ರೈತರಿಗೆ ವಾರ್ಷಿಕ 15,000, ಕೃಷಿ ಕಾರ್ಮಿಕರಿಗೆ 12,000 ನೆರವು
‘ರಾಜೀವ್ ಆರೋಗ್ಯ ಶ್ರೀ’ ವಿಮೆಯಡಿ 10 ಲಕ್ಷ ರೂಪಾಯಿ ವಿಮೆ
ಮಹಿಳೆಯರಿಗೆ ಆರ್ಥಿಕ ನೆರವು ಮಾಸಿಕ 2,500 ರೂಪಾಯಿ
ಹೈದರಾಬಾದ್: ವರ್ಷಾಂತ್ಯಕ್ಕೆ ನಡೆಯಲಿರುವ ತೆಲಂಗಾಣ ಚುನಾವಣೆಗೆ ಕಾಂಗ್ರೆಸ್ ಕಹಳೆ ಮೊಳಗಿಸಿದೆ. ತೆಲಂಗಾಣವನ್ನು ಕೈವಶ ಮಾಡಿಕೊಳ್ಳಲು ಕರ್ನಾಟಕದ ಮಾದರಿಯ ಅಸ್ತ್ರವನ್ನು ಕೈಗೆತ್ತಿಕೊಂಡಿದೆ. ಕೆಸಿಆರ್ ಕೋಟೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನವನ್ನು ಮಾಡಿದೆ.
ತೆಲಂಗಾಣ ಕದನಕ್ಕೆ ‘ವಿಯಜಭೇರಿ’ ಮೊಳಗಿಸಿದ ‘ಹಸ್ತ’
ಕರ್ನಾಟಕ ಮಾದರಿಯ ಗೆಲುವಿಗೆ ಕೈ ‘ಗ್ಯಾರೆಂಟಿ’ ಅಸ್ತ್ರ
ದೇಶಾದ್ಯಂತ ನಡೆದ ಚುನಾವಣೆಗಳಲ್ಲಿ ಮಕಾಡೆ ಮಲಗಿದ್ದ ಕಾಂಗ್ರೆಸ್ನ ಕೈ ಹಿಡಿದಿದ್ದೇ ಕರ್ನಾಟಕ. ಕರ್ನಾಟಕದಲ್ಲಿ ಸಿಕ್ಕಿರೋ ಗೆಲುವು ಕಾಂಗ್ರೆಸ್ ಪಾಲಿಗೆ. ರಾಷ್ಟ್ರ ರಾಜಕೀಯದಲ್ಲಿ ಪುನರ್ ಜನ್ಮ ಪಡೆಯಲು ಸಿಕ್ಕಿರೋ ಪಾಶುಪತಾಸ್ತ್ರವಾದಂತಿದೆ. ಹೀಗಾಗಿಯೇ ಪಂಚ ರಾಜ್ಯಗಳ ಎಲೆಕ್ಷನ್ ಅತ್ತ ಕಾಂಗ್ರೆಸ್ ಮುನ್ನುಗ್ಗಿ ಹೋಗ್ತಿದೆ. ಅದರಲ್ಲಿಯೂ ಈ ವರ್ಷಾಂತ್ಯಕ್ಕೆ ನಡೆಯಲಿರುವ ತೆಲಂಗಾಣ ಮತಯುದ್ಧಕ್ಕೆ ಕರ್ನಾಟಕದ ಗ್ಯಾರೆಂಟಿ ಮಾದರಿಯಲ್ಲಿ ಕಾಂಗ್ರೆಸ್ ವಿಜಯಭೇರಿಯನ್ನು ಮೊಳಗಿಸಿದೆ.
