ಭಾರತೀಯ ಕ್ರಿಕೆಟ್ನ ಗೋಲ್ಡನ್ ಮೂಮೆಂಟ್ಸ್
ಮರೆಯಲಾಗದ 5 ಅವಿಸ್ಮರಣೀಯ ಕ್ಷಣಗಳಿವು
ಒಂದೊಂದು ಗೆಲುವಿನ ಕತೆಯೂ ರೋಚಕ
ಟೀಮ್ ಇಂಡಿಯಾ ಫ್ಯಾನ್ಸ್ ಹಾಗೂ ಆಟಗಾರರ ನಡುವೆ ವಿಶೇಷವಾದ ಬಂಧವಿದೆ. ಗೆದ್ದಾಗ ಸಂಭ್ರಮಿಸೋ ಭಾರತೀಯ ಫ್ಯಾನ್ಸ್, ಸೋತಾಗ ತಂಡ ಹಾಗೂ ಆಟಗಾರರ ಜೊತೆ ನಿಲ್ತಾರೆ. ಸದಾ ಬೆಂಬಲಿಸೋ ಫ್ಯಾನ್ಸ್ ಟೀಮ್ ಇಂಡಿಯಾ ಆಟಗಾರರು ಐದು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ.
ಭಾರತದಲ್ಲಿ ಜಂಟಲ್ಮನ್ ಗೇಮ್ ಕ್ರಿಕೆಟ್ಗೆ ವಿಶೇಷವಾದ ಸ್ಥಾನವಿದೆ. ಇಲ್ಲಿ ಕ್ರಿಕೆಟ್ ಅನ್ನೋ ಗೇಮ್ ಧರ್ಮದ ಸ್ಥಾನ ಪಡೆದಿದೆ. ಆಟಗಾರರನ್ನ ಅಕ್ಷರಶಃ ದೇವರಂತೆ ಅಭಿಮಾನಿಗಳು ಆರಾಧಿಸ್ತಾರೆ. ಇದು ಇಂದು-ನಿನ್ನೆಯ ಕತೆಯಲ್ಲ. ಭಾರತ ತಂಡವಾಗಿ ಯಾವಾಗ ಕ್ರಿಕೆಟ್ ಆಡಲು ಆರಂಭಿಸ್ತೋ ಅಂದಿನಿಂದ ನಡೆದು ಬಂದಿರೋದು. ಇಂತಹ ಅಭಿಮಾನಿಗಳಿಗೆ ಟೀಮ್ ಇಂಡಿಯಾ ಆಟಗಾರರು ಐದು ಅವಿಸ್ಮರಣೀಯ ಗಿಫ್ಟ್ ನೀಡಿದ್ದಾರೆ. ಎಂದೆಂದಿಗೂ ಬೆಲೆ ಕಟ್ಟಲಾಗದ ಉಡುಗೊರೆಗಳವು.
ಇದನ್ನೂ ಓದಿ:ಮುಡಾ ಹಗರಣ ಬಯಲು ಬೆನ್ನಲ್ಲೇ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ವರ್ಗಾವಣೆ
ನಂ.1: 25, ಜೂನ್ 1983
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ಎಂದಿಗೂ ಮರೆಯಾಗದ ಕ್ಷಣವಿದು. ಆಗ ಕ್ರಿಕೆಟ್ ಲೋಕದಲ್ಲಿ ಬಲಾಢ್ಯ ತಂಡಗಳ ಪಾರುಪತ್ಯ ನಡೆಯುತ್ತಿತ್ತು. ಆ ಬಲಿಷ್ಠ ತಂಡಗಳಿಗೆ ಭಾರತ ತಂಡ ಲೆಕ್ಕಕ್ಕೇ ಇರಲಿಲ್ಲ. 1983 ವಿಶ್ವಕಪ್ಗೆ ಆಡಲು ಇಂಗ್ಲೆಂಡ್ಗೆ ಭಾರತ ತಂಡ ತೆರಳಿದಾಗ ಕಪಿಲ್ ದೇವ್ ಪಡೆ ಕಪ್ ಗೆಲ್ಲುತ್ತೆ ಎಂದು ಯಾರೊಬ್ಬರೂ ಕೂಡ ಊಹಿಸಿಯೂ ಇರಲಿಲ್ಲ. ಫೈನಲ್ ಫೈಟ್ನಲ್ಲಿ ಬಲಾಢ್ಯ ವೆಸ್ಟ್ಇಂಡೀಸ್ಗೆ ಸೋಲಿನ ರುಚಿ ತೋರಿಸಿದ ಟೀಮ್ ಇಂಡಿಯಾ ಚೊಚ್ಚಲ ವಿಶ್ವಕಪ್ ಗೆದ್ದು ಬೀಗಿತ್ತು.
