ಇಂದು ಭಾರತ-ಲಂಕಾ ಫೈನಲ್ T20 ಕದನ
ಕ್ಲೀನ್ಸ್ವಿಪ್ ಮೇಲೆ ಟೀಮ್ ಇಂಡಿಯಾ ಕಣ್ಣು
2-0 ಅಂತರದಿಂದ ಸರಣಿ ಗೆದ್ದಿರೋ ಭಾರತ
ಇಂದು ಭಾರತ-ಶ್ರೀಲಂಕಾ ಫೈನಲ್ ಫೈಟ್ ನಡೆಯಲಿದೆ. ಈಗಾಗಲೇ ಇಂಡಿಯನ್ ಟೈಗರ್ಸ್ ಸರಣಿ ಗೆದ್ದಾಗಿದೆ. ಹಾಗಾಗಿ ಇದು ಪ್ರಯೋಗದ ಪಂದ್ಯವಾಗಿರಲಿದೆ.
ಟೀಮ್ ಇಂಡಿಯಾ ಬರೀ ತವರು ಮಾತ್ರವಲ್ಲ, ವಿದೇಶದಲ್ಲಿ ಕೂಡ ಹುಲಿ ಅನ್ನೋದನ್ನ ಮತ್ತೆ ಮತ್ತೆ ಪ್ರೂವ್ ಮಾಡ್ತಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಯಂಗ್ಗನ್ ಆತಿಥೇಯ ಸಿಂಹಳೀಯರನ್ನ ಬೇಟೆಯಾಡಿ ಸರಣಿ ಜಯಿಸಿದೆ. 2-0 ಮುನ್ನಡೆ ಸಾಧಿಸಿರೋ ಭಾರತ ತಂಡ ಇಂದು ಮತ್ತೊಂದು ಗೆಲುವಿಗಾಗಿ ಹಾತೊರೆಯುತ್ತಿದೆ. ಸಿರೀಸ್ ಗೆದ್ದ ಭಾರತಕ್ಕೆ ಫೈನಲ್ ಬ್ಯಾಟಲ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹಾಗಾಗಿ ಕ್ಯಾಪ್ಟನ್ ಸೂರ್ಯ ಪ್ರಯೋಗಕ್ಕೆ ಕೈ ಹಾಕೋದು ಪಕ್ಕವಾಗಿದೆ. ಹೀಗಾಗಿ ಬೆಂಚ್ ಕಾದವರು ಅವಕಾಶ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ:ಕೇರಳ ಭೂಕುಸಿತಕ್ಕೆ 3 ಕಾರಣಗಳು; ಬೆಟ್ಟ, ಗುಡ್ಡ ಕುಸಿಯುವ ಹಿಂದಿನ ಸತ್ಯ ಬಿಚ್ಚಿಟ್ಟ ವಿಜ್ಞಾನಿ..!
ಗಿಲ್ ಕಥೆಯೇನು?
ಮೊದಲ ಪಂದ್ಯದಲ್ಲಿ ಬೆಂಚ್ ಕಾದಿದ್ದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ಗೆ ಅನಿರೀಕ್ಷಿತ ರೀತಿಯಲ್ಲಿ 2ನೇ ಪಂದ್ಯದಲ್ಲಿ ಕಣಕ್ಕಿಳಿದ್ರು. ಓಪನರ್ ಶುಭಮನ್ ಗಿಲ್ ಕುತ್ತಿಗೆ ನೋವಿನಿಂದ ಆಡಲಿಲ್ಲ. ಹೀಗಾಗಿ ಸ್ಯಾಮ್ಸನ್ಗೆ ಅದೃಷ್ಟು ಹುಡುಕಿ ಬಂತು. ಈ ಗೋಲ್ಡನ್ ಚಾನ್ಸ್ ಅನ್ನ ಕೇರಳ ಬ್ಯಾಟ್ ಸರಿಯಾಗಿ ಬಳಸಿಕೊಳ್ಳಲಿಲ್ಲ. ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ರು.
