ಎಟಿಎಂನಲ್ಲಿದ್ದ 24 ಲಕ್ಷ ದೋಚಿ ಪರಾರಿಯಾಗಿದ್ದ 4 ಜನರ ಬಂಧನ
ಎಟಿಎಂಗೆ ಒಂಚೂರು ಹಾನಿ ಮಾಡದೆ ಹಣ ಎಗರಿಸಿದ ಖತರ್ನಾಕ್ ಕಳ್ಳರು
ಹಣ ಕಳ್ಳತನದ ಬಗ್ಗೆ ಸಿಎಂಎಸ್ ಕಂಪನಿ ಮ್ಯಾನೇಜರ್ ಪೊಲೀಸರಿಗೆ ದೂರು
ಎಟಿಎಂನಲ್ಲಿದ್ದ ಹಣವನ್ನ ದರೋಡೆ ಮಾಡಿದ್ದ ನಾಲ್ವರನ್ನ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ ನದೀಂ, ಶ್ರೀರಾಮ್, ಅರುಳ್ ಕುಮಾರ್ ಮತ್ತು ಮಹೇಶ್ ಎಂದು ಗುರುತಿಸಲಾಗಿದೆ.
ಬಂಧಿತ ನಾಲ್ವರು ಖದೀಮರು ಎಟಿಎಂನಲ್ಲಿದ್ದ 24 ಲಕ್ಷ ದೋಚಿ ಪರಾರಿಯಾಗಿದ್ದರು. ಅರುಳ್ ಎಂಬಾತ ಹಣ ತುಂಬುವ ಕಸ್ಟೋಡಿಯನ್ ಆಗಿದ್ದು, ಈತ ಹಣವನ್ನು ಏಟಿಎಂ ಗೆ ತುಂಬಿಸಿ ಸೇಪ್ಟಿ ಡೋರ್ ಲಾಕ್ ಮಾಡದೇ ಹೋಗ್ತಿದ್ದ. ಈತ ಹೋದ ಬಳಿಕ ಈ ಮೂವರು ಹೆಲ್ಮೆಟ್ ಧರಿಸಿ ಬಂದಿದ್ದಾರೆ. ಎಟಿಎಂಗೆ ಒಂಚೂರು ಹಾನಿ ಮಾಡದೇ ಹಣ ಎಗರಿಸಿದ್ದಾರೆ.
ನಾಲ್ವರು ಕಳ್ಳರು ಎಟಿಎಂಗೆ ನುಗ್ಗಿ 24 ಲಕ್ಷ ರೂಪಾಯಿ ದೋಚಿ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ನಾಲ್ವರು ಕಳ್ಳರನ್ನು ಪರಪ್ಪನ ಅಗ್ರಹಾರ ಪೊಲೀಸರು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.#Bangalore #Theves #CCTV pic.twitter.com/6hsrR6YXZv
— NewsFirst Kannada (@NewsFirstKan) July 17, 2023
ಹಣ ಕಳ್ಳತನದ ಬಗ್ಗೆ ಸಿಎಂಎಸ್ ಕಂಪನಿ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ನಾಲ್ವರನ್ನ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಎಟಿಎಂನಲ್ಲಿದ್ದ 24 ಲಕ್ಷ ದೋಚಿ ಪರಾರಿಯಾಗಿದ್ದ 4 ಜನರ ಬಂಧನ
ಎಟಿಎಂಗೆ ಒಂಚೂರು ಹಾನಿ ಮಾಡದೆ ಹಣ ಎಗರಿಸಿದ ಖತರ್ನಾಕ್ ಕಳ್ಳರು
ಹಣ ಕಳ್ಳತನದ ಬಗ್ಗೆ ಸಿಎಂಎಸ್ ಕಂಪನಿ ಮ್ಯಾನೇಜರ್ ಪೊಲೀಸರಿಗೆ ದೂರು
ಎಟಿಎಂನಲ್ಲಿದ್ದ ಹಣವನ್ನ ದರೋಡೆ ಮಾಡಿದ್ದ ನಾಲ್ವರನ್ನ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ ನದೀಂ, ಶ್ರೀರಾಮ್, ಅರುಳ್ ಕುಮಾರ್ ಮತ್ತು ಮಹೇಶ್ ಎಂದು ಗುರುತಿಸಲಾಗಿದೆ.
ಬಂಧಿತ ನಾಲ್ವರು ಖದೀಮರು ಎಟಿಎಂನಲ್ಲಿದ್ದ 24 ಲಕ್ಷ ದೋಚಿ ಪರಾರಿಯಾಗಿದ್ದರು. ಅರುಳ್ ಎಂಬಾತ ಹಣ ತುಂಬುವ ಕಸ್ಟೋಡಿಯನ್ ಆಗಿದ್ದು, ಈತ ಹಣವನ್ನು ಏಟಿಎಂ ಗೆ ತುಂಬಿಸಿ ಸೇಪ್ಟಿ ಡೋರ್ ಲಾಕ್ ಮಾಡದೇ ಹೋಗ್ತಿದ್ದ. ಈತ ಹೋದ ಬಳಿಕ ಈ ಮೂವರು ಹೆಲ್ಮೆಟ್ ಧರಿಸಿ ಬಂದಿದ್ದಾರೆ. ಎಟಿಎಂಗೆ ಒಂಚೂರು ಹಾನಿ ಮಾಡದೇ ಹಣ ಎಗರಿಸಿದ್ದಾರೆ.
ನಾಲ್ವರು ಕಳ್ಳರು ಎಟಿಎಂಗೆ ನುಗ್ಗಿ 24 ಲಕ್ಷ ರೂಪಾಯಿ ದೋಚಿ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ನಾಲ್ವರು ಕಳ್ಳರನ್ನು ಪರಪ್ಪನ ಅಗ್ರಹಾರ ಪೊಲೀಸರು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.#Bangalore #Theves #CCTV pic.twitter.com/6hsrR6YXZv
— NewsFirst Kannada (@NewsFirstKan) July 17, 2023
ಹಣ ಕಳ್ಳತನದ ಬಗ್ಗೆ ಸಿಎಂಎಸ್ ಕಂಪನಿ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ನಾಲ್ವರನ್ನ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