ಅಭಿಮನ್ಯುವಿನಂತೆ ದೇಶದ ಜನರನ್ನ ಚಕ್ರವ್ಯೂಹದಲ್ಲಿ ಬಂಧಿಸಲಾಗಿದೆ
ಮಹಾಭಾರತ ಉಲ್ಲೇಖಿಸಿ ಸರ್ಕಾರದ ಮೇಲೆ ರಾಹುಲ್ ಗಾಂಧಿ ವಾಗ್ಬಾಣ
ಹಲ್ವಾ ತಿನ್ನಿಸಿದ ಬಗ್ಗೆ ಮಾತನಾಡುವಾಗ ನಿರ್ಮಲಾ ಸೀತಾರಾಮನ್ ನಗು
ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯಗಳ ನಡುವಿನ ಬಜೆಟ್ ಚರ್ಚೆ ಜೋರಾಗಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬಜೆಟ್ ಬಗ್ಗೆ ಮಾತನಾಡಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮಹಾಭಾರತದ ಚಕ್ರವ್ಯೂಹದಲ್ಲಿ ಅಭಿಮನ್ಯುವಂತೆ ದೇಶದ ಜನ ಸಿಲುಕಿದ್ದಾರೆ. ಈ ಹೊಸ ಚಕ್ರವ್ಯೂಹವನ್ನ ಆರು ಜನ ಮುನ್ನೆಡೆಸುತ್ತಿದ್ದಾರೆ ಅಂತ ಕೇಂದ್ರ ಸರ್ಕಾರದ ವಿರುದ್ಧ ವಾಗ್ಬಾಣಗಳ ಸುರಿಮಳೆಗೈದಿದ್ದಾರೆ.
ಇದನ್ನೂ ಓದಿ: ‘ಭೂಮಿ ಇರೋ ತನಕ ರಾಮನಗರ ಹೆಸರು ತೆಗೆಯಲು ಆಗಲ್ಲ’.. ಸರ್ಕಾರದ ವಿರುದ್ಧ ಕೇಂದ್ರ ಸಚಿವ HDK ಆಕ್ರೋಶ
2024ನೇ ಬಜೆಟ್ NDA ಮಿತ್ರಪಕ್ಷಗಳ ರಾಜ್ಯಗಳು ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಿಗೆ ಚೊಂಬು ಅಂತ ಕಾಂಗ್ರೆಸ್ ಪ್ರತಿಭಟಿಸುತ್ತಿದೆ. ಈ ಹೊತ್ತಲ್ಲೇ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಬಜೆಟ್ ಬಗ್ಗೆ ಮಾತನಾಡಿ ಮೋದಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.
‘ಅಭಿಮನ್ಯುವಿನಂತೆ ದೇಶದ ಜನರನ್ನ ‘ಚಕ್ರವ್ಯೂಹ’ದಲ್ಲಿ ಬಂಧಿಸಲಾಗಿದೆ’
ಮಹಾಭಾರತ ಉಲ್ಲೇಖಿಸಿ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ಬಾಣ
ವಿಪಕ್ಷ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಅಕ್ಷರಶಃ ಗುಡುಗಿದ್ದಾರೆ. ಬಜೆಟ್ ಮೇಲಿನ ಚರ್ಚೆಯಲ್ಲಿ ಅಭಿಮನ್ಯುವಿನಂತೆ ದೇಶದ ಜನರನ್ನ ಚಕ್ರವ್ಯೂಹದಲ್ಲಿ ಬಂಧಿಸಲಾಗಿದೆ ಎಂದು ಮಹಾಭಾರತವನ್ನು ಉಲ್ಲೇಖಿಸಿ ಮೋದಿ ಸರ್ಕಾರದ ವಿರುದ್ಧ ವಾಗ್ಬಾಣಗಳನ್ನು ಪ್ರಯೋಗಿಸಿದ್ದಾರೆ.
