್ತು ತನಿಷಾ ಅಂತ ಬಿಗ್​ಬಾಸ್​ ಪ್ರೇಕ್ಷಕರು ಸಿಟ್ಟಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss: ಸಂಗೀತಾ ಮೇಲೆ ತನಿಷಾ ದ್ವೇಷದ ಮಾತು.. ಬಿಗ್‌ಬಾಸ್‌ ‘ಬೆಂಕಿ’ಗೂ ತಟ್ಟಿದ ಆಕ್ರೋಶದ ಬಿಸಿ!

https://newsfirstlive.com/wp-content/uploads/2024/01/Tanisha-Sangeetha-Srungeri.jpg

    ನಿಮ್ಮ ಪಯಣ ಇಲ್ಲಿಗೆ ಮುಗಿಯಿತು ಎನ್ನುತ್ತಿದ್ದಂತೆ ತನಿಷಾ ಗರಂ

    ‘ಶೃಂಗೇರಿಗೆ ಹೋಗಿ ಹೇಗೆ ರೆಸ್ಪೆಕ್ಟ್ ಕೊಡಬೇಕು ಅನ್ನೋದನ್ನ ಕಲೀತಿನಿ’

    ಸಂಗೀತಾ ಮೇಲಿನ ಸಿಟ್ಟಿಗೆ ಶೃಂಗೇರಿ ಹೆಸರು ಯಾಕೆ ಬಳಸಬೇಕಿತ್ತು?

ಕನ್ನಡದ ಬಿಗ್‌ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಇರೋದು ಇನ್ನು ಕೇವಲ ಒಂದು ವಾರವಷ್ಟೇ. ಕಳೆದ ವಾರ ಯಾರನ್ನೂ ಎಲಿಮಿನೇಟ್ ಮಾಡದ ಕಾರಣ ಈ ವಾರ ಮಿಡ್ ವೀಕ್ ಎಲಿಮಿನೇಷನ್ ಮಾಡಲಾಗಿದೆ. ಅದರಲ್ಲಿ ಶಾಕಿಂಗ್​ ಎನ್ನುವಂತೆ ಬಿಗ್​ಬಾಸ್​ನಲ್ಲಿ ಬೆಂಕಿ ಅಂತಲೇ ಫೇಮಸ್ ಆಗಿದ್ದ ತನಿಷಾ ಕುಪ್ಪಂಡ ಎಲಿಮಿನೇಟ್ ಆಗಿದ್ದಾರೆ.

 

 

 

ಸಖತ್ ಸ್ಟ್ರಾಂಗ್ ಎನಿಸಿಕೊಂಡಿದ್ದ ತನಿಷಾ ಎಲಿಮಿನೇಟ್ ಆಗಿದ್ದು ಸಹಜವಾಗೇ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಆದ್ರೆ ಇಲ್ಲಿ ಗಮನಿಸಬೇಕಾದ ಒಂದು ವಿಚಾರ ಏನಪ್ಪಾ ಅಂದ್ರೆ ತನಿಷಾ ಆಗಿ ಮನೆ ಒಳಗೆ ಹೋಗಿದ್ದ ತನಿಷಾ ಬೆಂಕಿಯಾದ್ರು. ಮನೆಯಿಂದ ಹೊರ ಬರಬೇಕಾದ್ರೆ ಬೆಂಕಿಯಾಗೇ ಹೊರಬಂದಿದ್ದಾರೆ. ತಮ್ಮ ಮನಸ್ಸಲ್ಲಿದ್ದ ಆವೇಶ, ಆಕ್ರೋಶವನ್ನೆಲ್ಲ ಮನೆ ಮಂದಿ ಮುಂದೆ ಹೊರಹಾಕಿ ಭಾರವಾದ ಮನಸ್ಸಿಂದ ಮನೆಯಿಂದ ಹೊರಗೆ ಬಂದಿದ್ದಾರೆ.

ಫಿನಾಲೆಗೆ ಬಂದೇ ಬರ್ತೀನಿ ಅಂತ ಸಖತ್ ಕಾನ್ಫಿಡೆನ್ಸ್ ಇಟ್ಟುಕೊಂಡಿದ್ದ ತನಿಷಾಗೆ ಬಿಗ್​ಬಾಸ್​ ಕೊಟ್ಟ ಶಾಕ್​ ಬರ ಸಿಡಿಲಿನಂತೆ ಬಂದು ಅಪ್ಪಳಿಸದಂತಾಯಿತು. ತನಿಷಾ ನಿಮ್ಮ ಪಯಣ ಇಲ್ಲಿಗೆ ಮುಗಿಯಿತು ಎನ್ನುತ್ತಿದ್ದಂತೆ ತನಿಷಾ ಕಾರ್ತಿಕ್ ಕಡೆ ತಿರುಗಿ ನೀನೆ ಅಲ್ವಾ ನನ್ನನ್ನು ನಾಮಿನೇಟ್ ಮಾಡಿದ್ದು ಥ್ಯಾಂಕ್ಸ್ ಎಂದು ಹೇಳಿದ್ರು. ಬೆಸ್ಟ್ ಫ್ರೆಂಡ್ ಎನ್ನುತ್ತಿದ್ದ ಕಾರ್ತಿಕ್​ಗೆ ಹೀಗೆ ಕೇಳ್ತಿದ್ದ ಹಾಗೇ ಒಂದು ನಿಮಿಷ ಗಾಬರಿ ಆಗಿ ಆಯ್ತು. ಇದು ಇಷ್ಟಕ್ಕೆ ನಿಲ್ಲಲಿಲ್ಲ. ಮನೆ ಮಂದಿಗೆ ನಿಮಗೆ ಈಗ ಬಹಳ ಖುಷಿ ಆಗ್ತಿರ್ಬೇಕು ಅಲ್ವಾ ನಾನು ಹೊರಗೆ ಹೋಗ್ತಿರೋದು ಎಂದು ಕೇಳಿದ್ರು. ನಿಮ್ಮಗಳಿಂದ ನನಗೆ ಸಾಕಷ್ಟು ನೋವಾಗಿದೆ ಎಂದು ನೇರವಾಗಿಯೇ ತನಿಷಾ ಕಿಡಿಕಾರಿದ್ದಾರೆ.