ನಂ.2: 24, ಸೆಪ್ಟೆಂಬರ್ 2007
2007 ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತಿತ್ತು. ದ್ರಾವಿಡ್, ಸಚಿನ್, ಲಕ್ಷ್ಮಣ್, ಗಂಗೂಲಿ ಸೇರಿದಂತೆ ಸೀನಿಯರ್ ಆಟಗಾರರ ಮೇಲೆ ಜ್ವಾಲೆ ಹೊತ್ತಿ ಉರಿದಿತ್ತು. ಬೆನ್ನಲ್ಲೇ, ಚೊಚ್ಚಲ ಟಿ20 ವಿಶ್ವಕಪ್ ವೇದಿಕೆ ಸಜ್ಜಾಗಿತ್ತು. ಸೀನಿಯರ್ಸ್ ಬಿಟ್ಟು MS ಧೋನಿ ನೇತೃತ್ವದ ಯಂಗ್ ಇಂಡಿಯಾ ಸೌತ್ ಆಫ್ರಿಕಾಗೆ ತೆರಳಿತ್ತು. ಆಗಲೂ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಭಾರತ ಗೆಲ್ಲುತ್ತೆ ಎಂದು. ಫೈನಲ್ನಲ್ಲಿ ಬದ್ಧವೈರಿ ಪಾಕ್ ವಿರುದ್ಧ ರಣರೋಚಕ ಜಯ ಸಾಧಿಸಿದ ಧೋನಿ ಪಡೆ ಟ್ರೋಫಿ ಗೆದ್ದು ಬೀಗಿತ್ತು.
ಇದನ್ನೂ ಓದಿ:ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ.. ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ
ನಂ.3: 02, ಎಪ್ರಿಲ್ 2011
ಧೋನಿಯ ಸಿಕ್ಸರ್, ರವಿ ಶಾಸ್ತ್ರಿಯ ಈ ಕಾಮೆಂಟರಿಯನ್ನ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಮರೆಯೋಕೆ ಸಾಧ್ಯವೇ ಇಲ್ಲ. 28 ವರ್ಷಗಳ ಕೊರಗಿಗೆ ಫುಲ್ಸ್ಟಾಫ್ ಬಿದ್ದ ದಿನ ಅದು. 1983ರ ಬಳಿಕ ಟೀಮ್ ಇಂಡಿಯಾ ಬಲಿಷ್ಠ ತಂಡವಾಗಿ ರೂಪುಗೊಂಡರೂ ಏಕದಿನ ವಿಶ್ವಕಪ್ ಗೆಲುವು ಮರೀಚಿಕೆ ಆಗಿತ್ತು. ಕೊನೆಗೂ ತವರಿನಲ್ಲಿ ನಡೆದ 2011ರ ಏಕದಿನ ವಿಶ್ವಕಪ್ನಲ್ಲಿ ಕೋಟ್ಯಾನುಕೋಟಿ ಅಭಿಮಾನಿಗಳ ಕನಸು ನನಸಾಯ್ತು.
ನಂ.4: 23, ಜೂನ್ 2013
2013 ಇಂಗ್ಲೆಂಡ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಟೀಮ್ ಇಂಡಿಯಾ ಪ್ರತಿಷ್ಠೆಯ ಫೈಟ್ ಆಗಿತ್ತು. ಏಕದಿನ ವಿಶ್ವ ಚಾಂಪಿಯನ್ ಆಗಿ ಕಣಕ್ಕಿಳಿದಿದ್ದ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ಗೆಲ್ಲೋ ಚಾಲೆಂಜ್ ಇತ್ತು. ಈ ಸವಾಲನ್ನು ಧೋನಿ ಪಡೆ ಸೋಲಿಲ್ಲದ ಸರದಾರನಂತೆ ಗೆದ್ದು ಬೀಗ್ತು. ರಣ ರೋಚಕ ಫೈನಲ್ನಲ್ಲಿ ಇಂಗ್ಲೆಂಡ್ ಸೋಲಿಸಿ ಟೀಮ್ ಇಂಡಿಯಾ ದಿಗ್ವಿಜಯ ಸಾಧಿಸಿತು.