Nirmala Sitharaman was brutally roasted by #RahulGandhi 🔥 pic.twitter.com/5rVjIS0dU3
— Mr. R Gandhi 🇮🇳 (@Mr_RGandhi) July 29, 2024
ಸಭಾಧ್ಯಕ್ಷರೆ, ಸಾವಿರಾರೂ ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ಅಭಿಮನ್ಯುವನ್ನ ಚಕ್ರವ್ಯೂಹದಲ್ಲಿ ಸಿಲುಕಿಸಿ ಆರು ಜನ ಸೇರಿ ಹತ್ಯೆ ಮಾಡಿದ್ದರು. ನಾನು ಚಕ್ರವ್ಯೂಹದ ಬಗ್ಗೆ ಸ್ವಲ್ಪ ಅಧ್ಯಾಯ ನಡೆಸಿದ ಬಳಿಕ ಗೊತ್ತಾಯಿತು. ಚಕ್ರವ್ಯೂಹವನ್ನು ಪದ್ಮವ್ಯೂಹ ಅಂತ ಕೂಡ ಕರೆಯುತ್ತಾರೆ. ಅಂದರೆ ಕಮಲದ ರಚನೆ. ಚಕ್ರವ್ಯೂಹ ಕಮಲದ ಆಕಾರದಲ್ಲಿ ಇರುತ್ತೆ. 21ನೇ ಶತಮಾನದಲ್ಲೂ ಚಕ್ರವ್ಯೂಹವನ್ನು ರಚಿಸಲಾಗಿದೆ. ಅದು ಕಮಲದ ಆಕಾರದಲ್ಲಿದೆ. ಅದನ್ನ ಪ್ರಧಾನಮಂತ್ರಿ ತಮ್ಮ ಎದೆ ಮೇಲೆ ಸಿಲುಕಿಸಿಕೊಂಡು ಓಡಾಡುತ್ತಾರೆ. ಅಭಿಮನ್ಯುವಿಗೆ ಏನು ಮಾಡಲಾಯಿತೋ ಅದನ್ನೇ ಈಗ ರೈತರು, ಯುವಜನತೆ, ಮಹಿಳೆಯರಿಗೆ ಮಾಡಲಾಗುತ್ತಿದೆ.
ರಾಹುಲ್ ಗಾಂಧಿ, ವಿಪಕ್ಷ ನಾಯಕ
ಆಧುನಿಕ ಚಕ್ರವ್ಯೂಹದಲ್ಲಿರುವ ಆರು ಮಂದಿ ಯಾರು?
ಅಭಿಮನ್ಯುನಂತೆ 21ನೇ ಶತಮಾನದಲ್ಲಿ ರಚಿಸಲಾದ ಆಧುನಿಕ ಚಕ್ರವ್ಯೂಹದಲ್ಲಿ ದೇಶದ ಜನರು ಸಿಲುಕಿದ್ದಾರೆ ಅಂತ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ ಆ ಆರು ಮಂದಿ ಯಾಱರು ಅಂತ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಚಕ್ರವ್ಯೂಹದಲ್ಲಿ ಸಾವಿರಾರೂ ಜನ ಇರ್ತಾರೆ ಸಭಾಧ್ಯಕ್ಷರೆ ಆದ್ರೆ ಚಕ್ರವ್ಯೂಹವನ್ನು ಕೇವಲ ಆರು ಜನ ಮಾತ್ರ ನಿಯಂತ್ರಿಸುತ್ತಾರೆ. ಆಗಿನ ಕಾಲದಲ್ಲೇ ಹೇಗೆ ಆರು ಜನರಿದ್ದರೋ, ಅದೇ ರೀತಿ ಈಗಲೂ ಆರು ಜನರಿದ್ದಾರೆ. ಆ ಆರು ಮಂದಿ ಯಾರೆಂದರೆ ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ, ಅದಾನಿ.
ರಾಹುಲ್ ಗಾಂಧಿ, ವಿಪಕ್ಷ ನಾಯಕ
ಹೀಗೆ ಆಧುನಿಕ ಚಕ್ರವ್ಯೂಹದಲ್ಲಿ ದೇಶದ ಜನರು ಸಿಲುಕಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, ಚಕ್ರವ್ಯೂಹದ ಹಿಂದೆ ಮೂರು ಶಕ್ತಿಗಳಿವೆ ಎಂದು ಕಿಡಿಕಾರಿದ್ದರು.
