ಕಾಂಗ್ರೆಸ್ ನಾಯಕರಿಗೆ ಉತ್ತರ ನೀಡುವ ಕಾಲ ತೀರ ಸಮೀಪ!
ಇಂದು ಬೆಳಗ್ಗೆ 10:30ಕ್ಕೆ ಮೊಳಗಲಿದೆ ದಳಪತಿಗಳ ಶಂಕನಾದ
2024ರ ಲೋಕಸಭಾ ಚುನಾವಣೆಗೆ ದಳಪತಿ ಮಾಸ್ಟರ್ ಪ್ಲಾನ್
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಚರ್ಚೆ ಒಂದೂವರೆ ದಶಕದ ಬಳಿಕ ಮುನ್ನೆಲೆಗೆ ಬಂದಿದೆ. ಈ ನಡುವೆ ಇವತ್ತು ಮಹತ್ವದ ಸಮಾವೇಶ ಆಯೋಜನೆ ಆಗಿದೆ. ಮೈತ್ರಿ ಸಾಧಕ-ಬಾಧಕಗಳ ಕುರಿತು ಚರ್ಚೆ ಆಗಲಿದ್ದು, ಜೆಡಿಎಸ್ ಸಮಾವೇಶದ ಪಕ್ಷದ ಅಜೆಂಡಾ ಪ್ರಕಟವಾಗಲಿದೆ.
ವಿಧಾನಸಭೆ ಸೋಲು, ದಳದ ತಳಮಟ್ಟದಲ್ಲಿ ತಳಮಳವನ್ನ ಹೆಚ್ಚಿಸಿದೆ. ಭವಿಷ್ಯ ಕಾಣದೇ ಅತಂತ್ರ ಭಾವ ಕಾರ್ಯಕರ್ತ ಪಡೆಯನ್ನ ಆವರಿಸಿದೆ. ತನ್ನ ಪ್ರಾಬಲ್ಯದ ಹಳೇ ಮೈಸೂರು ಭಾಗದಲ್ಲಿ ಈ ಬಾರಿ ಮತದಾರ ಕೈಹಿಡಿಯದ ಕಾರಣ ದಳಪತಿಯನ್ನ ಒಬ್ಬಂಟಿ ಆಗಿಸಿ, ಅಧಿಕಾರದ ಗದ್ದುಗೆಯಿಂದ ದೂರ ಇರಿಸಿದೆ. ಅಸ್ತಿತ್ವದ ಕೊಸರಾಟದಲ್ಲಿ ಸಿಲುಕಿದ ತೆನೆ ಹೊತ್ತ ಮಹಿಳೆ, ಕಮಲ ಮುಡಿಯುವ ಸುಳಿವು ನೀಡ್ತಿದ್ದಾಳೆ. ಡೆಲ್ಲಿ ದರ್ಬಾರ್ನಲ್ಲಿ 2 ಸುತ್ತಿನ ದೋಸ್ತಿ ಮಂಥನ ಬಳಿಕ ಸಿಲಿಕಾನ್ ಸಿಟಿಯಲ್ಲಿ ಇವತ್ತು ಫೈನಲ್ ಡಿಸಿಷನ್ ತಗೊಳ್ಳಲು ಸನ್ನದ್ಧಗೊಳ್ತಿದೆ.
ಏನಾಗುತ್ತೆ ಜೆಡಿಎಸ್-ಬಿಜೆಪಿ ಮೈತ್ರಿ?
ಲೋಕಸಭೆ ಚುನಾವಣೆ ಮೊದಲೆ ರಾಜಕೀಯ ಚಟುವಟಿಕೆಗಳು ಗರಿಗೆದರತೊಡಗಿವೆ.. ಅಲ್ಪ ವಿರಾಮದ ಬಳಿಕ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ರೀಎಂಟ್ರಿ ಆಗ್ತಿದ್ದಾರೆ.. ಪಕ್ಷದ ಪುನಶ್ಚೇತನಕ್ಕೆ ವರಿಷ್ಠರು ತಂತ್ರ ರೂಪಿಸಿದ್ದು, ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಪಕ್ಷ ಸಂಘಟನೆ, ಭವಿಷ್ಯದ ಅಸ್ತಿತ್ವಕ್ಕಾಗಿ ಇವತ್ತು ಮಹಾ ಸಮಾವೇಶ ಸೇರ್ತಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಈ ಬೃಹತ್ ಸಮಾವೇಶದತ್ತ ಇಡೀ ರಾಜ್ಯ ಚಿತ್ತವೆ ನೆಟ್ಟಿದೆ.
