newsfirstkannada.com

ಕಳ್ಳತನಕ್ಕೆ ಯತ್ನ.. ಬುದ್ಧಿ ಕಲಿಸಲು ಕೊಟ್ಟ ಎರಡು ಏಟಿಗೆ ಸತ್ತೇ ಹೋದ

Share :

Published June 1, 2024 at 10:19am

    ಮಗನ ಮೇಲೆ ಹಲ್ಲೆ‌ ನಡೆಸಿದವರ ವಿರುದ್ಧ ದೂರು ನೀಡದ ಕಳ್ಳನ ತಾಯಿ

    ಪ್ರತಾಪನಗರದ ಗೋರಖನಾಥ ಮನೆಯ ಮೇಲೆ ನಾಲ್ವರಿಂದ ಕಳ್ಳತನಕ್ಕೆ ಯತ್ನ

    ಕಟ್ಟಿಗೆಗಳಿಂದ ಹಲ್ಲೆ‌ ನಡೆಸಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು

ಬೀದರ್: ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿ ಮೇಲೆ ಸ್ಥಳೀಯರು ಮನಬಂದಂತೆ ಥಳಿಸಿರೋ ಘಟನೆ ಪ್ರತಾಪ ನಗರದಲ್ಲಿ ಈ ಘಟನೆ ನಡೆದಿದೆ. ಹಳೆ ನೌಬಾದ್ ನಿವಾಸಿ ಸಂತೋಷ ನಾಗೂರ (30) ಮೃತ ವ್ಯಕ್ತಿ.

ಇದನ್ನೂ ಓದಿ: ಅಮೆರಿಕಾದ ಈ ಸ್ಪರ್ಧೆಯಲ್ಲಿ ಭಾರತೀಯನದ್ದೇ ಹವಾ.. ಬೃಹತ್​ ಸಾಧನೆ ಮಾಡಿದ 12 ವರ್ಷದ ಬಾಲಕ!

ಸತೀಶ್, ಅಬ್ರಾಹಿಂ, ಅಂಬರೀಶ್ ಜೊತೆಗೆ ಸಂತೋಷ್ ಎಂಬಾತ ಪ್ರತಾಪನಗರದ ಗೋರಖನಾಥ ಕಳ್ಳತಕ್ಕೆ ಹೋಗಿದ್ದ. ಕಳ್ಳತನದ ವೇಳೆ ಸ್ಥಳೀಯರ ಕೈಗೆ ಸಂತೋಷ್ ಸಿಕ್ಕಿಬಿದಿದ್ದಾನೆ. ಕೂಡಲೇ ಅಲ್ಲೇಯಿದ್ದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಸ್ಥಳೀಯರ ಕೈಗೆ ಸಂತೋಷ್ ಸಿಕ್ಕಿಬಿದಿದ್ದಾನೆ. ಕೂಡಲೇ ಮನೆ ಮಾಲೀಕ ಹಾಗೂ ಇನ್ನೂ ಕೆಲವರು ಕಟ್ಟಿಗೆಗಳಿಂದ ಹೊಡೆದ ಹಲ್ಲೆ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನು, ಬಡಿಗೆಗಳಿಂದ ಹಲ್ಲೆ ನಡೆಸಿದ್ದರಿಂದ ಸಂತೋಷ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಆ ಕೂಡಲೇ ಗಾಯಗೊಂಡಿದ್ದ ಸಂತೋಷನನ್ನು ಚಿಕಿತ್ಸೆಗಾಗಿ ಬ್ರಿಮ್ಸ್ ಜಿಲ್ಲಾ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಬೆಳಿಗ್ಗೆ ಸಂತೋಷ್ ಮೃತಪಟ್ಟಿದ್ದಾನೆ. ಮಗನ ಮೇಲೆ ಹಲ್ಲೆ‌ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೃತ ಸಂತೋಷ ತಾಯಿ ದೂರು ನೀಡಿದ್ದಾರೆ. ಈ ಹಲ್ಲೆ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ. ಸಂತೋಷ್​ ಮೇಲೆ ಹಲ್ಲೆ ಮಾಡಿದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಹಲ್ಲೆ‌ ನಡೆಸಿದ ಸಿಸಿಟಿವಿ ದೃಶ್ಯಾವಳಿ ನ್ಯೂಸ್​ಫಸ್ಟ್‌ಗೆ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಳ್ಳತನಕ್ಕೆ ಯತ್ನ.. ಬುದ್ಧಿ ಕಲಿಸಲು ಕೊಟ್ಟ ಎರಡು ಏಟಿಗೆ ಸತ್ತೇ ಹೋದ

