ಮಹಾರಾಷ್ಟ್ರದ ವಾಂಖೆಡೆಯಲ್ಲಿ ಇಂದು ಮದಗಜಗಳ ಕಾಳಗ..!
5 ಬಾರಿಯ ಚಾಂಪಿಯನ್ಸ್ ಬ್ಯಾಟಲ್ನಲ್ಲಿ ಯಾರಿಗೆ ಜಯ?
ವಾಂಖೆಡೆಯಲ್ಲಿ ಚೆನ್ನೈಗೆ ಥ್ರೆಟ್ ಆಗೋದು ಯಾಱರು ಗೊತ್ತಾ?
ಸೂಪರ್ ಸಂಡೇಯ ಸೂಪರ್ ಮ್ಯಾಚ್ಗೆ ವೇದಿಕೆ ರೆಡಿಯಾಗಿದೆ. ಮನೆಯಲ್ಲಿ ಕೆಲ್ಸ ಇದ್ರೂ, ಟೈಮ್ ಫ್ರೀ ಮಾಡಿಕೊಂಡ್ಬಿಡಿ. ಯಾಕಂದ್ರೆ, ಇವತ್ತು ಐಪಿಎಲ್ ಅಖಾಡದಲ್ಲಿ ನಡೀತಿರುವುದು ಮೋಸ್ಟ್ ಎಕ್ಸೈಟಿಂಗ್ ಮ್ಯಾಚ್. ಚೆನ್ನೈ ಹಾಗೂ ಮುಂಬೈ ಇಂಡಿಯನ್ಸ್ ಮ್ಯಾಚ್. ಐಪಿಎಲ್ನ ಈ ಮದಗಜಗಳ ಕಾದಾಟ. ಹಾಗಾದ್ರೆ ಈ ಮದಗಜಗಳ ಕಾದಾಟ ಹೇಗಿರಲಿದೆ.
ಇದನ್ನೂ ಓದಿ: ವಿಶ್ವದಾದ್ಯಂತ ರಾಮಾಯಣ ಹಬ್ಬ, ಒಂದು ದೇಶ, ಒಂದು ಚುನಾವಣೆ -ಬಿಜೆಪಿ ಪ್ರಣಾಳಿಕೆಯ ಹೈಲೈಟ್ಸ್ ಇಲ್ಲಿದೆ..
ಇಷ್ಟು ದಿನದ ಐಪಿಎಲ್ ಪಂದ್ಯಗಳ ಲೆಕ್ಕ ಒಂದಾದ್ರೆ ಇವತ್ತಿನದ್ದು ಬೇರೆಯದ್ದೇ ಲೆಕ್ಕ. ಯಾಕಂದ್ರೆ ಇಂದು ತೊಡೆತಟ್ಟಲು ಸಜ್ಜಾಗಿರೋದು ಸಾಮಾನ್ಯ ತಂಡಗಳಲ್ಲ. ಬರೋಬ್ಬರಿ ಐದು ಬಾರಿ ಟ್ರೋಫಿ ಗೆದ್ದಿರುವ ತಂಡಗಳು. ಹೀಗಾಗಿ ಇಂದಿನ ಪಂದ್ಯ ಚಾಂಪಿಯನ್ಗಳ ಬ್ಯಾಟಲ್ ಅಂತಾನೇ ಬಿಂಬಿತವಾಗಿದೆ.
ಇಂದು ಚಾಂಪಿಯನ್ಗಳ ಕಾಳಗ..!
ವಾಂಖಡೆಯಲ್ಲಿ ಇಂದು ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಗುಟುರು ಹಾಕಲು ಸಜ್ಜಾಗಿವೆ. ಹಸಿದ ಹೆಬ್ಬುಲಿಯಂತಾಗಿರುವ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್, ಭದ್ರಕೋಟೆಯಲ್ಲೇ ಹಾಲಿ ಚಾಂಪಿಯನ್ಸ್ಗೆ ಚಮಕ್ ನೀಡಲು ಸರ್ವ ರೀತಿಯಲ್ಲಿ ಸಜ್ಜಾಗಿದೆ. ಅತ್ತ ಮುಗ್ಗರಿಸಿ ಪುಟಿದೆದ್ದಿರುವ ಚೆನ್ನೈ ಕಿಂಗ್ಸ್, ತನ್ನ ಕೋಟೆಯಲ್ಲಿ ಮುಂಬೈಯನ್ನ ಹೊಸಿಕಿ ಹಾಕಲು ಹವಣಿಸ್ತಿದೆ.