ನನ್ನನ್ನು ಮನೆ ಒಳಗೆ ಕೆಟ್ಟದಾಗಿ ಕರೆದುಕೊಂಡ್ರಿ ಕಳುಹಿಸುವಾಗಲೂ ಹಾಗೇ ಕೆಟ್ಟದಾಗಿ ಕಳಿಸುತ್ತಿದ್ದೀರಿ ಯಾಕೆ ಎಂದು ತನಿಷಾ ಬಿಗ್​ಬಾಸ್​ಗೂ ಪ್ರಶ್ನೆ ಮಾಡಿ ಗಳಗಳನೆ ಅತ್ತರು. ಮನೆಯ ಬಹುತೇಕ ಸದಸ್ಯರಿಗೆ ಒಂದೊಂದು ರೀತಿಯಲ್ಲಿ ತನಿಷಾ ಕಡೆಯಿಂದ ಟಾಂಟ್ ಬಂತು. ಆದ್ರೆ ಜೀವದ ಸ್ನೇಹಿತೆಯಂತಿದ್ದ ಸಂಗೀತಾ ಮೇಲೆ ತನಿಷಾ ತುಸು ಹೆಚ್ಚೇ ಸಿಟ್ಟಿದ್ದಂತೆ ಕಂಡಿದೆ. ಯಾಕಂದ್ರೆ ಸಂಗೀತಾ ಮುಖ ನೋಡ್ತಾ ತನಿಷಾ ಇನ್ಮೇಲೆ ಖುಷಿಯಾಗಿರಿ, ಶೃಂಗೇರಿಗೆ ಹೋಗಿ ಹೇಗೆ ರೆಸ್ಪೆಕ್ಟ್ ಕೊಡಬೇಕು ಅನ್ನೋದನ್ನ ಕಲೀತಿನಿ ಅನ್ನೋ ಮಾತನಾಡಿದ್ದಾರೆ. ಹೋಗುವ ಮುನ್ನ ಎಲ್ಲರಿಗೂ ಹಗ್ ಕೊಟ್ಟ ತನಿಷಾ ಸಂಗೀತಾ ಕಡೆ ತಿರುಗಿಯೂ ತನಿಷಾ ನೋಡಲಿಲ್ಲ.

ಇದನ್ನೂ ಓದಿ: BBK10: ಬಿಗ್‌ಬಾಸ್ ಮನೆಯಿಂದ ‘ಬೆಂಕಿ’ ಹೊರಗೆ ಬಂತೋ.. ಎಲಿಮಿನೇಟ್ ಮಾಡಿದ್ದಕ್ಕೆ ತನಿಷಾ ಹೇಳಿದ್ದೇನು?

ಬಿಗ್‌ಬಾಸ್ ಸೀಸನ್ 10ರ ಆರಂಭದಲ್ಲಿ ಕ್ಲೋಸ್ ಫ್ರೆಂಡ್ಸ್ ಆಗಿದ್ದ ತನಿಷಾ ಹಾಗೂ ಸಂಗೀತಾ ಸ್ನೇಹದಲ್ಲಿ ನಡುವೆ ಬಿರುಕಾಗಿದ್ದು ನಿಜ. ಆದ್ರೆ ಸಾಮಾನ್ಯವಾಗಿ ಎಷ್ಟೇ ದ್ವೇಷ ಇದ್ದರೂ ಮನೆಯಿಂದ ಹೊರ ಬರುವ ಸ್ಪರ್ಧಿಗಳು ಅದನ್ನೆಲ್ಲ ಮರೆತು ಮನೆಯಿಂದ ಬರ್ತಾರೆ. ಒಳಗಿರುವವರು ಕೂಡ ಅಷ್ಟೇ ಬೇಸರದಿಂದ ಅವರನ್ನು ಕಳುಹಿಸಿಕೊಡ್ತಾರೆ. ಆದ್ರೆ ಸಂಗೀತಾ ಹಾಗೂ ತನಿಷಾ ನಡುವೆ ನಡೆದಿದ್ದು ಮಾತ್ರ ಎಲ್ಲರಿಗೂ ಒಂದು ರೀತಿಯ ಗೊಂದಲ ಹಾಗೂ ಶಾಕ್​ ತಂದಿದೆ. ಇದೆಲ್ಲದರ ನಡುವೆ ಸಂಗೀತಾ ಮೇಲಿನ ಸಿಟ್ಟಿಗೆ ಶೃಂಗೇರಿ ಹೆಸರು ಯಾಕೆ ಬಳಸಬೇಕಿತ್ತು ತನಿಷಾ ಅಂತ ಬಿಗ್​ಬಾಸ್​ ಪ್ರೇಕ್ಷಕರು ಸಿಟ್ಟಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More