newsfirstkannada.com

BBK10: ಬಿಗ್‌ಬಾಸ್ ಮನೆಯಿಂದ ‘ಬೆಂಕಿ’ ಹೊರಗೆ ಬಂತೋ.. ಎಲಿಮಿನೇಟ್ ಮಾಡಿದ್ದಕ್ಕೆ ತನಿಷಾ ಹೇಳಿದ್ದೇನು?

Share :

Published January 18, 2024 at 8:10pm

Update January 18, 2024 at 8:14pm

    ವಾರದ ಮಧ್ಯೆ ಎಲಿಮಿನೇಷನ್ ಆದ ತನಿಷಾ ಕುಪ್ಪಂಡ

    ಈ ವಾರದ ಅಂತ್ಯಕ್ಕೆ ಒಬ್ಬರು ಎಲಿಮಿನೇಷನ್ ಆಗೋದು ಪಕ್ಕಾ

    ಮನೆ ಸದಸ್ಯರಿಗೆಲ್ಲಾ ಸಂತೋಷ ಆಗಿದೆ ಅಲ್ವಾ ಎಂದಿದ್ದ ತನಿಷಾ!

ಬಿಗ್‌ಬಾಸ್ ಸೀಸನ್ 10ರಲ್ಲಿ ಬೆಂಕಿಯಂತ ಎಲಿಮಿನೇಷನ್ ಆಗಿದೆ. ಬಿಗ್‌ಬಾಸ್ ಮನೆಯಲ್ಲಿ ಬೆಂಕಿ ಎಂದೇ ಫೇಮಸ್ ಆಗಿದ್ದ ತನಿಷಾ ಅವರು ಈ ವಾರದ ಮಧ್ಯೆ ಎಲಿಮಿನೇಟ್ ಆಗಿರೋದು ಪಕ್ಕಾ ಆಗಿದೆ. ಬಿಗ್‌ಬಾಸ್ ಕೊಟ್ಟ ಎಲಿಮಿನೇಷನ್ ಶಾಕ್‌ಗೆ ಕಣ್ಣೀರು ಹಾಕಿದ್ದ ತನಿಷಾ ಕುಪ್ಪಂಡ, ಮನೆ ಸದಸ್ಯರಿಗೆಲ್ಲಾ ಈಗ ಸಂತೋಷ ಆಗಿದೆ ಅಲ್ವಾ ಎಂದು ಕಣ್ಣೀರು ಹಾಕುತ್ತಾ ಹೊರ ಬಂದಿದ್ದರು.

ಬಿಗ್‌ಬಾಸ್ ಮನೆಯಲ್ಲಿ ಔಟ್ ಆದ ತನಿಷಾ ಅವರನ್ನು ಸೀಕ್ರೆಟ್ ರೂಮ್‌ನಲ್ಲಿ ಇರಿಸಲಾಗಿದೆ ಅಂತಾ ಹೇಳಲಾಗಿತ್ತು. ಆದರೆ ಅದು ಸುಳ್ಳಾಗಿದೆ. ಈ ವಾರದ ಮಧ್ಯೆ ಎಲಿಮಿನೇಷನ್ ಆದ ತನಿಷಾ ಕುಪ್ಪಂಡ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಈ ಬಗ್ಗೆ ಖುದ್ದು ತನಿಷಾ ಅವರೇ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.

ತನಿಷಾ ತಮ್ಮ ಇನ್ಸ್‌ಸ್ಟಾಗ್ರಾಂನಲ್ಲಿ ಪಯಣದ ಕೊನೆಯ ಮಾತು ಎಲ್ಲರಿಗೂ ಶುಭವಾಗಲಿ, ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಸದಾ ಚಿರಋಣಿ ಎಂದು ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಬಿಗ್‌ಬಾಸ್‌ ಮನೆಯಿಂದ ಬೆಂಕಿ ಬಂತೋ ಅನ್ನೋ ಅಭಿಮಾನಿಗಳ ಹಾಡು ನೋಡಿ ತುಂಬು ಹೃದಯದ ಧನ್ಯವಾದ ಹೇಳಿದ್ದಾರೆ. ತನಿಷಾ ಅವರು ಎಲಿಮಿನೇಷನ್‌ನಿಂದ ಬಿಗ್‌ಬಾಸ್ ಫಿನಾಲೆ ಮತ್ತಷ್ಟು ಕುತೂಹಲ ಕೆರಳಿಸಿದೆ. ಇನ್ನೂ ಈ ವಾರದ ಎಲಿಮಿನೇಷನ್‌ನಲ್ಲಿ ಮತ್ತೂ ಒಬ್ಬರು ಎಲಿಮಿನೇಟ್ ಆಗೋದು ಪಕ್ಕಾ ಆಗಿದೆ.

ಇದನ್ನೂ ಓದಿ: BBK10: ಕೊನೆಗೂ ಕಿಚ್ಚ ಸುದೀಪ್ ಕ್ಷಮೆ ಕೇಳಿದ ರಕ್ಷಕ್‌ ಬುಲೆಟ್‌; ಏನಿದು ಕಿರಿಕ್‌? ಅಸಲಿಗೆ ಆಗಿದ್ದೇನು?

