ಕೆಆರ್ಎಸ್ ಡ್ಯಾಂ ನೀರಿನ ಮಟ್ಟ ಮತ್ತಷ್ಟು ಇಳಿಮುಖ
124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಇದೀಗ ಎಷ್ಟಿದೆ ನೀರು?
ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಮೇಲಿದೆ ಮಂಡ್ಯ ರೈತರ ಕಣ್ಣು
ಮಂಡ್ಯ: ಕೆಆರ್ಎಸ್ ಡ್ಯಾಂ ನೀರಿನ ಮಟ್ಟ ಮತ್ತೆ ಇಳಿಮುಖ ಕಂಡಿದೆ. 97.96 ಅಡಿಗೆ ನೀರಿನ ಮಟ್ಟ ಕುಸಿದಿದೆ. ದಿನೇ ದಿನೇ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆ ಆಗ್ತಾ ಇದೆ. ಸದ್ಯ ಡ್ಯಾಂನಲ್ಲಿ ಕೇವಲ 21 ಟಿಎಂಸಿ ನೀರು ಮಾತ್ರ ಇದೆ. ಈ ಪೈಕಿ ಐದು ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ಬಳಕೆಗೆ ಕೇವಲ 16 ಟಿಎಂಸಿ ನೀರು ಮಾತ್ರ ಸಿಗಲಿದೆ.
124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಇದೀಗ 97.96 ಅಡಿಯಷ್ಟೇ ನೀರು ಇದೆ. 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಕೆಆರ್ಎಸ್ನಲ್ಲಿ ಇರೋದು ಕೇವಲ 21.252 ಟಿಎಂಸಿ ಅಷ್ಟೇ. ಸದ್ಯ ಡ್ಯಾಂನ ಒಳ ಹರಿವು 3,502 ಕ್ಯೂಸೆಕ್ ಇದ್ದು, ಡ್ಯಾಂನ ಹೊರ ಹರಿವು 4,253 ಕ್ಯೂಸೆಕ್ ಇದೆ.
ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಕರೆಯಲಾಗಿದೆ. ಹಾಗಾಗಿ ಮಂಡ್ಯ ರೈತರ ಕಣ್ಣು ಇಂದಿನ ಸಭೆಯ ನಿರ್ಣಯದ ಮೇಲೆ ಇದೆ.
ಒಂದು ವೇಳೆ ಮತ್ತೆ ತಮಿಳುನಾಡಿಗೆ ನೀರು ಬಿಡುವಂತೆ ಶಿಫಾರಸ್ಸು ಬಂದರೆ ಕರುನಾಡಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ. ಆದೇಶ ಏನೇ ಬಂದ್ರು ನೀರು ಬಿಡಲ್ಲ ಎಂದು ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳುವಂತೆ ಅನ್ನದಾತರ ಒತ್ತಾಯ ಕೇಳಿಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೆಆರ್ಎಸ್ ಡ್ಯಾಂ ನೀರಿನ ಮಟ್ಟ ಮತ್ತಷ್ಟು ಇಳಿಮುಖ
124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಇದೀಗ ಎಷ್ಟಿದೆ ನೀರು?
ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಮೇಲಿದೆ ಮಂಡ್ಯ ರೈತರ ಕಣ್ಣು
ಮಂಡ್ಯ: ಕೆಆರ್ಎಸ್ ಡ್ಯಾಂ ನೀರಿನ ಮಟ್ಟ ಮತ್ತೆ ಇಳಿಮುಖ ಕಂಡಿದೆ. 97.96 ಅಡಿಗೆ ನೀರಿನ ಮಟ್ಟ ಕುಸಿದಿದೆ. ದಿನೇ ದಿನೇ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆ ಆಗ್ತಾ ಇದೆ. ಸದ್ಯ ಡ್ಯಾಂನಲ್ಲಿ ಕೇವಲ 21 ಟಿಎಂಸಿ ನೀರು ಮಾತ್ರ ಇದೆ. ಈ ಪೈಕಿ ಐದು ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ಬಳಕೆಗೆ ಕೇವಲ 16 ಟಿಎಂಸಿ ನೀರು ಮಾತ್ರ ಸಿಗಲಿದೆ.
124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಇದೀಗ 97.96 ಅಡಿಯಷ್ಟೇ ನೀರು ಇದೆ. 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಕೆಆರ್ಎಸ್ನಲ್ಲಿ ಇರೋದು ಕೇವಲ 21.252 ಟಿಎಂಸಿ ಅಷ್ಟೇ. ಸದ್ಯ ಡ್ಯಾಂನ ಒಳ ಹರಿವು 3,502 ಕ್ಯೂಸೆಕ್ ಇದ್ದು, ಡ್ಯಾಂನ ಹೊರ ಹರಿವು 4,253 ಕ್ಯೂಸೆಕ್ ಇದೆ.
ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಕರೆಯಲಾಗಿದೆ. ಹಾಗಾಗಿ ಮಂಡ್ಯ ರೈತರ ಕಣ್ಣು ಇಂದಿನ ಸಭೆಯ ನಿರ್ಣಯದ ಮೇಲೆ ಇದೆ.
ಒಂದು ವೇಳೆ ಮತ್ತೆ ತಮಿಳುನಾಡಿಗೆ ನೀರು ಬಿಡುವಂತೆ ಶಿಫಾರಸ್ಸು ಬಂದರೆ ಕರುನಾಡಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ. ಆದೇಶ ಏನೇ ಬಂದ್ರು ನೀರು ಬಿಡಲ್ಲ ಎಂದು ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳುವಂತೆ ಅನ್ನದಾತರ ಒತ್ತಾಯ ಕೇಳಿಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