newsfirstkannada.com

ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾಗೆ ಸಂಕಷ್ಟ.. ಅಯ್ಯೋ ಏನಾಯ್ತು..?

Share :

Published July 1, 2024 at 8:51am

    ಟಿ20 ವಿಶ್ವಕಪ್​​ಗೆ ಮುತ್ತಿಟ್ಟಿರುವ ಭಾರತ ತಂಡ

    ಬಾರ್ಬಡೋಸ್​ನಲ್ಲೇ ಲಾಕ್, ಅಸಲಿಗೆ ಆಗಿದ್ದೇನು?

    ಬಾರ್ಬಡೋಸ್‌ನಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ

ವಿಶ್ವಕಪ್​​ ಗೆದ್ದ ಖುಷಿಯಲ್ಲಿರುವ ಭಾರತ ತಂಡವು ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಫೈನಲ್ ಗೆದ್ದ ನಂತರ ಬಾರ್ಬಡೋಸ್‌ನಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಬಾರ್ಬಡೋಸ್​ ಸೈಕ್ಲೋನ್ ಎಫೆಕ್ಟ್​​ಗೆ ಒಳಾಗಿದ್ದು, ಟೀಂ ಇಂಡಿಯಾ ಅಲ್ಲೇ ಲಾಕ್ ಆಗಿದೆ.

ಭಾರತ ತಂಡವು ಬಾರ್ಬಡೋಸ್​ನಿಂದ ನ್ಯೂಯಾರ್ಕ್​​ಗೆ ತೆರಳಬೇಕಾಗಿತ್ತು. ಆದರೆ ಚಂಡಮಾರುತದಿಂದ ಹೊರಡಲು ಇನ್ನೂ ಸಾಧ್ಯವಾಗಿಲ್ಲ. ಪ್ರತಿಕೂಲ ಹವಾಮಾನದಿಂದಾಗಿ ಟೀಂ ಇಂಡಿಯಾ ಸಂಕಷ್ಟದಲ್ಲಿದ್ದು, ಬಾರ್ಬಡೋಸ್ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಗುಡ್​​ನ್ಯೂಸ್​.. ಸಿಲಿಂಡರ್ ಬೆಲೆಯಲ್ಲಿ ಮತ್ತೆ ಇಳಿಕೆ..!

ವರದಿಗಳ ಪ್ರಕಾರ ಬಾರ್ಬಡೋಸ್​ನಲ್ಲಿ ರೆಡ್​ ಅಲರ್ಟ್ ಘೋಷಣೆ ಮಾಡಲಾಗಿದೆ. ಮನೆಯಿಂದ ಯಾರಿಗೂ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ. ಬೆರಿಲ್ ಚಂಡಮಾರುತದಿಂದಾಗಿ ಅತ್ಯಂತ ಕಷ್ಟಕರ ಪರಿಸ್ಥಿತಿ ಉದ್ಭವಿಸಿದೆ ಎನ್ನಲಾಗಿದೆ.

ಟೀಂ ಇಂಡಿಯಾ ಕತೆ ಏನು?
ವರದಿಗಳ ಪ್ರಕಾರ.. ಸೈಕ್ಲೋನ್​​ನಿಂದಾಗಿ ಟೀಂ ಇಂಡಿಯಾ ನ್ಯೂಯಾರ್ಕ್ ಹೋಗುವ ಪ್ಲಾನ್ ಕ್ಯಾನ್ಸಲ್ ಮಾಡಲಾಗಿದೆ. ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ನೇರವಾಗಿ ದೆಹಲಿಗೆ ಬರಲಿದ್ದಾರೆ. ಸದ್ಯ ಪರಿಸ್ಥಿತಿ ಸುಧಾರಿಸುವ ವರೆಗೂ ಅವರು ಅಲ್ಲೇ ಕಾಯಬೇಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜುಲೈ 3 ರಂದು ಟೀಂ ಇಂಡಿಯಾ ತಾಯ್ನಾಡಿಗೆ ಮರಳಬಹುದು.