ಸದ್ಯ ಬಿಗ್‌ಬಾಸ್ ಮನೆಯಲ್ಲಿ ವಿನಯ್, ಸಂಗೀತಾ, ಡ್ರೋನ್ ಪ್ರತಾಪ್, ಕಾರ್ತಿಕ್, ನಮ್ರತಾ, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಉಳಿದಿದ್ದಾರೆ. ಇವರಲ್ಲಿ ಈ ವಾರದ ಅಂತ್ಯಕ್ಕೆ ಒಬ್ಬರು ಎಲಿಮಿನೇಷನ್ ಆಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಬಿಗ್‌ಬಾಸ್ ಮನೆಯಿಂದ ‘ಬೆಂಕಿ’ ಹೊರಗೆ ಬಂತೋ.. ಎಲಿಮಿನೇಟ್ ಮಾಡಿದ್ದಕ್ಕೆ ತನಿಷಾ ಹೇಳಿದ್ದೇನು?

https://newsfirstlive.com/wp-content/uploads/2024/01/Tanisha-Kuppanda-1.jpg

    ವಾರದ ಮಧ್ಯೆ ಎಲಿಮಿನೇಷನ್ ಆದ ತನಿಷಾ ಕುಪ್ಪಂಡ

    ಈ ವಾರದ ಅಂತ್ಯಕ್ಕೆ ಒಬ್ಬರು ಎಲಿಮಿನೇಷನ್ ಆಗೋದು ಪಕ್ಕಾ

    ಮನೆ ಸದಸ್ಯರಿಗೆಲ್ಲಾ ಸಂತೋಷ ಆಗಿದೆ ಅಲ್ವಾ ಎಂದಿದ್ದ ತನಿಷಾ!

ಬಿಗ್‌ಬಾಸ್ ಸೀಸನ್ 10ರಲ್ಲಿ ಬೆಂಕಿಯಂತ ಎಲಿಮಿನೇಷನ್ ಆಗಿದೆ. ಬಿಗ್‌ಬಾಸ್ ಮನೆಯಲ್ಲಿ ಬೆಂಕಿ ಎಂದೇ ಫೇಮಸ್ ಆಗಿದ್ದ ತನಿಷಾ ಅವರು ಈ ವಾರದ ಮಧ್ಯೆ ಎಲಿಮಿನೇಟ್ ಆಗಿರೋದು ಪಕ್ಕಾ ಆಗಿದೆ. ಬಿಗ್‌ಬಾಸ್ ಕೊಟ್ಟ ಎಲಿಮಿನೇಷನ್ ಶಾಕ್‌ಗೆ ಕಣ್ಣೀರು ಹಾಕಿದ್ದ ತನಿಷಾ ಕುಪ್ಪಂಡ, ಮನೆ ಸದಸ್ಯರಿಗೆಲ್ಲಾ ಈಗ ಸಂತೋಷ ಆಗಿದೆ ಅಲ್ವಾ ಎಂದು ಕಣ್ಣೀರು ಹಾಕುತ್ತಾ ಹೊರ ಬಂದಿದ್ದರು.

ಬಿಗ್‌ಬಾಸ್ ಮನೆಯಲ್ಲಿ ಔಟ್ ಆದ ತನಿಷಾ ಅವರನ್ನು ಸೀಕ್ರೆಟ್ ರೂಮ್‌ನಲ್ಲಿ ಇರಿಸಲಾಗಿದೆ ಅಂತಾ ಹೇಳಲಾಗಿತ್ತು. ಆದರೆ ಅದು ಸುಳ್ಳಾಗಿದೆ. ಈ ವಾರದ ಮಧ್ಯೆ ಎಲಿಮಿನೇಷನ್ ಆದ ತನಿಷಾ ಕುಪ್ಪಂಡ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಈ ಬಗ್ಗೆ ಖುದ್ದು ತನಿಷಾ ಅವರೇ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.

ತನಿಷಾ ತಮ್ಮ ಇನ್ಸ್‌ಸ್ಟಾಗ್ರಾಂನಲ್ಲಿ ಪಯಣದ ಕೊನೆಯ ಮಾತು ಎಲ್ಲರಿಗೂ ಶುಭವಾಗಲಿ, ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಸದಾ ಚಿರಋಣಿ ಎಂದು ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಬಿಗ್‌ಬಾಸ್‌ ಮನೆಯಿಂದ ಬೆಂಕಿ ಬಂತೋ ಅನ್ನೋ ಅಭಿಮಾನಿಗಳ ಹಾಡು ನೋಡಿ ತುಂಬು ಹೃದಯದ ಧನ್ಯವಾದ ಹೇಳಿದ್ದಾರೆ. ತನಿಷಾ ಅವರು ಎಲಿಮಿನೇಷನ್‌ನಿಂದ ಬಿಗ್‌ಬಾಸ್ ಫಿನಾಲೆ ಮತ್ತಷ್ಟು ಕುತೂಹಲ ಕೆರಳಿಸಿದೆ. ಇನ್ನೂ ಈ ವಾರದ ಎಲಿಮಿನೇಷನ್‌ನಲ್ಲಿ ಮತ್ತೂ ಒಬ್ಬರು ಎಲಿಮಿನೇಟ್ ಆಗೋದು ಪಕ್ಕಾ ಆಗಿದೆ.

ಇದನ್ನೂ ಓದಿ: BBK10: ಕೊನೆಗೂ ಕಿಚ್ಚ ಸುದೀಪ್ ಕ್ಷಮೆ ಕೇಳಿದ ರಕ್ಷಕ್‌ ಬುಲೆಟ್‌; ಏನಿದು ಕಿರಿಕ್‌? ಅಸಲಿಗೆ ಆಗಿದ್ದೇನು?

ಸದ್ಯ ಬಿಗ್‌ಬಾಸ್ ಮನೆಯಲ್ಲಿ ವಿನಯ್, ಸಂಗೀತಾ, ಡ್ರೋನ್ ಪ್ರತಾಪ್, ಕಾರ್ತಿಕ್, ನಮ್ರತಾ, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಉಳಿದಿದ್ದಾರೆ. ಇವರಲ್ಲಿ ಈ ವಾರದ ಅಂತ್ಯಕ್ಕೆ ಒಬ್ಬರು ಎಲಿಮಿನೇಷನ್ ಆಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More