ಹೊಲಕ್ಕೆ ಹಾಕಿದ್ದ ಬಂಡವಾಳವೆಲ್ಲ ವಾಪಸ್ ಬರಲಿಲ್ಲ
ಬ್ಯಾಂಕ್, ಸ್ವಸಹಾಯ ಗುಂಪಿನಲ್ಲಿ ಸಾಲ ಪಡೆದಿದ್ದ ರೈತ
ಸರಿಯಾಗಿ ಮಳೆ ಬಾರದಿದ್ದಕ್ಕೆ ರೈತನಿಗೆ ಕೈಕೊಟ್ಟಿದ್ದ ಬೆಳೆ
ಕೊಪ್ಪಳ: ರಾಜ್ಯದಲ್ಲಿ ಭೀಕರ ಬರ ಹಿನ್ನೆಲೆಯಲ್ಲಿ ರೈತನೊಬ್ಬ ಸಾಲಬಾಧೆ ತಾಳಲಾರದೇ ಹೊಲದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯಲ್ಲಿ ನಡೆದಿದೆ.
ಹಿರೇಸಿಂದೋಗಿ ಗ್ರಾಮದ ದ್ಯಾಮ ನಾಯಕ (28) ಆತ್ಮಹತ್ಯೆಗೆ ಶರಣಾದ ರೈತ. ಇವರು ಜೀವನಕ್ಕಾಗಿ ವ್ಯವಸಾಯ ಮಾಡುತ್ತಿದ್ದರು. ಹೀಗಾಗಿಯೇ ಈ ಬಾರಿ ಬೆಳೆ ಬರುತ್ತದೆ ಎಂದು ಹೊಲಕ್ಕಾಗಿ ಬ್ಯಾಂಕ್ ಮತ್ತು ಸ್ವಸಹಾಯ ಗುಂಪಿನಿಂದ 40 ಸಾವಿರ ರೂಪಾಯಿಗಳ ಸಾಲ ಪಡೆದುಕೊಂಡಿದ್ದರು.
ಆದರೆ ಈ ಬಾರಿ ಮಳೆ ಸರಿಯಾದ ಸಮಯಕ್ಕೆ ಸುರಿಯದಿದ್ದ ಕಾರಣ ಇವರ ಹೊಲದಲ್ಲಿ ಬೆಳೆ ನಾಶವಾಗಿತ್ತು. ಇದರಿಂದ ಆರ್ಥಿಕವಾಗಿ ಸಮಸ್ಯೆ ಅನುಭವಿಸುತ್ತಿದ್ದ ರೈತ ಸಾಲ ಕೂಡ ವಾಪಸ್ ಮಾಡಿರಲಿಲ್ಲ. ಇದರಿಂದ ಬೇಸತ್ತು ಹೊಲದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹೊಲಕ್ಕೆ ಹಾಕಿದ್ದ ಬಂಡವಾಳವೆಲ್ಲ ವಾಪಸ್ ಬರಲಿಲ್ಲ
ಬ್ಯಾಂಕ್, ಸ್ವಸಹಾಯ ಗುಂಪಿನಲ್ಲಿ ಸಾಲ ಪಡೆದಿದ್ದ ರೈತ
ಸರಿಯಾಗಿ ಮಳೆ ಬಾರದಿದ್ದಕ್ಕೆ ರೈತನಿಗೆ ಕೈಕೊಟ್ಟಿದ್ದ ಬೆಳೆ
ಕೊಪ್ಪಳ: ರಾಜ್ಯದಲ್ಲಿ ಭೀಕರ ಬರ ಹಿನ್ನೆಲೆಯಲ್ಲಿ ರೈತನೊಬ್ಬ ಸಾಲಬಾಧೆ ತಾಳಲಾರದೇ ಹೊಲದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯಲ್ಲಿ ನಡೆದಿದೆ.
ಹಿರೇಸಿಂದೋಗಿ ಗ್ರಾಮದ ದ್ಯಾಮ ನಾಯಕ (28) ಆತ್ಮಹತ್ಯೆಗೆ ಶರಣಾದ ರೈತ. ಇವರು ಜೀವನಕ್ಕಾಗಿ ವ್ಯವಸಾಯ ಮಾಡುತ್ತಿದ್ದರು. ಹೀಗಾಗಿಯೇ ಈ ಬಾರಿ ಬೆಳೆ ಬರುತ್ತದೆ ಎಂದು ಹೊಲಕ್ಕಾಗಿ ಬ್ಯಾಂಕ್ ಮತ್ತು ಸ್ವಸಹಾಯ ಗುಂಪಿನಿಂದ 40 ಸಾವಿರ ರೂಪಾಯಿಗಳ ಸಾಲ ಪಡೆದುಕೊಂಡಿದ್ದರು.
ಆದರೆ ಈ ಬಾರಿ ಮಳೆ ಸರಿಯಾದ ಸಮಯಕ್ಕೆ ಸುರಿಯದಿದ್ದ ಕಾರಣ ಇವರ ಹೊಲದಲ್ಲಿ ಬೆಳೆ ನಾಶವಾಗಿತ್ತು. ಇದರಿಂದ ಆರ್ಥಿಕವಾಗಿ ಸಮಸ್ಯೆ ಅನುಭವಿಸುತ್ತಿದ್ದ ರೈತ ಸಾಲ ಕೂಡ ವಾಪಸ್ ಮಾಡಿರಲಿಲ್ಲ. ಇದರಿಂದ ಬೇಸತ್ತು ಹೊಲದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