ಜೆಡಿಎಸ್ ಶಕ್ತಿ ಪ್ರದರ್ಶನ!
ಅಷ್ಟಕ್ಕೂ ಈ ಸಮಾವೇಶದ ಉದ್ದೇಶ ಏನು ಅನ್ನೋದು ಈಗಾಗಲೇ ಎಲ್ಲವೂ ಸ್ಪಷ್ಟವಾಗಿದೆ. ಆದ್ರೆ, ಮೈತ್ರಿ ಕ್ರಾಂತಿ ಮೊಳಕೆ ಒಡೆದಿದ್ದು, ದಳಪತಿಗಳ ಘೊಷಣೆ ಏನಾಗಿರಲಿದೆ ಅನ್ನೋ ಕುತೂಹಲ ಎಲ್ಲರಿಗೂ ಕಾಡ್ತಿದೆ. ಅಷ್ಟಕ್ಕೂ ಇವತ್ತಿನ ಸಭೆಯಲ್ಲಿ ಏನೆಲ್ಲ ಚರ್ಚೆ ನಡೆಯಲಿದೆ?.
ರಾಜಧಾನಿಯಲ್ಲಿ ದಳ ಸಮಾವೇಶ
ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆಗೆ ಜೆಡಿಎಸ್ ಸಜ್ಜಾಗ್ತಿದೆ. ತಳಮಟ್ಟದಲ್ಲಿ ಆಪರೇಷನ್ ಹಸ್ತ ತಡೆಯಬೇಕು ಎಂಬ ಅಜೆಂಡಾವೇ ಸಮಾವೇಶದ ಪ್ರಮುಖ ಉದ್ದೇಶವಾಗಿದೆ. ಇದೇ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಜೆಡಿಎಸ್ ವರಿಷ್ಠ ದೇವೇಗೌಡ್ರು ಸಂದೇಶ ನೀಡಲಿದ್ದಾರೆ. ಅಲ್ಲದೆ, ಮುಂಬರುವ ದಿನಗಳಲ್ಲಿ ಜಿಲ್ಲಾ & ತಾಲ್ಲೂಕು ಪಂಚಾಯಿತಿ ಚುನಾವಣೆ ಎದುರಾಗಲಿದೆ. ಅಲ್ಲದೆ, ಬಿಬಿಎಂಪಿ ಚುನಾವಣಾ ಸಿದ್ಧತೆಗೂ ಸಮಾವೇಶ ವೇದಿಕೆ ಆಗಲಿದೆ. ಈ ಮೂಲಕ ರಾಜ್ಯದಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಲು ಜೆಡಿಎಸ್ ಸಂಕಲ್ಪ ತೊಡಲಿದೆ.
ರಾಜ್ಯದ ದೃಷ್ಟಿಯಿಂದ ಮೈತ್ರಿ, ದಳಪತಿ ಕೊಟ್ರು ಸುಳಿವು!
ಇನ್ನು, ನಿನ್ನೆ ಈ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್ಡಿಕೆ, ಸಮಾವೇಶದಲ್ಲಿ ಕಾರ್ಯಕರ್ತರ ಅಭಿಪ್ರಾಯ ತೆಗೆದುಕೊಳ್ಳಬೇಕಿದೆ. ಕಾಂಗ್ರೆಸ್ಗೆ ಉತ್ತರ ನೀಡುವ ಕಾಲ ಹತ್ತಿರ ಇದೆ. ಅಂತ ಎಚ್ಚರಿಕೆ ನೀಡಿದ್ರು. ಇನ್ನು, ದೆಹಲಿಗೆ ಹೋಗುವ ಬಗ್ಗೆ ತೀರ್ಮಾನ ಮಾಡಿಲ್ಲ. ಆದ್ರೆ, ರಾಜ್ಯದ ಹಿತದೃಷ್ಟಿಯಿಂದ ಮೈತ್ರಿ ಅನಿವಾರ್ಯ ಅನ್ನೋ ಸ್ಥಿತಿಗೆ ಹೆಚ್ಡಿಕೆ ಬಂದಿದ್ದಾರೆ. ಆದ್ರೆ, ಈ ಕುರಿತು ಕಾರ್ಯಕರ್ತರ ಅಭಿಪ್ರಾಯ ಪಡೆದು ಮೈತ್ರಿ ಬಗ್ಗೆ ನಿರ್ಧಾರ ಕೈಗೊಳ್ಳೋದಾಗಿ ತಿಳಿಸಿದ್ದಾರೆ.
