ನರ್ಕೆಟ್ಪಲ್ಲಿ-ಅಡ್ಡಂಕಿ ಹೆದ್ದಾರಿಯಲ್ಲಿ ದುರ್ಘಟನೆ
ಯು-ಟರ್ನ್ ತೆಗೆದುಕೊಳ್ತಿದ್ದಾಗ ಅಪಘಾತ ನಡೆದಿದೆ
ಹಾಸ್ಯ ನಟನ ವಿರುದ್ಧ ಕೇಸ್ ದಾಖಲು, ತನಿಖೆ ಆರಂಭ
ತೆಲುಗು ಹಾಸ್ಯ ನಟ ರಘು ಬಾಬು ಪ್ರಯಾಣಿಸ್ತಿದ್ದ ಕಾರು ಬೈಕ್ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಹಿರಿಯ ರಾಜಕಾರಣಿ ಒಬ್ಬರು ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವಿನ ನರ್ಕೆಟ್ಪಲ್ಲಿ-ಅಡ್ಡಂಕಿ (Narketpally-Addanki) ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ:ಬೆಂಗಳೂರು: ಸ್ನೇಹಿತನ ಭೇಟಿಗೆ ಹೋಗಿದ್ದ ಯುವಕ ರೈಲಿಗೆ ಸಿಲುಕಿ ಸಾವು
ಸಂದಿನೇನಿ ಜನಾರ್ದನ್ ರಾವ್ (50) ಮೃತಪಟ್ಟ ವ್ಯಕ್ತಿ. ಇವರು ಕೆಸಿಆರ್ ಅವರ ಬಿಆರ್ಎಸ್ (ಭಾರತ್ ರಾಷ್ಟ್ರ ಸಮಿತಿ) ಪಕ್ಷದ ನಾರ್ಕೆಟ್ಪಲ್ಲಿ ಪಟ್ಟಣದ ಕಾರ್ಯದರ್ಶಿಯಾಗಿದ್ದರು. ನಟ ಹೈದರಾಬಾದ್ ಕಡೆಗೆ ತೆರಳುತ್ತಿದ್ದಾಗ ನಾರ್ಕೆಟ್ಪಲ್ಲಿ-ಅದ್ದಂಕಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ನಿನ್ನೆ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಹಾರ್ದಿಕ್ ಸ್ಥಾನಕ್ಕೆ ಬಂತು ಕುತ್ತು.. ಈಗ ರೋಹಿತ್ ಅಲ್ಲ, ದುಬೆ ಜೊತೆ ಫೈಟ್..!
ಜನಾರ್ದನ್ ಅವರು ಹೆದ್ದಾರಿಯಲ್ಲಿ ಯು-ಟರ್ನ್ ತೆಗೆದುಕೊಳ್ಳುತ್ತಿದ್ದಾಗ ನಟನ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್ 50 ಮೀಟರ್ ದೂರ ಹೋಗಿ ಬಿದ್ದಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಮತ್ತು ವೈದ್ಯರು ಸ್ಥಳಕ್ಕೆ ಧಾವಿಸಿದ್ದರು. ಆದರೆ ಜನಾರ್ದನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತ ಜನಾರ್ದನ್ ಪತ್ನಿ ದೂರಿನ ಮೇರೆಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಕಾರನ್ನು ರಘು ಅವರ ಚಾಲಕ ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ.