ನಂ.5: 29, ಜೂನ್ 2024
2013ರ ಬಳಿಕ ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಅನುಭವಿಸಿದ್ದು ಬರಿ ನಿರಾಸೆಯನ್ನ. 11 ವರ್ಷಗಳ ಕಾಲ ಟ್ರೋಫಿ ಗೆಲ್ಲಲಾಗದ ನೋವು ಭಾರತೀಯ ಅಭಿಮಾನಿಗಳನ್ನ ಕಾಡಿತ್ತು. ಆ ನೋವು, ಹತಾಶೆ, ಬೇಸರದ ಯಾತ್ರೆಗೆ ಈ ವರ್ಷ ಫುಲ್ಸ್ಟಾಫ್ ಬಿತ್ತು. ಬಾರ್ಬಡೋಸ್ನಲ್ಲಿ ನಡೆದ ಫೈನಲ್ಸ್ನಲ್ಲಿ ಸೌತ್ ಆಫ್ರಿಕಾವನ್ನ ಸೋಲಿಸಿ ಭಾರತದ ತ್ರಿವರ್ಣ ಧ್ವಜವನ್ನ ಹೆಮ್ಮೆಯಿಂದ ರೋಹಿತ್ ಪಡೆ ಹಾರಿಸಿತು. ಸೋಲಿಲ್ಲದ ಸರದಾರನಾಗಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಇದನ್ನೂ ಓದಿ:ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್.. ಅಸಲಿ ವಿಚಾರ ಬಯಲು..!
ಹಿಂದಿದ್ದ ಅವಿಸ್ಮರಣೀಯ ಕ್ಷಣಗಳ ಪಟ್ಟಿಗೆ ಈ ಬಾರಿಯ ಟಿ20 ವಿಶ್ವಕಪ್ ಕೂಡ ಸೇರಿಕೊಂಡಿದೆ. ಈ ಗೆಲುವಿನ ಯಾತ್ರೆ ಮುಂದೆಯೂ ಮುಂದುವರೆಯಲಿ. ಮುಂಬರುವ ಐಸಿಸಿ ಟೂರ್ನಿಗಳಲ್ಲಿ ಭಾರತ ಗೆದ್ದು ಬೀಗಿ ಮತ್ತಷ್ಟು ಟ್ರೋಫಿಗಳನ್ನು ಗೆಲ್ಲಲಿ ಅನ್ನೋದು ಫ್ಯಾನ್ಸ್ ಆಶಯವಾಗಿದೆ.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಭಾರತೀಯ ಕ್ರಿಕೆಟ್ನ ಗೋಲ್ಡನ್ ಮೂಮೆಂಟ್ಸ್
ಮರೆಯಲಾಗದ 5 ಅವಿಸ್ಮರಣೀಯ ಕ್ಷಣಗಳಿವು
ಒಂದೊಂದು ಗೆಲುವಿನ ಕತೆಯೂ ರೋಚಕ
ಟೀಮ್ ಇಂಡಿಯಾ ಫ್ಯಾನ್ಸ್ ಹಾಗೂ ಆಟಗಾರರ ನಡುವೆ ವಿಶೇಷವಾದ ಬಂಧವಿದೆ. ಗೆದ್ದಾಗ ಸಂಭ್ರಮಿಸೋ ಭಾರತೀಯ ಫ್ಯಾನ್ಸ್, ಸೋತಾಗ ತಂಡ ಹಾಗೂ ಆಟಗಾರರ ಜೊತೆ ನಿಲ್ತಾರೆ. ಸದಾ ಬೆಂಬಲಿಸೋ ಫ್ಯಾನ್ಸ್ ಟೀಮ್ ಇಂಡಿಯಾ ಆಟಗಾರರು ಐದು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ.
ಭಾರತದಲ್ಲಿ ಜಂಟಲ್ಮನ್ ಗೇಮ್ ಕ್ರಿಕೆಟ್ಗೆ ವಿಶೇಷವಾದ ಸ್ಥಾನವಿದೆ. ಇಲ್ಲಿ ಕ್ರಿಕೆಟ್ ಅನ್ನೋ ಗೇಮ್ ಧರ್ಮದ ಸ್ಥಾನ ಪಡೆದಿದೆ. ಆಟಗಾರರನ್ನ ಅಕ್ಷರಶಃ ದೇವರಂತೆ ಅಭಿಮಾನಿಗಳು ಆರಾಧಿಸ್ತಾರೆ. ಇದು ಇಂದು-ನಿನ್ನೆಯ ಕತೆಯಲ್ಲ. ಭಾರತ ತಂಡವಾಗಿ ಯಾವಾಗ ಕ್ರಿಕೆಟ್ ಆಡಲು ಆರಂಭಿಸ್ತೋ ಅಂದಿನಿಂದ ನಡೆದು ಬಂದಿರೋದು. ಇಂತಹ ಅಭಿಮಾನಿಗಳಿಗೆ ಟೀಮ್ ಇಂಡಿಯಾ ಆಟಗಾರರು ಐದು ಅವಿಸ್ಮರಣೀಯ ಗಿಫ್ಟ್ ನೀಡಿದ್ದಾರೆ. ಎಂದೆಂದಿಗೂ ಬೆಲೆ ಕಟ್ಟಲಾಗದ ಉಡುಗೊರೆಗಳವು.