ಇದನ್ನೂ ಓದಿ:3ನೇ ಮಹಾಯುದ್ಧದ ಆತಂಕ.. ಇಸ್ರೇಲ್ ಮೇಲೆ 200 ಡ್ರೋನ್, ಭಾರೀ ಮಿಸೈಲ್ಸ್ ಉಡಾಯಿಸಿದ ಇರಾನ್
ಧೋನಿ-ರೋಹಿತ್ ಸೆಂಟರ್ ಆಫ್ ಅಟ್ರಾಕ್ಷನ್
ಚೆನ್ನೈ ಹಾಗೂ ಮುಂಬೈ ನಡುವಿನ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್.. ಚೆನ್ನೈ ಮಾಜಿ ನಾಯಕ ಧೋನಿ ಹಾಗೂ ಮುಂಬೈ ಮಾಜಿ ನಾಯಕ ರೋಹಿತ್ ಶರ್ಮಾ. ಇದೇ ವರ್ಷ ನಾಯಕತ್ವದಿಂದ ದೂರ ಸರಿದಿರುವ ಈ ಚಾಂಪಿಯನ್ ನಾಯಕರು, ಈಗ ಆಟಗಾರರಾಗಿ ಅಂಗಳದಲ್ಲಿ ಮುಖಾಮುಖಿಯಾಗ್ತಿದ್ದಾರೆ. ಇದು ಸಹಜವಾಗೇ ಎಲ್ಲರ ಕ್ಯೂರಿಯಾಸಿಟಿ ಹುಟ್ಟಿಹಾಕಿದೆ. ಇದೇ ಪಂದ್ಯ ಚೆನ್ನೈ ಹಾಗೂ ಮುಂಬೈ ನಡುವಿನ ಹೊಸ ರೈವರ್ಲಿಗೆ ಕಾರಣವಾಗ್ತಿದೆ. ಇದಕ್ಕೆ ಕಾರಣ ಹಾರ್ದಿಕ್ ಪಾಂಡ್ಯ ಹಾಗೂ ರುತುರಾಜ್ ಗಾಯಕ್ವಾಡ್ ನಾಯಕತ್ವ. ಯಾಕಂದ್ರೆ, ಐಪಿಎಲ್ ಅಖಾಡದಲ್ಲಿ ನೀನಾ ? ನಾನಾ ? ಎಂಬಂತೆ ಇತ್ತಂಡಗಳ ಪೈಪೋಟಿ ಇದೆ. ಹೀಗಾಗಿ ಆ ರೈವರ್ಲಿ ಮುಂದುವರಿಸಬೇಕಾದ ಸವಾಲು ಇವರಿಬ್ಬರ ಮೇಲಿದೆ.
ಇದನ್ನೂ ಓದಿ: ‘ಅಕ್ಕಾ.. ಸ್ವಲ್ಪ ಎಣ್ಣೆ ಹೊಡೆದು ಮಲಗಿಕೊಳ್ಳಿ’ ಎಂದ ಪಾಟೀಲ್; ಹೆಬ್ಬಾಳ್ಕರ್ ಬೆಂಬಲಿಗರಿಂದ ಆಪ್ತನಿಗೆ ಕಪಾಳಮೋಕ್ಷ..!
ಭದ್ರಕೋಟೆಯಲ್ಲಿ ಚೆನ್ನೈಗೆ ತ್ರಿಮೂರ್ತಿಗಳೇ ಥ್ರೆಟ್..!
ಸದ್ಯ ಗೆಲ್ಲೋ ಆತ್ಮವಿಶ್ವಾಸದಲ್ಲಿರುವ ಚೆನ್ನೈ, ಮುಂಬೈ ಟಾಪ್ ತ್ರಿ ಬ್ಯಾಟರ್ಗಳಾದ ರೋಹಿತ್ ಶರ್ಮಾ, ಇಶಾನ್ ಕಿಶನ್, ಟಿ20 ಸ್ಪೆಷಲಿಸ್ಟ್ ಸೂರ್ಯನ ಮುಂದೆ ಅಷ್ಟು ಸುಲಭವಲ್ಲ. ಹೀಗಾಗಿ ಇವರನ್ನ ಕಟ್ಟಿ ಹಾಕಿದರಷ್ಟೇ ಚೆನ್ನೈ ಗೆಲುವು ಸುಲಭ. ಇಲ್ಲ ಚಮಕ್ ನೀಡೋದು ಕನ್ಫರ್ಮ್.. ಇವರೇ ಅಲ್ಲ.! ವೇಗಿ ಜಸ್ಪ್ರೀತ್ ಬೂಮ್ರಾರ ಬೆಂಕಿ ಬೌಲಿಂಗ್ ಬಿಗ್ಗೆಸ್ಟ್ ಸ್ಟ್ರೆಂಥ್ ಅನ್ನೋದು ಮರೆಯುವಂತಿಲ್ಲ.