https://newsfirstlive.com/wp-content/uploads/2024/06/death-case1.jpg

    ಮಗನ ಮೇಲೆ ಹಲ್ಲೆ‌ ನಡೆಸಿದವರ ವಿರುದ್ಧ ದೂರು ನೀಡದ ಕಳ್ಳನ ತಾಯಿ

    ಪ್ರತಾಪನಗರದ ಗೋರಖನಾಥ ಮನೆಯ ಮೇಲೆ ನಾಲ್ವರಿಂದ ಕಳ್ಳತನಕ್ಕೆ ಯತ್ನ

    ಕಟ್ಟಿಗೆಗಳಿಂದ ಹಲ್ಲೆ‌ ನಡೆಸಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು

ಬೀದರ್: ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿ ಮೇಲೆ ಸ್ಥಳೀಯರು ಮನಬಂದಂತೆ ಥಳಿಸಿರೋ ಘಟನೆ ಪ್ರತಾಪ ನಗರದಲ್ಲಿ ಈ ಘಟನೆ ನಡೆದಿದೆ. ಹಳೆ ನೌಬಾದ್ ನಿವಾಸಿ ಸಂತೋಷ ನಾಗೂರ (30) ಮೃತ ವ್ಯಕ್ತಿ.

ಇದನ್ನೂ ಓದಿ: ಅಮೆರಿಕಾದ ಈ ಸ್ಪರ್ಧೆಯಲ್ಲಿ ಭಾರತೀಯನದ್ದೇ ಹವಾ.. ಬೃಹತ್​ ಸಾಧನೆ ಮಾಡಿದ 12 ವರ್ಷದ ಬಾಲಕ!

ಸತೀಶ್, ಅಬ್ರಾಹಿಂ, ಅಂಬರೀಶ್ ಜೊತೆಗೆ ಸಂತೋಷ್ ಎಂಬಾತ ಪ್ರತಾಪನಗರದ ಗೋರಖನಾಥ ಕಳ್ಳತಕ್ಕೆ ಹೋಗಿದ್ದ. ಕಳ್ಳತನದ ವೇಳೆ ಸ್ಥಳೀಯರ ಕೈಗೆ ಸಂತೋಷ್ ಸಿಕ್ಕಿಬಿದಿದ್ದಾನೆ. ಕೂಡಲೇ ಅಲ್ಲೇಯಿದ್ದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಸ್ಥಳೀಯರ ಕೈಗೆ ಸಂತೋಷ್ ಸಿಕ್ಕಿಬಿದಿದ್ದಾನೆ. ಕೂಡಲೇ ಮನೆ ಮಾಲೀಕ ಹಾಗೂ ಇನ್ನೂ ಕೆಲವರು ಕಟ್ಟಿಗೆಗಳಿಂದ ಹೊಡೆದ ಹಲ್ಲೆ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನು, ಬಡಿಗೆಗಳಿಂದ ಹಲ್ಲೆ ನಡೆಸಿದ್ದರಿಂದ ಸಂತೋಷ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಆ ಕೂಡಲೇ ಗಾಯಗೊಂಡಿದ್ದ ಸಂತೋಷನನ್ನು ಚಿಕಿತ್ಸೆಗಾಗಿ ಬ್ರಿಮ್ಸ್ ಜಿಲ್ಲಾ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಬೆಳಿಗ್ಗೆ ಸಂತೋಷ್ ಮೃತಪಟ್ಟಿದ್ದಾನೆ. ಮಗನ ಮೇಲೆ ಹಲ್ಲೆ‌ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೃತ ಸಂತೋಷ ತಾಯಿ ದೂರು ನೀಡಿದ್ದಾರೆ. ಈ ಹಲ್ಲೆ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ. ಸಂತೋಷ್​ ಮೇಲೆ ಹಲ್ಲೆ ಮಾಡಿದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಹಲ್ಲೆ‌ ನಡೆಸಿದ ಸಿಸಿಟಿವಿ ದೃಶ್ಯಾವಳಿ ನ್ಯೂಸ್​ಫಸ್ಟ್‌ಗೆ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More