ಇದೇ ವೇಳೆ ರಾಹುಲ್ ಗಾಂಧಿ ಅವರು ಜಾತಿ ಜನಗಣತಿ ಬಗ್ಗೆ ಮಾತನಾಡುವಾಗ ದೇಶದಲ್ಲಿ ಶೇಕಡಾ 2-3ರಷ್ಟು ಜನರಿಗೆ ಮಾತ್ರ ಹಲ್ವಾ ತಿನ್ನಿಸಿದ ಬಗ್ಗೆ ಮಾತನಾಡುವಾಗ ಕೇಂದ್ರ ವಿತ್ತ ಸಚಿವೆ ತಲೆ ಮೇಲೆ ಕೈ ಇಟ್ಟುಕೊಂಡ ಪ್ರಸಂಗ ನಡೆದಿದೆ. ನಿರ್ಮಲಾ ಸೀತಾರಾಮನ್ ಅವರ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: ದೇವೇಗೌಡರನ್ನು ಭೇಟಿಯಾದ ಮೋದಿ.. ಮಹತ್ವದ ಚರ್ಚೆ; HDD ಕೊಟ್ಟ ಗಿಫ್ಟ್ಗೆ ಪ್ರಧಾನಿ ಸಂತಸ; ಏನದು?
ಮತ್ತೊಂದೆಡೆ ದೇಶದ ಜನರ ಸುತ್ತ ಕೇಂದ್ರ ಸರ್ಕಾರ ಹೆಣೆದ ಚಕ್ರವ್ಯೂಹವನ್ನು ಜಾತಿಗಣತಿಯನ್ನು ಮಂಡಿಸುವ ಮೂಲಕ ಬೇಧಿಸುತ್ತೇವೆ ಅಂತ ರಾಹುಲ್ ಗಾಂಧಿ ಸವಾಲು ಹಾಕಿದರು. ಸಂಸತ್ನಲ್ಲಿ ಮಹಾಭಾರತವನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಮೋದಿ ಸರ್ಕಾರದ ಮೇಲೆ ವಾಗ್ಬಾಣ ಪ್ರಯೋಗಿಸಿದ್ದು, ಇದಕ್ಕೆ ಮೋದಿ ಸರ್ಕಾರ ಯಾವ ಅಸ್ತ್ರ ಪ್ರಯೋಗಿಸಲಿದೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಭಿಮನ್ಯುವಿನಂತೆ ದೇಶದ ಜನರನ್ನ ಚಕ್ರವ್ಯೂಹದಲ್ಲಿ ಬಂಧಿಸಲಾಗಿದೆ
ಮಹಾಭಾರತ ಉಲ್ಲೇಖಿಸಿ ಸರ್ಕಾರದ ಮೇಲೆ ರಾಹುಲ್ ಗಾಂಧಿ ವಾಗ್ಬಾಣ
ಹಲ್ವಾ ತಿನ್ನಿಸಿದ ಬಗ್ಗೆ ಮಾತನಾಡುವಾಗ ನಿರ್ಮಲಾ ಸೀತಾರಾಮನ್ ನಗು
ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯಗಳ ನಡುವಿನ ಬಜೆಟ್ ಚರ್ಚೆ ಜೋರಾಗಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬಜೆಟ್ ಬಗ್ಗೆ ಮಾತನಾಡಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮಹಾಭಾರತದ ಚಕ್ರವ್ಯೂಹದಲ್ಲಿ ಅಭಿಮನ್ಯುವಂತೆ ದೇಶದ ಜನ ಸಿಲುಕಿದ್ದಾರೆ. ಈ ಹೊಸ ಚಕ್ರವ್ಯೂಹವನ್ನ ಆರು ಜನ ಮುನ್ನೆಡೆಸುತ್ತಿದ್ದಾರೆ ಅಂತ ಕೇಂದ್ರ ಸರ್ಕಾರದ ವಿರುದ್ಧ ವಾಗ್ಬಾಣಗಳ ಸುರಿಮಳೆಗೈದಿದ್ದಾರೆ.