ಎಸ್1, ಆರ್-5 ವ್ಯೂಹವೇ ಚೆನ್ನೈ ತಂಡದ ಗೆಲುವಿನ ಮಂತ್ರ!
ಮುಂಬೈ ಬಲಿಷ್ಠ ನಿಜ. ಆದ್ರೆ, ಚೆನ್ನೈನಲ್ಲಿ ಹಾಲಿ ಚಾಂಪಿಯನ್ಸ್ಗೆ ಚಮಕ್ ನೀಡಬೇಕಾದ್ರೆ. ಎಸ್ಆರ್ ವ್ಯೂಹವನ್ನೇ ಛಿದ್ರಗೊಳಿಸಬೇಕು. ಅಂದ್ಹಾಗೆ ಆ ಚಕ್ರವ್ಯೂಹವೇ ಎಸ್1, ಆರ್-5, ಅಂದ್ರೆ ಶಿವಂ ದುಬೆ, ರುತುರಾಜ್ ಗಾಯಕ್ವಾಡ್, ರಹಾನೆ, ರಚಿನ್ ರವೀಂದ್ರ, ರವೀಂದ್ರ ಜಡೇಜಾ, ಮುಷ್ತಾಪಿಜುರ್ ರೆಹಮಾನ್ ಆಗಿದ್ದಾರೆ.. ಇವ್ರನ್ನ ಡೀಲ್ ಮಾಡಿದ್ರಷ್ಟೇ ಮುಂಬೈ ಗೆಲುವು ಸಾಧ್ಯ.
ಇದನ್ನೂ ಓದಿ:3ನೇ ಮಹಾಯುದ್ಧದ ಆತಂಕ.. ಇಸ್ರೇಲ್ ಮೇಲೆ 200 ಡ್ರೋನ್, ಭಾರೀ ಮಿಸೈಲ್ಸ್ ಉಡಾಯಿಸಿದ ಇರಾನ್
ಮುಂಬೈ ಬ್ಯಾಟಿಂಗ್ ವರ್ಸಸ್ ಚೆನ್ನೈ ಬೌಲಿಂಗ್ ಕಾಳಗ!
ಇಂದು ಚೆನ್ನೈ ಹಾಗೂ ಮುಂಬೈ ನಡುವಿನ ಕಾಳಗವನ್ನ ಮುಂಬೈ ಇಂಡಿಯನ್ಸ್ ಬ್ಯಾಟರ್ಸ್ ಹಾಗೂ ಚೆನ್ನೈ ಬೌಲಿಂಗ್ ನಡುವಿನ ದಂಗಲ್ ಆಗಿದೆ. ಯಾಕಂದ್ರೆ, ಟಿ20 ಸ್ಪೆಷಲಿಸ್ಟ್ಗಳ ಬ್ಯಾಟರ್ಗಳ ದಂಡನ್ನೇ ಮುಂಬೈ ಹೊಂದಿದ್ರೆ. ಮೋಸ್ಟ್ ಎಕಾನಮಿಕಲ್ ಬೌಲರ್ಗಳನ್ನ ಚೆನ್ನೈ ಸೂಪರ್ ಕಿಂಗ್ಸ್ ಹೊಂದಿದೆ. ಹೀಗಾಗಿ ಈ ಬಲಿಷ್ಠ ತಂಡಗಳ ಕದನ ಸಾಕಷ್ಟು ಕ್ಯೂರಿಯಾಸಿಟಿ ಬೀಲ್ಡ್ ಮಾಡಿದ್ದು, ವಾಂಖೆಡೆಯಲ್ಲಿ ಯಾರಿಗೆ ಯಾರು ಚೆಕ್ಮೇಟ್ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಮಹಾರಾಷ್ಟ್ರದ ವಾಂಖೆಡೆಯಲ್ಲಿ ಇಂದು ಮದಗಜಗಳ ಕಾಳಗ..!
