/newsfirstlive-kannada/media/post_attachments/wp-content/uploads/2023/07/krs-1.jpg)
ಮಂಡ್ಯ: ಮಳೆ ಬಂದರೆ ಬೆಳೆ. ರೈತರು ಮಳೆಯನ್ನೇ ನಂಬಿಕೊಂಡು ಬದುಕು ಸಾಗಿಸಬೇಕಿದೆ. ಆದರೆ ಈ ಬಾರಿಯ ಮಳೆ ಕೊಂಚ ಕಣ್ಣ ಮುಚ್ಚಾಲೆ ಆಟವಾಡುತ್ತಿದೆ. ಅದರಲ್ಲೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಆಟವಾಡುತ್ತಿದೆ. ಇದರಿಂದ ಕೆಆರ್ಎಸ್ ಡ್ಯಾಂನ ಒಳಹರಿವು, ಹೊರಹರಿವಿನಲ್ಲಿ ಬದಲಾವಣೆ ಕಂಡಿದೆ.
ಕಳೆದೆರಡು ದಿನಗಳಿಗೆ ಹೋಲಿಸಿದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಹೀಗಾಗಿ ನೀರಿನ ಒಳಹರಿವು ಕೊಂಚ ಬದಲಾವಣೆಯಾಗಿದೆ. ಆದರೂ ಕೆಆರ್ಎಸ್ ಡ್ಯಾಂನ ನೀರಿನ ಮಟ್ಟ ಸಾಂದತೆ ಅಷ್ಟೇ ಇದೆ.
ಇದನ್ನೂ ಓದಿ: ಪುತ್ರ ಮೃಣಾಲ್ಗೆ ಒಲಿಯಲಿಲ್ಲ ಲಕ್ಷ್ಮಿ ಕೃಪಾಕಟಾಕ್ಷ.. ಜಗದೀಶ್ ಶೆಟ್ಟರ್ಗೆ ಗೆಲುವಿನ ಸಂತಸ.. ಎಷ್ಟು ಮತಗಳ ಅಂತರ?
ಇಂದಿನ ಕೆಆರ್ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 84.40 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 12.864 ಟಿಎಂಸಿ
ಒಳ ಹರಿವು - 1,586 ಕ್ಯೂಸೆಕ್
ಹೊರ ಹರಿವು - 549 ಕ್ಯೂಸೆಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