ಇದನ್ನೂ ಓದಿ:3 ಹೊಸ ಕ್ರಿಮಿನಲ್ ಕಾನೂನು ಜಾರಿ.. ಇವು ನ್ಯಾಯ ವ್ಯವಸ್ಥೆ, ನಾಗರಿಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾಗೆ ಸಂಕಷ್ಟ.. ಅಯ್ಯೋ ಏನಾಯ್ತು..?

https://newsfirstlive.com/wp-content/uploads/2024/07/Team-india-13.jpg

    ಟಿ20 ವಿಶ್ವಕಪ್​​ಗೆ ಮುತ್ತಿಟ್ಟಿರುವ ಭಾರತ ತಂಡ

    ಬಾರ್ಬಡೋಸ್​ನಲ್ಲೇ ಲಾಕ್, ಅಸಲಿಗೆ ಆಗಿದ್ದೇನು?

    ಬಾರ್ಬಡೋಸ್‌ನಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ

ವಿಶ್ವಕಪ್​​ ಗೆದ್ದ ಖುಷಿಯಲ್ಲಿರುವ ಭಾರತ ತಂಡವು ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಫೈನಲ್ ಗೆದ್ದ ನಂತರ ಬಾರ್ಬಡೋಸ್‌ನಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಬಾರ್ಬಡೋಸ್​ ಸೈಕ್ಲೋನ್ ಎಫೆಕ್ಟ್​​ಗೆ ಒಳಾಗಿದ್ದು, ಟೀಂ ಇಂಡಿಯಾ ಅಲ್ಲೇ ಲಾಕ್ ಆಗಿದೆ.

ಭಾರತ ತಂಡವು ಬಾರ್ಬಡೋಸ್​ನಿಂದ ನ್ಯೂಯಾರ್ಕ್​​ಗೆ ತೆರಳಬೇಕಾಗಿತ್ತು. ಆದರೆ ಚಂಡಮಾರುತದಿಂದ ಹೊರಡಲು ಇನ್ನೂ ಸಾಧ್ಯವಾಗಿಲ್ಲ. ಪ್ರತಿಕೂಲ ಹವಾಮಾನದಿಂದಾಗಿ ಟೀಂ ಇಂಡಿಯಾ ಸಂಕಷ್ಟದಲ್ಲಿದ್ದು, ಬಾರ್ಬಡೋಸ್ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಗುಡ್​​ನ್ಯೂಸ್​.. ಸಿಲಿಂಡರ್ ಬೆಲೆಯಲ್ಲಿ ಮತ್ತೆ ಇಳಿಕೆ..!

ವರದಿಗಳ ಪ್ರಕಾರ ಬಾರ್ಬಡೋಸ್​ನಲ್ಲಿ ರೆಡ್​ ಅಲರ್ಟ್ ಘೋಷಣೆ ಮಾಡಲಾಗಿದೆ. ಮನೆಯಿಂದ ಯಾರಿಗೂ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ. ಬೆರಿಲ್ ಚಂಡಮಾರುತದಿಂದಾಗಿ ಅತ್ಯಂತ ಕಷ್ಟಕರ ಪರಿಸ್ಥಿತಿ ಉದ್ಭವಿಸಿದೆ ಎನ್ನಲಾಗಿದೆ.

ಟೀಂ ಇಂಡಿಯಾ ಕತೆ ಏನು?
ವರದಿಗಳ ಪ್ರಕಾರ.. ಸೈಕ್ಲೋನ್​​ನಿಂದಾಗಿ ಟೀಂ ಇಂಡಿಯಾ ನ್ಯೂಯಾರ್ಕ್ ಹೋಗುವ ಪ್ಲಾನ್ ಕ್ಯಾನ್ಸಲ್ ಮಾಡಲಾಗಿದೆ. ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ನೇರವಾಗಿ ದೆಹಲಿಗೆ ಬರಲಿದ್ದಾರೆ. ಸದ್ಯ ಪರಿಸ್ಥಿತಿ ಸುಧಾರಿಸುವ ವರೆಗೂ ಅವರು ಅಲ್ಲೇ ಕಾಯಬೇಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜುಲೈ 3 ರಂದು ಟೀಂ ಇಂಡಿಯಾ ತಾಯ್ನಾಡಿಗೆ ಮರಳಬಹುದು.

ಇದನ್ನೂ ಓದಿ:3 ಹೊಸ ಕ್ರಿಮಿನಲ್ ಕಾನೂನು ಜಾರಿ.. ಇವು ನ್ಯಾಯ ವ್ಯವಸ್ಥೆ, ನಾಗರಿಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More