ಅಪಾರ್ಟ್ಮೆಂಟ್ ಮುಂದೆ ಮಗನನ್ನೇ ಧರಧರನೇ ಎಳೆದೊಯ್ದ ತಾಯಿ
ಬೆಳಗ್ಗೆ ಶಾಲೆಗೆ ಹೋಗಲು ತಾತನ ಜೊತೆ ನಿಂತಿದ್ದ ಮಗನ ಕಿಡ್ನ್ಯಾಪ್
ಗೆಳೆಯನ ಜೊತೆ ಬಂದ ತಾಯಿ ಮಗನ ಕಿಡ್ನ್ಯಾಪ್ ಮಾಡಲು ಕಾರಣ ಏನು?
ಹೆತ್ತ ಮಗನನ್ನೇ ತಾಯಿ ಕಿಡ್ನ್ಯಾಪ್ ಮಾಡಿ ಧರಧರನೇ ಎಳೆದೊಯ್ದಿರೋ ಘಟನೆ ಬೆಂಗಳೂರು ಹೊರವಲಯದ ಕೆ.ಆರ್ ಪುರಂನಲ್ಲಿ ನಡೆದಿದೆ. ಅಪಾರ್ಟ್ಮೆಂಟ್ ಮುಂದೆ ತಾಯಿಯೇ ತನ್ನ ಮಗನನ್ನು ಕಿಡ್ನ್ಯಾಪ್ ಮಾಡಿರೋ ಅಮಾನವೀಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಕ್ಲಾಸ್ಮೇಟ್ಗಳಿಂದ ಅಶ್ಲೀಲ ಮೆಸೇಜ್.. ಬೆಂಗಳೂರಲ್ಲಿ ವಿವಾಹಿತ ಮಹಿಳೆ ಸಾವಿಗೆ ಶರಣು; ಆಗಿದ್ದೇನು?
ಸಿದ್ಧಾರ್ಥ್-ಅನುಪಮಾ ದಂಪತಿ ಕೌಟುಂಬಿಕ ಕಲಹದಿಂದ ಬೇರೆ, ಬೇರೆ ಆಗಿದ್ದಾರೆ. ಸಿದ್ಧಾರ್ಥ್ ಜೊತೆ ಆರೂವರೆ ವರ್ಷದ ಮಗ ವಾಸವಿದ್ದ. ಶಾಲೆಗೆ ಹೋಗಲು ತಾತನ ಜೊತೆ ನಿಂತಿದ್ದ ವೇಳೆ ತನ್ನ ಸ್ನೇಹಿತನ ಜೊತೆ ಬಂದ ತಾಯಿ ಮಗನನ್ನು ಕಿಡ್ನ್ಯಾಪ್ ಮಾಡಿ ಕರೆದುಕೊಂಡು ಹೋಗಿದ್ದಾರೆ.
ಕಿಡ್ನ್ಯಾಪ್ ಮಾಡಿದ್ದೇಕೆ?
ಅನುಪಮಾ ಹಾಗೂ ಸಿದ್ಧಾರ್ಥ್ 2014ರಲ್ಲಿ ವಿವಾಹವಾಗಿದ್ದರು. ಇವರಿಬ್ಬರ ಕೌಟುಂಬಿಕ ಕಲಹ ಕೋರ್ಟ್ ಮೆಟ್ಟಿಲೇರಿದೆ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್, ಮಗನನ್ನು ಪತಿ ಸಿದ್ದಾರ್ಥ್ಗೆ ನೀಡಿ ಆದೇಶಿಸಿತ್ತು.
ಕೋರ್ಟ್ ಆದೇಶದ ಪ್ರಕಾರ ಬಾಲಕ ತಂದೆಯ ಜೊತೆ ವಾಸವಾಗಿದ್ದ. ಶಾಲೆಗೆ ಹೋಗಲು ಅಪಾರ್ಟ್ಮೆಂಟ್ ಮುಂದೆ ನಿಂತಿದ್ದಾಗ ಈ ಘಟನೆ ನಡೆದಿದೆ. ಮಗುವನ್ನು ಶಾಲೆಗೆ ಬಿಡಲು ತಾತ ಕೂಡ ಜೊತೆಯಲ್ಲಿದ್ದರು.
ಇದನ್ನೂ ಓದಿ: ರಾತ್ರಿ ಮಟನ್ ಊಟ ತಿಂದು ನಾಲ್ವರು ಸಾವು.. ದುರಂತಕ್ಕೆ ಕಾರಣವೇನು? ಬೆಚ್ಚಿ ಬೀಳಿಸಿದೆ ವೈದ್ಯರ ಮಾಹಿತಿ!