ಬಿಜೆಪಿ ಜತೆಗಿನ ಮೈತ್ರಿ ಕುರಿತು ಜೆಡಿಎಸ್ ಪ್ರಮುಖರು ಇಂದಿನ ಸಭೆಯಲ್ಲಿ ಸ್ಪಷ್ಟತೆ ನೀಡುವ ಸಾಧ್ಯತೆ ಇದೆ. ಮೈತ್ರಿಯ ಅನಿವಾರ್ಯ, ಭವಿಷ್ಯದಲ್ಲಿ ಬಿಜೆಪಿ ಜತೆಗಿನ ಸಂಬಂಧ ಕುರಿತು ಈ ಸಭೆಯನ್ನ ಬಳಸಿಕೊಳ್ಳಲಿದ್ದಾರೆ. 8 ತಿಂಗಳ ಮುನ್ನವೇ ಜೆಡಿಎಸ್ ಇಡ್ತಿರುವ ಈ ಹೆಜ್ಜೆ ರಾಜ್ಯದಲ್ಲಿ ಹೇಗೆ ಪರಿವರ್ತನೆಗೆ ನಾಂದಿ ಹಾಡುತ್ತೆ? ಗ್ಯಾರಂಟಿಗಳ ಮುಂದೇ ತೆನೆ-ಕಮಲ ಜಂಟಿ ಪಡೆ ಅಷ್ಟು ಸಲೀಸಾಗಿ ತಲೆ ಎತ್ತಿ ನಿಲ್ಲುತ್ವಾ ಅನ್ನೋದು ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಾಂಗ್ರೆಸ್ ನಾಯಕರಿಗೆ ಉತ್ತರ ನೀಡುವ ಕಾಲ ತೀರ ಸಮೀಪ!
ಇಂದು ಬೆಳಗ್ಗೆ 10:30ಕ್ಕೆ ಮೊಳಗಲಿದೆ ದಳಪತಿಗಳ ಶಂಕನಾದ
2024ರ ಲೋಕಸಭಾ ಚುನಾವಣೆಗೆ ದಳಪತಿ ಮಾಸ್ಟರ್ ಪ್ಲಾನ್
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಚರ್ಚೆ ಒಂದೂವರೆ ದಶಕದ ಬಳಿಕ ಮುನ್ನೆಲೆಗೆ ಬಂದಿದೆ. ಈ ನಡುವೆ ಇವತ್ತು ಮಹತ್ವದ ಸಮಾವೇಶ ಆಯೋಜನೆ ಆಗಿದೆ. ಮೈತ್ರಿ ಸಾಧಕ-ಬಾಧಕಗಳ ಕುರಿತು ಚರ್ಚೆ ಆಗಲಿದ್ದು, ಜೆಡಿಎಸ್ ಸಮಾವೇಶದ ಪಕ್ಷದ ಅಜೆಂಡಾ ಪ್ರಕಟವಾಗಲಿದೆ.
