/newsfirstlive-kannada/media/post_attachments/wp-content/uploads/2024/08/Rohit_Gambhir.jpg)
ಇತ್ತೀಚೆಗಷ್ಟೇ ಟೀಮ್ ಇಂಡಿಯಾದ ಮುಖ್ಯ ಕೋಚ್​​ ಗೌತಮ್ ಗಂಭೀರ್ ಆಲ್ ಟೈಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದ್ರು. ಈ ತಂಡದಲ್ಲಿ ಹಲವು ಸ್ಟಾರ್ ಆಟಗಾರರಿಗೆ ಸ್ಥಾನ ನೀಡಿದ್ದು, ವಿಶ್ವ ವಿಜೇತ ನಾಯಕರ ಹೆಸರನ್ನೇ ಕೈ ಬಿಟ್ಟಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಯಾರಿಗಿಲ್ಲಾ ಅವಕಾಶ?
ಮುಖ್ಯ ಕೋಚ್​ ಗೌತಮ್​​ ಗಂಭೀರ್​ ಆಯ್ಕೆ ಮಾಡಿದ ಆಲ್ ಟೈಮ್ ಪ್ಲೇಯಿಂಗ್ ಇಲೆವೆನ್​ನಿಂದ ವಿಶ್ವಕಪ್​ ವಿನ್ನಿಂಗ್​ ಕ್ಯಾಪ್ಟನ್​​ ಕಪಿಲ್​ ದೇವ್​ ಅವರಿಗೆ ಸ್ಥಾನವಿಲ್ಲ. ಟೀಮ್ ಇಂಡಿಯಾದ ಸ್ಟಾರ್​ ಪ್ಲೇಯರ್​​ ಮತ್ತು ವಿಶ್ವಕಪ್ ವಿಜೇತ ನಾಯಕನನ್ನೇ ಕಡೆಗಣನೆ ಮಾಡಿದ್ದಾರೆ. 1983 ವಿಶ್ವಕಪ್ ತಂಡದ ನಾಯಕ ಕಪಿಲ್ ದೇವ್ ಅವರನ್ನು ಪ್ಲೇಯಿಂಗ್​ ಎಲೆವೆನ್​​ನಿಂದ ಕೈ ಬಿಡಲಾಗಿದೆ.
/newsfirstlive-kannada/media/post_attachments/wp-content/uploads/2023/11/KAPIL-DEV.jpg)
ಕಳೆದ ಒಂದೂವರೆ ತಿಂಗಳ ಹಿಂದೆ ವೆಸ್ಟ್​ ಇಂಡೀಸ್​ ಮತ್ತು ಯುಎಸ್​ನಲ್ಲಿ ನಡೆದ ಟಿ20 ವಿಶ್ವಕಪ್​​​ನಲ್ಲಿ ಟೀಮ್​ ಇಂಡಿಯಾ ಚಾಂಪಿಯನ್​ ಆಗಲು ಪ್ರಮುಖ ಕಾರಣ ಕ್ಯಾಪ್ಟನ್​ ರೋಹಿತ್​ ಶರ್ಮಾ. ಇವರನ್ನೂ ಕೂಡ ಆಲ್​ ಟೈಮ್​ ಪ್ಲೇಯಿಂಗ್​ ಎಲೆವೆನ್​ನಿಂದ ಗಂಭೀರ್​​ ಕೈ ಬಿಟ್ಟ ಹಿಂದಿನ ಉದ್ದೇಶವೇನು? ಅನ್ನೋದರ ಚರ್ಚೆ ನಡೆಯುತ್ತಿದೆ.
ಗಂಭೀರ್ ಆಲ್ ಟೈಮ್ ಇಂಡಿಯಾ ತಂಡ ಹೀಗಿದೆ..!
ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಎಂಎಸ್ ಧೋನಿ (ವಿಕೆಟ್ ಕೀಪರ್), ಅನಿಲ್ ಕುಂಬ್ಳೆ, ರವಿಚಂದ್ರನ್ ಅಶ್ವಿನ್, ಇರ್ಫಾನ್ ಪಠಾಣ್, ಜಹೀರ್ ಖಾನ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us