5 ಬಾರಿಯ ಚಾಂಪಿಯನ್ಸ್ ಬ್ಯಾಟಲ್ನಲ್ಲಿ ಯಾರಿಗೆ ಜಯ?
ವಾಂಖೆಡೆಯಲ್ಲಿ ಚೆನ್ನೈಗೆ ಥ್ರೆಟ್ ಆಗೋದು ಯಾಱರು ಗೊತ್ತಾ?
ಸೂಪರ್ ಸಂಡೇಯ ಸೂಪರ್ ಮ್ಯಾಚ್ಗೆ ವೇದಿಕೆ ರೆಡಿಯಾಗಿದೆ. ಮನೆಯಲ್ಲಿ ಕೆಲ್ಸ ಇದ್ರೂ, ಟೈಮ್ ಫ್ರೀ ಮಾಡಿಕೊಂಡ್ಬಿಡಿ. ಯಾಕಂದ್ರೆ, ಇವತ್ತು ಐಪಿಎಲ್ ಅಖಾಡದಲ್ಲಿ ನಡೀತಿರುವುದು ಮೋಸ್ಟ್ ಎಕ್ಸೈಟಿಂಗ್ ಮ್ಯಾಚ್. ಚೆನ್ನೈ ಹಾಗೂ ಮುಂಬೈ ಇಂಡಿಯನ್ಸ್ ಮ್ಯಾಚ್. ಐಪಿಎಲ್ನ ಈ ಮದಗಜಗಳ ಕಾದಾಟ. ಹಾಗಾದ್ರೆ ಈ ಮದಗಜಗಳ ಕಾದಾಟ ಹೇಗಿರಲಿದೆ.
ಇದನ್ನೂ ಓದಿ: ವಿಶ್ವದಾದ್ಯಂತ ರಾಮಾಯಣ ಹಬ್ಬ, ಒಂದು ದೇಶ, ಒಂದು ಚುನಾವಣೆ -ಬಿಜೆಪಿ ಪ್ರಣಾಳಿಕೆಯ ಹೈಲೈಟ್ಸ್ ಇಲ್ಲಿದೆ..
ಇಷ್ಟು ದಿನದ ಐಪಿಎಲ್ ಪಂದ್ಯಗಳ ಲೆಕ್ಕ ಒಂದಾದ್ರೆ ಇವತ್ತಿನದ್ದು ಬೇರೆಯದ್ದೇ ಲೆಕ್ಕ. ಯಾಕಂದ್ರೆ ಇಂದು ತೊಡೆತಟ್ಟಲು ಸಜ್ಜಾಗಿರೋದು ಸಾಮಾನ್ಯ ತಂಡಗಳಲ್ಲ. ಬರೋಬ್ಬರಿ ಐದು ಬಾರಿ ಟ್ರೋಫಿ ಗೆದ್ದಿರುವ ತಂಡಗಳು. ಹೀಗಾಗಿ ಇಂದಿನ ಪಂದ್ಯ ಚಾಂಪಿಯನ್ಗಳ ಬ್ಯಾಟಲ್ ಅಂತಾನೇ ಬಿಂಬಿತವಾಗಿದೆ.
ಇಂದು ಚಾಂಪಿಯನ್ಗಳ ಕಾಳಗ..!
ವಾಂಖಡೆಯಲ್ಲಿ ಇಂದು ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಗುಟುರು ಹಾಕಲು ಸಜ್ಜಾಗಿವೆ. ಹಸಿದ ಹೆಬ್ಬುಲಿಯಂತಾಗಿರುವ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್, ಭದ್ರಕೋಟೆಯಲ್ಲೇ ಹಾಲಿ ಚಾಂಪಿಯನ್ಸ್ಗೆ ಚಮಕ್ ನೀಡಲು ಸರ್ವ ರೀತಿಯಲ್ಲಿ ಸಜ್ಜಾಗಿದೆ. ಅತ್ತ ಮುಗ್ಗರಿಸಿ ಪುಟಿದೆದ್ದಿರುವ ಚೆನ್ನೈ ಕಿಂಗ್ಸ್, ತನ್ನ ಕೋಟೆಯಲ್ಲಿ ಮುಂಬೈಯನ್ನ ಹೊಸಿಕಿ ಹಾಕಲು ಹವಣಿಸ್ತಿದೆ.