ಎರಡನೇ ಪಂದ್ಯದಲ್ಲಿ ಡಕೌಟ್ ಆದ ಸ್ಯಾಮ್ಸನ್ ಮತ್ತೊಂದು ಚಾನ್ಸ್ ನಿರೀಕ್ಷೆಯಲ್ಲಿದ್ದಾರೆ. ಆದರೆ ಎಲ್ಲವೂ ಗಿಲ್ ಲಭ್ಯತೆ ಮೇಲೆ ನಿಂತಿದೆ. ಇಲ್ಲಿಯ ತನಕ ಬಿಸಿಸಿಐ ಗಿಲ್ ಕುತ್ತಿಗೆ ನೋವಿನ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಅವರು ಆಡ್ತಾರೋ? ಇಲ್ವೋ ಅನ್ನೋದು ಸಸ್ಪೆನ್ಸ್ ಆಗಿ ಉಳಿದಿದೆ. ಹಾಗೊಂದು ವೇಳೆ ಗಿಲ್ ಆಡದಿದ್ದಲ್ಲಿ ಬಿಗ್ ಹಿಟ್ಟರ್ ಸ್ಯಾಮ್ಸನ್ಗೆ ಮತ್ತೊಂದು ಅವಕಾಶ ಸಿಗಲಿದೆ.
ಶಿವಂ ದುಬೆಗೆ ಅದೃಷ್ಟ ಒಲಿಯುತ್ತಾ?
ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆದಿದ್ದ ಆಲ್ರೌಂಡರ್ ಶಿವಂ ದುಬೆಯನ್ನ ಮೊದಲೆರಡು ಪಂದ್ಯಕ್ಕೆ ಪರಿಗಣಿಸಿಲ್ಲ. ಇಂದು ಸ್ಪಿನ್ ಸ್ಪೀಡ್ ಆಡುವ ಸಾಧ್ಯತೆ ಹೆಚ್ಚಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಥವಾ ರಿಂಕು ಸಿಂಗ್ಗೆ ಕೊಕ್ ಕೊಟ್ಟು, ದುಬೆಯನ್ನ ಆಡಿಸಲು ಟೀಮ್ ಮ್ಯಾನೇಜ್ಮೆಂಟ್ ಚಿಂತಿಸ್ತಿದೆ. ದುಬೆ ಏಕದಿನ ಸರಣಿಯಲ್ಲಿ ಕೂಡ ಸ್ಥಾನ ಪಡೆದಿದ್ದು, ಇಂದು ಕಣಕ್ಕಿಳಿದ್ರೆ ರಿದಮ್ ಕಂಡುಕೊಳ್ಳಲು ನೆರವಾಗಲಿದೆ.
ಇದನ್ನೂ ಓದಿ:ನಾಯಿ ಹೊಟ್ಟೆಗೆ ಜಾಸ್ತಿ ಹಾಕಿದ್ರೆ ಜೈಲಿಗೆ ಹೋಗ್ತೀರಿ ಹುಷಾರ್.. ಮಹಿಳೆಗೆ 2 ತಿಂಗಳ ಜೈಲು ಶಿಕ್ಷೆ ಕೊಟ್ಟ ಕೋರ್ಟ್..!
ವಾಷಿಂಗ್ಟನ್ ಸುಂದರ್ ಎಂಟ್ರಿಯಾದ್ರೆ ಯಾರಿಗೆ ಕೊಕ್?
ಸ್ಪಿನ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಈ ಸರಣಿಯಲ್ಲಿ ಆಡಿಲ್ಲ. ಜಿಂಬಾಬ್ವೆ ಸರಣಿಯಲ್ಲಿ ಉತ್ತಮವಾಗಿ ಆಡಿದ್ರೂ ಬೆಂಚ್ಗೆ ಸೀಮಿತವಾಗಿದ್ರು. ಸದ್ಯ ಭಾರತ ಸರಣಿ ಗೆದ್ದಿದೆ. ಹೀಗಾಗಿ ಫೈನಲ್ ಚಾನ್ಸಲ್ಲಿ ಸುಂದರ್ ಆಡಿಸುವ ಲೆಕ್ಕಚಾರದಲ್ಲಿದೆ. ಮ್ಯಾಚ್ ವಿನ್ನರ್ ಅಕ್ಷರ್ ಪಟೇಲ್ ಸ್ಥಾನದಲ್ಲಿ ಸುಂದರ್ ಕಣಕ್ಕಿಳಿಯಬಹುದು. ಇದರಿಂದ ಅಕ್ಷರ್ಗೆ ವರ್ಕ್ಲೋಡ್ ಕಡಿಮೆ ಆಗಲಿದೆ.
ಸಿರಾಜ್ ಡ್ರಾಪ್?