ಅಪಾರ್ಟ್ಮೆಂಟ್ ಮುಂದೆ ಮಗ ನಿಂತಿದ್ದಾಗ ಗೆಳೆಯನ ಜೊತೆ ಬಂದ ಅನುಪಮಾ ಕಿಡ್ನ್ಯಾಪ್ ಮಾಡಿದ್ದಾರೆ. ಅನುಪಮಾ ಮಗನನ್ನು ಕಿಡ್ನ್ಯಾಪ್ ಮಾಡಿದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಕೆ.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಪಾರ್ಟ್ಮೆಂಟ್ ಮುಂದೆ ಮಗನನ್ನೇ ಧರಧರನೇ ಎಳೆದೊಯ್ದ ತಾಯಿ
ಬೆಳಗ್ಗೆ ಶಾಲೆಗೆ ಹೋಗಲು ತಾತನ ಜೊತೆ ನಿಂತಿದ್ದ ಮಗನ ಕಿಡ್ನ್ಯಾಪ್
ಗೆಳೆಯನ ಜೊತೆ ಬಂದ ತಾಯಿ ಮಗನ ಕಿಡ್ನ್ಯಾಪ್ ಮಾಡಲು ಕಾರಣ ಏನು?
ಹೆತ್ತ ಮಗನನ್ನೇ ತಾಯಿ ಕಿಡ್ನ್ಯಾಪ್ ಮಾಡಿ ಧರಧರನೇ ಎಳೆದೊಯ್ದಿರೋ ಘಟನೆ ಬೆಂಗಳೂರು ಹೊರವಲಯದ ಕೆ.ಆರ್ ಪುರಂನಲ್ಲಿ ನಡೆದಿದೆ. ಅಪಾರ್ಟ್ಮೆಂಟ್ ಮುಂದೆ ತಾಯಿಯೇ ತನ್ನ ಮಗನನ್ನು ಕಿಡ್ನ್ಯಾಪ್ ಮಾಡಿರೋ ಅಮಾನವೀಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಕ್ಲಾಸ್ಮೇಟ್ಗಳಿಂದ ಅಶ್ಲೀಲ ಮೆಸೇಜ್.. ಬೆಂಗಳೂರಲ್ಲಿ ವಿವಾಹಿತ ಮಹಿಳೆ ಸಾವಿಗೆ ಶರಣು; ಆಗಿದ್ದೇನು?
ಸಿದ್ಧಾರ್ಥ್-ಅನುಪಮಾ ದಂಪತಿ ಕೌಟುಂಬಿಕ ಕಲಹದಿಂದ ಬೇರೆ, ಬೇರೆ ಆಗಿದ್ದಾರೆ. ಸಿದ್ಧಾರ್ಥ್ ಜೊತೆ ಆರೂವರೆ ವರ್ಷದ ಮಗ ವಾಸವಿದ್ದ. ಶಾಲೆಗೆ ಹೋಗಲು ತಾತನ ಜೊತೆ ನಿಂತಿದ್ದ ವೇಳೆ ತನ್ನ ಸ್ನೇಹಿತನ ಜೊತೆ ಬಂದ ತಾಯಿ ಮಗನನ್ನು ಕಿಡ್ನ್ಯಾಪ್ ಮಾಡಿ ಕರೆದುಕೊಂಡು ಹೋಗಿದ್ದಾರೆ.
ಕಿಡ್ನ್ಯಾಪ್ ಮಾಡಿದ್ದೇಕೆ?
ಅನುಪಮಾ ಹಾಗೂ ಸಿದ್ಧಾರ್ಥ್ 2014ರಲ್ಲಿ ವಿವಾಹವಾಗಿದ್ದರು. ಇವರಿಬ್ಬರ ಕೌಟುಂಬಿಕ ಕಲಹ ಕೋರ್ಟ್ ಮೆಟ್ಟಿಲೇರಿದೆ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್, ಮಗನನ್ನು ಪತಿ ಸಿದ್ದಾರ್ಥ್ಗೆ ನೀಡಿ ಆದೇಶಿಸಿತ್ತು.
ಕೋರ್ಟ್ ಆದೇಶದ ಪ್ರಕಾರ ಬಾಲಕ ತಂದೆಯ ಜೊತೆ ವಾಸವಾಗಿದ್ದ. ಶಾಲೆಗೆ ಹೋಗಲು ಅಪಾರ್ಟ್ಮೆಂಟ್ ಮುಂದೆ ನಿಂತಿದ್ದಾಗ ಈ ಘಟನೆ ನಡೆದಿದೆ. ಮಗುವನ್ನು ಶಾಲೆಗೆ ಬಿಡಲು ತಾತ ಕೂಡ ಜೊತೆಯಲ್ಲಿದ್ದರು.
ಇದನ್ನೂ ಓದಿ: ರಾತ್ರಿ ಮಟನ್ ಊಟ ತಿಂದು ನಾಲ್ವರು ಸಾವು.. ದುರಂತಕ್ಕೆ ಕಾರಣವೇನು? ಬೆಚ್ಚಿ ಬೀಳಿಸಿದೆ ವೈದ್ಯರ ಮಾಹಿತಿ!
ಅಪಾರ್ಟ್ಮೆಂಟ್ ಮುಂದೆ ಮಗ ನಿಂತಿದ್ದಾಗ ಗೆಳೆಯನ ಜೊತೆ ಬಂದ ಅನುಪಮಾ ಕಿಡ್ನ್ಯಾಪ್ ಮಾಡಿದ್ದಾರೆ. ಅನುಪಮಾ ಮಗನನ್ನು ಕಿಡ್ನ್ಯಾಪ್ ಮಾಡಿದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಕೆ.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