ಇದನ್ನೂ ಓದಿ: ‘ಭೂಮಿ ಇರೋ ತನಕ ರಾಮನಗರ ಹೆಸರು ತೆಗೆಯಲು ಆಗಲ್ಲ’.. ಸರ್ಕಾರದ ವಿರುದ್ಧ ಕೇಂದ್ರ ಸಚಿವ HDK ಆಕ್ರೋಶ
2024ನೇ ಬಜೆಟ್ NDA ಮಿತ್ರಪಕ್ಷಗಳ ರಾಜ್ಯಗಳು ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಿಗೆ ಚೊಂಬು ಅಂತ ಕಾಂಗ್ರೆಸ್ ಪ್ರತಿಭಟಿಸುತ್ತಿದೆ. ಈ ಹೊತ್ತಲ್ಲೇ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಬಜೆಟ್ ಬಗ್ಗೆ ಮಾತನಾಡಿ ಮೋದಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.
‘ಅಭಿಮನ್ಯುವಿನಂತೆ ದೇಶದ ಜನರನ್ನ ‘ಚಕ್ರವ್ಯೂಹ’ದಲ್ಲಿ ಬಂಧಿಸಲಾಗಿದೆ’
ಮಹಾಭಾರತ ಉಲ್ಲೇಖಿಸಿ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ಬಾಣ
ವಿಪಕ್ಷ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಅಕ್ಷರಶಃ ಗುಡುಗಿದ್ದಾರೆ. ಬಜೆಟ್ ಮೇಲಿನ ಚರ್ಚೆಯಲ್ಲಿ ಅಭಿಮನ್ಯುವಿನಂತೆ ದೇಶದ ಜನರನ್ನ ಚಕ್ರವ್ಯೂಹದಲ್ಲಿ ಬಂಧಿಸಲಾಗಿದೆ ಎಂದು ಮಹಾಭಾರತವನ್ನು ಉಲ್ಲೇಖಿಸಿ ಮೋದಿ ಸರ್ಕಾರದ ವಿರುದ್ಧ ವಾಗ್ಬಾಣಗಳನ್ನು ಪ್ರಯೋಗಿಸಿದ್ದಾರೆ.
Nirmala Sitharaman was brutally roasted by #RahulGandhi 🔥 pic.twitter.com/5rVjIS0dU3
— Mr. R Gandhi 🇮🇳 (@Mr_RGandhi) July 29, 2024
ಸಭಾಧ್ಯಕ್ಷರೆ, ಸಾವಿರಾರೂ ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ಅಭಿಮನ್ಯುವನ್ನ ಚಕ್ರವ್ಯೂಹದಲ್ಲಿ ಸಿಲುಕಿಸಿ ಆರು ಜನ ಸೇರಿ ಹತ್ಯೆ ಮಾಡಿದ್ದರು. ನಾನು ಚಕ್ರವ್ಯೂಹದ ಬಗ್ಗೆ ಸ್ವಲ್ಪ ಅಧ್ಯಾಯ ನಡೆಸಿದ ಬಳಿಕ ಗೊತ್ತಾಯಿತು. ಚಕ್ರವ್ಯೂಹವನ್ನು ಪದ್ಮವ್ಯೂಹ ಅಂತ ಕೂಡ ಕರೆಯುತ್ತಾರೆ. ಅಂದರೆ ಕಮಲದ ರಚನೆ. ಚಕ್ರವ್ಯೂಹ ಕಮಲದ ಆಕಾರದಲ್ಲಿ ಇರುತ್ತೆ. 21ನೇ ಶತಮಾನದಲ್ಲೂ ಚಕ್ರವ್ಯೂಹವನ್ನು ರಚಿಸಲಾಗಿದೆ. ಅದು ಕಮಲದ ಆಕಾರದಲ್ಲಿದೆ. ಅದನ್ನ ಪ್ರಧಾನಮಂತ್ರಿ ತಮ್ಮ ಎದೆ ಮೇಲೆ ಸಿಲುಕಿಸಿಕೊಂಡು ಓಡಾಡುತ್ತಾರೆ. ಅಭಿಮನ್ಯುವಿಗೆ ಏನು ಮಾಡಲಾಯಿತೋ ಅದನ್ನೇ ಈಗ ರೈತರು, ಯುವಜನತೆ, ಮಹಿಳೆಯರಿಗೆ ಮಾಡಲಾಗುತ್ತಿದೆ.
ರಾಹುಲ್ ಗಾಂಧಿ, ವಿಪಕ್ಷ ನಾಯಕ
ಆಧುನಿಕ ಚಕ್ರವ್ಯೂಹದಲ್ಲಿರುವ ಆರು ಮಂದಿ ಯಾರು?