ತೆಲಂಗಾಣದ ಜನತೆಗೆ ಕಾಂಗ್ರೆಸ್ನಿಂದ 6 ಗ್ಯಾರೆಂಟಿ ಘೋಷಣೆ
ತೆಲಂಗಾಣದ ತಕ್ಕುಗುಡಾದಲ್ಲಿ ಕಾಂಗ್ರೆಸ್ ವಿಜಯಭೇರಿ ಸಮಾವೇಶ ನಡೆಸುವ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಇದಕ್ಕೂ ಮುನ್ನ ತೆಲಂಗಾಣ ಏಕೀಕರಣದ ದಿನದ ಅಂಗವಾಗಿ ಕಾಂಗ್ರೆಸ್ ನಾಯಕರು ಮೆಗಾ ಱಲಿ ನಡೆಸಿದ್ದರು. ಇನ್ನು, ಕಾಂಗ್ರೆಸ್ನ ವಿಜಯಭೇರಿ ಸಮಾವೇಶದಲ್ಲಿ ಜನಸಾಗರವೇ ಸೇರಿತ್ತು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಬೃಹತ್ ವೇದಿಕೆಗೆ ಆಗಮಿಸಿದ ರಾಹುಲ್, ಸೋನಿಯಾ, ಸಮಾವೇಶದಲ್ಲಿ ನೆರೆದಿದ್ದ ಕಾರ್ಯಕರ್ತರತ್ತ ಕೈ ಬೀಸಿದ್ದರು. ವಿಜಯಭೇರಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು, ಸೋನಿಯಾ ಗಾಂಧಿ ಮೂಲಕ ತೆಲಂಗಾಣದ ಜನತೆಗಾಗಿ ಕರ್ನಾಟಕದ ಮಾದರಿಯಲ್ಲಿ ಗ್ಯಾರೆಂಟಿ ಘೋಷಣೆಗಳನ್ನು ಮಾಡಿದ್ದರು.
ಭಾರತದ ಭೂಪಟದಲ್ಲಿ ಸೋನಿಯಾಗಾಂಧಿ ಅವತಾರ
ತೆಲಂಗಾಣದ ತಕ್ಕುಗುಡಾದಲ್ಲಿ ವಿಯಜಭೇರಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರಿಗೆ ಸ್ವಾಗತ ಕೋರಿ ಹಾಕಲಾಗಿದ್ದ ಹೋರ್ಡಿಂಗ್ಸ್ ಗಮನ ಸೆಳೆಯಿತು. ಇದರಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಭಾರತಮಾತೆಯ ಅವತಾರದಲ್ಲಿ ಬಿಂಬಿಸಲಾಗಿತ್ತು. ಭಾರತದ ಭೂಪಟದಲ್ಲಿ ಸೋನಿಯಾ ಗಾಂಧಿ ನಿಂತಿರುವಂತೆ ಹೋರ್ಡಿಂಗ್ಸ್ ಹಾಕಿದ್ದು, ಎಲ್ಲರ ಗಮನ ಸೆಳೆದಿದೆ.
CWC ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಜಪ
ಇನ್ನು ಹಲವು ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ರಾಷ್ಟ್ರ ರಾಜಧಾನಿಯಿಂದ ಆಚೆಗೆ ನಡೆದಿದೆ. ಹೈದರಾಬಾದ್ನಲ್ಲಿ 2 ದಿನಗಳ ಕಾಲ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಂಬರುವ ಪಂಚರಾಜ್ಯಗಳ ಚುನಾವಣೆ ಮತ್ತು ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲಾಗಿದೆ. ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ಸಂಘಟನಾತ್ಮಕ ಒಗ್ಗಟ್ಟಿನ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಹಾಗೂ ತೆಲಂಗಾಣ ವಿಧಾನಸಭೆಗೆ ನವಶಕ್ತಿಯೊಂದಿಗೆ ಮತ್ತು ಸ್ಪಷ್ಟ ಸಂದೇಶದೊಂದಿಗೆ ಪಕ್ಷವು ಪ್ರಚಾರ ನಡೆಸಲಿದೆ ಎಂದು ಹೇಳಿದ್ದಾರೆ. ಒಟ್ಟಾರೆ ಕೆಸಿಆರ್ ಕೋಟೆಯನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಪಾಳಯ ರಣಕಹಳೆ ಮೊಗಳಗಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ನ ಕೈ ಹಿಡಿದ ಗ್ಯಾರೆಂಟಿ ಯೋಜನೆಗಳು ತೆಲಂಗಾಣದಲ್ಲೂ ಕೈ ಹಿಡಿಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರೈತರಿಗೆ ವಾರ್ಷಿಕ 15,000, ಕೃಷಿ ಕಾರ್ಮಿಕರಿಗೆ 12,000 ನೆರವು
‘ರಾಜೀವ್ ಆರೋಗ್ಯ ಶ್ರೀ’ ವಿಮೆಯಡಿ 10 ಲಕ್ಷ ರೂಪಾಯಿ ವಿಮೆ
ಮಹಿಳೆಯರಿಗೆ ಆರ್ಥಿಕ ನೆರವು ಮಾಸಿಕ 2,500 ರೂಪಾಯಿ
ಹೈದರಾಬಾದ್: ವರ್ಷಾಂತ್ಯಕ್ಕೆ ನಡೆಯಲಿರುವ ತೆಲಂಗಾಣ ಚುನಾವಣೆಗೆ ಕಾಂಗ್ರೆಸ್ ಕಹಳೆ ಮೊಳಗಿಸಿದೆ. ತೆಲಂಗಾಣವನ್ನು ಕೈವಶ ಮಾಡಿಕೊಳ್ಳಲು ಕರ್ನಾಟಕದ ಮಾದರಿಯ ಅಸ್ತ್ರವನ್ನು ಕೈಗೆತ್ತಿಕೊಂಡಿದೆ. ಕೆಸಿಆರ್ ಕೋಟೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನವನ್ನು ಮಾಡಿದೆ.
ತೆಲಂಗಾಣ ಕದನಕ್ಕೆ ‘ವಿಯಜಭೇರಿ’ ಮೊಳಗಿಸಿದ ‘ಹಸ್ತ’
ಕರ್ನಾಟಕ ಮಾದರಿಯ ಗೆಲುವಿಗೆ ಕೈ ‘ಗ್ಯಾರೆಂಟಿ’ ಅಸ್ತ್ರ
ದೇಶಾದ್ಯಂತ ನಡೆದ ಚುನಾವಣೆಗಳಲ್ಲಿ ಮಕಾಡೆ ಮಲಗಿದ್ದ ಕಾಂಗ್ರೆಸ್ನ ಕೈ ಹಿಡಿದಿದ್ದೇ ಕರ್ನಾಟಕ. ಕರ್ನಾಟಕದಲ್ಲಿ ಸಿಕ್ಕಿರೋ ಗೆಲುವು ಕಾಂಗ್ರೆಸ್ ಪಾಲಿಗೆ. ರಾಷ್ಟ್ರ ರಾಜಕೀಯದಲ್ಲಿ ಪುನರ್ ಜನ್ಮ ಪಡೆಯಲು ಸಿಕ್ಕಿರೋ ಪಾಶುಪತಾಸ್ತ್ರವಾದಂತಿದೆ. ಹೀಗಾಗಿಯೇ ಪಂಚ ರಾಜ್ಯಗಳ ಎಲೆಕ್ಷನ್ ಅತ್ತ ಕಾಂಗ್ರೆಸ್ ಮುನ್ನುಗ್ಗಿ ಹೋಗ್ತಿದೆ. ಅದರಲ್ಲಿಯೂ ಈ ವರ್ಷಾಂತ್ಯಕ್ಕೆ ನಡೆಯಲಿರುವ ತೆಲಂಗಾಣ ಮತಯುದ್ಧಕ್ಕೆ ಕರ್ನಾಟಕದ ಗ್ಯಾರೆಂಟಿ ಮಾದರಿಯಲ್ಲಿ ಕಾಂಗ್ರೆಸ್ ವಿಜಯಭೇರಿಯನ್ನು ಮೊಳಗಿಸಿದೆ.
