/newsfirstlive-kannada/media/post_attachments/wp-content/uploads/2024/08/Gambhir_Rohit-Fight-1.jpg)
ಟೀಮ್ ಇಂಡಿಯಾದ ಮುಖ್ಯ ಕೋಚ್​​ ಗೌತಮ್ ಗಂಭೀರ್ ಆಲ್ ಟೈಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಹಲವು ಸ್ಟಾರ್ ಆಟಗಾರರಿಗೆ ಸ್ಥಾನ ನೀಡಿದ್ದು, ವಿಶ್ವ ವಿಜೇತ ನಾಯಕನ ಹೆಸರನ್ನೇ ಕೈ ಬಿಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ.
ಯಾರಿಗಿಲ್ಲಾ ಅವಕಾಶ?
ಮುಖ್ಯ ಕೋಚ್​ ಗೌತಮ್​​ ಗಂಭೀರ್​ ಆಯ್ಕೆ ಮಾಡಿದ ಆಲ್ಟೈಮ್ ಪ್ಲೇಯಿಂಗ್ ಇಲೆವೆನ್​ನಿಂದ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರಿಗೆ ಸ್ಥಾನವಿಲ್ಲ. ಇತ್ತೀಚೆಗೆ ವೆಸ್ಟ್​ ಇಂಡೀಸ್​ ಮತ್ತು ಯುಎಸ್​ನಲ್ಲಿ ನಡೆದ ಟಿ20 ವಿಶ್ವಕಪ್​​​ನಲ್ಲಿ ಟೀಮ್​ ಇಂಡಿಯಾ ಚಾಂಪಿಯನ್​ ಆಗಲು ಪ್ರಮುಖ ಕಾರಣ ಕ್ಯಾಪ್ಟನ್​ ರೋಹಿತ್​ ಶರ್ಮಾ. ಇವರನ್ನೇ ಆಲ್​ಟೈಮ್​ ಪ್ಲೇಯಿಂಗ್​ ಎಲೆವೆನ್​ನಿಂದ ಗಂಭೀರ್​​ ಕೈ ಬಿಟ್ಟ ಹಿಂದಿನ ಉದ್ದೇಶವೇನು? ಅನ್ನೋದರ ಚರ್ಚೆ ನಡೆಯುತ್ತಿದೆ.
/newsfirstlive-kannada/media/post_attachments/wp-content/uploads/2024/08/ROHIT-SHARMA-4-1.jpg)
ಕೇವಲ ರೋಹಿತ್ ಶರ್ಮಾ ಮಾತ್ರವಲ್ಲ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಇನ್ನೋರ್ವ ವಿಶ್ವಕಪ್ ವಿಜೇತ ನಾಯಕರನ್ನು ಸಹ ಕಡೆಗಣನೆ ಮಾಡಿದ್ದಾರೆ. 1983 ವಿಶ್ವಕಪ್ ತಂಡದ ನಾಯಕ ಕಪಿಲ್ ದೇವ್ ಅವರನ್ನು ಪ್ಲೇಯಿಂಗ್​ ಎಲೆವೆನ್​​ನಿಂದ ಕೈ ಬಿಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us