ಇದನ್ನೂ ಓದಿ:ಮುಡಾ ಹಗರಣ ಬಯಲು ಬೆನ್ನಲ್ಲೇ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ವರ್ಗಾವಣೆ
ನಂ.1: 25, ಜೂನ್ 1983
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ಎಂದಿಗೂ ಮರೆಯಾಗದ ಕ್ಷಣವಿದು. ಆಗ ಕ್ರಿಕೆಟ್ ಲೋಕದಲ್ಲಿ ಬಲಾಢ್ಯ ತಂಡಗಳ ಪಾರುಪತ್ಯ ನಡೆಯುತ್ತಿತ್ತು. ಆ ಬಲಿಷ್ಠ ತಂಡಗಳಿಗೆ ಭಾರತ ತಂಡ ಲೆಕ್ಕಕ್ಕೇ ಇರಲಿಲ್ಲ. 1983 ವಿಶ್ವಕಪ್ಗೆ ಆಡಲು ಇಂಗ್ಲೆಂಡ್ಗೆ ಭಾರತ ತಂಡ ತೆರಳಿದಾಗ ಕಪಿಲ್ ದೇವ್ ಪಡೆ ಕಪ್ ಗೆಲ್ಲುತ್ತೆ ಎಂದು ಯಾರೊಬ್ಬರೂ ಕೂಡ ಊಹಿಸಿಯೂ ಇರಲಿಲ್ಲ. ಫೈನಲ್ ಫೈಟ್ನಲ್ಲಿ ಬಲಾಢ್ಯ ವೆಸ್ಟ್ಇಂಡೀಸ್ಗೆ ಸೋಲಿನ ರುಚಿ ತೋರಿಸಿದ ಟೀಮ್ ಇಂಡಿಯಾ ಚೊಚ್ಚಲ ವಿಶ್ವಕಪ್ ಗೆದ್ದು ಬೀಗಿತ್ತು.
ನಂ.2: 24, ಸೆಪ್ಟೆಂಬರ್ 2007
2007 ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತಿತ್ತು. ದ್ರಾವಿಡ್, ಸಚಿನ್, ಲಕ್ಷ್ಮಣ್, ಗಂಗೂಲಿ ಸೇರಿದಂತೆ ಸೀನಿಯರ್ ಆಟಗಾರರ ಮೇಲೆ ಜ್ವಾಲೆ ಹೊತ್ತಿ ಉರಿದಿತ್ತು. ಬೆನ್ನಲ್ಲೇ, ಚೊಚ್ಚಲ ಟಿ20 ವಿಶ್ವಕಪ್ ವೇದಿಕೆ ಸಜ್ಜಾಗಿತ್ತು. ಸೀನಿಯರ್ಸ್ ಬಿಟ್ಟು MS ಧೋನಿ ನೇತೃತ್ವದ ಯಂಗ್ ಇಂಡಿಯಾ ಸೌತ್ ಆಫ್ರಿಕಾಗೆ ತೆರಳಿತ್ತು. ಆಗಲೂ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಭಾರತ ಗೆಲ್ಲುತ್ತೆ ಎಂದು. ಫೈನಲ್ನಲ್ಲಿ ಬದ್ಧವೈರಿ ಪಾಕ್ ವಿರುದ್ಧ ರಣರೋಚಕ ಜಯ ಸಾಧಿಸಿದ ಧೋನಿ ಪಡೆ ಟ್ರೋಫಿ ಗೆದ್ದು ಬೀಗಿತ್ತು.
