ತುಂಬಿದ ಕಾರ್ಯಕ್ರಮದಲ್ಲಿ ವ್ಯಕ್ತಿಯನ್ನ ಎಳೆದು ಬಾರಿಸಿದ ಸಚಿವ
ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ ಎಂದ ಬಿಜೆಪಿ ನಾಯಕರು
ಬ್ರಿಡ್ಜ್ ಉದ್ಘಾಟನೆ ಸಮಾರಂಭದಲ್ಲಿ ಸಚಿವನ ಕಪಾಳಮೋಕ್ಷ
ಹೈದರಾಬಾದ್: ಬಿಆರ್ಎಸ್ ಪಕ್ಷದ ಪಶುಸಂಗೋಪನಾ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಅವರು ತುಂಬಿದ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರನ್ನ ಹಿಂಬದಿಯಿಂದ ಎಳೆದು ಕಪಾಳ ಮೋಕ್ಷ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ತೀವ್ರ ಚರ್ಚೆಯಾಗುತ್ತಿದ್ದಂತೆ ಬಿಜೆಪಿ ನಾಯಕರು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತೆಲಂಗಾಣದ ಆರ್ಟಿಸಿ ಕ್ರಾಸ್ನಲ್ಲಿ ನಿರ್ಮಾಣ ಮಾಡಲಾಗಿರುವ ಐಕಾನಿಕ್ ಸ್ಟೀಲ್ ಬ್ರಿಡ್ಜ್ನ ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ತೆಲಂಗಾಣ ಸಿಎಂ ಪುತ್ರ ಹಾಗೂ ಸಚಿವ ಕೆ.ಟಿ ರಾಮರಾವ್, ಪಶುಸಂಗೋಪನಾ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಸೇರಿದಂತೆ ಹಲವರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮದ ಕೆ.ಟಿ ರಾಮರಾವ್ ಮುಂದೆ ಹೋಗುತ್ತಿದ್ದರು. ಇವರ ಹಿಂದೆ ವ್ಯಕ್ತಿ, ವ್ಯಕ್ತಿ ಹಿಂದೆ ತಲಸಾನಿ ಶ್ರೀನಿವಾಸ್ ತೆರಳುತ್ತಿದ್ದರು. ಆದ್ರೆ ಕೆ.ಟಿ ರಾಮರಾವ್ ಪಕ್ಕದಲ್ಲಿ ಹೋಗಲು ನನಗೆ ಅಡ್ಡಿ ಮಾಡುತ್ತಿದ್ದಾನೆಂದು ಸಚಿವ ತಲಸಾನಿ ಶ್ರೀನಿವಾಸ್ ಕೋಪಗೊಂಡು ಸಾರ್ವಜನಿಕರ ಮಧ್ಯದಲ್ಲೇ ಆ ವ್ಯಕ್ತಿಯನ್ನು ಹಿಂಬದಿಯಿಂದ ಎಳೆದು ಕಪಾಳಮೋಕ್ಷ ಮಾಡಿದ್ದಾರೆ ಎಂದು ಹೇಳಲಾಗಿದೆ.
https://twitter.com/i/status/1693096709860270400
ಸದ್ಯ ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಚಿವರು ವ್ಯಕ್ತಿಗೆ ಹೊಡೆಯುತ್ತಿರುವುದು ಸ್ಪಷ್ಟವಾಗಿದೆ. ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸಚಿವರ ಅಸಭ್ಯ ವರ್ತನೆಯ ವಿಡಿಯೋವನ್ನು ಶೇರ್ ಮಾಡಿದೆ. ಸಚಿವರ ವರ್ತನೆ ಬೇಸರ ತರಿಸುತ್ತದೆ ಎಂದು ಹೇಳಿದೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸಚಿವರ ದುರ್ವರ್ತನೆಗೆ ತೀವ್ರ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತುಂಬಿದ ಕಾರ್ಯಕ್ರಮದಲ್ಲಿ ವ್ಯಕ್ತಿಯನ್ನ ಎಳೆದು ಬಾರಿಸಿದ ಸಚಿವ
ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ ಎಂದ ಬಿಜೆಪಿ ನಾಯಕರು
ಬ್ರಿಡ್ಜ್ ಉದ್ಘಾಟನೆ ಸಮಾರಂಭದಲ್ಲಿ ಸಚಿವನ ಕಪಾಳಮೋಕ್ಷ
ಹೈದರಾಬಾದ್: ಬಿಆರ್ಎಸ್ ಪಕ್ಷದ ಪಶುಸಂಗೋಪನಾ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಅವರು ತುಂಬಿದ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರನ್ನ ಹಿಂಬದಿಯಿಂದ ಎಳೆದು ಕಪಾಳ ಮೋಕ್ಷ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ತೀವ್ರ ಚರ್ಚೆಯಾಗುತ್ತಿದ್ದಂತೆ ಬಿಜೆಪಿ ನಾಯಕರು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತೆಲಂಗಾಣದ ಆರ್ಟಿಸಿ ಕ್ರಾಸ್ನಲ್ಲಿ ನಿರ್ಮಾಣ ಮಾಡಲಾಗಿರುವ ಐಕಾನಿಕ್ ಸ್ಟೀಲ್ ಬ್ರಿಡ್ಜ್ನ ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ತೆಲಂಗಾಣ ಸಿಎಂ ಪುತ್ರ ಹಾಗೂ ಸಚಿವ ಕೆ.ಟಿ ರಾಮರಾವ್, ಪಶುಸಂಗೋಪನಾ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಸೇರಿದಂತೆ ಹಲವರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮದ ಕೆ.ಟಿ ರಾಮರಾವ್ ಮುಂದೆ ಹೋಗುತ್ತಿದ್ದರು. ಇವರ ಹಿಂದೆ ವ್ಯಕ್ತಿ, ವ್ಯಕ್ತಿ ಹಿಂದೆ ತಲಸಾನಿ ಶ್ರೀನಿವಾಸ್ ತೆರಳುತ್ತಿದ್ದರು. ಆದ್ರೆ ಕೆ.ಟಿ ರಾಮರಾವ್ ಪಕ್ಕದಲ್ಲಿ ಹೋಗಲು ನನಗೆ ಅಡ್ಡಿ ಮಾಡುತ್ತಿದ್ದಾನೆಂದು ಸಚಿವ ತಲಸಾನಿ ಶ್ರೀನಿವಾಸ್ ಕೋಪಗೊಂಡು ಸಾರ್ವಜನಿಕರ ಮಧ್ಯದಲ್ಲೇ ಆ ವ್ಯಕ್ತಿಯನ್ನು ಹಿಂಬದಿಯಿಂದ ಎಳೆದು ಕಪಾಳಮೋಕ್ಷ ಮಾಡಿದ್ದಾರೆ ಎಂದು ಹೇಳಲಾಗಿದೆ.
https://twitter.com/i/status/1693096709860270400
ಸದ್ಯ ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಚಿವರು ವ್ಯಕ್ತಿಗೆ ಹೊಡೆಯುತ್ತಿರುವುದು ಸ್ಪಷ್ಟವಾಗಿದೆ. ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸಚಿವರ ಅಸಭ್ಯ ವರ್ತನೆಯ ವಿಡಿಯೋವನ್ನು ಶೇರ್ ಮಾಡಿದೆ. ಸಚಿವರ ವರ್ತನೆ ಬೇಸರ ತರಿಸುತ್ತದೆ ಎಂದು ಹೇಳಿದೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸಚಿವರ ದುರ್ವರ್ತನೆಗೆ ತೀವ್ರ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