ಅಭಿಮನ್ಯುನಂತೆ 21ನೇ ಶತಮಾನದಲ್ಲಿ ರಚಿಸಲಾದ ಆಧುನಿಕ ಚಕ್ರವ್ಯೂಹದಲ್ಲಿ ದೇಶದ ಜನರು ಸಿಲುಕಿದ್ದಾರೆ ಅಂತ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ ಆ ಆರು ಮಂದಿ ಯಾಱರು ಅಂತ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಚಕ್ರವ್ಯೂಹದಲ್ಲಿ ಸಾವಿರಾರೂ ಜನ ಇರ್ತಾರೆ ಸಭಾಧ್ಯಕ್ಷರೆ ಆದ್ರೆ ಚಕ್ರವ್ಯೂಹವನ್ನು ಕೇವಲ ಆರು ಜನ ಮಾತ್ರ ನಿಯಂತ್ರಿಸುತ್ತಾರೆ. ಆಗಿನ ಕಾಲದಲ್ಲೇ ಹೇಗೆ ಆರು ಜನರಿದ್ದರೋ, ಅದೇ ರೀತಿ ಈಗಲೂ ಆರು ಜನರಿದ್ದಾರೆ. ಆ ಆರು ಮಂದಿ ಯಾರೆಂದರೆ ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ, ಅದಾನಿ.
ರಾಹುಲ್ ಗಾಂಧಿ, ವಿಪಕ್ಷ ನಾಯಕ
ಹೀಗೆ ಆಧುನಿಕ ಚಕ್ರವ್ಯೂಹದಲ್ಲಿ ದೇಶದ ಜನರು ಸಿಲುಕಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, ಚಕ್ರವ್ಯೂಹದ ಹಿಂದೆ ಮೂರು ಶಕ್ತಿಗಳಿವೆ ಎಂದು ಕಿಡಿಕಾರಿದ್ದರು.
ಇದೇ ವೇಳೆ ರಾಹುಲ್ ಗಾಂಧಿ ಅವರು ಜಾತಿ ಜನಗಣತಿ ಬಗ್ಗೆ ಮಾತನಾಡುವಾಗ ದೇಶದಲ್ಲಿ ಶೇಕಡಾ 2-3ರಷ್ಟು ಜನರಿಗೆ ಮಾತ್ರ ಹಲ್ವಾ ತಿನ್ನಿಸಿದ ಬಗ್ಗೆ ಮಾತನಾಡುವಾಗ ಕೇಂದ್ರ ವಿತ್ತ ಸಚಿವೆ ತಲೆ ಮೇಲೆ ಕೈ ಇಟ್ಟುಕೊಂಡ ಪ್ರಸಂಗ ನಡೆದಿದೆ. ನಿರ್ಮಲಾ ಸೀತಾರಾಮನ್ ಅವರ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: ದೇವೇಗೌಡರನ್ನು ಭೇಟಿಯಾದ ಮೋದಿ.. ಮಹತ್ವದ ಚರ್ಚೆ; HDD ಕೊಟ್ಟ ಗಿಫ್ಟ್ಗೆ ಪ್ರಧಾನಿ ಸಂತಸ; ಏನದು?
ಮತ್ತೊಂದೆಡೆ ದೇಶದ ಜನರ ಸುತ್ತ ಕೇಂದ್ರ ಸರ್ಕಾರ ಹೆಣೆದ ಚಕ್ರವ್ಯೂಹವನ್ನು ಜಾತಿಗಣತಿಯನ್ನು ಮಂಡಿಸುವ ಮೂಲಕ ಬೇಧಿಸುತ್ತೇವೆ ಅಂತ ರಾಹುಲ್ ಗಾಂಧಿ ಸವಾಲು ಹಾಕಿದರು. ಸಂಸತ್ನಲ್ಲಿ ಮಹಾಭಾರತವನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಮೋದಿ ಸರ್ಕಾರದ ಮೇಲೆ ವಾಗ್ಬಾಣ ಪ್ರಯೋಗಿಸಿದ್ದು, ಇದಕ್ಕೆ ಮೋದಿ ಸರ್ಕಾರ ಯಾವ ಅಸ್ತ್ರ ಪ್ರಯೋಗಿಸಲಿದೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