ಇದನ್ನೂ ಓದಿ:ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ.. ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ
ನಂ.3: 02, ಎಪ್ರಿಲ್ 2011
ಧೋನಿಯ ಸಿಕ್ಸರ್, ರವಿ ಶಾಸ್ತ್ರಿಯ ಈ ಕಾಮೆಂಟರಿಯನ್ನ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಮರೆಯೋಕೆ ಸಾಧ್ಯವೇ ಇಲ್ಲ. 28 ವರ್ಷಗಳ ಕೊರಗಿಗೆ ಫುಲ್ಸ್ಟಾಫ್ ಬಿದ್ದ ದಿನ ಅದು. 1983ರ ಬಳಿಕ ಟೀಮ್ ಇಂಡಿಯಾ ಬಲಿಷ್ಠ ತಂಡವಾಗಿ ರೂಪುಗೊಂಡರೂ ಏಕದಿನ ವಿಶ್ವಕಪ್ ಗೆಲುವು ಮರೀಚಿಕೆ ಆಗಿತ್ತು. ಕೊನೆಗೂ ತವರಿನಲ್ಲಿ ನಡೆದ 2011ರ ಏಕದಿನ ವಿಶ್ವಕಪ್ನಲ್ಲಿ ಕೋಟ್ಯಾನುಕೋಟಿ ಅಭಿಮಾನಿಗಳ ಕನಸು ನನಸಾಯ್ತು.
ನಂ.4: 23, ಜೂನ್ 2013
2013 ಇಂಗ್ಲೆಂಡ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಟೀಮ್ ಇಂಡಿಯಾ ಪ್ರತಿಷ್ಠೆಯ ಫೈಟ್ ಆಗಿತ್ತು. ಏಕದಿನ ವಿಶ್ವ ಚಾಂಪಿಯನ್ ಆಗಿ ಕಣಕ್ಕಿಳಿದಿದ್ದ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ಗೆಲ್ಲೋ ಚಾಲೆಂಜ್ ಇತ್ತು. ಈ ಸವಾಲನ್ನು ಧೋನಿ ಪಡೆ ಸೋಲಿಲ್ಲದ ಸರದಾರನಂತೆ ಗೆದ್ದು ಬೀಗ್ತು. ರಣ ರೋಚಕ ಫೈನಲ್ನಲ್ಲಿ ಇಂಗ್ಲೆಂಡ್ ಸೋಲಿಸಿ ಟೀಮ್ ಇಂಡಿಯಾ ದಿಗ್ವಿಜಯ ಸಾಧಿಸಿತು.
ನಂ.5: 29, ಜೂನ್ 2024
2013ರ ಬಳಿಕ ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಅನುಭವಿಸಿದ್ದು ಬರಿ ನಿರಾಸೆಯನ್ನ. 11 ವರ್ಷಗಳ ಕಾಲ ಟ್ರೋಫಿ ಗೆಲ್ಲಲಾಗದ ನೋವು ಭಾರತೀಯ ಅಭಿಮಾನಿಗಳನ್ನ ಕಾಡಿತ್ತು. ಆ ನೋವು, ಹತಾಶೆ, ಬೇಸರದ ಯಾತ್ರೆಗೆ ಈ ವರ್ಷ ಫುಲ್ಸ್ಟಾಫ್ ಬಿತ್ತು. ಬಾರ್ಬಡೋಸ್ನಲ್ಲಿ ನಡೆದ ಫೈನಲ್ಸ್ನಲ್ಲಿ ಸೌತ್ ಆಫ್ರಿಕಾವನ್ನ ಸೋಲಿಸಿ ಭಾರತದ ತ್ರಿವರ್ಣ ಧ್ವಜವನ್ನ ಹೆಮ್ಮೆಯಿಂದ ರೋಹಿತ್ ಪಡೆ ಹಾರಿಸಿತು. ಸೋಲಿಲ್ಲದ ಸರದಾರನಾಗಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಇದನ್ನೂ ಓದಿ:ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್.. ಅಸಲಿ ವಿಚಾರ ಬಯಲು..!
ಹಿಂದಿದ್ದ ಅವಿಸ್ಮರಣೀಯ ಕ್ಷಣಗಳ ಪಟ್ಟಿಗೆ ಈ ಬಾರಿಯ ಟಿ20 ವಿಶ್ವಕಪ್ ಕೂಡ ಸೇರಿಕೊಂಡಿದೆ. ಈ ಗೆಲುವಿನ ಯಾತ್ರೆ ಮುಂದೆಯೂ ಮುಂದುವರೆಯಲಿ. ಮುಂಬರುವ ಐಸಿಸಿ ಟೂರ್ನಿಗಳಲ್ಲಿ ಭಾರತ ಗೆದ್ದು ಬೀಗಿ ಮತ್ತಷ್ಟು ಟ್ರೋಫಿಗಳನ್ನು ಗೆಲ್ಲಲಿ ಅನ್ನೋದು ಫ್ಯಾನ್ಸ್ ಆಶಯವಾಗಿದೆ.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