ಇದನ್ನೂ ಓದಿ:3ನೇ ಮಹಾಯುದ್ಧದ ಆತಂಕ.. ಇಸ್ರೇಲ್ ಮೇಲೆ 200 ಡ್ರೋನ್, ಭಾರೀ ಮಿಸೈಲ್ಸ್ ಉಡಾಯಿಸಿದ ಇರಾನ್
ಧೋನಿ-ರೋಹಿತ್ ಸೆಂಟರ್ ಆಫ್ ಅಟ್ರಾಕ್ಷನ್
ಚೆನ್ನೈ ಹಾಗೂ ಮುಂಬೈ ನಡುವಿನ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್.. ಚೆನ್ನೈ ಮಾಜಿ ನಾಯಕ ಧೋನಿ ಹಾಗೂ ಮುಂಬೈ ಮಾಜಿ ನಾಯಕ ರೋಹಿತ್ ಶರ್ಮಾ. ಇದೇ ವರ್ಷ ನಾಯಕತ್ವದಿಂದ ದೂರ ಸರಿದಿರುವ ಈ ಚಾಂಪಿಯನ್ ನಾಯಕರು, ಈಗ ಆಟಗಾರರಾಗಿ ಅಂಗಳದಲ್ಲಿ ಮುಖಾಮುಖಿಯಾಗ್ತಿದ್ದಾರೆ. ಇದು ಸಹಜವಾಗೇ ಎಲ್ಲರ ಕ್ಯೂರಿಯಾಸಿಟಿ ಹುಟ್ಟಿಹಾಕಿದೆ. ಇದೇ ಪಂದ್ಯ ಚೆನ್ನೈ ಹಾಗೂ ಮುಂಬೈ ನಡುವಿನ ಹೊಸ ರೈವರ್ಲಿಗೆ ಕಾರಣವಾಗ್ತಿದೆ. ಇದಕ್ಕೆ ಕಾರಣ ಹಾರ್ದಿಕ್ ಪಾಂಡ್ಯ ಹಾಗೂ ರುತುರಾಜ್ ಗಾಯಕ್ವಾಡ್ ನಾಯಕತ್ವ. ಯಾಕಂದ್ರೆ, ಐಪಿಎಲ್ ಅಖಾಡದಲ್ಲಿ ನೀನಾ ? ನಾನಾ ? ಎಂಬಂತೆ ಇತ್ತಂಡಗಳ ಪೈಪೋಟಿ ಇದೆ. ಹೀಗಾಗಿ ಆ ರೈವರ್ಲಿ ಮುಂದುವರಿಸಬೇಕಾದ ಸವಾಲು ಇವರಿಬ್ಬರ ಮೇಲಿದೆ.
ಇದನ್ನೂ ಓದಿ: ‘ಅಕ್ಕಾ.. ಸ್ವಲ್ಪ ಎಣ್ಣೆ ಹೊಡೆದು ಮಲಗಿಕೊಳ್ಳಿ’ ಎಂದ ಪಾಟೀಲ್; ಹೆಬ್ಬಾಳ್ಕರ್ ಬೆಂಬಲಿಗರಿಂದ ಆಪ್ತನಿಗೆ ಕಪಾಳಮೋಕ್ಷ..!
ಭದ್ರಕೋಟೆಯಲ್ಲಿ ಚೆನ್ನೈಗೆ ತ್ರಿಮೂರ್ತಿಗಳೇ ಥ್ರೆಟ್..!
ಸದ್ಯ ಗೆಲ್ಲೋ ಆತ್ಮವಿಶ್ವಾಸದಲ್ಲಿರುವ ಚೆನ್ನೈ, ಮುಂಬೈ ಟಾಪ್ ತ್ರಿ ಬ್ಯಾಟರ್ಗಳಾದ ರೋಹಿತ್ ಶರ್ಮಾ, ಇಶಾನ್ ಕಿಶನ್, ಟಿ20 ಸ್ಪೆಷಲಿಸ್ಟ್ ಸೂರ್ಯನ ಮುಂದೆ ಅಷ್ಟು ಸುಲಭವಲ್ಲ. ಹೀಗಾಗಿ ಇವರನ್ನ ಕಟ್ಟಿ ಹಾಕಿದರಷ್ಟೇ ಚೆನ್ನೈ ಗೆಲುವು ಸುಲಭ. ಇಲ್ಲ ಚಮಕ್ ನೀಡೋದು ಕನ್ಫರ್ಮ್.. ಇವರೇ ಅಲ್ಲ.! ವೇಗಿ ಜಸ್ಪ್ರೀತ್ ಬೂಮ್ರಾರ ಬೆಂಕಿ ಬೌಲಿಂಗ್ ಬಿಗ್ಗೆಸ್ಟ್ ಸ್ಟ್ರೆಂಥ್ ಅನ್ನೋದು ಮರೆಯುವಂತಿಲ್ಲ.