ವೇಗಿಗಳ ಕೋಟಾದಲ್ಲಿ ಕೂಡ ಇಂದು ಬದಲಾವಣೆ ಕಾಣಬಹುದು. ಖಲೀಲ್ ಅಹ್ಮದ್ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಕೀ ಬೌಲರ್ ಅರ್ಷ್ದೀಪ್ ಸಿಂಗ್ರನ್ನ ಡ್ರಾಪ್ ಮಾಡುವುದು ಕಷ್ಟ. ಹೀಗಾಗಿ ನಿರೀಕ್ಷಿತ ಪ್ರದರ್ಶನ ನೀಡದ ಸಿರಾಜ್ ಕೂರಿಸಿ ಖಲೀಲ್ರನ್ನ ಆಡಿಸೋದು ಕ್ಯಾಪ್ಟನ್ ಸೂರ್ಯ ಅವರ ಲೆಕ್ಕಚಾರವಾಗಿದೆ.
ಇದನ್ನೂ ಓದಿ:ರೀಚಾರ್ಜ್ ಬೆಲೆ ಏರಿಸಿದ್ದ ಕಂಪನಿಗಳಿಗೆ TRAI ಗುನ್ನಾ.. ಮತ್ತೆ ಕಡಿಮೆ ಬೆಲೆಗೆ ಹೊಸ ಪ್ಲಾನ್..!
ಒಟ್ಟಿನಲ್ಲಿ ಅನೌಪಚಾರಿಕ ಪಂದ್ಯದಲ್ಲಿ ಭಾರತ, ಪ್ರಯೋಗಕ್ಕೆ ಮುಂದಾಗಿದೆ. ಇದಾಗಿಯೂ ಸೂರ್ಯ ಪಡೆ ವಿಜಯಾತ್ರೆ ಮುಂದುವರಿಸುತ್ತಾ? 3-0 ಯಿಂದ ಸರಣಿ ಕ್ಲೀನ್ಸ್ವಿಪ್ ಮಾಡುತ್ತಾ? ಇಲ್ಲ ಕೊನೆ ಪಂದ್ಯ ಗೆದ್ದು ಲಂಕಾ ಮಾನ ಉಳಿಸಿಕೊಳ್ಳುತ್ತಾ ಅನ್ನೋದನ್ನ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಇಂದು ಭಾರತ-ಲಂಕಾ ಫೈನಲ್ T20 ಕದನ
ಕ್ಲೀನ್ಸ್ವಿಪ್ ಮೇಲೆ ಟೀಮ್ ಇಂಡಿಯಾ ಕಣ್ಣು
2-0 ಅಂತರದಿಂದ ಸರಣಿ ಗೆದ್ದಿರೋ ಭಾರತ
ಇಂದು ಭಾರತ-ಶ್ರೀಲಂಕಾ ಫೈನಲ್ ಫೈಟ್ ನಡೆಯಲಿದೆ. ಈಗಾಗಲೇ ಇಂಡಿಯನ್ ಟೈಗರ್ಸ್ ಸರಣಿ ಗೆದ್ದಾಗಿದೆ. ಹಾಗಾಗಿ ಇದು ಪ್ರಯೋಗದ ಪಂದ್ಯವಾಗಿರಲಿದೆ.
ಟೀಮ್ ಇಂಡಿಯಾ ಬರೀ ತವರು ಮಾತ್ರವಲ್ಲ, ವಿದೇಶದಲ್ಲಿ ಕೂಡ ಹುಲಿ ಅನ್ನೋದನ್ನ ಮತ್ತೆ ಮತ್ತೆ ಪ್ರೂವ್ ಮಾಡ್ತಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಯಂಗ್ಗನ್ ಆತಿಥೇಯ ಸಿಂಹಳೀಯರನ್ನ ಬೇಟೆಯಾಡಿ ಸರಣಿ ಜಯಿಸಿದೆ. 2-0 ಮುನ್ನಡೆ ಸಾಧಿಸಿರೋ ಭಾರತ ತಂಡ ಇಂದು ಮತ್ತೊಂದು ಗೆಲುವಿಗಾಗಿ ಹಾತೊರೆಯುತ್ತಿದೆ. ಸಿರೀಸ್ ಗೆದ್ದ ಭಾರತಕ್ಕೆ ಫೈನಲ್ ಬ್ಯಾಟಲ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹಾಗಾಗಿ ಕ್ಯಾಪ್ಟನ್ ಸೂರ್ಯ ಪ್ರಯೋಗಕ್ಕೆ ಕೈ ಹಾಕೋದು ಪಕ್ಕವಾಗಿದೆ. ಹೀಗಾಗಿ ಬೆಂಚ್ ಕಾದವರು ಅವಕಾಶ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ:ಕೇರಳ ಭೂಕುಸಿತಕ್ಕೆ 3 ಕಾರಣಗಳು; ಬೆಟ್ಟ, ಗುಡ್ಡ ಕುಸಿಯುವ ಹಿಂದಿನ ಸತ್ಯ ಬಿಚ್ಚಿಟ್ಟ ವಿಜ್ಞಾನಿ..!