#Telangana— Addanki – A car collided with a bike on the highway, resulting in the death of Nalgonda BRS town secretary Sandhineni Janardhan Rao (48) in an accident. The car involved in the accident has been identified as belonging to the famous film actor Raghubabu. The bike was… pic.twitter.com/XmPJrRBC9Y
— @Coreena Enet Suares (@CoreenaSuares2) April 17, 2024
ಇದನ್ನೂ ಓದಿ:ಟಿ20 ವಿಶ್ವಕಪ್ಗೆ 20 ಆಟಗಾರರ ಹೆಸರು ಬಹಿರಂಗ; IPLನಲ್ಲಿ ಫೇಲ್ ಆದವರ ಹೆಸರೂ ಇದೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನರ್ಕೆಟ್ಪಲ್ಲಿ-ಅಡ್ಡಂಕಿ ಹೆದ್ದಾರಿಯಲ್ಲಿ ದುರ್ಘಟನೆ
ಯು-ಟರ್ನ್ ತೆಗೆದುಕೊಳ್ತಿದ್ದಾಗ ಅಪಘಾತ ನಡೆದಿದೆ
ಹಾಸ್ಯ ನಟನ ವಿರುದ್ಧ ಕೇಸ್ ದಾಖಲು, ತನಿಖೆ ಆರಂಭ
ತೆಲುಗು ಹಾಸ್ಯ ನಟ ರಘು ಬಾಬು ಪ್ರಯಾಣಿಸ್ತಿದ್ದ ಕಾರು ಬೈಕ್ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಹಿರಿಯ ರಾಜಕಾರಣಿ ಒಬ್ಬರು ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವಿನ ನರ್ಕೆಟ್ಪಲ್ಲಿ-ಅಡ್ಡಂಕಿ (Narketpally-Addanki) ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ:ಬೆಂಗಳೂರು: ಸ್ನೇಹಿತನ ಭೇಟಿಗೆ ಹೋಗಿದ್ದ ಯುವಕ ರೈಲಿಗೆ ಸಿಲುಕಿ ಸಾವು
ಸಂದಿನೇನಿ ಜನಾರ್ದನ್ ರಾವ್ (50) ಮೃತಪಟ್ಟ ವ್ಯಕ್ತಿ. ಇವರು ಕೆಸಿಆರ್ ಅವರ ಬಿಆರ್ಎಸ್ (ಭಾರತ್ ರಾಷ್ಟ್ರ ಸಮಿತಿ) ಪಕ್ಷದ ನಾರ್ಕೆಟ್ಪಲ್ಲಿ ಪಟ್ಟಣದ ಕಾರ್ಯದರ್ಶಿಯಾಗಿದ್ದರು. ನಟ ಹೈದರಾಬಾದ್ ಕಡೆಗೆ ತೆರಳುತ್ತಿದ್ದಾಗ ನಾರ್ಕೆಟ್ಪಲ್ಲಿ-ಅದ್ದಂಕಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ನಿನ್ನೆ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಹಾರ್ದಿಕ್ ಸ್ಥಾನಕ್ಕೆ ಬಂತು ಕುತ್ತು.. ಈಗ ರೋಹಿತ್ ಅಲ್ಲ, ದುಬೆ ಜೊತೆ ಫೈಟ್..!
ಜನಾರ್ದನ್ ಅವರು ಹೆದ್ದಾರಿಯಲ್ಲಿ ಯು-ಟರ್ನ್ ತೆಗೆದುಕೊಳ್ಳುತ್ತಿದ್ದಾಗ ನಟನ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್ 50 ಮೀಟರ್ ದೂರ ಹೋಗಿ ಬಿದ್ದಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಮತ್ತು ವೈದ್ಯರು ಸ್ಥಳಕ್ಕೆ ಧಾವಿಸಿದ್ದರು. ಆದರೆ ಜನಾರ್ದನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತ ಜನಾರ್ದನ್ ಪತ್ನಿ ದೂರಿನ ಮೇರೆಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಕಾರನ್ನು ರಘು ಅವರ ಚಾಲಕ ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ.
#Telangana— Addanki – A car collided with a bike on the highway, resulting in the death of Nalgonda BRS town secretary Sandhineni Janardhan Rao (48) in an accident. The car involved in the accident has been identified as belonging to the famous film actor Raghubabu. The bike was… pic.twitter.com/XmPJrRBC9Y
— @Coreena Enet Suares (@CoreenaSuares2) April 17, 2024
ಇದನ್ನೂ ಓದಿ:ಟಿ20 ವಿಶ್ವಕಪ್ಗೆ 20 ಆಟಗಾರರ ಹೆಸರು ಬಹಿರಂಗ; IPLನಲ್ಲಿ ಫೇಲ್ ಆದವರ ಹೆಸರೂ ಇದೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