ಎಸ್1, ಆರ್-5 ವ್ಯೂಹವೇ ಚೆನ್ನೈ ತಂಡದ ಗೆಲುವಿನ ಮಂತ್ರ!
ಮುಂಬೈ ಬಲಿಷ್ಠ ನಿಜ. ಆದ್ರೆ, ಚೆನ್ನೈನಲ್ಲಿ ಹಾಲಿ ಚಾಂಪಿಯನ್ಸ್ಗೆ ಚಮಕ್ ನೀಡಬೇಕಾದ್ರೆ. ಎಸ್ಆರ್ ವ್ಯೂಹವನ್ನೇ ಛಿದ್ರಗೊಳಿಸಬೇಕು. ಅಂದ್ಹಾಗೆ ಆ ಚಕ್ರವ್ಯೂಹವೇ ಎಸ್1, ಆರ್-5, ಅಂದ್ರೆ ಶಿವಂ ದುಬೆ, ರುತುರಾಜ್ ಗಾಯಕ್ವಾಡ್, ರಹಾನೆ, ರಚಿನ್ ರವೀಂದ್ರ, ರವೀಂದ್ರ ಜಡೇಜಾ, ಮುಷ್ತಾಪಿಜುರ್ ರೆಹಮಾನ್ ಆಗಿದ್ದಾರೆ.. ಇವ್ರನ್ನ ಡೀಲ್ ಮಾಡಿದ್ರಷ್ಟೇ ಮುಂಬೈ ಗೆಲುವು ಸಾಧ್ಯ.
ಇದನ್ನೂ ಓದಿ:3ನೇ ಮಹಾಯುದ್ಧದ ಆತಂಕ.. ಇಸ್ರೇಲ್ ಮೇಲೆ 200 ಡ್ರೋನ್, ಭಾರೀ ಮಿಸೈಲ್ಸ್ ಉಡಾಯಿಸಿದ ಇರಾನ್
ಮುಂಬೈ ಬ್ಯಾಟಿಂಗ್ ವರ್ಸಸ್ ಚೆನ್ನೈ ಬೌಲಿಂಗ್ ಕಾಳಗ!
ಇಂದು ಚೆನ್ನೈ ಹಾಗೂ ಮುಂಬೈ ನಡುವಿನ ಕಾಳಗವನ್ನ ಮುಂಬೈ ಇಂಡಿಯನ್ಸ್ ಬ್ಯಾಟರ್ಸ್ ಹಾಗೂ ಚೆನ್ನೈ ಬೌಲಿಂಗ್ ನಡುವಿನ ದಂಗಲ್ ಆಗಿದೆ. ಯಾಕಂದ್ರೆ, ಟಿ20 ಸ್ಪೆಷಲಿಸ್ಟ್ಗಳ ಬ್ಯಾಟರ್ಗಳ ದಂಡನ್ನೇ ಮುಂಬೈ ಹೊಂದಿದ್ರೆ. ಮೋಸ್ಟ್ ಎಕಾನಮಿಕಲ್ ಬೌಲರ್ಗಳನ್ನ ಚೆನ್ನೈ ಸೂಪರ್ ಕಿಂಗ್ಸ್ ಹೊಂದಿದೆ. ಹೀಗಾಗಿ ಈ ಬಲಿಷ್ಠ ತಂಡಗಳ ಕದನ ಸಾಕಷ್ಟು ಕ್ಯೂರಿಯಾಸಿಟಿ ಬೀಲ್ಡ್ ಮಾಡಿದ್ದು, ವಾಂಖೆಡೆಯಲ್ಲಿ ಯಾರಿಗೆ ಯಾರು ಚೆಕ್ಮೇಟ್ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್