ಗಿಲ್ ಕಥೆಯೇನು?
ಮೊದಲ ಪಂದ್ಯದಲ್ಲಿ ಬೆಂಚ್ ಕಾದಿದ್ದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ಗೆ ಅನಿರೀಕ್ಷಿತ ರೀತಿಯಲ್ಲಿ 2ನೇ ಪಂದ್ಯದಲ್ಲಿ ಕಣಕ್ಕಿಳಿದ್ರು. ಓಪನರ್ ಶುಭಮನ್ ಗಿಲ್ ಕುತ್ತಿಗೆ ನೋವಿನಿಂದ ಆಡಲಿಲ್ಲ. ಹೀಗಾಗಿ ಸ್ಯಾಮ್ಸನ್ಗೆ ಅದೃಷ್ಟು ಹುಡುಕಿ ಬಂತು. ಈ ಗೋಲ್ಡನ್ ಚಾನ್ಸ್ ಅನ್ನ ಕೇರಳ ಬ್ಯಾಟ್ ಸರಿಯಾಗಿ ಬಳಸಿಕೊಳ್ಳಲಿಲ್ಲ. ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ರು.
ಎರಡನೇ ಪಂದ್ಯದಲ್ಲಿ ಡಕೌಟ್ ಆದ ಸ್ಯಾಮ್ಸನ್ ಮತ್ತೊಂದು ಚಾನ್ಸ್ ನಿರೀಕ್ಷೆಯಲ್ಲಿದ್ದಾರೆ. ಆದರೆ ಎಲ್ಲವೂ ಗಿಲ್ ಲಭ್ಯತೆ ಮೇಲೆ ನಿಂತಿದೆ. ಇಲ್ಲಿಯ ತನಕ ಬಿಸಿಸಿಐ ಗಿಲ್ ಕುತ್ತಿಗೆ ನೋವಿನ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಅವರು ಆಡ್ತಾರೋ? ಇಲ್ವೋ ಅನ್ನೋದು ಸಸ್ಪೆನ್ಸ್ ಆಗಿ ಉಳಿದಿದೆ. ಹಾಗೊಂದು ವೇಳೆ ಗಿಲ್ ಆಡದಿದ್ದಲ್ಲಿ ಬಿಗ್ ಹಿಟ್ಟರ್ ಸ್ಯಾಮ್ಸನ್ಗೆ ಮತ್ತೊಂದು ಅವಕಾಶ ಸಿಗಲಿದೆ.
ಶಿವಂ ದುಬೆಗೆ ಅದೃಷ್ಟ ಒಲಿಯುತ್ತಾ?
ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆದಿದ್ದ ಆಲ್ರೌಂಡರ್ ಶಿವಂ ದುಬೆಯನ್ನ ಮೊದಲೆರಡು ಪಂದ್ಯಕ್ಕೆ ಪರಿಗಣಿಸಿಲ್ಲ. ಇಂದು ಸ್ಪಿನ್ ಸ್ಪೀಡ್ ಆಡುವ ಸಾಧ್ಯತೆ ಹೆಚ್ಚಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಥವಾ ರಿಂಕು ಸಿಂಗ್ಗೆ ಕೊಕ್ ಕೊಟ್ಟು, ದುಬೆಯನ್ನ ಆಡಿಸಲು ಟೀಮ್ ಮ್ಯಾನೇಜ್ಮೆಂಟ್ ಚಿಂತಿಸ್ತಿದೆ. ದುಬೆ ಏಕದಿನ ಸರಣಿಯಲ್ಲಿ ಕೂಡ ಸ್ಥಾನ ಪಡೆದಿದ್ದು, ಇಂದು ಕಣಕ್ಕಿಳಿದ್ರೆ ರಿದಮ್ ಕಂಡುಕೊಳ್ಳಲು ನೆರವಾಗಲಿದೆ.