ವಿಧಾನಸಭೆ ಸೋಲು, ದಳದ ತಳಮಟ್ಟದಲ್ಲಿ ತಳಮಳವನ್ನ ಹೆಚ್ಚಿಸಿದೆ. ಭವಿಷ್ಯ ಕಾಣದೇ ಅತಂತ್ರ ಭಾವ ಕಾರ್ಯಕರ್ತ ಪಡೆಯನ್ನ ಆವರಿಸಿದೆ. ತನ್ನ ಪ್ರಾಬಲ್ಯದ ಹಳೇ ಮೈಸೂರು ಭಾಗದಲ್ಲಿ ಈ ಬಾರಿ ಮತದಾರ ಕೈಹಿಡಿಯದ ಕಾರಣ ದಳಪತಿಯನ್ನ ಒಬ್ಬಂಟಿ ಆಗಿಸಿ, ಅಧಿಕಾರದ ಗದ್ದುಗೆಯಿಂದ ದೂರ ಇರಿಸಿದೆ. ಅಸ್ತಿತ್ವದ ಕೊಸರಾಟದಲ್ಲಿ ಸಿಲುಕಿದ ತೆನೆ ಹೊತ್ತ ಮಹಿಳೆ, ಕಮಲ ಮುಡಿಯುವ ಸುಳಿವು ನೀಡ್ತಿದ್ದಾಳೆ. ಡೆಲ್ಲಿ ದರ್ಬಾರ್ನಲ್ಲಿ 2 ಸುತ್ತಿನ ದೋಸ್ತಿ ಮಂಥನ ಬಳಿಕ ಸಿಲಿಕಾನ್ ಸಿಟಿಯಲ್ಲಿ ಇವತ್ತು ಫೈನಲ್ ಡಿಸಿಷನ್ ತಗೊಳ್ಳಲು ಸನ್ನದ್ಧಗೊಳ್ತಿದೆ.
ಏನಾಗುತ್ತೆ ಜೆಡಿಎಸ್-ಬಿಜೆಪಿ ಮೈತ್ರಿ?
ಲೋಕಸಭೆ ಚುನಾವಣೆ ಮೊದಲೆ ರಾಜಕೀಯ ಚಟುವಟಿಕೆಗಳು ಗರಿಗೆದರತೊಡಗಿವೆ.. ಅಲ್ಪ ವಿರಾಮದ ಬಳಿಕ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ರೀಎಂಟ್ರಿ ಆಗ್ತಿದ್ದಾರೆ.. ಪಕ್ಷದ ಪುನಶ್ಚೇತನಕ್ಕೆ ವರಿಷ್ಠರು ತಂತ್ರ ರೂಪಿಸಿದ್ದು, ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಪಕ್ಷ ಸಂಘಟನೆ, ಭವಿಷ್ಯದ ಅಸ್ತಿತ್ವಕ್ಕಾಗಿ ಇವತ್ತು ಮಹಾ ಸಮಾವೇಶ ಸೇರ್ತಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಈ ಬೃಹತ್ ಸಮಾವೇಶದತ್ತ ಇಡೀ ರಾಜ್ಯ ಚಿತ್ತವೆ ನೆಟ್ಟಿದೆ.
ಜೆಡಿಎಸ್ ಶಕ್ತಿ ಪ್ರದರ್ಶನ!
ಅಷ್ಟಕ್ಕೂ ಈ ಸಮಾವೇಶದ ಉದ್ದೇಶ ಏನು ಅನ್ನೋದು ಈಗಾಗಲೇ ಎಲ್ಲವೂ ಸ್ಪಷ್ಟವಾಗಿದೆ. ಆದ್ರೆ, ಮೈತ್ರಿ ಕ್ರಾಂತಿ ಮೊಳಕೆ ಒಡೆದಿದ್ದು, ದಳಪತಿಗಳ ಘೊಷಣೆ ಏನಾಗಿರಲಿದೆ ಅನ್ನೋ ಕುತೂಹಲ ಎಲ್ಲರಿಗೂ ಕಾಡ್ತಿದೆ. ಅಷ್ಟಕ್ಕೂ ಇವತ್ತಿನ ಸಭೆಯಲ್ಲಿ ಏನೆಲ್ಲ ಚರ್ಚೆ ನಡೆಯಲಿದೆ?.
