ರಾಯಚೂರಿಗೆ ತರುವ ವೇಳೆ ಗಣೇಶನ ಮೂರ್ತಿಗೆ ಹಾನಿ
ಟಿಪ್ಪರ್ನಲ್ಲಿ ಬೃಹದಾಕಾರದ ಗಣೇಶನ ಮೂರ್ತಿ ತರುವ ವೇಳೆ ಘಟನೆ
ಲಕ್ಷಾಂತರ ರೂಪಾಯಿ ಮೌಲ್ಯದ ಗಣೇಶನ ಮೂರ್ತಿಗೆ ಹಾನಿ
ರಾಯಚೂರು: ಪ್ರತಿಷ್ಠಾಪನೆಗಾಗಿ ತೆಗೆದುಕೊಂಡು ಬರುತ್ತಿದ್ದ ಗಣೇಶ ಮೂರ್ತಿ ಪಲ್ಟಿ ಹೊಡೆದ ಘಟನೆ ತೆಲಂಗಾಣದ ನಂದಿನಿ ಗ್ರಾಮದ ಬಳಿ ನಡೆದಿದೆ. ಹೈದರಾಬಾದ್ ನಿಂದ ರಾಯಚೂರಿಗೆ ತರುವ ವೇಳೆ ಗಣೇಶನ ಮೂರ್ತಿಗೆ ಹಾನಿಯಾಗಿದೆ.
ಟಿಪ್ಪರ್ ನಲ್ಲಿ ಬೃಹದಾಕಾರದ ಗಣೇಶ ಮೂರ್ತಿ ತರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಇದ್ದ ವೈರ್ ಗಣೇಶ ಮೂರ್ತಿಗೆ ತಾಗಿ ಅನಾಹುತ ಸಂಭವಿಸಿದೆ. ವೈರ್ ಸರಿಪಡಿಸುವ ವೇಳೆ ಗಣೇಶನ ಮೂರ್ತಿ ನೆಲಕ್ಕೆ ಉರುಳಿದೆ.
ಬೃಹತ್ ಗಣೇಶನ ಮೂರ್ತಿ ಲಕ್ಷಾಂತರ ರೂ. ಮೌಲ್ಯದ್ದಾಗಿದ್ದು, ಪ್ರತಿಷ್ಠಾಪನೆ ಮುನ್ನವೇ ಅದಕ್ಕೆ ಹಾನಿಯಾಗಿದೆ. ಇಷ್ಟೆಲ್ಲಾ ಮಾಡಿ ಜಾಗರೂಕತೆಯಿಂದ ಕರೆ ತಂದರು ಎಡವಟ್ಟಾಗಿರುವುದರಿಂದ ಭಕ್ತಗಣ ಬೇಸರ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾಯಚೂರಿಗೆ ತರುವ ವೇಳೆ ಗಣೇಶನ ಮೂರ್ತಿಗೆ ಹಾನಿ
ಟಿಪ್ಪರ್ನಲ್ಲಿ ಬೃಹದಾಕಾರದ ಗಣೇಶನ ಮೂರ್ತಿ ತರುವ ವೇಳೆ ಘಟನೆ
ಲಕ್ಷಾಂತರ ರೂಪಾಯಿ ಮೌಲ್ಯದ ಗಣೇಶನ ಮೂರ್ತಿಗೆ ಹಾನಿ
ರಾಯಚೂರು: ಪ್ರತಿಷ್ಠಾಪನೆಗಾಗಿ ತೆಗೆದುಕೊಂಡು ಬರುತ್ತಿದ್ದ ಗಣೇಶ ಮೂರ್ತಿ ಪಲ್ಟಿ ಹೊಡೆದ ಘಟನೆ ತೆಲಂಗಾಣದ ನಂದಿನಿ ಗ್ರಾಮದ ಬಳಿ ನಡೆದಿದೆ. ಹೈದರಾಬಾದ್ ನಿಂದ ರಾಯಚೂರಿಗೆ ತರುವ ವೇಳೆ ಗಣೇಶನ ಮೂರ್ತಿಗೆ ಹಾನಿಯಾಗಿದೆ.
ಟಿಪ್ಪರ್ ನಲ್ಲಿ ಬೃಹದಾಕಾರದ ಗಣೇಶ ಮೂರ್ತಿ ತರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಇದ್ದ ವೈರ್ ಗಣೇಶ ಮೂರ್ತಿಗೆ ತಾಗಿ ಅನಾಹುತ ಸಂಭವಿಸಿದೆ. ವೈರ್ ಸರಿಪಡಿಸುವ ವೇಳೆ ಗಣೇಶನ ಮೂರ್ತಿ ನೆಲಕ್ಕೆ ಉರುಳಿದೆ.
ಬೃಹತ್ ಗಣೇಶನ ಮೂರ್ತಿ ಲಕ್ಷಾಂತರ ರೂ. ಮೌಲ್ಯದ್ದಾಗಿದ್ದು, ಪ್ರತಿಷ್ಠಾಪನೆ ಮುನ್ನವೇ ಅದಕ್ಕೆ ಹಾನಿಯಾಗಿದೆ. ಇಷ್ಟೆಲ್ಲಾ ಮಾಡಿ ಜಾಗರೂಕತೆಯಿಂದ ಕರೆ ತಂದರು ಎಡವಟ್ಟಾಗಿರುವುದರಿಂದ ಭಕ್ತಗಣ ಬೇಸರ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