ಇದನ್ನೂ ಓದಿ:ನಾಯಿ ಹೊಟ್ಟೆಗೆ ಜಾಸ್ತಿ ಹಾಕಿದ್ರೆ ಜೈಲಿಗೆ ಹೋಗ್ತೀರಿ ಹುಷಾರ್.. ಮಹಿಳೆಗೆ 2 ತಿಂಗಳ ಜೈಲು ಶಿಕ್ಷೆ ಕೊಟ್ಟ ಕೋರ್ಟ್..!
ವಾಷಿಂಗ್ಟನ್ ಸುಂದರ್ ಎಂಟ್ರಿಯಾದ್ರೆ ಯಾರಿಗೆ ಕೊಕ್?
ಸ್ಪಿನ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಈ ಸರಣಿಯಲ್ಲಿ ಆಡಿಲ್ಲ. ಜಿಂಬಾಬ್ವೆ ಸರಣಿಯಲ್ಲಿ ಉತ್ತಮವಾಗಿ ಆಡಿದ್ರೂ ಬೆಂಚ್ಗೆ ಸೀಮಿತವಾಗಿದ್ರು. ಸದ್ಯ ಭಾರತ ಸರಣಿ ಗೆದ್ದಿದೆ. ಹೀಗಾಗಿ ಫೈನಲ್ ಚಾನ್ಸಲ್ಲಿ ಸುಂದರ್ ಆಡಿಸುವ ಲೆಕ್ಕಚಾರದಲ್ಲಿದೆ. ಮ್ಯಾಚ್ ವಿನ್ನರ್ ಅಕ್ಷರ್ ಪಟೇಲ್ ಸ್ಥಾನದಲ್ಲಿ ಸುಂದರ್ ಕಣಕ್ಕಿಳಿಯಬಹುದು. ಇದರಿಂದ ಅಕ್ಷರ್ಗೆ ವರ್ಕ್ಲೋಡ್ ಕಡಿಮೆ ಆಗಲಿದೆ.
ಸಿರಾಜ್ ಡ್ರಾಪ್?
ವೇಗಿಗಳ ಕೋಟಾದಲ್ಲಿ ಕೂಡ ಇಂದು ಬದಲಾವಣೆ ಕಾಣಬಹುದು. ಖಲೀಲ್ ಅಹ್ಮದ್ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಕೀ ಬೌಲರ್ ಅರ್ಷ್ದೀಪ್ ಸಿಂಗ್ರನ್ನ ಡ್ರಾಪ್ ಮಾಡುವುದು ಕಷ್ಟ. ಹೀಗಾಗಿ ನಿರೀಕ್ಷಿತ ಪ್ರದರ್ಶನ ನೀಡದ ಸಿರಾಜ್ ಕೂರಿಸಿ ಖಲೀಲ್ರನ್ನ ಆಡಿಸೋದು ಕ್ಯಾಪ್ಟನ್ ಸೂರ್ಯ ಅವರ ಲೆಕ್ಕಚಾರವಾಗಿದೆ.
ಇದನ್ನೂ ಓದಿ:ರೀಚಾರ್ಜ್ ಬೆಲೆ ಏರಿಸಿದ್ದ ಕಂಪನಿಗಳಿಗೆ TRAI ಗುನ್ನಾ.. ಮತ್ತೆ ಕಡಿಮೆ ಬೆಲೆಗೆ ಹೊಸ ಪ್ಲಾನ್..!
ಒಟ್ಟಿನಲ್ಲಿ ಅನೌಪಚಾರಿಕ ಪಂದ್ಯದಲ್ಲಿ ಭಾರತ, ಪ್ರಯೋಗಕ್ಕೆ ಮುಂದಾಗಿದೆ. ಇದಾಗಿಯೂ ಸೂರ್ಯ ಪಡೆ ವಿಜಯಾತ್ರೆ ಮುಂದುವರಿಸುತ್ತಾ? 3-0 ಯಿಂದ ಸರಣಿ ಕ್ಲೀನ್ಸ್ವಿಪ್ ಮಾಡುತ್ತಾ? ಇಲ್ಲ ಕೊನೆ ಪಂದ್ಯ ಗೆದ್ದು ಲಂಕಾ ಮಾನ ಉಳಿಸಿಕೊಳ್ಳುತ್ತಾ ಅನ್ನೋದನ್ನ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್