ರಾಜಧಾನಿಯಲ್ಲಿ ದಳ ಸಮಾವೇಶ
ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆಗೆ ಜೆಡಿಎಸ್ ಸಜ್ಜಾಗ್ತಿದೆ. ತಳಮಟ್ಟದಲ್ಲಿ ಆಪರೇಷನ್ ಹಸ್ತ ತಡೆಯಬೇಕು ಎಂಬ ಅಜೆಂಡಾವೇ ಸಮಾವೇಶದ ಪ್ರಮುಖ ಉದ್ದೇಶವಾಗಿದೆ. ಇದೇ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಜೆಡಿಎಸ್ ವರಿಷ್ಠ ದೇವೇಗೌಡ್ರು ಸಂದೇಶ ನೀಡಲಿದ್ದಾರೆ. ಅಲ್ಲದೆ, ಮುಂಬರುವ ದಿನಗಳಲ್ಲಿ ಜಿಲ್ಲಾ & ತಾಲ್ಲೂಕು ಪಂಚಾಯಿತಿ ಚುನಾವಣೆ ಎದುರಾಗಲಿದೆ. ಅಲ್ಲದೆ, ಬಿಬಿಎಂಪಿ ಚುನಾವಣಾ ಸಿದ್ಧತೆಗೂ ಸಮಾವೇಶ ವೇದಿಕೆ ಆಗಲಿದೆ. ಈ ಮೂಲಕ ರಾಜ್ಯದಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಲು ಜೆಡಿಎಸ್ ಸಂಕಲ್ಪ ತೊಡಲಿದೆ.
ರಾಜ್ಯದ ದೃಷ್ಟಿಯಿಂದ ಮೈತ್ರಿ, ದಳಪತಿ ಕೊಟ್ರು ಸುಳಿವು!
ಇನ್ನು, ನಿನ್ನೆ ಈ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್ಡಿಕೆ, ಸಮಾವೇಶದಲ್ಲಿ ಕಾರ್ಯಕರ್ತರ ಅಭಿಪ್ರಾಯ ತೆಗೆದುಕೊಳ್ಳಬೇಕಿದೆ. ಕಾಂಗ್ರೆಸ್ಗೆ ಉತ್ತರ ನೀಡುವ ಕಾಲ ಹತ್ತಿರ ಇದೆ. ಅಂತ ಎಚ್ಚರಿಕೆ ನೀಡಿದ್ರು. ಇನ್ನು, ದೆಹಲಿಗೆ ಹೋಗುವ ಬಗ್ಗೆ ತೀರ್ಮಾನ ಮಾಡಿಲ್ಲ. ಆದ್ರೆ, ರಾಜ್ಯದ ಹಿತದೃಷ್ಟಿಯಿಂದ ಮೈತ್ರಿ ಅನಿವಾರ್ಯ ಅನ್ನೋ ಸ್ಥಿತಿಗೆ ಹೆಚ್ಡಿಕೆ ಬಂದಿದ್ದಾರೆ. ಆದ್ರೆ, ಈ ಕುರಿತು ಕಾರ್ಯಕರ್ತರ ಅಭಿಪ್ರಾಯ ಪಡೆದು ಮೈತ್ರಿ ಬಗ್ಗೆ ನಿರ್ಧಾರ ಕೈಗೊಳ್ಳೋದಾಗಿ ತಿಳಿಸಿದ್ದಾರೆ.
ಬಿಜೆಪಿ ಜತೆಗಿನ ಮೈತ್ರಿ ಕುರಿತು ಜೆಡಿಎಸ್ ಪ್ರಮುಖರು ಇಂದಿನ ಸಭೆಯಲ್ಲಿ ಸ್ಪಷ್ಟತೆ ನೀಡುವ ಸಾಧ್ಯತೆ ಇದೆ. ಮೈತ್ರಿಯ ಅನಿವಾರ್ಯ, ಭವಿಷ್ಯದಲ್ಲಿ ಬಿಜೆಪಿ ಜತೆಗಿನ ಸಂಬಂಧ ಕುರಿತು ಈ ಸಭೆಯನ್ನ ಬಳಸಿಕೊಳ್ಳಲಿದ್ದಾರೆ. 8 ತಿಂಗಳ ಮುನ್ನವೇ ಜೆಡಿಎಸ್ ಇಡ್ತಿರುವ ಈ ಹೆಜ್ಜೆ ರಾಜ್ಯದಲ್ಲಿ ಹೇಗೆ ಪರಿವರ್ತನೆಗೆ ನಾಂದಿ ಹಾಡುತ್ತೆ? ಗ್ಯಾರಂಟಿಗಳ ಮುಂದೇ ತೆನೆ-ಕಮಲ ಜಂಟಿ ಪಡೆ ಅಷ್ಟು ಸಲೀಸಾಗಿ ತಲೆ ಎತ್ತಿ ನಿಲ್ಲುತ್ವಾ ಅನ್ನೋದು ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