ತೆಲಂಗಾಣದ ಜನತೆಗೆ ಕಾಂಗ್ರೆಸ್ನಿಂದ 6 ಗ್ಯಾರೆಂಟಿ ಘೋಷಣೆ
ತೆಲಂಗಾಣದ ತಕ್ಕುಗುಡಾದಲ್ಲಿ ಕಾಂಗ್ರೆಸ್ ವಿಜಯಭೇರಿ ಸಮಾವೇಶ ನಡೆಸುವ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಇದಕ್ಕೂ ಮುನ್ನ ತೆಲಂಗಾಣ ಏಕೀಕರಣದ ದಿನದ ಅಂಗವಾಗಿ ಕಾಂಗ್ರೆಸ್ ನಾಯಕರು ಮೆಗಾ ಱಲಿ ನಡೆಸಿದ್ದರು. ಇನ್ನು, ಕಾಂಗ್ರೆಸ್ನ ವಿಜಯಭೇರಿ ಸಮಾವೇಶದಲ್ಲಿ ಜನಸಾಗರವೇ ಸೇರಿತ್ತು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಬೃಹತ್ ವೇದಿಕೆಗೆ ಆಗಮಿಸಿದ ರಾಹುಲ್, ಸೋನಿಯಾ, ಸಮಾವೇಶದಲ್ಲಿ ನೆರೆದಿದ್ದ ಕಾರ್ಯಕರ್ತರತ್ತ ಕೈ ಬೀಸಿದ್ದರು. ವಿಜಯಭೇರಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು, ಸೋನಿಯಾ ಗಾಂಧಿ ಮೂಲಕ ತೆಲಂಗಾಣದ ಜನತೆಗಾಗಿ ಕರ್ನಾಟಕದ ಮಾದರಿಯಲ್ಲಿ ಗ್ಯಾರೆಂಟಿ ಘೋಷಣೆಗಳನ್ನು ಮಾಡಿದ್ದರು.
ಭಾರತದ ಭೂಪಟದಲ್ಲಿ ಸೋನಿಯಾಗಾಂಧಿ ಅವತಾರ
ತೆಲಂಗಾಣದ ತಕ್ಕುಗುಡಾದಲ್ಲಿ ವಿಯಜಭೇರಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರಿಗೆ ಸ್ವಾಗತ ಕೋರಿ ಹಾಕಲಾಗಿದ್ದ ಹೋರ್ಡಿಂಗ್ಸ್ ಗಮನ ಸೆಳೆಯಿತು. ಇದರಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಭಾರತಮಾತೆಯ ಅವತಾರದಲ್ಲಿ ಬಿಂಬಿಸಲಾಗಿತ್ತು. ಭಾರತದ ಭೂಪಟದಲ್ಲಿ ಸೋನಿಯಾ ಗಾಂಧಿ ನಿಂತಿರುವಂತೆ ಹೋರ್ಡಿಂಗ್ಸ್ ಹಾಕಿದ್ದು, ಎಲ್ಲರ ಗಮನ ಸೆಳೆದಿದೆ.
CWC ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಜಪ
ಇನ್ನು ಹಲವು ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ರಾಷ್ಟ್ರ ರಾಜಧಾನಿಯಿಂದ ಆಚೆಗೆ ನಡೆದಿದೆ. ಹೈದರಾಬಾದ್ನಲ್ಲಿ 2 ದಿನಗಳ ಕಾಲ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಂಬರುವ ಪಂಚರಾಜ್ಯಗಳ ಚುನಾವಣೆ ಮತ್ತು ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲಾಗಿದೆ. ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ಸಂಘಟನಾತ್ಮಕ ಒಗ್ಗಟ್ಟಿನ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಹಾಗೂ ತೆಲಂಗಾಣ ವಿಧಾನಸಭೆಗೆ ನವಶಕ್ತಿಯೊಂದಿಗೆ ಮತ್ತು ಸ್ಪಷ್ಟ ಸಂದೇಶದೊಂದಿಗೆ ಪಕ್ಷವು ಪ್ರಚಾರ ನಡೆಸಲಿದೆ ಎಂದು ಹೇಳಿದ್ದಾರೆ. ಒಟ್ಟಾರೆ ಕೆಸಿಆರ್ ಕೋಟೆಯನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಪಾಳಯ ರಣಕಹಳೆ ಮೊಗಳಗಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ನ ಕೈ ಹಿಡಿದ ಗ್ಯಾರೆಂಟಿ ಯೋಜನೆಗಳು ತೆಲಂಗಾಣದಲ್ಲೂ ಕೈ ಹಿಡಿಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